ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ನವೆಂಬರ್ 9, 2025

ಜೈಮಿನಿ ಭಾರತ 21 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 21 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:-ತನಯರೊಳ್ಕಾದಿ ಮೂರ್ಛಿತನಾದ ರಾಮನಂ। 

ಮುನಿಮೌಳಿ ವಾಲಾಮೀಕಿ ಬಂದು ಸಂತೈಸಲ್ಕೆ। 

ಎನುತಾಶ್ವಮೇಧಮಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದನು॥


ಪ್ರತಿಪದಾರ್ಥ :- ತನಯರೊಳ್=ತನ್ನ ಕುವರರೊಂದಿಗೆ, ಕಾದಿ=ಹೋರಾಡಿ,  ಮೂರ್ಛಿತನಾದ = ಸ್ಮೃತಿ ತಪ್ಪಿ ಹೋದ, ರಾಮನಂ= ಶ್ರೀರಾಮಮೂರ್ತಿಯಂ, ಮುನಿಮೌಳಿ= ತಾಪಸವರ್ಯನಾದ, ವಾಲ್ಮೀಕಿ = ವಾಲ್ಮೀಕಿಮಹರ್ಷಿಯು, ಬಂದು= 

ರಣರಂಗದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ರಾಮನೆಡೆಗೆ ಸೇರಿ, ಸಂತೈಸಲ್ಕೆ= ಶಾಂತವಾದ ನುಡಿಗಳನ್ನಾಡಲು, ವಿನುತ= ಹೆಸರುವಾಸಿಯಾದ ( ಶ್ಲಾಘ್ಯವಾದ) ಅಶ್ವಮೇಧಮಂ= ಅಶ್ವಮೇಧಯಾಗವನ್ನು, ಪೂರೈಸಿ= ಸಾಂಗವಾಗಿ ನೆರವೇರಿಸಿ,

ಅವನಿಯಂ= ಭೂಮಂಡಲವನ್ನೆಲ್ಲಾ ಸೀತೆಸಹಿತ= ಜಾನಕಿಯ ಸಮೇತನಾಗಿ, ಪಾಲಿಸಿದನು= ಕಾಪಾಡಿದನು.


ತಾತ್ಪರ್ಯ:- ಮಕ್ಕಳೊಡನೆ ಕಾದಿ ಮೂರ್ಛಿತನಾಗಿ ಬಿದ್ದ ಶ್ರೀರಾಮನನ್ನು, ವಾಲ್ಮೀಕಿ ಮಹರ್ಷಿಯುಸಂತೈಸಿದನು, ಶ್ರೀರಾಮನು ಅಶ್ವಮೇಧವನ್ನು ಮುಗಿಸಿ ಸೀತಾಸಮೇತನಾಗಿ ರಾಜ್ಯವನ್ನು ಪಾಲಿಸಿದನು. 


ಅರಸಕೇಳ್ಜಾಹ್ನವಿಯ ತೀರದೊಳ್ಅದೀಕ್ಷೆಗೊಂ। 

ಡಿರುತಿರ್ದು ರಾಘವಂ ಚಿತ್ತದನುತಾಪದಿಂ। 

ಭರತನಂ ಕರೆದು ಶತ್ರುಘ್ನನೇಗೈದನೆಂಬುದನುಸಿರರಾರುಮೆನಗೆ॥ 

ತರಳರಂ ಪಿಡಿದಪನೊ ಕೊಂದಪನೊ ಲಕ್ಷ್ಮಣಂ।

ಧುರದೊಳ್ಬಳಲ್ದಪನೊ ಗೆಲ್ದಪನೊ ಸೋಲ್ದಪನೊ। 

ತುರಗಮಂ ಬಿಡಿಸಿ ತಂದಪನೊ ತಾನರಿಯೆನೆಂದಸುರಾರಿ ಚಿಂತಿಸಿದನು॥೧॥ 


ಪ್ರತಿಪದಾರ್ಥ :-ಅರಸ= ಎಲೈ ಜನಮೇಜಯನೆ,  ಕೇಳು=ಲಾಲಿಸು,  ಜಾಹ್ನವಿಯ= ಗಂಗಿನದಿಯ, ತೀರದೊಳ್= ದಡದಲ್ಲಿ, ದೀಕ್ಷೆಗೊಂಡು= ದೀಕ್ಷಾಬದ್ಧನಾಗಿ, ಇರುತಿರ್ದ= ಇದ್ದಂಥಾ, ರಾಘವಂ = ರಘುಶ್ರೇಷ್ಠನಾದ ರಾಮನು, ಚಿತ್ತದ= ಹೃದಯದ, ಅನುತಾಪದಿಂ=ಸಂಕಟದಿಂದ, ಭರತನಂ= ಕೈಕೇಯಿಯ ಸುತನಾದ ತನ್ನನುಜನನ್ನು, ಕರೆದು= ತನ್ನ ಸಮೀಪಕ್ಕೆ ಬರಹೇಳಿದವನಾಗಿ, ಶತ್ರುಘ್ನನು=ತಮ್ಮನು, ಏಗೈದನು= ಏನುಮಾಡಿದನು, ಎಂಬುದಂ= ಎನ್ನುವುದನ್ನು, ಎನಗೆ= ನನಗೆ, ಐಸುರೂವರು= ಹೇಳುವವರು, ಆರು= ಯಾರು, ಲಕ್ಷ್ಮಣಂ= ಲಕ್ಷ್ಮಣನಾದರೊ, ತರಳರಂ= ಮಕ್ಕಳನ್ನು, ಪಿಡಿದಪನೊ= 

ಹಿಡಿದನೊ, ಕೊಂದಪನೊ= ಪ್ರಾಣಕಳೆದನೊ, ಧುರದೊಳ್= ಕಾಳಗದಲ್ಲಿ,ಬಳಲ್ದಪನೊ= ಆಯಾಸಗೊಂಡನೊ, ಗೆಲೂದಪನೊ= ಜಯಶೀಲನಾದನೊ, ಸೋಲ್ದಪನೊ= ಪರಾಭವನಾದನೊ, ತುರಗಮಂ= ಹಯವನ್ನು,  ಬಿಡಿಸಿ= ಬಿಡುಗಡೆಮಾಡಿ, ತಂದಪನೊ= ತರುತ್ತನೊ, ತಾಂ= ನಾನು, ಅರಿಯೆನು= ತಿಳಿದುಕೊಳ್ಳಲಾರೆನು,ಎಂದು= ಎಂಬತೆರನಾಗಿ,  ಅಸುರಾರಿ= ಶ್ರೀರಾಮನು, ಚಿಂತಿಸಿದನು= ದುಃಖಿತನಾದನು. 


ಅ॥ವಿ॥ ಜಾಹ್ನವಿ = ಜಹ್ನುಋಷಿಯ ಮಗಳು,  ದೀಕ್ಷೆಯಂ+ಕೊಂಡು= ದೀಕ್ಷೆಗೊಂಡು (ಕ್ರಿ. ಸ.)ಅಸುರ+ಅರಿ=ಅಸುರಾರಿ

(ಷ. ತ. ಮತ್ತು ಸ. ದೇ. ಸನ.) 


ತಾತ್ಪರ್ಯ:- ಕೇಳೈ ಜನಮೇಜಯನೆ,  ಲಕ್ಷಮಣ ಮೂರ್ಛಿತನಾದ ಸುದ್ಧಿಯನ್ನು ದೂತರು ಬಂದು, ಯಜ್ಞದೀಕ್ಷಿತನಾಗಿದ್ದ ಶ್ರೀರಾಮನಿಗೆ ತಿಳಿಸಲು, ಅವನು ಭರತನನ್ನು ಕರೆಸಿ, ಕೇಳೈ ಭರತನೇ, ಯಜ್ಞಾಶ್ವದ ಜೊತೆಗೆ ಹೋದವರ ವರ್ತಮಾನವೇ ತಿಳಿಯಲಿಲ್ಲ. ಆ ಬಾಲಕರೊಡನೆ ಹೋರಾಡಿ ಗೆದ್ದನೋ, ಸೋತುಹೋದನೊ,ಜೀವದಿಂದಿರುವನೊ ಅಥವಾ ಇಲ್ಲವೋ, ತಿಳಿಯದು, ನಾನು ಕಳುಹಿದ ಲಕ್ಷಮಣನು ಆ ಬಾಲಕರನ್ನು ಗೆದ್ದನೊ ಅಥವಾ ತಾನೇ ಪರಾಜಯಹೊಂದಿದನೊ, ಕುದುರೆಯನ್ನು ಬಿಡಿಸಿಕೊಂಡು ಬರುವನೊ ಅಥವಾ ಇಲ್ಲವೊ? ಇವರ ವರ್ತಮಾನವನ್ನೇ ಹೇಳುವವರಿಲ್ಲದಂತಾಯಿತಲ್ಲಾ, ಏನು ಮಾಡಲಿ? ನನ್ನ ದುಃಖವೆಂಬ ಬೆಂಕಿಯ ಉರಿಯು ಪರಿಹಾರವಾಗತಕ್ಕ ಬಗೆ ಹೇಗೆ? 


ಕನಸಿನೊಳ್ ಸೋಲ್ದುದಿಲ್ಲಾರ್ಗೆಯುಂ ಲಕ್ಷ್ಮಣಂ। 

ವನಚಾರಿ ಬಾಲಕರ ಪಾಡಾವುದೀಗ ಮುಳಿ। 

ದನುವರದೊಳಿರ್ವರಂ ಘಾತಿಸದೆ ಸಮ್ಮೋಹನಾಸ್ತ್ರದೊಳ್ ಮರವೆಗೊಳಿಸಿ॥ 

ತನಗೆ ತಂದೊಪ್ಪಿಸುವ ತೆರದೊಳತಿಬಲ ಚರರ। 

ನನುಜನೆಡೆಗಟ್ಟೆಂದು ರಾಘವಂ ಭರತನೊಡ। 

ನೆನಲವಂ ದೂತರಂ ಕಳುಹಲವರರಿದು ಬಂದವನಿಪತಿಗಿಂತೆಂದರು॥೨॥ 


ಪ್ರತಿಪದಾರ್ಥ :- ಕನಸಿನೊಳ್= ಸ್ವಪ್ನದಲ್ಲಿಯೂ ಕೂಡ, ಆರ್ಗೆಯುಂ= ಯಾರೊಬ್ಬರಿಗೂ, ಲಕ್ಷ್ಮಣಂ= ಲಕ್ಷ್ಮಣನು,  ಸೋಲ್ದುದು= ಸೋಲನ್ನನುಭವಿಸಿದ್ದು, ಇಲ್ಲ= ಇಲ್ಲವೇ ಇಲ್ಲ, ವನಚಾರಿ=ಅರಣ್ಯದಲ್ಲಿ ಅಲೆಯುವ, ಬಾಲಕರ= ಹುಡುಗರ, ಪಾಡು= ತೆರನು, ಆವುದು= ಯಾವುದಾಗಿದೆ, ಅನುವರದೊಳ್= ಕದನದಲ್ಲಿ, ಮುಳಿದು= ಸಿಟ್ಟುಮಾಡಿಕೊಂಡು, ಇರ್ವರಂ=ಆ ಇಬ್ಬರು ಬಾಲಕರನ್ನೂ, ಈಗೆ=ಈಗಲಾದರೂ, ಘಾತಿಸದೆ= ಪ್ರಾಣವನ್ನು ತೆಗೆಯದೆ, ಸಮ್ಮೋಹನೃಷ್ತ್ರದೊಳ್= 

ಸ್ಮೃತಿತಪ್ಪಿಸತಕ್ಕ ಅಸ್ತ್ರವೊಂದರಿಂದ ಮರವೆಗೊಳಿಸಿ = ಮೂರ್ಛೆಹೋಗುವಂತೆ ಮಾಡಿ, ತನಗೆ=ನನ್ನಲ್ಲಿಗೆ, ತಂದು= ಕರೆತಂದು, ಒಪ್ಪಿಸುವ= ಬಿಡುವ, ತೆರದೊಳು= ಬಗೆಯಿಂದ, ಅತಿಬಲ= ಬಹು ಬಲಿಷ್ಠರಾದ, ಚರರನು= ಸೇವಕರನ್ನು, ಅನುಜನ= ತಮ್ಮನಾದ ಸೌಮಿತ್ರಿಯ, ಎಡೆಗೆ=ಸಮೀಪಕ್ಕೆ,  ಅಟ್ಟೈ=ಕಳುಹು, ಎಂದು= ಎಂಬುದಾಗಿ, ರಾಘವಂ= ಶ್ರೀರಾಮನು,  ಭರತನೊಡನೆ=ತಮ್ಮನಾದ ಭರತನೊಂದಿಗೆ, ಎನಲು=ನುಡಿಯಲು,ಅವಂ= ಆ ಭರತನು, ದೂತರಂ=ಸೇವಕರನ್ನು, ಕಳುಹಲು= ಅಟ್ಟಲಾಗಿ, ಅವರು=ಆ ಸೇವಕರು, ಅರಿದು= ರಣರಂಗದಲ್ಲಿ ನಡೆದಿರತಕ್ಕ ಸುದ್ಧಿಯನ್ನೆಲ್ಲಾ ತಿಳಿದವರಾಗಿ, ಬಂದು= ಪುನಃ ಪಟ್ಟಣಕ್ಕೆ ಬಂದು, ಅವನಿಪತಿಗೆ= ಶ್ರೀರಾಮನೊಡನೆ, ಇಂತು= ಮುಂದೆ ಹೇಳುವಂತೆ, ಎಂದರು= ನುಡಿದರು. 


ಅ॥ವಿ॥ ವನಚಾರಿ(ಕೃ.ವೃ.) ಮರವು+ಕೊಳಿಸು= ಮರವೆಗೊಳಿಸು (ಕ್ರಿ. ಸ. ) 


ತಾತ್ಪರ್ಯ:- ಲಕ್ಷ್ಮಣನು ಸ್ವಪ್ನದಲ್ಲಿಯೂ ಕೂಡ, ಯಾರಿಗೂ ಸೋಲತಕ್ಕವನಲ್ಲ. ಹೀಗಿರುವಲ್ಲಿ ಕಾಡುಮೇಡುಗಳೊಳಗೆ ಅಲೆದು ಜೀವಿಸುವ ಆ ಬಾಲಕರಿಗೆ ಸೋತು ಹೋಗುವನೆ? ಆ ಇಬ್ಬರು ಬಾಲಕರನ್ನೂ ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ ಜೀವಸಹಿತವಾಗಿ ಎಲ್ಲಿಗೆ ಕರೆದುಕೊಂಡು ಬರಬೇಕೆಂದು ಲಕ್ಷ್ಮಣನೆಡೆಗೆ ಚರರನ್ನು ಅಟ್ಟೆಂದು ನುಡಿದನು. ಆಗ ಭರತನು ಜಾಗ್ರತೆಯಾಗಿ ಸೌಮಿತ್ರಿಯ ಬಳಿಗೆ ಹೋಗಿ ರಾಮನ ಆಜ್ಞೆಯನ್ನು ತಿಳಿಸಬೇಕೆಂದು ಹೇಳಿ ಕಳುಸಿದನು. ಆ ದೂತರು ರಣರಂಗವನ್ನು ಸೇರಿ ಎದುರಿಗೆ ಬರುತ್ತಿದ್ದ ದೂತರ ನುಡಿಗಳನ್ನು ಆಲಿಸಿ, ತಾವೂ ಪ್ರತ್ಯಕ್ಷವಾಗಿ ರಣರಂಗದ ಸುದ್ಧಿಯನ್ನು ಕಂಡವರಾಗಿ ತಡಮಾಡದೆ ಶ್ರೀರಾಮನೆಡೆಗೆ ಬಂದು. 


ದೇವ ಬಿಡು ದೀಕ್ಷೆಯಂ ಕಾದು ನಡೆ ಕುಶನೋಳ್ಮ। 

ಹಾವೀರನಾತನಾಲವಗಿಂತಬಲ್ಲಿದಂ । 

ಜೀವ ಸಂದೋಹಮಾಗಿರ್ಪುದೈ ಶತ್ರುಘನಲಕ್ಷಮಣರ್ಗಖಿಳಸೇನೆ ॥ 

ಭಾವಿಸೆತವಾಕೃತಿಯಬಾಲಕರದೆಸೆಯಿಂದ। 

ಗೋವರ್ಧನಂಗೆಮೊಲೆಗೊಟ್ಟಪೂತನಿಯವೊಲಾ। 

ಯ್ತೇವೇಳ್ವೆವೆಂದು ದೂತರ್ನುಡಿಯೆ ರಾಘವಂ ಕೇಳಿ ಮೂರ್ಛಿತನಾದನು॥೩॥


ಪ್ರತಿಪದಾರ್ಥ :- ದೇವ=ಎಲೈ ಸ್ವಾಮಿಯೆ, ದೀಕ್ಷೆಯಂ=ಯಜ್ಞ ದೀಕ್ಷೆಯನ್ನು, ಬಿಡು=ತ್ಯಜಿಸು, ಕುಶನೊಳ್= ಕುಶನ ಕೂಡ, ಕಾದು= ಹೋರಾಡು, ನಡೆ=ಹೊರಡು, ಆತನು= ಆ ಕುಶನು, ಮಹಾವೀರನು= ಬಹು ಶಕ್ತನು, ಆ ಲವಗಿಂತ= ಆ ಲವನೆಂಬ ಅಣುಗನಿಗಿಂತಲೂ, ಬಲ್ಲಿದಂ= ಸಮರ್ಥನು, ಶತ್ರುಘ್ನ= ಶತ್ರುಘ್ನನು, ಕ್ಷ್ಮಣ ಇವರಿಗೆ, ಜೀವ=ಹರಣವು, ಸಂದೇಹಂ=ಅನುಮಾನವಾಗಿ, ಇರ್ಪುದು= ಆಗಿಹೋಗಿರುವುದು, ಭಾವಿಸೆ= ಆಲೋಚಿಸಿ ನೋಡಿದರೆ, ತವ= ನಿನ್ನ,  ಆಕೃತಿಯ= ಆಕಾರವನ್ನು ಹೊಂದಿರುವ, ಬಾಲಕರ= ಪಸುಳೆಗಳ, ದೆಸೆಯಿಂದ= ಕಾರಣದಿಂದ, ಗೋವರ್ಧನಂಗೆ= ಗೋವರೂಧನ ಗಿರಿಯನ್ನು ಮೇಲಕ್ಕೆತ್ತಿ ಹಿಡಿದ ಕೃಷ್ಣಮೂರ್ತಿಗೆ, ಮೊಲೆಗೊಟ್ಟ= ವಿಷದ ಸ್ತನವನ್ನುಣಿಸಿದ, ಪೂತನಿಯೊ- 

ಲು, ಅಖಿಳಸೇನೆ= ದಳವೆಲ್ಲವೂ, ಆಯ್ತು= ಹಾಳಾಯಿತು, ಏವೇಳ್ವೆವು= ಏನೆಂದು ನೈಡಿಯಬೇಕು, ಎಂದು=ಎಂಬುದಾಗಿ,  ದೂತರು= ಸೇವಕರು, ನುಡಿಯೆ= ಆಡಲಾಗಿ, ರಾಘವಂ= ಶ್ರೀರಾಮನು, ಕೇಳಿ= ಚಾರರ ವಾಕ್ಯವನ್ನಾಲಿಸಿ, ಮೂರ್ಛಿತ-

ನಾದನು= ಮೈಮರೆತು ಕೆಳಗೆ ಬಿದ್ದನು. 


ತಾತ್ಪರ್ಯ:- ಎಲೈ ಮಹಾನುಭಾವನೆ, ಯಜ್ಞದೀಕ್ಷೆಯನ್ನು ಬಿಟ್ಟು ಬಿಡು, ನೀನೇ ಯುದ್ಧಸನ್ನದ್ಧನಾಗಿ ಹೊರಡು, ಲವನಿಗಿಂತಲೂ ಪರಾಕ್ರಮಿಯಾದ ಕುಶನೆಂಬ ಬಾಲಕನ ಶರವರ್ಷಕ್ಕೆ ನಿನ್ನನುಜರಾದ ಲಕ್ಷ್ಮಣ ಶತ್ರುಘ್ನನರೂ ಅಶೇಷರಾದರು, ಪರಿವಾರವೂ ಸಹ ಮೂರ್ಛಾಕ್ರಾಂತವಾಗಿ ಬಿದ್ದು ಯಮದ್ವಾರವನ್ನು ನೋಡುವಂತಿರುವುದು.ಇದನ್ನು ನೋಡೆದರೆ ಗೋವರ್ಧನ ಉದ್ಧಾರಕನಾದ ಕೃಷ್ಣ ಸ್ವಾಮಿಗೆ ಸ್ತನ್ಯವನ್ನು ಕೊಡುತ್ತಲಿದ್ದ ಪೂತನಿಯನ್ನು ನಿನ್ನಾಕೃತಿಯ ಬಾಲಕರ ಕೃತ್ಯದಿಂದ ಸ್ಮರಿಸಿಕೊಳ್ಳುವಂತಾಗುತ್ತಲಿರುವುದೆಂದು ನುಡಿದ ಚಾರರ ಮಾತುಗಳನ್ನು  ಕೇಳಿದ ಶ್ರೀರಾಮನು ಮೈಮರೆತು ಕೆಳಕ್ಕೆ ಬಿದ್ದುಬಿಟ್ಟನು. 


ಬಳಿಕ ಶೈತ್ತೋಪಚಾರಂಗಳಿಂ ಭರತನಿನ। 

ಕುಲಸಾರೂವಭೌಮನಂ ಸಂತೈಸುತಿರೆ ಮೂರ್ಛೆ। 

ತಿಳಿದೆದ್ದು ಲಕ್ಷ್ಮಣನದಾವೆಡೆಯೊಳೆನ್ನ ಸೊಲ್ಸಲಿಸುವನದಾವೆಡೆಯೊಳು॥ 

 ಹಳುವಿನೊಳ್ ತನಗಾಗಿ ನವೆದನುಜನಾವೆಡೆಯೊ।

ಳಳಿದನೇ ಸೌಮಿತ್ರಿ ತಮ್ಮ ಹಾ ಯೆನುತೆ। 

ಹಳವಳಿಸಿ ಬಿಸುಸುಯ್ದಳಲ್ದು ಮರುಗಿದನಂದು ರಾಘವಂ ಶೋಕದಿಂದೆ॥೪॥ 


ಪ್ರತಿಪದಾರ್ಥ :- ಭರತನು= ಕೈಕೇಯಿಯ ಸುತನಾದರೊ, ಬಳಿಕ =ತರುವಾಯ, ಶೈತ್ಯೋಪಚಾರಂಗಳಿಂದ= ನೆತ್ತಿ, ಎದೆ, ಮೊದಲಾದವನ್ನು ನೀರಿನಿಂದ ತಟ್ಟಿ ಆದರಿಸುವುದರಿಂದ, ಇನಕುಲಸಾರ್ವಭೌಮನಂ= ಶ್ರೀರಾಮಮೂರ್ತಿಯನ್ನು, ಸಂತೈಸುತ= ಶಾಂತಗೊಳಿಸುತ್ತ, ಇರೆ=ಇರಲಾಗಿ, ರಾಘವಂ= ರಾಮನು, ಮೂರ್ಛೆ ತಿಳಿದು= ಮೂರ್ಛೆಯಿಂದೆದ್ದು, ಎಚ್ಚೆತ್ತು= ಚೇತರಿಸಿಕೊಂಡು, ಅದೃವೆಡೆಯೊಳ್= ಅದಾವಾಗ, ಎನ್ನ=ನನ್ನ, ಸೊಲ್= ನುಡಿಯನ್ನು, ಸಲಿಸುವನು= ನೆರವೇರಿಸುವನು, ಊದೃವೆಡೆಯೊಳ್= ಇನ್ನು ಯಾವ ಸ್ಥಳದಲ್ಲಿ, ಹಳುವದೊಳ್= ಕಾಡಿನಲ್ಲಿ, ತನಗಾಗಿ= ನನ್ನ ಸಲುವಾಗಿ, ನವೆದ= ಬಡವಾದ, ಅನುಜನು= ಸಹೋದರನು, ಆವೆಡೆಯೊಳು= ಎಲ್ಲಿ, ಅಳಿದನೆ= ಪ್ರಾಣ ಬಿಟ್ಟನೆ, ಹಾ ಸೌಮಿತ್ರಿ=ಅಯ್ಯೋ ಲಕ್ಷ್ಣಾ, ತಮ್ಮನೆ= ಸಹೋದರನೆ, ಹಾ=ಅಯ್ಯೋ, ಎನುತ= ಎಂದು ಗೋಳಾಡುತ್ತ, ಹಳವಳಿಸಿ = ಭ್ರಮೆಗೊಂಡವನಾಗಿ, ಬಿಸುಸುಯ್ದು= ದೀರ್ಘಶ್ವಾಸಗಳನ್ನು ಬಿಡುತ್ತ, ಅಳಲ್ದು= ಗೋಳಾಡಿ, ಅಂದು=ಆ ಕಾಲದಲ್ಲಿ, ಶೋಕದಿಂದ= ವ್ಯಸನದಿಂದ,ಮರುಗಿದನು= ದುಃಖಿಸಿದನು. 


ಅ॥ವಿ॥ ಶೈತ್ಯ+ಉಪಚಾರ= ಶೈತ್ಯೋಪಚಾರ (ಗು. ಸಂ.) ಇನನಕುಲ +ಸಾರ್ವಭೌಮ=ಇನಕುಲಸಾರ್ವಭೌಮ( ಷ. ತ.) 


ತಾತ್ಪರ್ಯ:- ಸ್ಮರಣೆತಪ್ಪಿ ನೆಲದಮೇಲೆ ಬಿದ್ದ ರೃಮನಿಗೆ ಭರತಾದಿಗಳೆಲ್ಲರೊ ಶೈತ್ಯೋಪಚಾರಮಾಡಲಾಗಿ, ರಾಮನು ಕೂಡಲೆ ಎಚ್ಚರಗೊಂಡು, ಹಾ! ಲಕ್ಷ್ಮಣ ನನಗಾಗಿ ಅರಣ್ಯದಲ್ಲಿ ಎಷ್ಟು ಕಷ್ಟಪಟ್ಟನೋ! ಸತ್ತು ಎಲ್ಲಿ ಬಿದ್ದಿರುವನೋ! ಅಯ್ಯೊ ತಮ್ಮನೆ! ನಿನಗೆ ಇಂಥಾ ದುರ್ಗತಿ ಬಂದೊದಗಿತೆ ಹಾ! ಎಂದು ಕಡು ದುಃಖದಿಂದ ಗೋಳಾಡುತ್ತಲಿದ್ದನು.


ಜಾನಕಿಯನಂದು ಪೊರಮಡಿಸಿದನ್ಯಾಯದಿಂ। 

ಭಾನುಕುಲ ಸಂಭವಂಗಾದವಿಂತೀ ತೆರದ। 

ಹಾನಿಯಿದು ಸೌಮಿತ್ರಿ ಶತ್ರುಘ್ನರಂ ಜಯಿಸುವಗ್ಗಳೆಯರಾರ್ ಜಗದೊಳು॥ 

ಕಾನನದ ಮುನಿಸುತರ್ಗದಟೆತ್ತಣದು ರಾಮ। 

ಸೂನುಗಳ್ ತಪ್ಪದಾಕೃತಿಗಳಂ ನೋಡಲನು। 

ಮಾನಮೇಕೆಂದು ಮೊರೆಯಿಟ್ಟುದೆಲ್ಲಾ ಜನಂ ರಾಘವಂ ಕೇಳುವಂತೆ॥೫॥ 


ಪ್ರತಿಪದಾರ್ಥ :- ಎಲ್ಲಾ ಜನಂ= ಅಯೋಧ್ಯಾಪಟ್ಟಣದ ಸಕಲ ಪ್ರಜೆಗಳೂ, ರಾಘವಂ= ಶ್ರೀರಾಮನು, ಕೇಳುವಂತೆ= ಕೇಳುವ ಹಾಗೆಯೇ, ತಮ್ಮ =ತಮ್ಮಲ್ಲಿ, ಅಂದು= ಆಗ, ಜಾನಕಿಯನು= ವೈದೇಹಿಯನ್ನು, ಪೊರಮಡಿಸಿ= ಊರನ್ನು ಬಿಡಿಸಿ ಕಾಡಿಗೆ ಕಳುಹಿಸಿದ, ಅನ್ಯಾಯದಿಂ= ಕೆಡಕುಮಾರ್ಗದಿಂದ, ಇಂತು= ಈ ತೆರನಾಗಿ,ಭಾನುಕುಲಸಂಭವಂಗೆ= ಶ್ರೀರಾಮದೇ-

ವರಿಗೆ, ಹಾನಿಗಳು= ಅಶುಭಗಳು, ಆದವು= ಉಂಟಾದವು, ಸೌಮಿತ್ರಿ ಶತ್ರುಘ್ನರಂ= ಲಕ್ಷ್ಮಣ ಶತ್ರುಘ್ನರನ್ನು, ಜಯಿಸುವ= ಸೋಲಿಸುವ, ಅಗ್ಗಳೆಯರು= ವೀರರು, ಜಗದೊಳು= ಲೋಕದಲ್ಲಿ, ಆರು= ಯಾರು, ಕಾನನದ= ಕಾಡಿನ, ಮುನಿಸುತರ್ಗೆ= ಮುನಿಕುಮಾರರಿಗೆ= ಅಧಟು= ಶೌರ್ಯವು, ಎತ್ತಣದು= ಎಲ್ಲಿ ಬಂದೀತು,ಆಕೃತಿಗಳು= ಆ ಬಾಲಕರ ಮುಖ, ಶರೀರ ಇವುಗಳ ಲಕ್ಷಣವನ್ನು, ನೋಡಲು= ನೋಡಿದರೆ, ತಪ್ಪದೆ= ಸ್ವಲ್ಪವಾದರೂ ಭೇದವು ಕಾಣಿಸದೆ, ರಾಮಸೂನುಗಳು= ಶ್ರೀರಾಮನ ಕುವರರು, ಅನುಮಾನಂ= ಸಂದೇಹವು, ಏಕೆ= ಏನು ಪ್ರಯೋಜನ, ಎಂದು=ಎಂಬುದಾಗಿ, ಮೊರೆಯಿಟ್ಟುದು= ಬೇಡಿಕೊಳ್ಳುತ್ತಿದ್ದರು. 


ಅ॥ವಿ॥ ಭಾನುಕುಲ+ಸಂಭವಂ= ಭಾನು ಕುಲದಲ್ಲಿ ಸಂಭವಂ( ಷ. ತ.) ಅಗ್ಗಳೆ ( ತೂಭ) ಅರ್ಗಳ(ತ್ಸ) 


ತಾತ್ಪರ್ಯ:- ಆಗ ಅಯೋಧ್ಯಾ ನಗರವಾಸಿಗಳು ಶ್ರೀರಾಮನು ನಿರಪರೃಧಿಯೂ ನಿರೂದೋಷಿಯೂ ಆದ ಜಾನಕಿಯನ್ನು ನಿಷ್ಕರುಣೆಯಿಂದ ಕಾಡಿಗೆ ಕಳುಹಿಸಿದ್ದರಿಂದಲೇ ಈಗ ಸೂರ್ಯವಂಶದಲ್ಲಿ ಹುಟ್ಟಿದವರಿಗೆ ಇಂತಹ ಕಷ್ಟಪರಂಪರೆಗಳು ತಲೆದೋರುತ್ತಿರುವುವು,ಹಾಗಿಲ್ಲವಾದರೆ ಯಾರಿಂದಲೂ ಜಯಿಸಲಶಕ್ಯರಾದ ಲಕ್ಷ್ಮಣ ಶತ್ರುಘ್ನರು ವನಚಾರಿಗಳಾದ ಬಾಲಕರಿಗೆ ಸೋಲುವುದಂಟೆ, ಆ ಬಾಲಕರೀರ್ವರ ಮುಖಗಳಲ್ಲಿಯೂ ಸೀತಾರಾಮರ ಚಿಹ್ನೆಗಳು ಕಂಗೊಳಿಸುತಲಿವೆ, ಆದಕಾರಣ ಅವರಿಬ್ಬರೂ ರಾಮನ ಮಕ್ಕಳೇ ಹೊರತು ಎಂದಿಗೂ ಅನ್ಯರಲ್ಲ ಎಂದು ಶ್ರೀರಾಮನ ಎದುರಿಗೇ ಹೇಳುತ್ತಲಿದ್ದರು. 


ಸೀತೃವದನಚಿಹ್ನಮೆನ್ನಂಗದಾಕಾರ। 

ಮಾ ತಾಪಸರ್ಭಕರೊಳಿರ್ದಪುದು ಗಡ ಪಡೆದ। 

ಮಾತೆಯೆಲ್ಲಿರ್ದಪಳೊ ಕುದುರೆಯಂ ಕಟ್ಟುವದಟೆತ್ತಣದಿವರ್ಗೆಂಬುದ॥ 

ದೂತರಂ ಕರೆ ಕೇಳ್ವೆವಿನ್ನೊಮ್ಮೆ ಶಿಶುಗಳಂ। 

ಘಾತಿಸದೆ ದಯೆಗೈದು ತಾನೇರ್ವಡೆದೆನೊ ಮೇ। 

ಣಾತರಳರತಿಬಲರೊ ಸೌಮಿತ್ರಿ ಬಿದ್ದನೇಕೆಂದು ರಘುಪತಿ ಸುಯ್ದನು॥೬॥ 


ಪ್ರತಿಪದಾರ್ಥ :- ರಘುಪತಿ= ಶ್ರೀರಾಮನು,  ಸೀತಾ= ಜಾನಕಿಯ, ವದನ= ಮೋರೆಯ, ಚಿಹ್ನಂ= ಗುರುತೂ, ಎನ್ನ=ನನ್ನ ಸಂಬಂಧವಾದ, ಅಂಗದ=ಅವಯವದ, ಆಕಾರಂ= ಆಕೃತಿಯೂ, ಆ ತಾಪಸಾರ್ಭಕರೊಳು= ಆ ಮುನಿಕುವರರಲ್ಲಿ, ಇರ್ದಪುದು ಗಡ=ತೋರುತ್ತಲಿದೆಯಲ್ಲಾ ,ಪಡೆದ= ಇವರನ್ನು ಹೆತ್ತ, ಮಾತೆ= ಜನನಿಯು, ಎಲ್ಲಿ=ಯಾವೆಡೆಯಲ್ಲಿ, ಇರ್ದಪಳೊ= ಇದ್ದಾಳೆಯೊ, ಇವರ್ಗೆ= ಈ ಬಾಲಕರಿಗೆ, ಕುದುರೆಯಂ= ಯಜ್ಞಾಶ್ವವನ್ನು, ಕಟ್ಟುವ=ಬಿಗಿಯತಕ್ಕ, ಅಧಟು= ಸಾಹಸವು, ಎತ್ತಣದು= ಎಲ್ಲಿ ಬಂತು, ಎಂಬುದ= ಎಂಬ ವಿಚಾರವನ್ನು, ದೂತರಂ=ಸೇವಕರನ್ನು, ಕರೆದು= ಬರಮಾಡಿ, ಇನ್ನೊಮ್ಮೆ=ಪುನಃ ಮತ್ತೊಂದಾವರ್ತಿ, ಕೇಳ್ವೆವು= ಕೇಳುತ್ತೇವೆ, ಶಿಶುಗಳಂ= ಮಕ್ಕಳನ್ನು, ಘಾತಿಸದೆ = ಕೊಲ್ಲಲುಮನಬಾ-

ರದೆ, ದಯೆಗೈದು= ಕನಿಕರದಿಂದ, ತಾನು= ಆ ಲಕ್ಷ್ಮಣನು, ಏರ್ವಡೆದನೊ=ಬಿದ್ದು ಬಿಟ್ಟನೊ, ಆ ತರಳರು=ಆ ಹುಡುಗರು, ಅತಿಬಲರೊ= ಶೌರ್ಯವಂತರೊ( ಮಾಮಸಕವುಳ್ಳವರೊ) ಸೌಮಿತ್ರಿ= ಲಕ್ಷ್ಮಣನು, ಏಕೆ= ಯಾವ ಕಾರಣದಿಂದ, ಬಿದ್ದನು= ಬಿದ್ದುಹೋದನು, ಎಂದು=ಎಂಬತೆರನಾಗಿ, ಸುಯ್ದನು= ಸಂಕಟದಿಂದ ಉಸಿರನ್ನು ಬಿಡುತ್ತಿದ್ದನು.


ಅ॥ ವಿ॥" ಗಡ" ಇದು ಆಶ್ಚರ್ಯದಲ್ಲಿಯೂ, ವ್ಯಸನದಲ್ಲಿಯೂ ಬರತಕ್ಕ ಅವ್ಯಯವಾಗಿರುವುದು. 


ತಾತ್ಪರ್ಯ:- ಈ ಜನಗಳ ಮಾತು ಕಿವಿಗೆ ಬಿದ್ದಮೇಲೆ ರಾಮಚಂದ್ರನ ದುಃಖವು ಮತ್ತಷ್ಟು ಹೆಚ್ಚಾಯಿತು. ಆಗ ತನ್ನಲ್ಲಿ ತಾನೇ, ಆಹಾ! ಜಾನಕಿಯ ಮುಖಚಿಹ್ನೆಯೂ, ನನ್ನ ಶರೀರದ ಲಕ್ಷಣಗಳೂ ಆ ಋಷಿ ಕುವರರಲ್ಲಿರುವುದಷ್ಟೆ,ಆ ಮಕ್ಕಳನ್ನು ಹೆತ್ತ ತಾಯಿಯು ಎಲ್ಲಿರುವಳೊ ಕಾಣೆನು. ಇವರಿಗೆ ಕುದುರೆಯನ್ನು ಕಟ್ಟಿ ನಮ್ಮೊಂದಿಗೆ ಕಾದುವಷ್ಟು ಸಾಹಸವು ಹೇಗುಂಟಾಯಿತು ? ಏ ಮಾತು ನಿಜವೊ ಸುಳ್ಳೊ ಇನ್ನೊಂದು ಬಾರಿ ಕೇಳಿ ನೋಡಬೇಕು, ಆ ಮಕ್ಕಳನ್ನು ಲಕ್ಷ್ಮಣ ಶತ್ರುಘ್ನರು ಕನಿಕರಪಟ್ಟು ಕೊಲ್ಲಲು ಮನವೊಪ್ಪದೆ ತಾವೇ ಮೂರ್ಛೆಗೊಂಡರೊ ಅಥವಾ ಅವರ ಸಾಹಸವೇ ಅಸಾಧಾರಮವಾಗೆದೆಯೋ, ಲಕ್ಷ್ಮಣನು ಏತಕ್ಕೆ ನೆಲಕ್ಕೆ ಬಿದ್ದನೊ ಕಾಣೆನಲ್ಲಾ  ಎಂದು ವ್ಯಸನಪಟ್ಟನು. 


ಇಂತಿಂತಳಲ್ದಾಗ ಬಿಸುಸುಯ್ದೊಡನೆ ರಾಘ।

ವಂ ತನ್ನ ಸಹಜರ ಗುಣಂಗಳಂ ನೆನೆನೆನೆದು। 

ಚಿಂತಿಸುತಿರೆ ಮತ್ತೆ ಕುಶನ ಶರಘಾತಿಯಿಂದುರೆ ನೊಂದು ಭೀತಿಗೊಂಡು॥ 

ಸಂತಪ್ತರಾಗಿ ಪರಿತಂದು ಲಕ್ಷ್ಮಣನೊಡಲೊ। 

ಳಂತರಿಸಲರಿಯದಸು ಮಡಿದುದು ಸಕಲಸೈನ್ಯ। 

ಮೆಂತಿಹನೊ ಶತ್ರುಘ್ನನೇಕೆ ದೀಕ್ಷೆಯಿದೆಂದು ಚರರೈದೆ ಮೊರೆಯಿಟ್ಟರು॥೭॥ 


ಪ್ರತಿಪದಾರ್ಥ :- ರಾಘವಂ= ಶ್ರೀರಾಮನು, ಇಂತಿಂತು= ಈ ಪರಿಯಾಗಿ,ಅಳಲ್ದು=ಗೋಳಾಡಿ, ಬಿಸುಸುಯ್ದು= ನಿಟ್ಟುಸಿರಿಟ್ಟು,ತನ್ನ=ತನ್ನವರಾದ, ಸೋದರರ= ಒಡಹುಟ್ಟಿದ ಲಕ್ಷ್ಮಣ ಶತ್ರುಘ್ನರ, ಗುಣಗಳಂ= ಒಳ್ಳೆ ನಡತೆಗಳಂ, ನೆನೆನೆನೆದು= ಹೆಚ್ಚಾಗಿ ಧ್ಯಾನಿಸಿ,ಚಿಂತಿಸುತ= ದುಃಖಪಡುತ್ತ, ಇರಲ್=ಇರಲಾಗಿ, ಕುಶನ= ಕುಶನೆಂಬ ಬಾಲಕನ, ಶರಘಾತಿಯಿಂದ= ಬಾಣಗಳ ಹೊಡೆತದಿಂದ,ಮತ್ತೆ=ಪುನಃ, ಉರೆ=ಹೆಚ್ಚಾಗಿ, ನೋವುಗೊಂಡು= ವ್ಯಥೆಪಟ್ಟು, ಸಂತಪ್ತರಾಗಿ

= ದುಃಖಿಸುತ್ತಾ, ಪರಿತಂದು= ತಡಮಾಡದೆ ಬಂದು, ಚರರು= ಸೇವಕರು, ಲಕ್ಷ್ಮಣನ= ಸುಮಿತ್ತಾತ್ಮಜನ, ಒಡಲು= ಶರೀರ, ಆಂತರಿಸಲು= ಉಳಿಯಬೇಕಾದರೆ, ಅರಿದು=ಅಶಕ್ಯವು, ಅಸು=ಪ್ರಾಣವು, ಅಡಗೆ= ಕುಗ್ಗಿ ಹೋಗುವಂತೆ, ಸೈನ್ಯಂ= ದಂಡು, ಮಡಿದುದು= ಸತ್ತು ಹೋಯಿತು, ಶತ್ರುಘ್ನನು =ಶತ್ರುಘ್ನನಾದರೊ,ಎಂತು=ಹೇಗೆ, ಇಹನೊ=ಇರುವನೊ, ಇದು= ಈ, ದೀಕ್ಷೆ= ಯಜ್ಞದೀಕ್ಷೆಯು,ಏಕೆ= ಏನು ಪ್ರಯೋಜನ, ಎಂದು= ಎಂಬತೆರನಾಗಿ, ಮೊರೆಯಿಟ್ಟರು= ನಡೆದಿದ್ದ ಸಮಾಚಾರವನ್ನು ಕಡು ದುಃಖದಿಂದ ತೋಡಿಕೊಂಡರು. 


ಅ॥ವಿ॥ ನೆನೆನೆನೆದು=ಅಧಿಕ್ಯಾರ್ಥದಲ್ಲಿ ದ್ವಿರುಕ್ತಿ ಬಂದಿದೆ. 


ತಾತ್ಪರ್ಯ:- ಬಾರಿಬಾರಿಗೂ ಲಕ್ಷ್ಮಣ ಶತ್ರುಘ್ನರ ಗುಣಾವಳಿಯನ್ನು ನೆನೆದು ಹಂಬಲಿಸುತ್ತಿರುವ ಕಾಲಕ್ಕೆ ಸರಿಯಾಗಿ, ಕುಶಕುಮಾರನ ಬಾಣದೇಟುಗಳನ್ನು ತಡೆಯಲಾರದೆ ಮತ್ತೆ ಹಲವು ದೂತರುಓಡಿ ಬಂದು ರಾಮಚಂದ್ರನನ್ನು ಕುರಿತು, ಎಲೈ ಪರಮಪಾವನ ಮೂರ್ತಿಯೇ, ಲಕ್ಷ್ಮಣನಿಗೆ ಪ್ರಾಣವಾಯುವು ನಿಂತು ಹೋಗುವ ಕಾಲ ಒದಗಿರುವುದು. ಸೈನ್ಯವೆಲ್ಲಾ ಯಮಪುರಿಯನ್ನು ಸೇರಿತು, ಶತ್ರುಘ್ನನ ಗತಿ ಏನಾಯಿತೋ ನಮಗೆ ಗೊತ್ತಿಲ್ಲ, ಆದ್ದರಿಂದ ಇನ್ನು ನೀನು ಯಜ್ಞದೀಕ್ಷಿತನಾಗಿದ್ದರೆ ಪ್ರಯೋಜನವೇನೆಂದು ಮೊರೆಯಿಡುತ್ತಾ ವಿಜ್ಞಾಪಿಸಿಕೊಂಡರು. 


ಮೊರೆವೇಳ್ದ ದೂತರಂ ಗರ್ಜಿಸುತೆ ರಾಘವಂ । 

ಗೆರಗಿ ಕೈಮುಗಿದು ಭಯವಿಹ್ವಲರ್ ಚಾರರಿವ। 

ರರಿದಪರೆ ಸೌಮಿತ್ರಿ ಶತ್ರುಘ್ನರಾಹವಶ್ರಮದಿಂದೆತನು ಮನವನು॥ 

ಮರೆದರಲ್ಲದೆ ಮರಣವೆತ್ತಣದು ಸಾಕಿನ್ನು। 

ಬರಿದೆ ಚಿಂತಿಸಬೇಡ ನಾಂ ಪೋಗಿ ಬಾಲಕರ। 

ಮರುಕಮಂ ಬಿಡಿಸಿ ತಹೆನಶ್ವಮಂ ಕಳುಹೆನ್ನನೆಂದು ಭರತಂ ನುಡಿದನು॥೮॥ 


ಪ್ರತಿಪದಾರ್ಥ :- ಮೊರೆವೇಳ್ವ= ತಮ್ಮ ಸಂಕಟಗಳನ್ನು ತೋರ್ಪಡಿಸುವ, ದೂತರಂ= ಸೇವಕರನ್ನು, ಗರ್ಜಿಸುತ= ತಿರಸ್ಕರಿಸುತ್ತ, ರಘುವರಂಗೆ= ಶ್ರೀರಾಮನಿಗೆ, ಭರತಂ= ಕೈಕೇಯಿಯ ಕುವರನು, ಎರಗಿ= ನಮಸ್ಕರಿಸಿ, ಕೈಮುಗಿದು = ಕೈಗಳನ್ನು ಜೋಡಿಸಿಕೊಂಡು, ಇವರು= ಈ ಚಾರರು, ಭಯವಿಹ್ವಲರು= ಭಯಗ್ರಸ್ತರಾಗಿದ್ದಾರೆ, ಅರಿದಪರೆ= ನಿಜಸ್ಥಿತಿಯನ್ನು ತಿಳಿದಿರುವರೆ, ಸೌಮಿತ್ರಿ ಶತ್ರುಘ್ನುರು= ಲಕ್ಷ್ಮಣ ಶತ್ರುಘ್ನರಾದರೆ, ಆಹವಶ್ರಮದಿಂದೆ= ಕಾಳಗದಲ್ಲುಂಟಾದ ಶ್ರಮದಿಂದ, ತನುಮನವನು= ದೇಹವನ್ನೂ ಮನಸ್ಸನ್ನೂ ಸಹ, ಮರೆದರು= ಮರೆತುಹೋಗಿದ್ದಾರೆ, ಅಲ್ಲದೆ= ಹಾಗಿಲ್ಲದಿದ್ದರೆ

ಮರಣಂ= ಸಾವು, ಎತ್ತಣದು= ಎಲ್ಲಿಂದ ಬಂತು, ಸಾಕು= ಅವರ ನುಡಿಗಳನ್ನು ನಿಜವೆಂದು ನಂಬಬೇಡಿ, ಬರಿದೆ= ಅನ್ಯಾಯವಾಗಿ,ಕಂಪಿಸಬೇಡ= ಹೆದರಬೇಡ, ನಾಂ= ನಾನೇ, ಪೋಗಿ= ಯುದ್ಧಕ್ಕೆ ಹೊರಟು,ಬಾಲಕರ= ಹಸುಳೆಗಳ, ಮರುಕಮಂ= ಯುದ್ಧದ ಅಹಂಕಾರವನ್ನು, ಬಿಡಿಸಿ= ತಪ್ಪಿಸಿ, ಅಶ್ವಮಂ= ಕುದುರೆಯನ್ನು, ತಹೆನು= ಹಿಂತಿರುಗಿಸಿಕೊಂಡು ಬರುತ್ತೇನೆ, ಎನ್ನನು= ನನ್ನನ್ನು, ಕಳುಹು= ಕಳುಹಿಸಿಕೊಡು, ಎಂದು= ಎಂಬುದಾಗಿ, ನುಡಿದನು= ವಿಜ್ಞಾಪಿಸಿಕೊಂಡನು.


ಅ॥ವಿ॥ ಕೈಯನ್ನು+ಮುಗಿದನು= ಕೈಮುಗಿದನು (ಕ್ರಿ. ಸ.)


ತಾತ್ಪರ್ಯ:- ಆಗ ಭರತನು ಈ ರೀತಿಯಲ್ಲಿ ಶ್ರೀರಾಮಚಂದ್ರನೆದುರಿಗೆ ದೀನರಾಗಿ ಹೇಳುತ್ತಲಿರುವ ಚರರನ್ನು ಗದರಿಸಿ,  ರಾಮಚಂದ್ರನ ಪಾದಗಳಿಗೆ ತನ್ನ ತಲೆಯಿಟ್ಟು ಕೈಮುಗಿದು, ಎಲೈ ಅಣ್ಣನೆ, ಭಯಗ್ರಸ್ತರಾದ ಈ ದೂತರ ಮಾತುಗಳನ್ನು ಕೇಳಿ ನೀನು ವ್ಯಸನಗ್ರಸ್ತನಾಗುವುದು ಯುಕ್ತವಲ್ಲ,ಇನ್ನು ನೀನು ದುಃಖವನ್ನು ಬಿಟ್ಟು ಸಮಾಧಾನವನ್ನು ತಂದುಕೊ. ನಾನು ಹೋಗಿ ಬಾಲಕರೀರ್ವರ ಸೊಕ್ಕನ್ನಡಗಿಸಿ ಕುದುರೆಯನ್ನು ಬಿಡಿಸಿಕೊಂಡು ಬರುವೆನು, ದಯಮಾಡಿ ನನಗೆ ಅಪ್ಪಣೆ ಕೊಡೆಂದು ಬೇಡಿಕೊಂಡನು. 


ಬಳಿಕ ಜಾಂಬವ ಸುಷೇಣಾಂಗದ ಹನೂಮಂತ। 

ನಳ ನೀಲ ಕುಮುದ ಶತಬಲಿ ಗವಯರೆಂಬ ಕಪಿ। 

ಗಳ ಪಡೆಯನೆಲ್ಲಮಂ ಬಲದೊಳುಳಿದಖಿಳ ಚತುರಂಗಮಂ ಕೂಡಿಕೊಟ್ಟು॥ 

ಕಳುಹಲಿನಕುಲ ಸಾರ್ವಭೌಮನಂ ಬೀಳ್ಕೊಂಡು। 

ತಳೆದು ಸುರನದಿಯ ತೀರದೊಳಾಂಜನೇಯನಂ। 

ಕೊಳಗುಳದ ವೃತ್ತಾಂತಮಂ ಕಂಡು ಬಂದೊರೆವುದೆಂದು ಭರತಂ ಪೇಳ್ದನು॥೯॥ 


ಪ್ರತಿಪದಾರ್ಥ :- ಬಳಿಕ =ಆಮೇಲೆ, ಜಾಂಬವ= ಜಾಂಬವನೆಂಬ ಕರಡಿಗಳ ಅಧಿಪತಿಯು, ಸುಷೇಣ= ಸುಷೇಣನೆಂಬ ಕಪಿಸೈನ್ಯದ ವೈದ್ಯನು, ಅಂಗದರು= ಕಿಷ್ಕಿಂದಾನಗರದ ಯುವರಾಜನಾದ ಅಂಗದನು ಇವರೇ ಮೊದಲಾದವರು, ಹನುಮಂತ= ಆಂಜನೇಯನು, ನಳ=ನಳನು, ನೀಲ= ನೀಲನು, ಕುಮುದ= ಕುಮುದನು, ಶತಬಲಿ= ಶತಬಲಿಯು, ಗವಯನು= ಗವಯನು, ಇವರೇ ಮೊದಲಾದ, ಕಪಿಗಳಪಡೆಯನು= ವಾನರ ದಳವನ್ನು, ಎಲ್ಲಮಂ= ಸಮಸ್ತವನ್ನೂ, ಬಲದೊಳು= ಪದಾತಿಗಳಲ್ಲಿ, ಉಳಿದಿದ್ದ= ಮಿಕ್ಕಿದ್ದ, ಅಖಿಳ= ಸಮಸ್ತ, ಚತುರಂಗಮಂ= ಚತುರಂಗ ಸೇನೆಯನ್ನು, ಕೂಡಿಕೊಟ್ಟು= ಒಂದುಮಾಡಿ, ಕಳುಹಲು= ಕಳುಹಿಸಲಾಗಿ, ಭರತಂ= ಭರತನು, ಇನಕುಲಸಾರ್ವಭೌಮನಂ= ಶ್ರೀರಾಮನನ್ನು, ಬೀಳ್ಕೊಂಡು= ಕೇಳಿಕೊಂಡು, ತಳರ್ದು= ಹೊರಟು, ಸುರನದಿಯ= ದೇವಗಂಗೆಯ, ತೀರದೊಳ್= ಪ್ರಾಂತದಲ್ಲಿ, ಕೊಳಗುಳದ= ರಣರಂಗದ, ವೃತ್ತಾಂತಮಂ = ಸುದ್ಧಿಯನ್ನು, ಕಂಡುಬಂದು= ನೋಡಿಕೊಂಡು ಬಂದು, ಒರೆವುದು= ಹೇಳತಕ್ಕದ್ದು,ಎಂದು= ಎಂಬಂತೆ, ಆಂಜನೇಯನಂ= ಮಾರುತಿಯನ್ನು, ಕುರಿತುಪೇಳ್ದನು= ತಿಳಿಸಿದನು.


ಅ॥ವಿ॥ ಇನಕುಲ+ ಸಾರ್ವಭೌಮನಂ= ಇನನಕುಲ (ಷ. ತ. ) ಇನ=ಸೂರ್ಯನ,ಕುಲ=ವಂಶ, ಇನಕುಲ=ರವಿವಂಶದ,

ಸಾರ್ವಭೌಮ=ಚಕ್ರವರ್ತಿ (ರಾಮನು) 


ತಾತ್ಪರ್ಯ:- ಶ್ರೀರಾಮಚಂದ್ರನು ತಮ್ಮನ ನುಡಿಗಳಿಂದ ತನ್ನಯ ಮನಸ್ಸಿನ ವ್ಯಥೆಯನ್ನು ಸಮಾಧಾನಕ್ಕೆ ತಂದುಕೊಂಡು, ಜಾಂಬವಂತ, ಸುಷೇಣ, ಅಂಗದ, ಆಂಜನೇಯ, ನಳ, ನೀಲ, ಕುಮುದ, ಶತಬಲಿ, ಗವಯರೇ ಮೊದಲಾದ ಕಪಿಸೈನ್ಯವ- 

ನ್ನೂ, ಅಯೋಧ್ಯಾ ನಗರದಲ್ಲಿ ಮಿಕ್ಕಿದ್ದ ಪಡೆಯನ್ನೂ ಜೊತೆಮಾಡಿ ಭರತನೊಂದಿಗೆ ಕಳುಹಿಸಿದನು. ಶ್ರೀರಾಮನಿಂದ ಅಪ್ಪಣೆ ಪಡೆದ ಭರತನು,ಅಣ್ಣನಾದ ಭರತನಿಗೆ ಪ್ರದಕ್ಷಿಣ ನಮಸ್ಕಾರ ಗಳನ್ನು ಮಾಡಿ, ಸೈನ್ಯದಿಂದೊಡಗೂಡಿದವನಾಗಿ ಹೊರಟನು. ಆಗ ಭರತನು ಹನುಮಂತನನ್ನು ಕುರಿತು, ಯುದ್ಧದ ವೃತ್ತಾಂತವನ್ನೆಲ್ಲಾ ತಿಳಿದು ಬಂದು ಹೇಳೆಂದು ಕಳುಹಿದನು. 


ಧೀಂಕಿಟ್ಟನಲ್ಲಿಂದೆ ಕಲಿಹನುಮನಾ ರಣದೊ। 

ಳಂಕಿತದ ಕುಶನ ಬಾಣಂಗಳಿಂ ಮಡಿದ ಬಲ। 

ಸಂಕುಲವನಿಕ್ಷ್ವಾಕುನಂದನಂ ನಿನ್ನ ಸುತೆ ಸೀತೆಯಂ ಬಿಟ್ಟನೆಂದು॥ 

ಕೊಂಕದಿರು ಸೈರಿಸುವುದೆಂದೈದೆ ಭೂದೇವಿ। 

ಯಂ ಕೋಪಮಂ ಮಾಣಿಸಲ್ ಬೇಡಿಕೊಳ್ವ ತರ। 

ದಿಂ ಕೆಡೆದು ಮೈಮರೆದು ಮಲಗಿರ್ದ ಸೌಮಿತ್ರಿ ಶತ್ರುಘ್ನರಂ ಕಂಡನು॥೧೦॥ 


ಪ್ರತಿಪದಾರ್ಥ :- ಅಲ್ಲಿಂದ= ಗಂಗಾನದಿಯ ತಟದಿಂದ, ಕಲಿ= ವೀರಾಗ್ರೇಸರನಾದ, ಹನುಮನು= ಆಂಜನೇಯನು, ಧೀಂಕಿಟ್ಟನು= ಎಗರಿದನು, ಆ ರಣದೊಳು= ಆ ಕಾಳಗದಲ್ಲಿ, ಅಂಕಿತದ= ಗುರ್ತಾಗಿ ರಚಿಸಿರತಕ್ಕ, ಕುಶನ= ಕುಶನೆಂಬ ಬಾಲಕನ, ಬಾಣಗಳಿಂ= ಸರಲ್ಗಳಿಂದ, ಮಡಿದ= ಮರಣಹೊಂದಿರುವ, ಬಲಸಂಕುಲವನು= ಸೇನಾಸಮೂಹವನ್ನು, ನಿನ್ನ= ನಿನ್ನ, ಸುತೆ= ಮಗಳಾದ, ಸೀತೆಯಂ= ಜಾನಕಿಯನ್ನು, ಇಕ್ಷ್ವಾಕುನಂದನಂ= ಕೌಸಲ್ಯೆಯ ಮಗನು, ಬಿಟ್ಟನು= ತೊರೆದನು, ಎಂದು= ಎಂಬಂತೆ, ಕೋಪಮಂ= ಸಿಟ್ಟನ್ನು, ಮಾಣಿಸಲು= ಕಡಿಮೆಮಾಡಲು, ಭೂದೇವಿಯಂ= ಭೂಮಾತೆಯನ್ನು, ಬೇಡಿಕೊಂಬ= ಕೇಳಿಕೊಳ್ಳತಕ್ಕ, ತೆರದಿಂ= ಬಗೆಯಿಂದ, ಕೆಡೆದು= ಭೂಮಿಯಮೇಲೆ ಹೊರಳಿಕೊಂಡು, ಮೈಮರೆದು= ಸ್ಮೃತಿತಪ್ಪಿ, ಮಲಗಿರ್ದ= ಪವಡಿಸಿದ್ದ, ಸೌಮಿತ್ರಿ ಶತ್ರುಘ್ನರಂ= ಸುಮಿತ್ರೆಯ ಮಕ್ಕಳಿಬ್ಬರನ್ನೂ,ಕಂಡನು= ನೋಡಿದನು,


ಅ॥ವಿ॥ ಇಕ್ಷ್ವಾಕು ನಂದನಂ= ಇಕ್ಷ್ವಾಕು ವಂಶದಲ್ಲಿ ಹುಟ್ಟಿದ, ನಂದನಂ= ಕುವರನು, ಮೈಯನ್ನು+ ಮರೆತು= ಮೈಮರೆತು(ಕ್ರಿ. ಸ.) ಸೌಮಿತ್ತಿ=ಸುಮಿತ್ರೆಯ ಮಗನು.


ತಾತ್ಪರ್ಯ:- ಮಾರುತಿಯು ಕೂಡಲೆ ಅಲ್ಲಿಂದ ಹಾರಿ ಯೈದ್ಧರಂಗವನ್ನು ಸೇರಿ, ಕುಶನ ಶರಾಘಾತದಿಂದ ಸೈನ್ಯವೆಲ್ಲಾ ಭೂಮಿಯಲ್ಲಿ ಬಿದ್ದಿರುವುದನ್ನೂ, ಲಕ್ಷ್ಮಣ ಭರತ ಶತ್ರುಘ್ನರೂ ಮೂರ್ಛೆಗೊಂಡು ನೆಲದಲ್ಲಿ ಮಲಗಿರುವುದನ್ನೂಕಂಡನು. ಇದನ್ನು ನೋಡಿದರೆ ಪೂರ್ವದಲ್ಲಿ ಶ್ರೀರಾಮಚಂದ್ರನು ಸೀತೆಯನ್ನು ನಿಷ್ಕಾರಣವಾಗಿ ಕಾಡಿಗೆ ಕಳುಹಿದ್ದರಿಂದ ಅವಳ ತಾಯಿಯಾದ ಭೂದೇವಿಗೆ ಬಂದಿರುವ ಕೋಪಾತಿಶಯವನ್ನು ಶಮನಮಾಡಲು, ಈಗ ಸೇನಾಜನಗಳೂ ಸುಮಿತ್ರಾತ್ಮಜ-

ರೂ, ಸಹ ಧರಣಿ ಎಂಬ ನಾರಿಗೆ ನಮಸ್ಕಾರವನ್ನು ಮಾಡುತ್ತಲಿರುವರೊ ಎಂಬಂತೆ ತೋರುತ್ತಲಿತ್ತು. 


ಕಂಡು ಕಪಿವೀರನವರೀರ್ವರಂ ತೆಗೆದೆತ್ತಿ। 

ಕೊಂಡು ಭರತನ ಪೊರೆಗೆ ತರಲವಂ ಬಳಿಕ ಮಣಿ।

ಮಂಡಿತ ವರೂಥದೊಳವರ್ಗಳಂ ಪಟ್ಟಿರಿಸಿ ಹಯಮಂ ಕದಳಿಗೆ ಕಟ್ಟಿ॥ 

ಚಂಡ ಶರ ಚಾಪ ಪಾಣಿಗಳಾಗಿ ತೊಳಗುವು। 

ದ್ದಂಡ ಕುಶ ಲವರಿರ್ವರಿರ್ಪುದಂ ಕೇಳ್ದು ಕೋ। 

ದಂಡಮಂ ಜೇಗೈದು ಪಡೆವೆರಸಿ ನೂಕಿದಂ ಮುಳಿದು ಬಾಲಕರ ಮೇಲೆ॥೧೧॥ 


ಪ್ರತಿಪದಾರ್ಥ :- ಅವರೀರ್ವರಂ=ಆ ಲಕ್ಷ್ಮಣ ಶತ್ರುಘ್ನರಿಬ್ಬರನ್ನು, ಕಪಿವರನು=ಆಂಜನೇಯನು,ಕಂಡು= ನಿರುಕಿಸಿ,ತೆಗೆದು=

ಎತ್ತಿಕೊಂಡು, ಭರತನಪೊರೆಗೆ= ಭರತನ ಹತ್ತಿರಕ್ಕೆ, ತರಲು= ತೆಗೆದುಕೊಂಡು ಬರಲು, ಅವಂ=ಭರತನು, ಅವರ್ಗಳಂ= ತನ್ನ ಅಣ್ಣಂದಿರಿಬ್ಬರನ್ನೂ, ಕಂಡು=ಈಕ್ಷಿಸಿ, ಬಳಿಕ = ಅನಂತರ, ಮಣಿಮಂಡಿತ ವರೂಥದೊಳು= ನವರತ್ನ ಖಚಿತವಾದ ತೇರಿನಲ್ಲಿ,ಪಟ್ಟೈ=ಅತಿಪ್ರೇಮದಿಂದ,ಇರಿಸಿ= ಮಲಗಿಸಿದವನಾಗಿ, ಕದಳ್ಗೆ= ಬಾಳೆಯ ಗಿಡಕ್ಕೆ, ಹಯಮಂ= ಯಾಗದ ಅಶ್ವವನ್ನು, ಕಟ್ಟಿ=ಬಿಗಿದು, ಚಂಡ=ಉಗ್ರವಾದ, ಶರ=ಕಣೆಗಳು, ಚಾಪ=ಧನುಸ್ಸು, ಇವನ್ನು,ಪಾಣಿಗಳು= ಕರತಳದಲ್ಲಿ ಧರಿಸಿದವರು, ಆಗಿ=ಆಗಿಬಿಟ್ಟು, ತೊಳಗುವ=ಹೊಳೆಯುತ್ತಿರುವ, ಉದ್ದಂಡ=ಸಮರ್ಥರಾದ, ಕುಶಲವರು=ಕುಶಲವರೆ-

ನ್ನುವ, ಈರ್ವರು= ಇಬ್ಬರು ಬಾಲಕರು, ಇರ್ಪುದಂ=ಇರತಕ್ಕದ್ದನ್ನು ಕೇಳ್ದು= ಕೇಳಿದವನಾಗಿ, ಕೋದಂಡಮಂ=ಧನುಸ್ಸನ್ನು,  ಜೇಗೈದು= ಟಂಕಾರ ಧ್ವನಿಮಾಡಿ,ಪಡೆವೆರಸಿ= ದಳದಿಂದ ಕೂಡಿ, ಬಾಲಕರ= ಕುಶಲವರ ಕಡೆಗೆ, ಮುಳಿದು=ಸಿಟ್ಟಿನಿಂದ, ನೂಕಿದಂ= ಹೊರಡಿಸಿದನು.


ಅ॥ವಿ॥ ಮಣಿಯಿಂದ+ಮಂಡಿತವರೂಥಂ= ಮಣಿಮಂಡಿತವರೂಥಂ (ತೃ. ತ. ) ಚಂಡಶರಚೃಪಪಾಣಿಗಳು, ಶರವೂ+ ಚಾಪವೂ=ಶರಚಾಪಗಳು( ದ್ವಿ. ಯೋಗ. ದ್ವಂದ್ವ.) ಚಂಡವಾದ ಶರಚಾಪಗಳೈ (ವಿ. ಪೂ.) ಚಂಡಶರಚಾಪಗಳು, ಪಾಣಿಯಲ್ಲಿ ಯಾರಿಗೋ ಅವರು (ಬ. ಸ.) 


ತಾತ್ಪರ್ಯ:-ಆಂಜನೇಯನು ಮೂರ್ಚಿತರಾಗಿದ್ದ ಲಕ್ಷ್ಮಣ ಶತ್ರುಘ್ನರೀರ್ವರನ್ನೂ ಎತ್ತಿಕೊಂಡು ಬಂದು ಭರತನಿಗೆ ಒಪ್ಪಿಸಲಾಗಿ,ಭರತನು ಅವರೀರ್ವರನ್ನೂ ರತ್ನಖಚಿತವಾದ ತೇರಿನಲ್ಲಿ ಮಲಗಿಸಿದವನಾಗಿ, ಯಜ್ಞಾಶ್ವವನ್ನು ಬಾಳೆಯ ಮರಕ್ಕೆ ಬಿಗಿದು, ಧನುರ್ಧಾರಿಗಳಾಗಿ ನಿಂತಿರತಕ್ಕ ಕುಶಲವರೆಂಬಿಬ್ಬರುಬಾಲಕರ ಕಡೆಗೆ ತನ್ನ ಸೈನ್ಯವನ್ನು ಹೊರಡಿಸಿ ತಾನೂ ಧನುಷ್ಟಂಕಾರವನ್ನು ಮಾಡುತ್ತ ಹೊರಟನು. 


ಅಣ್ಣತಮ್ಮಂದಿರೀರ್ವರು ಮರಿಚತುರ್ಬಲಂ। 

ಪಣ್ಣಿ ಬರೆ ಕಂಡು ಬಿಲ್ಗೊಂಡೆದ್ದು ಕೋಪದಿಂ। 

ದಣ್ಣೆಕಲ್ಲಾಡಿದರ್ ಪಟುಭಟರ ತಲೆಗಳಂ ಬಾಣಪ್ರಯೋಗದಿಂದೆ॥ 

ಬಣ್ಣಿಸಲ್ ಪವಣೆ ಯೋಜನದಗಲಮೆಲ್ಲಿಯುಂ। 

ಕಣ್ಣೆವೆಯಲುಗುವನಿತರೊಳ್ ಸರಲ್ಮಯಮಾಗೆ। 

ಚಿಣ್ಣರಂಗದ ಮೇಲೆ ಮೆಚ್ಚಿ ಪೂಮಳೆಗಳಂ ಕರೆದರಮರರ್ ಪೊಗಳ್ದು॥೧೨॥ 


ಪ್ರತಿಪದಾರ್ಥ :- ಅರಿಚತುರ್ಬಲಂ= ಹಗೆಗಳ ಚತುರಂಗಬಲವು, ಪಣ್ಣಿಬರೆ= ಯುದ್ಧಕಾಂಕ್ಷಿಗಳಾಗಿ ಬರುತ್ತಿರುವುದನ್ನು,

ಈರ್ವರುಂ=ಇಬ್ಬರಾದ, ಅಣ್ಣತಮ್ಮಂದಿರು= ಕುಶಲವರಿಬ್ಬರೂ, ಕಂಡು=ನೋಡಿ, ಬಿಲ್ಗೊಂಡು= ಧನುರ್ಧಾರಿಗಳಾಗಿ, ಕೋಪದಿಂ= ಕ್ರೋಧದಿಂದ, ಎದ್ದು= ಮೇಲಕ್ಕೆದ್ದು, ಬಾಣಪ್ರಯೋಗದಿಂ= ಬಾಣಗಳನ್ನು ಬಿಡುವುದರಿಂದ, ಪಟುಭಟರ ತಲೆಗಳಂ= ಯೋಧಾಗ್ರೇಸರರ ತಲೆಗಳನ್ನು, ಅಣ್ಣೆಕಲ್ಲಾಡಿದರು= ಅಣ್ಣೆಕಲ್ಲಾಡುವಂತೆ ಎಲ್ಲೆಲ್ಲಿಯೂ ತುಂಬಿಸಿಶಬಿಟ್ಟರು. ಬಣ್ಣಿಸಲು= ವರೂಣಿಸಲು, ಪವಣೆ= ಸಾಧ್ಯವಾದೀತೆ, ( ಎಂದಿಗೂ ಸಾಧ್ಯವಿಲ್ಲ) ಕಣ್ಣೆವೆ=ಕಣ್ಣುರೆಪ್ಪೆಯು, ಅಲಗುವ= ಮುಚ್ಚಿ ತೆರೆಯುವ,ಅನಿತರೊಳ್= ಅಷ್ಟು ಕಾಲದಲ್ಲಿ, ಯೋಜನದ ಅಗಲಂ ಎಲ್ಲಿಯೂ= ಸುತ್ತು ಒಂದು ಗಾವುದದ ಸ್ಥಳದ-

ಲ್ಲೆಲ್ಲಿಯೂ, ಸರಳಮಯಂ= ಬಾಣಗಳಿಂದ ತುಂಬಿದ್ದು, ಆಗೆ=ಆಗಲು, ಅಮರರು= ಸುರರು, ಪೊಗಳುತ= ಶ್ಲಾಘಿಸುತ್ತ, ಮೆಚ್ಚಿ = ಕುಶಲವರ ಸಾಹಸವನ್ನು ಕೊಂಡಾಡಿ, ಚಿಣ್ಣರಂಗದಮೇಲೆ= ಕುಶಲವರ ಮೈಮೇಲೆ, ಪೂಮಳೆಗಳಂ= ಹೂಮಳೆಯನ್ನು , ಕರೆದರು= ಎರಚಿದರು. 


ಅ॥ವಿ॥ ಬಣ್ಣಿಸು(ತ್ಭ) ವರ್ಣಿಸು(ತ್ಸ) 


ತಾತ್ಪರ್ಯ:-ಮುಂದರಿದು ಬರುತ್ತಿರುವ ಭರತನ, ಸೇನಾಸಮುದ್ರವನ್ನು, ಕುಶಲವರು ನೋಡಿ ಕಡುಮುಳಿದು, ಮೇಲಕ್ಕೆದ್ದು, ಧನುಸ್ಸುಗಳನ್ನು ಸರಿಮಾಡಿಕೊಂಡು, ಶರವರ್ಷವನ್ನು ಕರೆದು, ಶೂರಾಗ್ರಣೆಗಳ ತಲೆಗಳನ್ನೆಲ್ಲಾಚಂಡಾಡಿದರು, ರೆಪ್ಪೆ ಬಡಿ- 

ಯುವಷ್ಟರಲ್ಲಿ ಶತ್ರು ಸೈನ್ಯದಲ್ಲಿ ಒಂದು ಗಾವುದ ವೆಸ್ತೀರ್ಣದೊಳಗಾಗಿ ಸ್ವಲ್ಪವಾದರೂ ಎಡೆಯಿಲ್ಲದಂತೆ ಬಾಣಗಳಿಂದ ತುಂಬಿಸಿ ಬಿಟ್ಟುದನ್ನು ದೇವತೆಗಳು ನೋಡಿ ಕೈಶಲವರ ಅಸಾಧಾರಣವಾದ ಸ್ಹಸಿಗಳೆಂದು ಹೊಗಳುತ್ತ, ರಣರಂಗದಲ್ಲಿ  ಅವರ ಮೇಲೆ ಹೂವಿನ ಮಳೆಯನ್ನು ಸುರಿಸಿದರು. 


ಚಾಪ ಟಂಕಾರಮಂ ಜಗತ್ತ್ರಯದೊಳೆಲ್ಲಿಯುಂ। 

ವೂಯಾಪೆಸಲ್ ಕಿವುಡಾದುವಷ್ಟದಿಗ್ದಂತಿಗ।

ಳ್ ಭೂಪಯೋಧೆಗಳೊಡೆವೆರಸಿದುವು ಕುಲಾದ್ರಿಗಳ್ ಜರಿದು ವಹಿ ಕಂಪಿಸಿದುದು॥ 

ತಾಪದಿಂ ಪೊಡೆಮರಳ್ದಂ ಕೂರ್ಮನಾ ರವಿಯ। 

ರೂಪಡಗಿತೆಸುವ ಬಾಣಾಂಧಕಾರದೊಳಂದು। 

ದೀಪಮಿಲ್ಲದ ಮನೆವೊಲಾದುದು ರಣಾಂಗಣಂ ಕಾದುವರದೆಂತೊ ಭಟರು॥೧೩॥ 


ಪ್ರತಿಪದಾರ್ಥ :- ಜಗತ್ರಯದೊಳು= ಮೂರು ಲೋಕಗಳಲ್ಲಿ, ಎಲ್ಲಿಯುಂ= ಎಲ್ಲೆಡೆಗಳಲ್ಲಿಯೂ, ಚಾಪ ಟಂಕಾರಂ= ಧನು-

ಷ್ಟಂಕಾರವು,ವ್ಯಾಪಿಸಲ್= ಕವಿಯಲಾಗಿ, ಅಷ್ಟದಿಗ್ದಂತಿಗಳ್= ಎಂಟು ದಿಕ್ಕಿನ ಆನೆಗಳು, ಕಿವುಡಾದವು= ಕಿವಿಕೇಳದಂತಾಗಿ ಹೋದವು, ಭೂಪಯೋಧಿಗಳ್= ಭೂಮಿಯೂ ಕಡಲೂ ಸಹ. ಒಡವೆರಸಿದವು= ಒಂದುಗೂಡಿದವು, ಕುಲಾದ್ರಿಗಳು= ಸಪ್ತ ಕುಲಪರ್ವತಗಳು, ಜರಿದವು= ಕದಲಿ ಹೋದವು, ಅಹಿ= ಸರ್ಪರಾಜನಾದರೊ, ಕಂಪಿಸಿದನು= ನಡುಗಿದನು, ಕೂರ್ಮನು= ಆಮೆಯು, ತಾಪದಿಂ= ಸಂಕಟದಿಂದ, ಪೊಡೆಮರಳ್ದನು= ದೇಹವನ್ನು ಬಾರಿಬೃರಿಗೂಉರುಳಿಸಿದನು, ಈ ರವಿಯ ರೂಪು= ಸೂರ್ಯಮಂಡಲದ ಆಕೃತಿಯು, ಬಾಣಾಂಧಕಾರದೊಳು= ಶರವರ್ಷಗಳಿಂದುಂಟಾದ ಕತ್ತಲೆಯಲ್ಲಿ, ಅಡಗಿತು= ಕಾಣದಂತಾಯಿತು, ಅಂದು= ಆಗ, ರಣಾಂಗಣಂ= ರಣರಂಗವು, ದೀಪವಿಲ್ಲದ= ದೀಪವಿಲ್ಲದೆ ಇರುವ, ಮನೆಯೊಲು= ಮಂದಿರದಂತೆ, ಆದುದು= ಆಯಿತು, ಭಟರು= ಯೋಧಾಗ್ರಣಿಗಳು, ಅದೆಂತೊ = ಯಾವಪರಿಯಿಂದಲೊ, ಕಾದುವರು= ಹೋರಾಡುವರು, ಎಂದರೆ (ಯುದ್ಧ ಮಾಡಲಾರದೆ ಹೋದರೆಂದು ಭಾವ) 


ತಾತ್ಪರ್ಯ:- ಈ ಕುಶಲವರ ಧನುಷ್ಟಂಕಾರ ಧ್ವನಿಯಾದರೊ ಮೂರುಲೋಕಗಳಲ್ಲಿಯೂ ವ್ಯಾಪಿಸಿದ್ದರಿಂದ, ಅಷ್ಟದಿಗ್ಗಜಗಳ ಕಿವಿಗಳು ಕೇಳಿಸದಂತಾದವು. ಶರವರ್ಷದಿಂದ ಭೂಮ್ಯಾಕಾಶಗಳು ಏಕಾಕಾರವಾಗಿ ಕಾಣಿಸು-

ತ್ತಿದ್ದವು. ಸಪ್ತಕುಲ ಪರ್ವತಗಳೆಲ್ಲಾ ಊಲ್ಲಾಡಿಹೋದವು. ಆದಿಶೇಷನು ಗಡಗಡನೆ ನಡುಗಲಾರಂಭಿಸಿದನು. ಕೂರ್ಮನು ಹೊರಳಾಡಲುಜ್ಜುಗಿಸಿದನು. ಯುದ್ಧಭೂಮಿಯೆಲ್ಲಾ ದೀಪವಿಲ್ಲದ ಮನೆಯಂತೆ ತೋರುತ್ತಿತ್ತು,ಅರಿಬಲದವರಿಗೆ ಏನೂ ತೋರದೆ ಸ್ತಬ್ಧರಾಗಿ ನಿಂತುಬಿಟ್ಟರು. 


ಕೋಲ್ಗರೆಯಲಾನೆಗಳ ಸುಂಡಿಲ್ಗಳುಂ ಹಯದ। 

ಕಾಲ್ಗಳುಂ ರಾವುತರ ಜೋದರ ಶಿರಂಗಳುಂ। 

ಮೇಲ್ಗೈಯ ರಥಿಕರ ಧನುರ್ದಂಡಮಂ ಕೈದುವಿಡಿದ ಪಾಣಿಗಳುಮಿಳೆಗೆ॥ 

ಸಾಲ್ಗೊಂಡುರುಳ್ದುವೊದಗಿದಕಪಿಗಳಂಗದೊಳ್। 

ಕೀಲ್ಗಳಂ ಬಲಿದಂತೆ ನಾಂಟಿದುವು ಪರಬಲಂ। 

ಸೋಲ್ಗುಮಲ್ಲದೆ ಕುಶಲವರ ಮುಂದೆ ಗೆಲ್ವ ಭಟರಂ ಕಾಣೆನಾಹವದೊಳು॥೧೪॥ 


ಪ್ರತಿಪದಾರ್ಥ :- ಕೋಲ್ಗರೆಯಲು= ಕುಶಲವರು ಬಾಣಗಳನ್ನು ಬಿಡಲು, ಆನೆಗಳ= ಹಸ್ತಿಗಳ, ಸಂಡಿಲ್ಗಳುಂ= ಸೊಂಡಿಲು-

ಗಳೂ, ಹಯದ= ಕುದುರೆಗಳ, ಕಾಲ್ಗಳುಂ= ಪಾದಗಳೂ, ರಾವುತರ= ಕುದುರೆ ಸವಾರರ, ಜೋಧರ= ಮಾವುತರ, ಶಿರಂಗಳುಂ= ತಲೆಗಳು, ಮೇಲ್ಗಯ್ಯ=ಶೂರಾಗ್ರಣಿಗಳಾದ, ರಥಿಕರ= ರಥಿಕ ಶ್ರೇಷ್ಠರ, ಧನುರ್ದಂಡಮುಂ= ಚಾಪದ ಕಟ್ಟಿಗೆಯೂ, ಕೈದುವಿಡಿದ= ಕತ್ತಿ ಮೊದಲಾದುವನ್ನು ಹಿಡಿದಿದ್ದ,ಪಾಣಿಗಳುಂ=ಹಸ್ತಗಳೂ, ಸಾಲ್ಗೊಂಡು=ಪಂಙ್ತಿಯಾಗಿ, ಇಳೆಗೆ= ಭೂಮಿಗೆ, ಉರುಳ್ದವು= ಬಿದ್ದುಕೊಂಡವು, ಒದಗಿದ= ಸಮೀಪಸ್ತರಾದ,ಕಪಿಗಳ= ಕೋತಿಗಳ, ಅಂಗದೊಳ್= ದೇಹದಲ್ಲಿ, ಕೀಲ್ಗಳಂ= ಮೊಳೆಗಳನ್ನು, ಬಲಿದಂತೆ= ಬಲವಾಗಿ ಹೊಡೆದಂತೆ, ನಾಂಟಿದವು= ಚುಚ್ಚಿಕೊಂಡವು, ಪರಬಲಂ= ಶತ್ರು ಸೇನೆಯು, ಸೋಲ್ಗುಂ= ಸೋತು ಹೋಗುವುದು, ಅಲ್ಲದೆ= ಅದರವಿನಾ, ಆಹವದೊಳು= ಕಾಳಗದಲ್ಲಿ, ಗೆಲ್ವ= ಜಯಶೀಲರಾಗುವ,ಭಟರಂ= ಯೋಧರನ್ನು,ಕುಶಲವರ ಮುಂದೆ= ಕುಶಲವರನ್ನು ಎದುರಿಸುವಂತೆ,ಕಾಣೆನು= ಯಾರನ್ನೂ ನೋಡಲೇ ಇಲ್ಲ.


ತಾತ್ಪರ್ಯ:- ಕುಶಲವರು ಬಿಟ್ಟ ಬಾಣದ ಹೊಡೆತದಿಂದ ವೈರಿಬಲದಲ್ಲಿದ್ದ ಆನೆಗಳ ಸೊಂಡಿಲ್ಗಳೇ ಕತ್ತರಿಸಿ ಹೋದವು, ಕುದುರೆಗಳ ಕಾಲುಗಳು ಮುರಿದವು, ರಾವುತರು ಮತ್ತು ಮಾವುತರ ತಲೆಗಳು ಚಂಡಾಡಲ್ಪಟ್ಟವು. ರಥಗಳು ನುಚ್ಚುನೂರಾದವು. ಕಪಿಗಳು ಮತ್ತು ರಕ್ಕಸರ ಮೈಯಲ್ಲಿ ಕೂದಲುಗಳು ಸಿಕ್ಕಿಕೊಂಡುರಕ್ತದ ಕಾಲುವೆಗಳುಂಟಾದವು. ಎಲೈ ಜನಮೇಜಯನೆ ಕುಶಲವರ ಅಸ್ತ್ರಗಳಿಗೆ ಎದುರಾದವರಿಗೆ ಮರಣ ಮೂರ್ಛೆ ತಪ್ಪುವುದೇ ಇಲ್ಲವು. 


ಸೇನೆಯಂ ನಿಮಿಷದೊಳ್ ತಡೆಗಡಿಯೆ ಕಂಡು ಪವ। 

ಮಾನಜಂ ನಡೆತಂದು ಬಾಲಕರ ವಿಗ್ರಹಂ। 

ಭಾನುಕುಲತಿಲಕನಾಕೃತಿವೊಲಿದೆ ನೋಡೆಂದು ಭರತಂಗೆ ತೋರಿಸಲ್ಕೆ॥ 

ಸಾನುರಾಗದೊಳತುಲ ಚಾಪಮಂ ಪಿಡಿದು ರಾ। 

ಮಾನುಜಂ ಕುಶನ ಸನ್ಮುಖಕೈದಿ ನುಡಿಸಿದಂ। 

ಸೂನುಗಳ ಮೊಗಂ ನಿರೀಕ್ಷಿಸಿ ಘನಸ್ನೇಹದಿಂದೆ ಪುಳಕಂ ಪೊಣ್ಮಲು॥೧೫॥ 


ಪ್ರತಿಪದಾರ್ಥ :- ಕುಶಲವರೆಂಬ ಬಾಲಕರು, ನಿಮಿಷದೊಳ್ = ಕ್ಷಣಮಾತ್ರದಲ್ಲಿ, ಸೇನೆಯಂ= ಪಡೆಯನ್ನೆಲ್ಲಾ,ತಡೆಗಡಿಯೆ= ಅಡ್ಡಗಿಸಿ ಸಂಹರಿಸುತ್ತಿರಲು,ಪವಮಾನಜಂ= ವಾಯುಸುತನಾದ ಆಂಜನೇಯನು, ಕಂಡು=ಈಕ್ಷಿಸಿ, ನಡೆತಂದು= ಭರತ- 

ನಿದ್ದೆಡೆಗೆ ಬಂದು, ಇನಕುಲತಿಲಕನ= ಶ್ರೀರಾಮದೇವರ,ಆಕೃತಿಯೊಲು= ಆಕಾರದ ಹಾಗೆ, ಬಾಲಕರ= ಕುಶಲವರ, ವಿಗ್ರಹಂ= ದೇಹಾಕಾರವು,ಇರೆ= ಇರಲಾಗಿ,ಭರತಂಗೆ= ಭರತನಿಗೆ, ನೋಡೆಂದು=ಅವರ ದೇಹದ ಸೊಬಗನ್ನು ಈಕ್ಷಿಸು ಎಂಬುದಾಗಿ, ತೋರಿಸಲ್ಕೆ=ತೋರಿಸಲು, ರಾಮಾನುಜಂ= ಭರತನು, ಅತುಲ=ಅಸದೃಶವಾದ, ಚಾಪಮಂ=ಧನುಸ್ಸನ್ನು, ಪಿಡಿದು=ಹಿಡಿದುಕೊಂಡು, ಸಾನುರಾಗದೊಳು= ಪ್ರೇಮಾತಿಶಯದಿಂದ, ಕುಶನ= ಬಾಲಕ ಕುಶನ, ಸಮ್ಮುಖಕೆ= ಎದುರಿಗೆ, ಐದಿ= ಬಂದು, ಸೂನುಗಳ= ಕುವರರ, ಮೊಗಮಂ= ಮುಖವನ್ನು, ನಿರೀಕ್ಷಿಸಿ= ಚೆನ್ನಾಗಿ ನೋಡಿ, ಘನಸ್ನೇಹದಿಂ= ಹೆಚ್ಚಾದ ವಿಶ್ವಾಸದಿಂದ, ಪುಳಕಂ= ರೋಮಗಳೆಲ್ಲಾ ಮೇಲಕ್ಕೆದ್ದವುಗಳು, ಪೊಣ್ಮಲು=ಆಗಿಬಿಡಲು, ನುಡಿಸಿದಂ= ಮಾತನಾಡಿಸಿದನು. 


ಅ॥ವಿ॥ ವಿಗ್ರಹಂ=ಶರೀರ, ಕಾಳಗ, ಆಕೃತಿ, ಭಾನುವಿನ+ ಕುಲತಿಲಕ= ಭಾನುಕುಲತಿಲಕ( ಷ. ತ.) ಭಾನುಕುಲದಲ್ಲಿ ತಿಲಕಂ 

( ಷ. ತ. ) ಮೊಗಂ(ತ್ಭ) ಮುಖಂ (ತ್ಸ)


ತಾತ್ಪರ್ಯ:- ಈ ರೀತಿಯಲ್ಲಿ ಕ್ಷಣಮಾತ್ತದೊಳಗಾಗಿ ಸೇನೆಯ ಬಗ್ಗುಬಡಿದು ನಿಂತಿರುವ ಬಾಲಕರನ್ನು ಆಂಜನೇಯನು ನೋಡಿ, ಭರತನ ಬಳಿಗೆ ಬಂದು, ಎಲೈ ಕೈಕೆಯಾತ್ಮಜನೆ, ಈ ಬಾಲಕರ ದೇಹದ ಸೌಂದರ್ಯವನ್ನು ನೋಡು,ಇವರ ದೇಹ ಕಾಂತಿಗೂ ರಾಮಚಂದ್ರನ ಶರೀರ ಸೌಂದರ್ಯಕ್ಕೂ ವ್ಯತ್ತಾಸವೇ ಇರುವಂತೆ ತೋರುವುದಿಲ್ಲವಲ್ಲಾ! ಎಂದು ನುಡಿದನು. ಆಗ ಭರತನು ಅತಿ ಪ್ರೀತಿಯಿಂದ ಧನುರ್ಬಾಣಗಳನ್ನು ಕೈಲಿ ಹಿಡಿದು ಕುಶಕುಮಾರನಿದ್ದೆಡೆಗೆ ಬಂದು ಆ ಬಾಲಕರೀರ್ವರ ಮುಖವನ್ನು ನೋಡಿದೊಡನೆಯೆ, ಹೆಚ್ಚಾದ ಸಂತೋಷದಿಂದ ರೋಮಾಂಚನವುಳ್ಳವನಾಗಿ,ಕುಶನನ್ನು ಕುರಿತು. 


ವತ್ಸ ನೀನಾರವಂ ನಿನಗೀತನೆನಹಂ। 

ಮತ್ಸಹೋದರರನುರೆ ಘಾತಿಸಿದಿರೆಮ್ಮಯ ಮ।

ಹತ್ಸೈನ್ಯಮಂ ಕೊಂದಿರಿನ್ನಾದೊಡಂ ಕುದುರೆಯಂ ಬಿಟ್ಟು ಪೋಗಿ ಬರಿದೆ॥ 

ಮತ್ಸರಿಸಬೇಡ ನಿಮ್ಮಂ ಪಡೆದ ತಾಯ ಬಳಿ। 

ಪೋಗುತ್ಸವದೊಳೈದಿ ಸುಖಮಿಹುದೆಂದು ಭರತನೆನ। 

ಲುತ್ಸಕದೊಳಾ ಕುಶಂ ನಸುನಗುತೆ ನುಡಿದನಿಂತಾ ರಾಘವಾನುಜಂಗೆ॥೧೬॥ 


ಪ್ರತಿಪದಾರ್ಥ :- ಭರತಂ=ಭರತನು, ವತ್ಸ= ಎಲೆ ಮಗುವೆ, ನೀನು=ನೀನಾದರೊ, ಆರವಂ= ಯಾರ ಪರವಾಗಿ ನಮ್ಮೊಡನೆ ಹೋರಾಡುತ್ತಲಿದ್ದಿ, ಈತನು=ಈ ಹುಡುಗನು, ನಿನಗೆ ಏನಹಂ=ಯಾವ ಸಂಬಂಧಿಯು, ಮತ್=ನನ್ನ, ಸಹೋದರರನು= ಅಣ್ಣತಮ್ಮಂದಿರನ್ನು, ಉರೆ= ಹೆಚ್ಚಾಗಿ, ಘಾತಿಸಿದಿರಿ= ಹೊಡೆದಿದ್ದೀರೆ, ಎಮ್ಮಯ=ನಮ್ಮದಾದ, ಮಹತ್ಸೈನ್ಯಮಂ= ದೊಡ್ಡ ಪಡೆಯನ್ನು, ಕೊಂದಿರಿ= ಕೊಂದುಹಾಕಿದ್ದೀರಿ, ಕುದುರೆಯಂ= ಯಾಗದ ಅಶ್ವವನ್ನು, ಬಿಟ್ಟು= ಬಿಡುಗಡೆಮಾಡಿ, ಇನ್ನಾದೊ-

ಡಂ= ಇನುನು ಮೇಲಾದರೂ, ಪೋಗಿ=ಹೋಗಿ, ಬರಿದೆ= ಸುಮ್ಮನೆ, ಮತ್ಸರಿಸಬೇಡ= ದ್ವೇಷಿಸಬೇಡ, ನಿಮ್ಮಂಶಪಡೆದ ನಿಮ್ಮನ್ನು ಹೆತ್ತ, ತಾಯಿ= ಮಾತೆಯ, ಬಳಿಗೆ= ಸನ್ನಿಧಿಗೆ, ಐದಿ= ಹೋಗಿಸೇರಿ, ಉತ್ಸವದೊಳು= ಆನಂದದಿಂದ, ಸುಖಂ= ಸೌಖ್ಯವಾಗಿ, ಇಹುದು= ಬಾಳಿರಿ, ಎಂದು= ಎಂಬತೆರನಾಗಿ, ಎನಲು=ಎಂದು ನುಡಿಯಲು, ಕುಶನು= ಬಾಲಕ ಕುಶನು, ನಸುನಗುತ= ಮಂದಸ್ಮಿತನಾ,ರಾಘವಾನುಜಂಗೆ=ಶ್ರೀರಾಮನ ತಮ್ಮನಾದ ತಮ್ಮನಾದ ಭರತನನ್ನು ಕುರಿತು, ಇಂತು=ಮುಂದೆ ಹೇಳುವಂತೆ, ನುಡಿದನು= ಉತ್ತರವನ್ನಿತ್ತನು. 


ತಾತ್ಪರ್ಯ:- ಎಲೈ ಬಾಲಕನೆ, ನೀನು ಯಾರಪಕ್ಷವನ್ನು ವಹಿಸಿ ಈಗ ನಮ್ಮೊಡನೆ ಯುದ್ಧಮಾಡುತ್ತಲಿರುವೆ, ಈ ಹುಡುಗನು ನಿನಗೆ ಏನಾಗಬೇಕು, ನೀವು ನನ್ನ ಸೋದರರಾದ ಲಕ್ಷ್ಮಣ ಶತ್ರುಘ್ನ ರನ್ನು ಘಾತಿಸಿದ್ದೀರಿ. ನಮ್ಮ ಸೈನ್ಯವನ್ನೆಲ್ಲಾ ಹಾಳುಮಾಡಿ ಬಿಟ್ಟಿರುವಿರಿ,ಇನ್ನಾದರೂ ದ್ವೇಷವನ್ನು ಬಿಟ್ಟು, ಕುದುರೆಯ ತಂಟೆಗೆ ಬಾರದೆ ಹೊರಟುಹೋಗಿ. ನಿಮ್ಮ ತಾಯಿಯ ಬಳಿಯಲ್ಲಿ ಸುಖವಾಗಿ ಬಾಳಿ ಎಂದು ನುಡಿದನು,  ಭರತನ ಮಾತುಗಳನ್ನು ಕೇಳಿದ ಕುಶನು ಮಂದಹಾಸದಿಂದ ಕೂಡಿ, ಭರತನನ್ನು ಕುರಿತು ಐತ್ತರಿಸಿದನು. 


ಕಟ್ಟಿದ ತುರಂಗಮಂ ಬಿಡುವನಲ್ಲೀತನೊಡ। 

ಹುಟ್ಟಿದಂ ತನಗೆ ವಾಲ್ಮೀಕಿಮುನವರನವರ್। 

ನೆಟ್ಟನೆ ರಣಾಗ್ರದೊಳ್ ನಿನ್ನನುಂ ನಿನ್ನನುಜರಂತೆ ಘಾತಿಸಿದ ಬಳಿಕ ॥ 

ಮುಟ್ಟಿದುತ್ಸವದಿಂದ ತಾಯ ಬಳಿಗೈದಿ ಪೊಡ। 

ಮಟ್ಟಲ್ಲಿ ಸುಖದೊಳಿರ್ಪೆವೆಂದು ಕಣೆಗಳಂ। 

ತೊಟ್ಟು ತಾನೀಗ ಕುಶನರಿದುಕೊಳ್ಳೆನುತೆಚ್ಚನಾ ಭರತನಂ ಧುರದೊಳು॥೧೭॥ 


ಪ್ರತಿಪದಾರ್ಥ :- ಕುಶನು= ಕುಶನೆಂಬ ಬಾಲಕನು,ಕಟ್ಟಿದ= ಬಿಗಿದಿರತಕ್ಕ,ತುರಂಗಮಂ= ಹಯವನ್ನು, ಬಿಡುವುದಿಲ್ಲ= ಬಿಟ್ಟು ಕೊಡುವುದಿಲ್ಲ, ಈತನು= ನನ್ನೊಂದಿಗಿರುವ ಇವನು,ತನಗೆ=ನನಗೆ, ಒಡಹುಟ್ಟಿದಂ= ಸಹೋದರನಾಗಬೇಕು, ವಾಲ್ಮೀಕಿ ಮುನಿವರನವರು= ತಾಪಸೋತ್ತಮರಾದ ವಾಲ್ಮೀಕಿ ಕಡೆಯವರಾಗಿದ್ದೇವೆ,ರಣಾಗ್ರದೊಳ್=ಯುದ್ಧಭೂಮಿಯಲ್ಲಿ,ನಿನ್ನ-

ನುಂ= ನಿನ್ನನ್ನೂ,ನೆಟ್ಟನೆ = ಯಾವ ಬಾಧೆಗೂ ಸಿಕ್ಕದೆ, ನಿನ್ನನುಜರಂತೆ= ನಿನ್ನ ಒಡಹುಟ್ಟಿದವರನ್ನು ಮಾಡಿದಂತೆ,ಘಾತಿಸಿದ ಬಳಿಕ = ಸಂಹರಿಸಿದ ತರುವಾಯ, ಮುಟ್ಟಿದ= ಪ್ರಾಪ್ತವಾದ, ಉತ್ಸವದಿಂದ= ಆನಂದದಿಂದ, ತಾಯ=ಮಾತೆಯ, ಬಳಿಗೆ= ಹತ್ತಿರಕ್ಕೆ, ಐದಿ= ಹೋಗಿ ಸೇರಿ,ಪೊಡಮಟ್ಟು =ನಮಸ್ಕಾರ ಮಾಡಿ,ಅಲ್ಲಿ=ನಮ್ಮ ತಾಯಿಯ ಸನ್ನಿಧಿಯಲ್ಲಿ,ಇರ್ದಪೆವು= ಸುಖದಿಂದಿರುತ್ತೇವೆ, ಎಂದು=ಎಂಬತೆರನಾಗಿ, ಕಣೆಗಳ= ಬಾಣಗಳನ್ನು, ತೊಟ್ಟು = ಜೋಡಿಸಿದವನಾಗಿ, ತಾನು= ನಾನಾದ-

ರೂ,ಕುಶನು= ಕುಶನೆಂಬ ಬಾಲಕನು, ಈಗ= ಈಗಲಾದರೂ,ಅರಿದುಕೊ= ತಿಳಿದುಕೊ, ಎನುತ= ಎಂದು ನುಡಿಯುತ್ತ ಧುರರದೊಳು=ಕಾಳಗದಲ್ಲಿ,, ಆ ಭರತನಂ= ರಾಮನ ತಮ್ಮನಾದ ಭರತನನ್ನು ಎಚ್ಚನು= ಬಾಣಗಳಿಂದ ಹೊಡೆದನು. 


ತಾತ್ಪರ್ಯ:-ಕೇಳೈ ಜನಮೇಜಯನೆ, ನಾನು ಕಟ್ಟಿಹಾಕಿದ ಕುದುರೆಯನ್ನು ಬಿಟ್ಟು ಕೊಡುವುದಿಲ್ಲ, ಇವನು ನನಗೆ ತಮ್ಮನಾಗಬೇಕು, ನಾವುಗಳು ವಾಲ್ಮೀಕಿ ಮಹರ್ಷಿಯ ಕಡೆಯವರು, ಈಗ ರಣರಂಗದಲ್ಲಿ ನಿನ್ನನ್ನೂ ನಿನ್ನ ಸಹೋದರರಂತೆ

ನೆಲಕ್ಕೆ ಕೆಡವಿದಮೇಲೆ ಸಂತೋಷದಿಂದ ನಮ್ಮ ಮಾತೆಯ ಸನ್ನಿಧಿಗೆ ಹೋಗಿ ನಮಸ್ಕಾರಾದಿಗಳಿಂದ ಆಕೆಯನ್ನು ಸತ್ಕರಿಸಿ ಸುಖವಾಗಿತ್ತೇವೆಂದು, ನುಡಿಯುತ್ತಾ, ನನ್ನ ಬಾಣದ ರುಚಿಯನ್ನಾದರೂ ನೋಡೆಂದು ಹೇಳಿ, ಭರತನ ಮೇಲೆಅನೇಕ ಬಾಣಗಳನ್ನು ಬಿಡಲಾರಂಭಿಸಿದನು. ಕೇಳೈ ಜನಮೇಜಯನೆ, ನಾನು ಕಟ್ಟಿದ ಕುದುರೆಯನ್ನು ಬಿಟ್ಟು ಕೊಡುವುದಿಲ್ಲ.  ಇವನು ನನಗೆ ತಮ್ಮನಾಗಬೇಕು. ನಾವುಗಳು ವಾಲ್ಮೀಕಿ ಮಹರ್ಷಿಯ ಕಡೆಯವರು. ಈಗ ರಣರಂಗದಲ್ಲಿ ನಿನ್ನನ್ನೂ ನಿನ್ನ ಸಹೋದರರಂತೆ ನೆಲಕ್ಕೆ  ಕೆಡವಿದ ಮೇಲೆ ಸಂತೋಷದಿಂದ ನಮ್ಮ ಮಾತೆಯ ಸನ್ನಿಧಿಗೆ ಹೋಗಿ ನಮಸ್ಕಾರಾದಿಗಳಿಂದ ಆಕೆಯನ್ನು ಸತ್ಕರಿಸಿ, ಸುಖವಾಗಿರುತ್ತೇವೆಂದು ನುಡಿಯುತ್ತಾ, ನನ್ನ ಬಾಣದ ಸವಿಯನ್ನು ನೋಡೆಂದು ಹೇಳಿ, ಭರತನ ಮೇಲೆ ಅನೇಕ ಬಾಣಗಳನ್ನು ಬಿಡಲಾರಂಭಿಸಿದನು. 


ಭರತನಂ ಗಣಿಸದಿರುತಿರೆ ಕಂಡು ಮತ್ತೆ ಕರಿ। 

ತುರಗ ರಥ ಪಾಯದಳ ಮೊತ್ತಿದ್ದು ಕೂಡೆ ವಾ। 

ನರ ಸಿಂಗಳೀಕ ಮುಸು ಕರಡಿಯ ಬಲಂ ಮುತ್ತಿದುದು ಬಳಿಕ ನಸುನಗುತೆ ಕುಶನು॥ 

ಕರೆದು ಕುದುರೆಯ ಬಳಿಗೆ ತಮ್ಮನಂ ಕಳುಹಿ ಬಿ। 

ಲ್ದಿರುವಿಂದುಗುಳ್ಚಿದಂ ಕಣೆಗಳಂ ವೈರಿ ಮೋ। 

ಹರದ ತಲೆವಣಿಗಳಂ ಪಗೆಗಳೆರ್ದೆವಣಿಗಳಂ ಕಣೆಗಳಿಂ ಕ್ಷಣದೊಳು॥೧೮॥ 


ಪ್ರತಿಪದಾರ್ಥಂ:-ಭರತನಂ=ಕೈಕೆಯಾತ್ಮಜನಂ, ಗಣಿಸದೆ= ಲಕ್ಷ್ಯಮಾಡದೆ, ಎಸುತಿರೆ= ಬಾಣಗಳನ್ನು ಬಿಡುತ್ತಿರಲಾಗಿ, ಮತ್ತೆ= ತಿರುಗಿ, ಕಂಡು=ನೋಡಿ, ಕರಿ=ಆನೆಗಳು, ತುರಗ=ಕುದುರೆಗಳು, ರಥ=ತೇರುಗಳು, ಪಾಯದಳ= ಕಾಲಾಳು, ಮುತ್ತಿದವು= ಆವರಿಸಿಕೊಂಡವು,ವಾನರ= ಕೋಡಗಗಳು, ಸಿಂಗಳೀಕ= ಸಿಂಗಳೀಕಗಳು, ಮುಸುಕರಡಿ=ಋಕ್ಷಗಣ ಇವುಗಳ, ಬಲಂ= ದಳವು, ಕೂಡೆ=ತಕ್ಷಣವೇ,ಸಲೆ= ಸಂಪೂರ್ಣವಾಗಿ, ಮುತ್ತಿದುದು= ಆವರಿಸಿಕೊಂಡಿತು, ಬಳಿಕ = ಅನಂತರ, ಕೈಶನು= ಕುಶನಾದರೊ, ತಮ್ಮನಂ ಕರೆದು= ಲವನನ್ನು ಹತ್ತಿರ ಕರೆದು, ಕುದುರೆಯ ಬಳಿಗೆ = ಯಜ್ಞಾಶ್ವದ ಬಳಿಗೆ,  ಕಳುಹಿ= ಕಾವಲಿಗಾಗಿ ಕಳುಹಿಸಿ, ಬಿಲ್ದಿರುವಿಂದ =ಧನುಷ್ಟಂಕಾರದಿಂದ,ಕಣೆಗಳಂ= ಬಾಣಗಳನ್ನು, ವೈರಿ= ಹಗೆಗಳ, ಮೋಹರದ= ಸೈನ್ಯದ, ತಲೆ= ತಲೆಗಳಲ್ಲಿರತಕ್ಕ,ಮಣಿಗಳಂ= ರತ್ನಗಳನ್ನು, ಪಗೆಗಳ= ವೈರಿಗಳ, ಎದೆ= ಧೈರ್ಯವೆನ್ನುವ, ಮಣಿಗಳಂ= ಮಾಣಿಕ್ಯಗಳನ್ನೂ, ತಕ್ಷಣದೊಳು= ತಡಮಾಡದೆ, ಕಣೆಗಳಿಂ= ಬಾಣಗಳಿಂದ, ಉರುಳ್ಚಿದಂ= ನೆಲಕ್ಕೆ ಬೀಳುವಂತೆ ಮಾಡಿದನು. 


ತಾತ್ಪರ್ಯ:- ಭರತನು ಭರತನು ಆತನ ಸೈನಿಕರು ಬಾಣಗಳು ಎಲ್ಲೆಲ್ಲಿಯೂ ಕವಿಯುತ್ತಿರುವುದನ್ನು ನೋಡಿ ಚತುರಂಗಬಲ ಸಮೇತರಾಗಿ ಕಪಿಗಳು,ಸಿಂಗಳೀಕಗಳು, ಕರಡಿಗಳು,ಮೊದಲಾದವುಗಳ ಸಮೇತ ಬಾಲಕರೀರ್ವರನ್ನು ಸುತ್ತಿಕೊಂಡರು, ಆಗ ಕುಶನು ತನ್ನ ತಮ್ಮನನ್ನು ಕುದುರೆಯ ಕಾವಲಿಗೆ ಕಳುಹಿ, ಬಿಲ್ಲನ್ನು ತಿರುಗಿಸುತ್ತ ಹೊರಟು, ಶತ್ರುಗಳ ತಲೆಯನ್ನು ಕಡಿಯುತ್ತಲೂ, ಅವರ ಎದೆಯಲ್ಲಿ ಚುಚ್ಚುತ್ತಲೂ,ಅನೇಕರನ್ನು ನೆಲಕ್ಕೆ ಕೆಡವಿದನು. 


ಹತ್ತು ಭರತನ ಮೇಲೆ ನಳನ ಮೇಲೆಂಟು ಮೂ। 

ವತ್ತು ಹನುಮನಮೇಲೆ ಜಾಂಬವನಮೇಲೆ ನಾ। 

ಲ್ವತ್ತಂಗದನಮೇಲೆ ತೊಂಬತ್ತು ನೀಲ ಕುಮುದರ ಮೇಲೆ ನೂರುನೂರು॥ 

ಉತ್ತುಂಗ ಗವಯನ ಶತಬಲಿ ಸುಷೇಣರ ಮೇಲೆ।

ಹತ್ತುಹತ್ತಂಬೊಡಲ್ವುಗಲೆಚ್ಚನನಿಬರಂ। 

ಮತ್ತೆ ಘಾತಿಸಿ ಕೂಡೆ ರಾಮಾನುಜನ ಮೇಲೆ ಕೂರ್ಗಣೆಗಳಂ ಕರೆದನು॥೧೯॥ 


ಪ್ರತಿಪದಾರ್ಥ :- ಭರತನ ಮೇಲೆ= ಭರತಕುಮಾರನಿಗೆ ತಗಲುವಂತೆ , ಹತ್ತು= ಹತ್ತು ಕಣೆಗಳನ್ನೂ, ನಳನಮೇಲೆ= ನಳನೆಂಬಾತನ ಮೇಲೆ, ಎಂಟು ಬಾಣಗಳನ್ನು, ಹನುಮನಮೇಲೆ= ಆಂಜನೇಯನ ಮೇಲೆ, ಮೂವತ್ತು= ಮೂವತ್ತು ಬಾಣಗಳನ್ನೂ, ಜಾಂಬವನ ಮೇಲೆ= ಜಾಂಬವಂತನ ಮೇಲೆ, ನಲವತ್ತು ಅಂಬುಗಳನ್ನೂ,ಅಂಗದನ ಮೇಲೆ= ಕಿಷ್ಕಿಂದಾನಗರದ ಯುವರಾಜನ ಮೇಲೆ, ತೊಂಬತ್ತು ಸರಲ್ಗಳನ್ನೂ, ನೀಲಕುಮುದರ ಮೇಲೆ= ನೀಲ ಮತ್ತು ಕುಮುದ ಇವರೆಡೆಗೆ, ನೂರುನೂರು ಶರಗಳನ್ನೂ,ಉತ್ತುಂಗ = ಉನ್ನತ ಪರಾಕ್ರಮಿಗಳಾದ, ಗವಯ=ಗವಯನೆಂಬ, ಶತಬಲಿ= ಶತಬಲಿ ಎಂಬ ಹೆಸರುಳ್ಳ, ಸುಷೇಣರ ಮೇಲೆ= ಸುಷೇಣನೆಂದು ಪ್ರಖ್ಯಾತನಾದ ಕಪಿಗಳ ಮೇಲೆ= ಮೇಲ್ಗಡೆ ತಾಗುವಂತೆ, 

ಹತ್ತು ಹತ್ತಂಬು= ಹತ್ತರ ಪ್ರಕಾರವಾದ ಬಾಣಗಳನ್ನೂ, ಒಡಲ್=ದೇಹವನ್ನು,  ಒಗಲು= ಹೊಗುವಂತೆ, ಎಚ್ಚನು= ಹೊಡೆದನು, ಮತ್ತು=ಪುನಃ, ಅನಿಬರಂ= ಅಷ್ಟು ಜನಗಳನ್ನೂ,ಘಾತಿಸಿ= ಸಂಹರಿಸಿದವನಾಗಿ,ರಾಮಾನುಜನಮೇಲೆ= ಭರತನನ್ನು ತಾಗುವಂತೆ, ಕೂಡೆ=ತಡಮಾಡದೆ, ಕೂರ್ಗಣೆಗಳಂ = ತೀಕ್ಷ್ಣ ಶರಗಳನ್ನು, ಕರೆದನು= ಪ್ರಯೋಗಿಸಿದನು. 


ಅ॥ವಿ॥ಕೂರಿತ್ತು+ಕಣೆ= ಕೂರ್ಗಣೆ (ವಿ. ಪೂ. ಕ) ಕ್ರೂರ= ನಿಶಿತಗಳು. 


ತಾತ್ಪರ್ಯ:-ಭರತನ ಮೇಲೆ ಹತ್ತು ಅಂಬುಗಳನ್ನೂ, ನಳನ ಮೇಲೆ ಎಂಟು ಬಾಣಗಳನ್ನೂ, ಹನುಮಂತನ, ಜಾಂಬವಂತ, ಅಂಗದ, ನೀಲ, ಕುಮುದ,ಗವಯ, ಶತಬಲಿ, ಸುಷೇಣಾದಿ ವೀರರ ಮೇಲೆ ಕ್ರಮವಾಗಿ ಮೂರು, ನಲವತ್ತು, ತೊಂಭತ್ತು, ನೂರು, ನೂರು, ಹತ್ತು ಹತ್ತು ಬಾಣಗಳನ್ನು ಬಿಟ್ಟು ನೋಯಿಸಿದ್ದಲ್ಲದೆ, ಪೈನಃ ಭರತನ ಮೇಲೆ ಹರಿತವೃದ ಬಾಣಗಳನ್ನು ಬಿಟ್ಟನು. 


ಎಲ್ಲಿ ಕುಶನಂಬು ಸೋಂಕಿದುವಲ್ಲಿ ಮೂರ್ಛೆ ಮೃತಿ। 

ಯಲ್ಲದುಳಿವಿಲ್ಲ ಪಡೆಯೆಲ್ಲಮಂ ತಲ್ಲಣಿಸಿ। 

ಚೆಲ್ಲಿದುದು ದೆಸೆದೆಸೆಗೆ ಬಲ್ಲಿದ ಕಪೀಶ್ವರರ್ ಕೈಗೆಟ್ಟು ಮೈಮರೆದರು॥ 

ನಿಲ್ಲದೋಡಿತು ದೊದ್ದೆ ಘಲ್ಲಣಿಯನಾಂತು ನಿಂ। 

ದಲ್ಲಿ ಸಾರಥಿ ಕುದುರೆಗಳ್ ಮಡಿದು ತೇರ್ಮುರಿದು। 

ಬಿಲ್ಲುಡಿದು ಭರತನಂಗೋಪಾಂಗದಲ್ಲಿ ನಾಂಟಿದುವು ಪೊಸ ಮಸೆಗಣೆಗಳು॥೨೦॥ 


ಪ್ರತಿಪದಾರ್ಥ :- ಕುಶನ =ಕುಶನೆಂಬ ಬಾಲಕನ, ಅಂಬೈ=ಬಾಣ, ಎಲ್ಲಿ=ಯಾವೆಡೆಯಲ್ಲಿ,ಸೋಂಕಿದವು= ಮುಟ್ಟಿದವೊ, ಅಲ್ಲಿ= ಆ ಎಡೆಯಲ್ಲಿ, ಮೂರ್ಛೆ= ಸ್ಮೃತಿ ತಪ್ಪುವುದು,ಮೃತಿ=ಸಾವು, ಅಲ್ಲದೆ= ಉಂಟಾಗದೆ,ಉಳಿವು= ಜೀವವನ್ನಿಟ್ಟು-

ಕೊಂಡಿರುವುದು, ಇಲ್ಲ=ಇಲ್ಲವು,ಪಡೆಯೆಲ್ಲಮುಂ=ಸೇನೆಯೆಲ್ಲವೂ, ತಲ್ಲಣಿಸಿ= ಮನನೊಂದು, ದೆಸೆದೆಸೆಗೆ= ದಿಕ್ಕಾಪಾಲಾ- ಗಿ, ಚೆಲ್ಲಿತು= ಚೆದುರಿತು, ಬಲ್ಲಿದ=ಸಾಹಸಿಗಳಾದ,ಕಪೀಶ್ವರರ್= ವಾನರ ಶ್ರೇಷ್ಠರು, ಕೈಗೆಟ್ಟು= ಶಕ್ತಿ ಕುಂದಿದವರಾಗಿ, ಮೈ-

ಮರೆದರು=ಮೂರ್ಛಿತರಾಗಿ ಬಿದ್ದು ಬಿಟ್ಟರು,ದೊದ್ದೆ= ಸೇನಾಜಲಧಿ, ಘಲ್ಲಣೆಯನೈ= ಕಾಳಗವನ್ನು, ಆಂತು=ತಾಳಿ, ನಿಲ್ಲದೆ= ನಿಂತುಕೊಳ್ಳಲಾರದೆ, ಓಡಿತು=ಓಡಿಹೋಯಿತು, ನಿಂದಲ್ಲಿ=ನಿಂತಹಾಗೆಯೇ,ಸಾರಥಿ= ರಥವನ್ನು ನಡೆಸುವವನೂ, ಕುದುರೆಗಳು= ಹಯಗಳೂ,ಮಡಿದು= ಮರಣವನ್ನು ಹೊಂದಿ, ತೇರ್=ರಥವು, ಮುರಿದು=ಚೂರು ಚೂರಾಗಿ, ಬಿಲ್ಲು=ಚಾಪವು, ಉಡಿದು= ತುಂಡುತುಂಡಾಗಿ, ಪೊಸ= ಹೊಸದಾದ, ಮಸೆ=ಸಾಣೆಹಿಡಿಸಿ ಹರಿತಮಾಡಿದ, ಕಣೆಗಳು= ಬಾಣಗಳು,ಭರತನ= ಭರತನ, ಅಂಗೋಪಾಂಗದಲ್ಲಿ= ಪ್ರತಿಯೊಂದು ಅಂಗದಲ್ಲಿಯೂ,ನಾಂಟಿದವು= ಚುಚ್ಚಿಕೊಂಡವು.


ತಾತ್ಪರ್ಯ:-ಕುಶನ ಬಾಣಗಳು ಯಾರಿಗೆ ತಾಕಿದರೂ ಕೂಡ ಅವರಿಗೆ ಮೂರ್ಛೆಯಾಗಲೀ ಸಾವಾಗಲೀ ತಪ್ಪುತ್ತಿರಲಿಲ್ಲ. ಸೈನ್ಯವೆಲ್ಲಾ ತಲ್ಲಣಗೊಳ್ಳುತ್ತಾ ದಿಕ್ಕಾಪಾಲಾಗಿ ಓಡಿತು, ಬಲಶಾಲಿಗಳಾದ ವಾನರಾಧಿಪರೆಲ್ಲಾ ಶಕ್ತಿಗುಂದಿದವರಾಗಿ ಸ್ಮೃತಿ- 

ತಪ್ಪಿಹೋದರು, ಸೇನಾನಾಯಕರೆಲ್ಲಾ ಪಲಾಯನ ಮಾಡಿದರು, ಸಾರಥಿಗಳೂ ಕುದುರೆಗಳೂ ನಿಂತಕಡೆಯಲ್ಲಿಯೇ ಸತ್ತು ಬಿದ್ದು ಹೋದರು,ರಥಗಳೆಲ್ಲಾ ಪುಡಪುಡಿಯಾದವು. ಭರತನ ಕೈಯ್ಯಲ್ಲಿದ್ದ ಧನುಸ್ಸು ನುಚ್ಚು ನೂರಾಯಿತು. ಕೂರಲಗುಗಳು ಅವನ ಸರ್ವಾಂಜದಲ್ಲಿಯೂ ಚುಚ್ಚಿಕೊಂಡವು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ