ನೇಮಿಚಂದ್ರ
ಇವನು ಹನ್ನೆರಡನೆಯ ಶತಮಾನದ ಕೊನೆಯ ಭಾಗದಲ್ಲಿಯೂ ಹದಿಮೂರನೆ ಶತಮಾನದ ಮೊದಲಲ್ಲಿಯೂ ಜೀವಿಸಿದ್ದ ದೊಡ್ಡ ಪಂಡಿತ ಕವಿ. ಪಂಪ ಮತ್ತು ರನ್ನರಂತೆಯೇ ಒಂದು ಲೌಕಿಕ ಕಾವ್ಯವನ್ನೂ ಒಂದು ಧಾರ್ಮಿಕ ಕಾವ್ಯವನ್ನೂ ಬರೆದಿದ್ದಾನೆ. ರಟ್ಟರಾಜನಾದ ಲಕ್ಷ್ಮಣರಾಜನ ಆಶ್ರಯದಲ್ಲಿದ್ದುಕೊಂಡು ಸು. ಕ್ರಿ. ಶ. ೧೧೯೦ ರ ಹೊತ್ತಿಗೆ ತನ್ನ ಮೊದಲ ಕಾವ್ಯವಾದ “ ಲೀಲಾವತಿ “ ಯನ್ನು ಬರೆದನು . ಇವನಿಗೆ ಮಹಾಕವಿ, ಕವಿರಾಜಕುಂಜರ ಎಂಬ ಬಿರುದುಗಕ್ಷಿದ್ದುವು. ಹೊಯ್ಸಳ ವೀರಬಲ್ಲಾಳನ ಮಹಾಪ್ರಧಾನನಾದ ಪದ್ಮನಾಭನ ಪ್ರೇರಣೆಯ ಮೇರೆ “ ನೇಮಿನಾಥ ಪುರಾಣ “ ವನ್ನು ಬರೆದನು. ಕವಿಯಾದವನು ಎಷ್ಟು ಮಹಿಮಾವಂತನೆಂಬುದನ್ನು ಅವನು ವರ್ಣಿಸಿರುವುದು :
ಪ್ರಥಮಾಶ್ವಾಸಂ.
ಶ್ರೀಪಾದಾಕ್ರಾಂಲೋಕಂ ಪರಮಹಿಮಕರಂ ನೂತನಕ್ಷತ್ರಕಾಂತಂ।
ತಾಪಧ್ವಾಂತಾಪನೋದಕ್ಷಮನಮೃತಕಲಾವಲ್ಲಭಂ ವಿಶ್ ವಿದ್ಯೃ।
ಕೂಪಾರೋಜ್ಜೀವಜೈವಾತೃಕನತನುಕೃತಸ್ವಾಂತಸೌಖ್ಯಂ ತ್ರಿಲೋಕೀ।
ದೀಪಂ ತಳ್ಕೈಸುಗಸ್ಮನ್ಮತಿಕುಮುದಿನಿಯಂ ನೇಮಿಚಂದ್ರಂ ಜಿನೇಂದ್ರಂ॥೧॥
ವಿಧುಕಾಂತಂ ಕಾಮದಂ ಪ್ರೋದ್ಧತಮಕರಪತಾಕಂ ನತಭ್ರೂಲತಾಪು ।
ಷ್ಪಧನುರ್ಲೇಖಂ ಮನೋಲಕ್ಷ್ಯಕಮಸೃಣಧರಸ್ಮೇರನೇತ್ರ ಪ್ರಸೂನಾ।
ಯುಧನುದ್ಯದ್ಭಾರತೀಶಂ ಕುಡುಗೆಮಗಮೃತಶ್ರೀಸಮುತ್ಕಂಠೆಯಂ ಸ।
ನ್ಮಧುರಾಜಶ್ರೀಮನೋಜ್ಞಂ ಜಿನವದನಮಯಂ ಮಾನ್ಮಥಂ ದಿವ್ಯರೂಪಂ॥೨॥
ಆಯತದಿವ್ಯಮೂರ್ತಿ ಶಿವಸಾಖ್ಯಕರಂ ಹರಿಪೂಜ್ಯನೂರ್ಜಿತಂ।
ಶ್ರೀಯುವತೀಶ್ವರಂ ಮಧುವಿರುದ್ಧ ವಿಭೂತಿ ವಿಯೋಗಿ ಚಿತ್ತ ಮಂ ।
ನೋಯಿಸದೊಂದಿ ನಿಂದ ರತಿರಾಗಮನಾಗಿಸದತ್ಯಪೂರ್ವಪು।
ಷ್ಪಾಯುಧನೀವನಕ್ಕೆಮಗೆ ಶಾಂತಿಜಿನಂ ವೃಜಿನೈಕಶಾಂತಿಯಂ॥೩॥
ಬೞಲದೆ ಪುಷ್ಪಬಾಣಹತಿಯಿಂ ಪುಳಕಂಗಳನಾನದುಣ್ಮಿನಾ ।
ಣಱಿಯದೆ ಜಾಣನಿಕ್ಕದೆ ಬೆಮರ್ತಱುತಾಱದೆ ತೀರ್ದು ತಾನೆ ಮೆ।
ಯ್ಕೞಲದೆ ಡಂಗಿ ಮುಕ್ತಿಯೊಡಗೂಡಿದ ಪೆಂಪಿನ ಸೌಖ್ಯದಿಂಪು ಪೊಂ।
ಪುೞಿಯೆನಿಸಿರ್ದ ಸಿದ್ಧರೆಮಗೀಗೆವಿಶುದ್ಧರಭೀಷ್ಟಸಿದ್ಧಿಯಂ॥೪॥
ಜಿನಪದಬೋಧವಾರ್ಧಿಭವೆ ಭವ್ಯಮನೋಹರಕಾಂತೆ ಕಾಮಸಂ ।
ಜನನಿ ಯಶೋವಿಕಾಸಿನಿ ಗುಣೀಕೃತಸಂಸೃತಿದೋಷೆ ಪುಣ್ಯಭಾ।
ಗಿನಿ ಭುವನಪ್ರಬೋಧಿನಿಸುಖಾಮೃತದಾಯಿನಿ ಬಂದು ನೇಮಿಚಂ।
ದ್ರನ ಮುಖಪದ್ಮದೊಳ್ ಸಿರಿವೊಲಿರ್ಪ ಸರಸ್ವತಿ ನಿಲ್ಕೆ ನಲ್ಮೆಯಿಂ॥೫॥
ಬಱಿದೆ ಮರಲ್ದರಲ್ದಕುಕವಿವ್ರಜಶಾಲಾಮಲಿಯಂ ಮಲಂಗದೆ।
ೞ್ಚಱಿಸದೆದುರ್ವಿವೇಕಮುಖಕುಟ್ಮಲದಿಂದವಗಂಧಮಂ ಮರು ।
ಳ್ದೆಱಗದೆ ಮುಗ್ಧಚಂಪಕದೊಳೊಲ್ದು ಸರಸ್ವತಿಯೆಂಬ ತುಂಬಿ ಬಂ।
ದೆಱಗುಗೆ ನೇಮಿಚಂದ್ರನ ನವಸ್ಮಿತಜಾತಮುಖಾಂಬುಜಾತದೊಳ್ ॥೬॥
ಕಡುಗಱಿಯದಯಶಂ ಪೆಸರಿಡೆ ।
ಕಡುವಿಳಿದಾಯಿತ್ತು ಕೀರ್ತಿ ಕವಿಗಳ್ ಕಱಿದೆಂ।
ದೊಡೆ ಕಱಿದವರ್ಗಳ್ ಬಿಳಿದೆಂ
ದೊಡೆ ಬಿಳಿದೇಕವರನುೞಿದುಕಿಡುವರ್ ಕೆಲಬರ್॥೯॥
ಸುಭಗಕವಿವೃಷಭಶುಭದ।
ಸ್ವಭಾವಸರಸಪ್ರಬಂಧಬಂಧುರಗುಣಸಾ।
ರಭಮಂ ಪೊತ್ತೆಸಗುವ ವಾ
ಗ್ವಿಭವಮುಮುಂಟಾದೊಡವನೆ ಸೇವ್ಯಂಜಗದೊಳ್॥೧೦॥
ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ, ವಾಮನಕ್ರಮಂ ।
ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ, ಹರನಂ ನರನೊತ್ತಿ ಗಂಟಲಂ ॥
ಮೆಟ್ಟುಗೆ ಮೆಟ್ಟದಿರ್ಕೆ, ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್ ।
ಮುಟ್ಟಿದರ್ ಒತ್ತಿ ಮೆಟ್ಟಿದರ್, ಅದೇನಳವಗ್ಗಳಮೋ ಕವೀಂದ್ರರಾ॥( ೧೧॥
{ ಕಪಿ ಸಮೂಹವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರೋ ಬಿಟ್ಟರೋ ಕಾವ್ಯದಲ್ಲಂತೂ ಹಾಗೆ ಮಾಡಿದರು. ವಾಮನನು ಆಕಾಶದಲ್ಲಿ ತನ್ನ ಮೂರನೆಯ ಪಾದವನ್ನುಇಟ್ಟನೋ ಇಲ್ಲವೋ ಕವಿಯು ಹಾಗೆ ಮಾಡಿಸಿದ. ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಿದನೋ ಇಲ್ಲವೋ ಆದರೆ ಭಾರತದಲ್ಲಿ ಹಾಗೆ ಒತ್ತಿದ. ಹೀಗೆಲ್ಲ ಅದ್ಭುತಕಾರ್ಯಗಳನ್ನುಮಾಡಿಸುವ ಕವಿಗಳ ಮಹತ್ವವು ಅದೆಷ್ಟು ಅದ್ಭುತ} ಹಾಗೆಯೇ ಶ್ರೇಷ್ಠವಾದ ಕಾವ್ಯವು ಆ ದೇಶದ ಜನರ ಪುಣ್ಯಬಲದಿಂದ ರಚಿತವಾಗುತ್ತದೆ,ಎಂದು ಹೇಳುವ ಅವನ ಪದ್ಯವು ತುಂಬ ಪ್ರಸಿದ್ಧವಾದುದು. }
ಬೆಲೆಯಿಂದಕ್ಕುಮೆ ಕೃತಿ, ಗಾ
ವಿಲ, ಭುವನದ ಭಾಗ್ಯದಿಂದಮಕ್ಕುಂ ; ನೋೞ್ಪಂ ॥
ಬೆಲೆಗೊಟ್ಟು ತಾರ ಮಧುವಂ ।
ಮಲಯಾನಿಲನಂ ಮನೋಜನಂ ಕೌಮುದಿಯಂ॥ ( ನೇಮಿ. ಪು. ೧-೪೫)ಅಳಿಸಿ
{ ಶ್ರೇಷ್ಠ ಕಾವ್ಯವು ದುಡ್ಡು ಕೊಟ್ಟರೆ ಬರುತ್ತದೆಯೆಂದು ಭಾವಿಸಬೇಡವೊ ಮೂರ್ಖ. ಅದು ಜಗತ್ತಿನಪುಣ್ಯದಿಂದ ಉಂಟಾಗುವಂಥದು. ವಸಂತನನ್ನು, ಮಲಯಪರೂವತದ ತಂಗಾಳಿಯನ್ನು, ಕಾಮನನ್ನು, ಬೆಳುದಿಂಗಳನ್ನು ದುಡ್ಡು ಕೊಟ್ಟು ಕೊಂಡುಕೊಂಡು ಬಾ ನೋಡೋಣ} ಅಳಿಸಿ
ಲೀಲಾವತಿ
ಇದೊಂದು ಚಂಪೂ ಕೃತಿ. ಇದು ದೀರ್ಘವಾದ ಪ್ರಣಯಕತೆಯೊಂದನ್ನು ಚಿತ್ರಿಸುತ್ತದೆ. ಇದಕ್ಕೆ ಸುಬಂಧುವೆಂಬ ಸಂಸ್ಕೃತ ಕವಿಯ “ ವಾಸವದತ್ತಾ “ ಎಂಬ ಗದ್ಯಕಾವ್ಯವು ಪ್ರೇರಣೆಯನ್ನೊದಗಿಸಿದಂತೆ ಕಾಣುತ್ತದೆ. “ ಸ್ತ್ರೀ ರೂಪಮೆ ರೂಪಂ, ಶೃಂಗಾರ ರಸಮೆರಸಂ “ ಎಂಬ ಕವಿಯ ಆದರ್ಶವು ಪ್ರಣಯ ಕತೆಯಾಗಿ ಮೂಡಿ ಬಂದಿದೆ. ಅಳಿಸಿ
ಹೇಮಂತ ವರ್ಣನೆ.
ಒಂಬತ್ತನೆಯ ಆಶ್ವಾಸಂ.
ನೀಳಲ ಕಂಪನೊಟ್ಟಿ ನಳಿನಂಗಳನಳ್ಕಿಸಿ ಬೆಳ್ಮುಗಿಲ್ಗಳಂ ।
ತೂಳಮನೆತ್ತುವಂತೆೞೆದು ಸೋಗೆಯ ಪೀಲಿಯ ಬೇಱನೆತ್ತಿ ಹಂ ॥
ಸಾಳಿಯ ತುಪ್ಪುೞಂ ತುೞಿದ ಪಶ್ಚಿಮದಿಂ ಬಡವಾಗಿ ಬರ್ಪ ಮೆ ।
ಲ್ಗಾಳಿಯನೊತ್ತಿ ತೀಡಿದುದು ಮೂಡಣ ಗಾಳಿ ಹಿಮಪ್ರವೇಶದೊಳ್॥೨॥
ಇಂದಾರಂ ಕುಳಿರ್ದಪ್ಪುದಿಂದು ಪಗಲುಂ ಮೆಯ್ಕೋಡಿತಿಂದೊಳ್ವಿಸಿಲ್ ।
ನಾಂದಂತಿರ್ದಪುದಿಂದು ಪಾಲ ಬಸಿಱಿಂ ಬಂದಂತಿರಿಂದಿಂತು ನೀರ್ ॥
ಪೊಂದಿತ್ತಿಂದಱೆಜಾವಮಾಯ್ತು ಮುಗಿದಲ್ತಿಲ್ಲುತ್ಪಳಂ ಪಂಕಜಂ ।
ಕುಂದಿತ್ತಿಂದೆಲೆ ಪೊಕ್ಕುದಕ್ಕುಮಿಳೆಯೊಳ್ ಹೇಮಂತಮೇಮಂತಣಂ॥ ೩॥
ಒಂದೆ ಕುಂದಮಲರ್ದತ್ತು ಗಾಳಿಗೊ ।
ಲ್ದೊಂದಿತೊಂದೆ ಗುಣಮಧ್ವಗ ವ್ರಜ ॥
ಕ್ಕೊಂದೆ ಮಗ್ಗುಲಮರ್ದತ್ತು ಪೊತ್ತಡ ।
ರ್ದೊಂದೆ ಬೆಳ್ಳಿ ಬೆಳಗಿತ್ತು ಮಾಗಿಯೊಳ್॥೫॥
ಮುಗಿಯೆ ಕರದ ಕಂಜಂ ವಾಜಿಗಳ್ ಸುರ್ಕೆ ಸೂತಂ ।
ಸುಗಿದು ಪೆೞವನಾದಂತೈಕಿಲಿಂ ಪೆರ್ನರಂಗಳ್ ॥
ತೆಗೆಯೆ ರಥದ ಕೀಲಂ ಕಿತ್ತು ಪೊತ್ತಿಕ್ಕೆ ಕಣ್ಣೊಳ್ ।
ಪುಗೆ ಪೊಗೆ ರವಿ ಸಾರ್ತಂದೂದುವಂ ಪೋಪ ಕಿಚ್ಚಂ॥ ೬॥
ಮಾಸಱಮೆನೆ ಪಾರದದಿಂ ।
ಪೂಸಿದವೋಲ್ ಪೊನ್ನವಮುಕುರಮಂ ಹಿಮಲಿಪ್ತಂ ॥
ನೇಸಱ ಬಿಂಬಂ ತಿಂಗಳ ।
ಕೂಸಿನವೊಲ್ ಕೋಡುತಿರ್ದುದಂದಿನ ದಿನದೊಳ್॥೮॥
ಚಳಿಗಳ್ಕಿ ಕಱಿಯ ಪೊಸಕಂ ।
ಬಳಿಯಂ ಮುಸುಕಿದವೊಲಗ್ನಿಯುಪಗತತಾರ್ಣಾ॥
ನಳರಾಶಿಯೆಸೆದುವಂತ ।
ರ್ಜ್ವಳದುಲ್ಮುಕಮೊಟ್ಟೆ ಪೋಗೆ ಪಥಿಕರ್ ಪಥದೊಳ್॥ ೯॥
ತಡಿವಿಡಿದು ನಡೆದು ಮೆಲ್ಲಗೆ ।
ತಡಾಗಜಳದೊಳಗೆ ಪೊಳೆವ ನಿಜಚಂಚುಗಳಂ ॥
ಮಿಡುಕುವ ಮೀನ್ಗೆತ್ಗೊಡರಿಸಿ ।
ತುಡುಕಿದುವಡಿಗಡಿಗೆ ಬಾಳಖಗಸಂತತಿಗಳ್॥೧೩॥
ನಂದುವ ಪುಲ್ಲ ಕಿಚ್ಚಿನೊಳೆ ಕಪ್ಪಡಮಂ ಪರಿದಿಕ್ಕಿ ಪಾಂಥನುಃ ।
ಪೆಂದಿರದೂದೆ ಪೊಣ್ಮಿ ಪೊಗೆ ಕಣ್ಗೊಳಗಂ ಪುಗೆ ಬಾಷ್ಪ ಬಿಂದು ಬೀ॥
ೞ್ತಂದು ತದಗ್ನಿಯಂ ನದಿಪಿದತ್ತಕಟಾತನ ಬೆನ್ನ ಕಪ್ಪಡಂ ।
ಬೆಂದುದು ಬಂದುದಾಗಳೆ ಹಿಮಾನಿಳನಿಂತುಟು ಪಾಂಥರುಬ್ಬಸಂ ॥ ೧೯॥
ಪೊಸಪುಲ್ಲೊಳ್ ಕಿಚ್ಚನಿಟ್ಟೂದಿದೊಡುರಿದುರಿ ಕೂರ್ಚಾಗ್ರಮಂ ಪತ್ತೆಕೆಯ್ಯಂ।
ಪೊಸೆದು ವಸ್ತ್ರಾಗ್ರದಿಂ ಮೋದಿಯುಮುಗುಳ್ವೞೆಯಿಂ ನಾಂದಿಯುಂ ಮೊಕ್ಕಳಂ ನಂ ॥
ದಿಸಲೆಂತುಂ ಪಾಂಥನಂದಾಱದೆ ನಡುಮಡುವಂ ಪೋಗಿ ಬಿರ್ದೈಕಿಲಿಂ ಕಂ ।
ಪಿಸುತಿರ್ದಂ ಪುಲ್ಲಕಿರ್ಚುಂ ಪೊಲೆಯನ ಕೆಳೆಯುಂ ಮಾಡದಾವಂಗೆ ಕೇಡಂ॥೨೦॥
ತಳಿರೊಳ್ ಮುಚ್ಚಿಟ್ಟು ಕೂಸಂ ಶಬರಿ ತೆಗೆದು ನಿಶ್ಚೇಷ್ಟಮಾಗಿರ್ದೊಡಂ ಕ ।
ಣ್ಗಳ ನೀರಂ ತೀವಿಬೇಗಂ ತೊಡೆದು ಹಿಮಕಣಾನೀಕಮಂ ತೇಂಕುದಾಣಂ ॥
ಗಳನಂಟಂಟೆಲ್ಲಿಯುಂ ಕಾಣದೆ ಹರಣಮನತ್ಯುಷ್ಣದಿಂ ಸುಯ್ಯೆ ಸುಯ್ಯಿಂ ।
ದೆಳಗೂಸೆೞ್ಚತ್ತು ಕಾವ್ಕಾವೆನೆ ತೊಱೆದ ಕುಚಾಗ್ರಗಳಂ ನೀಡುತಿರ್ದಳ್॥೨೧॥
ವಸಂತವರ್ಣನೆ
ಉಗುೞೆ ಮದಾಳಿ ನೆಯ್ದಿಲ ಮಧುದ್ರವಮಂ ವನದೊಳ್ ಪಿಕಂ ಸರಂ ।
ದೆಗೆಯೆ ಸರಂಗಳಂ ಶಿಶಿರಮಂ ಬಿಸಿಲಾಯ್ದು ಕುಱುಂಕೆ ಮೆಲ್ಲನ ॥
ಲ್ಲುಗೆ ಕೞಿವಂದ ಕುಂದದಲರ್ಗಳ್ ಗಿಳಿ ತತ್ತಿಯನಿಕ್ಕಿ ಪಕ್ಕಮಂ ।
ನೆಗೆದೆಲೆದೊಂಗಲೊಳ್ ತೊಡೆಯೆ ತೀಡಿದುದೊಯ್ಯನೆ ದಕ್ಷಿಣಾನಿಳಂ॥ ೬೧॥
ಕೊನರನೆ ಸಾರ್ದ ಕೋಗಿಲೆಯೆ ಸತ್ತಸರಂ ಪೊಸತಾಗಿ ಪುಟ್ಟಿತೆಂ ।
ಬಿನಿತೆ ಬನಂಗಳೊಳ್ ಕೊನರ್ವ ಕನ್ನಡವಕ್ಕಿಯನಾದ ಮೆತ್ತರು ॥
ದ್ರನ ಮುನಿಸಿಂದೆ ಬೆಂದತನುವುಂ ಮಱುವುಟ್ಟಿಗನಾದನಂದು ಮಾ ।
ವಿನ ಕಳಿಕಾರಸಂ ನವಸುಧಾರಸಮಲ್ಲವೆ ಚೈತ್ರಮಾಸದೊಳ್॥ ೬೬॥
ಕಲಿಕೆ ಕವಲ್ತು ಮೂಡಿದುದು ಮಾಮರದೊಳ್ ಬನದೊಳ್ ಪೊರಳ್ದು ಸಾ ।
ಯಲೆ ಪೊಲಗೆಟ್ಟು ಪೊಕ್ಕುದು ವಿಯೋಗಿಮೋಗಾವಳಿ ಕೊಲ್ವುದೆಂದು ಮು ॥
ನ್ನುಲಿಯದೆ ಕೊಂಬುಗೊಂಡುೞಿದ ಕೋಗಿಲೆ ಕರ್ಬಿನ ಬಿಲ್ಗೆ ಕೂರ್ತು ಕ ।
ರ್ಬೆಳನನೆಗೊಬ್ಬಿನಿಂ ಕರೆವವೊಲ್ ಕರೆದತ್ತು ವಸಂತಮಾಸದೊಳ್॥ ೬೭॥
ಚಂಚು ವಿಘಾತಜಾತ ವಿಳಸದ್ವಿವರಂ ಸಹಕಾರಕೋರಕಂ ।
ಬಂಚದ ಭಂಗಿಯೊಳ್ ಬೆರಸೆ ಸೂಸೆ ರಸಂ ಮೊಗಮಿಟ್ಟು ರಾಗದಿಂ॥
ಪಂಚಮದಿಂಚರಂ ನಿಮಿರೆ ಪಂಚಸರಂ ಭಯದಿಂದೆ ಕೇಳ್ದು ರೋ ।
ಮಾಂಚನಮನಾಂತು ಮೆಚ್ಚುತಿರೆ ಕೇಳಿಸಿದಂ ಕಳಕಂಠವಾಂಶಿಕ॥೬೮॥
ತಳಿರಂ ತಾಳ್ದಿ ಬೞಲ್ದು ಪೊತ್ತು ನನೆಯಂ ಪೂಗೊಂಚಲಂ ಪೇಱು ಬ ।
ಳ್ವಳನಲ್ಲಾಡುವ ಭೃಂಗಕೋಕಿಳಶುಕವ್ರಾತಂಗಳಿಂ ಬೞ್ಕುವೀ ॥
ಸೆಳೆಗೊಂಬುಂ ಕೊನೆಗೊಂಬುಮೆಂತುಂ ಫಳಭಾರಕ್ಕಾರ್ಪುವೆಂದಾಂತವೋ।
ಲೆಳಮಾವಂ ಮಳಯಾನಿಳಂ ಬಳಸಿಕೊಂಡಿರ್ದತ್ತು ಚೈತ್ರಾದ್ರಿಯೊಳ್॥ ೬೯॥
ಗಿಳಿ ತಳಿರಂ ಮುದಂ ಮಗುೞ್ದ ಕೋಗಿಲೆ ಕೋರಕಮಂ ಮದಾಳಿ ಪೂ ।
ಗಳನರೆಗರ್ಚಿ ಪಾಱಿದುವು ನೂತನಮಂ ನವವಸ್ತು ಜಾತಮಂ ॥
ಬಳೆದೊಲವಿಂದಮೋಲಗಿಸಿ ಬಂದ ಬಸಂತದ ಸೊಂಪನೞ್ತಿಯಿಂ ।
ತಳೆದಱಿಪಲ್ಕೆ ಪೋಪ ವನಪಾಲಕರಂತೆ ಮನೋಜ ರಾಜನಾ॥ ೭೦॥
ಮೀಂಗಳ್ ಮಿಗೆ ಮೋಕ್ಷ ಸ್ನಾ।
ನಂಗುಡುವವೊಲೊಡನೆ ಮುೞಿಗೆ ತಾನುಗುೞ್ದಂದು ಮುಂ ॥
ನುಂಗಿದ ದಿನಕರನಂ ಮಿಗೆ ।
ಪಿಂಗುತ್ತುಂ ರಾತ್ರಿ ರಾಹು ಶಿಶಿರಾತ್ಯಯದೊಳ್ ॥ ೮೪॥
ಭರವಸದೆ ಕವಿವ ಖರಕರ ।
ಕಿರಣಂಗಳ್ಗಳ್ಕಿ ಪುಲ್ಗಳಂ ಕರ್ಚಿದವೋ॥
ಲರುಣಿತತುಷಾರಜಳ ಶೀ।
ಕರಮೆನೆ ಪನಿಪುಲ್ಲ ಪನಿಗಳಲುಗಿದುವೆಲರಿಂ॥ ೮೫॥
ಪಿರಿದುಮನಂಗನಾವ ಸಿರಿ ಕಮ್ಮನೆ ಕೂರ್ಗಣೆ ಮಾಡೆ ನಲ್ಲರಂ ।
ಬಿರಯಿಗಳಂ ಮನಂ ಬಿರಿಯೆ ತಾಗಿ ಕರಂಬಿಗಿವಂತೆಶಬೇಗದಿಂ ॥
ಬಿರಿಯಿಯ ಚಿತ್ತಮಂ ಪಿರಿದು ನುಂಗಲೆ ಬಾಯ್ದೆಱೆವಂದದಿನೇಂ।
ಬಿರಿದುವೊ ತೋರಮಲ್ಲಿಗೆಗಳಬ್ಬರಮಾಗಿ ಬಸಂತಮಾಸದೊಳ್॥೧೦೪॥
ಕೃತಜ್ಞತೆಗಳು:
ಸಂಪಾದಕರು- ರಂ. ಶ್ರೀ. ಮುಗಳಿ
ಪ್ರಕಾಶಕರು: ಸಾಹಿತ್ಯ ಅಕಾಡಮಿ,
ರವೀಂದ್ರ ಭವನ, ೩೫, ಫಿರೋಜಶಾಹ ರಸ್ತೆ
ನವದೆಹಲಿ - ೧೧೦೦೦೧.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ