ನೇಮಿಚಂದ್ರನ ಅರ್ಧನೇಮಿಪುರಾಣ
ಈ ಗ್ರಂಥಕರ್ತನು ನೇಮಿಚಂದ್ರನು. ಈತ ಲೀಲಾವತೀ ಮತ್ತು ನೇಮಿನಾಥಪುರಾಣಂ ಎಂಬೆರಡು ಕೃತಿಗಳನ್ನು ರಚಿಸಿದ್ದಾನೆ. ಕವಿಯ ಕಾಲ ೧೨ ನೆಯ ಅಂತ್ಯಭಾಗ. ಈತನು ತಾನು ಚತುರ್ಭಾಷಾಚಕ್ರವರ್ತಿ ಎಂದು ಹೇಳಿಕೊಂಡಿದ್ದಾನೆ.
ಶ್ರೀ ರಸ್ತು.
ನೇಮಿಚಂದ್ರನ ನೇಮಿನಾಥಪುರಾಣಂ (ಅರ್ಧನೇಮಿಪುರಾಣಂ)
ಶ್ರೀವೀತರಾಗಾಯ ನಮಃ, - ಶ್ರೀ ಮತ್ಪಂಚಗುರುಭ್ಯೋ ನಮಃ.
ಶ್ಲೋ ॥ ಶ್ರೀಮತೇ ನೇಮಿನಾಥಾಯ ನಮಸ್ಸ್ಯಾದ್ವಾದಸಿಂಧವೇ ।
ಯಸ್ಮಿನ್ನುದಿತಬೋಧೇಂದೌ ತ್ರೈಲೋಕ್ಯಂ ಲಕ್ಷಣಾಯತೇ॥
ಶ್ರೀಯಂ ಶ್ವೇತಾತಪತ್ರಂ ಪ್ರಥಿತವಿಭವಮಂ ಚಾಮರಂ ಬೋಧಮಂ ವಾ ।
ಕ್ಪೀಯೂಷಂ ಪೆರ್ಮೆಯಂ ಭಾಸುರತರಪಟಹಂ ಶಕ್ತಿಯಂ ಸಿಂಹಪೀಠಂ ॥
ಸ್ವಾಯತ್ತಂಮಾೞ್ಪೆನಂ ಭಾವಳಯವಿಳಸಿತಾಶೋಕಮಂದಾರವರ್ಷ।
ಚ್ಛಾಚ್ಛನ್ನಾಂಗನಾದಂ ತ್ರಿಭುವನವಿನುತಂ ನೇಮಿ ರಕ್ಷಿಕ್ಕೆ ನಮ್ಮಂ ॥೧॥
ಲೀಳಾಗಾತ್ರೈಕಮಲ್ಲೀಮುಕುಳಮೆನಿಸೆ ನಾಸಾಗ್ರದೊಳ್ ಪಾಂಚಜನ್ಯಂ।
ವ್ಯಾಳಂ ಶಯ್ಯಾತಳಂ ಪೂಗಣೆಯನೊಣೆಧೃತಂ ಪೈರ್ವುವಿಲ್ಲಾ ಗೆ ಶಾರ್ಙಂ॥
ಹೇಳಾಕೃಷ್ಟಂ ಸುಪುಷ್ಟಂ ಹರಿಮದಹರನಪ್ಪಂತೆ ಕಂದರ್ಪದರ್ಪ।
ವ್ಯಾಳೋಳಕ್ರೀಡೆಗಾದಂ ಕುಡುಗೆಮಗೆ ಮಹೋತ್ಸಾಹಮಂ ನೇಮಿನಾಥಂ॥೨॥
ವಿಮಳಜ್ಞಾನಾಳಿನಾಳಂ ಸುಖಮಯಮಕರಂದಾಕರಂ ಮುಕ್ತಪಾಪ ।
ಭ್ರಮರಂಸಂಸಕ್ತಸೂಕ್ಷ್ಮೋಜ್ಜ್ವಲಗುಣಮವಗಾಹಾವಹಂಭದ್ರಮುನ್ನಿ॥
ದ್ರಮಪಾರಂ ಪಾವನಪ್ರಸ್ತುತಗತಿ ಭುವನಾಗ್ರಸ್ಥಿತಂ ತೋರ್ಕೆ ನಿಚ್ಚಂ ।
ನಮಗಿಂತತ್ಯಂತಲಕ್ಷ್ಮೀಲಲಿತಲಪನಮಂ ಸಿದ್ಧನೀರೇಜಷಂಡಂ ॥೩॥
ಆಚಾರಂ ನಿಸದಾಗಿ ಸದ್ಗುಣಗಣಂ ಮುಂತಾಗಿ ಮಂತ್ರಕ್ರಿಯಾ।
ಳೋಚನಂ ನಿರ್ವ್ಯಭಿಚಾರಮಾಗೆ ಜಿನರಾಜಪ್ರಾಜ್ಯಸಾಮ್ರಾಜ್ಯದೊಳ್ ॥
ಶೌಚವ್ಯೋಚಿತಭಾಗ್ಯಲಕ್ಷ್ಮಿ ತಮಗೇಕಚ್ಛತ್ರಮಾಯ್ತೆಂದುಮೆಂ।
ಬಾಚಾರ್ಯರ್ ನಮಗೀವರಕ್ಕೆ ನಯನಿಕ್ಷೇಪಪ್ರಮಾಣಂಗಳಂ॥೪॥
ರಸಮೊ ರಸಾಯನಮೋ ಶ್ರುತಿ ।
ವಸಂತಮೋ ಕಿವಿಗಳಮೃತಮೋ ನೇಮಿಯವಾಕ್॥
ಪ್ರಸರಮದದೆಸಕದಿಂ ನಿ।
ಪ್ಪೊಸತಾದುದು ಜಗಕ್ಕೆ ನೇಮಿನಾಥಪುರಾಣಂ॥೩೮॥
ಕುವಳಯದಲರಂ ಕೌಮುದಿ ।
ಯ ವಿಭವಮಂ ಕಂಡು ಕೊಂಡು ಕೊನೆವಂ ಕವಿಯೋ॥
ರವಿಯೋ ರವಿ ಕಾಣದುದಂ ।
ಕವಿ ಕಾಣ್ಬನೆನಿಪ್ಪ ವಚನಮೇಂ ತಪ್ಪುಗುಮೇ॥೩೩॥
ಬೆಲೆಯಿಂದಕ್ಕುಮೆ ಕೃತಿ ಗಾ ।
ವಿಲ ಭುವನದ ಭಾಗ್ಯದಿಂದಮಕ್ಕುಂ ನೋೞ್ಪಂ ॥
ಬೆಲೆಗೊಟ್ಟು ತಾರ ಮಧುವಂ ।
ಮಲಯಾನಿಲನಂ ಮನೋಜನಂ ಕೌಮುದಿಯಂ॥೪೫॥
ಆಶ್ವಾಸ ಎಂಟು
ಮಳೆಗಾಲದ ವರ್ಣನೆ.
ನೀರಂ ನೀರಂಧ್ರಮೇಘಂ ಸುರಿಯೆ ಮೊರೆಯೆ ಭೀಮಾರುತಂ ಕೊ ।
ಳ್ಗಾರಂ ಗಾರಂಬೊಲಾಯ್ತೆಂದಗಿಯೆ ಪಥಿಕರುಚ್ಚಾತಕಂ ಚಾತಕಂ ಕಾ ॥
ಸಾರಾಸಾರಾರ್ಥಿ ಗೋಲಂಗುಡಿಯೆ ನಲಿವನೋಜಂಬುವಂ ಜಂಬುವಂ ಸೋ ।
ತ್ಕೀರಂ ಕೀರಂ ಕರ್ದುಂಕುತ್ತಿರೆ ಕೆರಳಿಸಿದತ್ತೋವಿಕಾರಂ ವಿಕಾರಂ॥ ೨॥
ಎಳಮಿಂಚಂ ತಳೆಯಿಕ್ಕಿ ಚಾದಗೆಗಳಂ ಬಿಟ್ಟೋಡಿ ಬಲ್ಗೆಚ್ಚಲಿ ।
ಟ್ಟಳಿನೀಳಾಂಬುದದಿಂ ಬೞಲ್ದ ಗಗನಶ್ರೀ ಧೇನುವಂ ಕೋಮಳಾ ॥
ಮಳದೀರ್ಘಾಮೃತಧಾರೆಗಳ್ಸುರಿಯೆ ಭೋರ್ಭೋರೆಂಬಿನಂ ಶಕ್ರಚಾ ।
ಪಳತಾದಾಮಕದಿಂದೆ ಕಟ್ಟಿ ಕಱೆದಂ ಕಾರೆಂಬ ಗೋಪಾಳಕಂ॥೩॥
ಕಳಕೇಕಾರುತಿ ಪೋಲೆ ವೀಣುರುತಿಯಂ ಬೀಸುತೆ ಮಿಂಚೆಂಬ ಗೋ ।
ವಳಗೋಲಂ ಪೊಡೆಸೆಂಡುವೊಯ್ದು ಸಿಡಿಲಂ ಗೀರ್ವಾಣಬಾಣಸನ॥
ಚ್ಛಳದಿಂ ಕತ್ತರಿವೀಲಿಯೊಂದು ಪಣೆಕಟ್ಟಂ ಕಟ್ಟಿಕೊಂಡಭ್ರಕಂ।
ಬಳಮಂ ಗೋವನವುಂಕಿಬಂದೊದಱಿದಂ ಕಾರೆಂಬ ಗೋಪಾಳಕಂ॥ ೪॥
ಕಡಲೊಳ್ ಪಟ್ಟಿರ್ದವಂ ಪುಟ್ಟಿರದಿರ ಬನದೊಳ್ ಬಂದು ಸಪ್ತಾರ್ಣವಂ ಮೇ
ಗೊಡಿವಿರ್ದಂತಾಗೆ ಮಿಂಚೆಂಬುರಿ ಮಿಗೆ ನಭಮಾಶಾಮುಖಶ್ರೇಣಿಯಂ ಗೋ॥
ೞಿಡುವಂತೋರಂದದಿಂದಂ ಮೊೞಗೆ ಮುಸುಱೆ ಮೇಘೌಘಮಬ್ಜಾಕ್ಷನಂ ಬ ।
ಲ್ಸಿಡಿಲಿಂದಿಟ್ಟಾಲಿಕಲ್ಲಿಂದೆಱಗಿ ಕಱೆದುದಾಗೋಕುಲಂ ತೇಂಕುವನ್ನಂ॥ ೭॥
ಪೊಡೆವ ಸಿಡಿಲ್ಗಳನೆಳೆಯೊಳ್ ।
ಕೆಡೆದೇೞೆಂಟಣಕು ನೆಗೆದು ನುರ್ಗಪ್ಪಿನೆಗಂ ॥
ಪೊಡೆದಂ ಗೋವಳಿಗೋಲಿಂ ।
ಪೊಡೆಸೆಂಡಾಡುವವೊಲೇಂ ಬಲಸ್ಥನೊ ಕೃಷ್ಣಂ॥ ೯॥
ಕರಗದ ಮುಗಿಲಂ ಪರೆಯದ ।
ಸುರಧನುವಂ ಮಿಂಚಿ ಕಿಡದ ಮಿಂಚಂ ಪೊಡೆದೋ ॥
ಸರಿಸದ ಸಿಡಿಲಂ ಸಮೆಯದ ।
ಸರಿವೞೆಯಂ ಕಂಡು ಬೆಗಡುಗೊಂಡರ್ ಗೋವರ್॥೧೦॥
ಕಂಸವಧೆ
ವಚನ॥ ಅಂತು ಕಂಸಂ ಕೃಷ್ಣಂಗೆ ಕಡಿವಂದುದಂ ಕಂಡು ವಸುದೇವಂ ಬಲದೇವಂ ಬೆರಸು ಚಾತುರ್ದಂತಬಲಮಂ ಕೂಡಿಕೊಂಡು ನಿಯುದ್ಧರಂಗದ ಕೆಲದೊಳ್ ಯುದ್ಧಸನ್ನದ್ಧರಾಗಿರ್ದಾಗಳುದ್ಧತನಾಗಿರ್ದ ಕಂಸಂ ಪಡಿಯಱನಂ ಕರೆದು ಕಿವಿಯೊಳ್ ಪರ್ಚುವುದುಮಾತನಂತೆಗೆಯ್ವೆನೆಂದು ಪೋಗಿ ಯಶೋದೆಗೆಂದಂ- ನಿನ್ನ ಮಗನೆಲ್ಲಿಗಾದೊಡಂ ಕಾಳೆಗವೆಂ-
ದೊಡೆ ಪೂಣಿಗನಾಗಿ ಪರಿವರಿಯಪ್ಪನ ವ್ಯಸನಮುಂ ವ್ಯಸನಮುಳ್ಳೊಡೆ ಬಂದು ಚಾಣೂರಮಲ್ಲನೊಳ್ ಮಲ್ಲವೋರ್ದು ಪರ್ವಕ್ಕೆ ನೆರೆದರಸುಮಕ್ಕಳ ಕಣ್ಗೆ ಪರ್ವಮಂ ಮಾೞ್ಕೆಂದು ಕಂಸಮಹಾರಾಜಂ ಬೆಸಸಿಯಟ್ಟಿದಂ ; ನೀವೆ ತಿವುರುಂ ತಿಳಕಮುಂ ಬೆರಸುತ್ಪೂರಿಸಿಕೊಂಡುಬರ್ಕೆ ಕೊಳ್ಳಿಮಾತನೆಲ್ಲಿದನೆಂಬುದುಂ ಯಶೋದೆ ಮುಗುಳ್ನಗೆ ನಗುತಿಂತೆಂದಳ್-
ಎನ್ನ ಮಗನಾವ ತಿವುರಿಂ ।
ಮುನ್ನಿಕ್ಕಿದನಣ್ಣ ಶಕಟನಂ ಪೂತನಿಯಂ ॥
ಪನ್ನಗನಂ ಯಮಳಾರ್ಜುನ ।
ರನ್ನರಕನನವನಿನಧಿಕನೇ ಚಾಣೂರಂ॥ ೭೩॥
ವಚನ॥ ನಿಜದಿಂ ಕೂರ್ಪುಳ್ಳನುಮಂ ಕತ್ತರಿವಾಣಿಯುಮಂ ಮಸೆಯಲೇಕೆಸಿಂಗಮಾನೆಯಂ ಮುಱಿವಲ್ಲಿಗಾವಭ್ಯಾಸಮಂ ಮಾಡಿದುದು; ಮುರಾಂತಕನುಂ ಅಂತಕನುಂ ಕೊಲ್ವುದನಿನ್ನು ಕಲ್ತಪರೆ ಕೇಳಿಮೆನ್ನ ಮಗಂ ನೀರೊಳ್ನಾನಂ ಬಿಸಿಲೊಳ್ಬಾಡಂ ಬೆಂಕಿಯೊಳ್ಬಾಡಂ ಬೆಂಕಿಯೊಳ್ಬೇಯಂ ಜವನ ಕೆಯ್ಯೊಳ್ಸಾಯಂ ಏನುಂ ಬೇಡೊಡಗೊಂಡು ಪೋಗಿಮೆಂಬಿನಿತರ್ಕೆಯಂಬು-
ಜೋದರಂ ಬಂದಬ್ಬಾಪಸಿದೆನೆಂಬುದುಂ ಯಶೋದೆಯಿಂತೆಂದಳ್-
ಸಮೆದೆಂ ಮೊಸಱಂ ಬಾಳ್ಮೊಸ।
ಱುಮನಾಂ ಘನವಾಗಿ ತಂದೆನಿಕ್ಕಿದಪೆಂ ಲಂ ॥
ಚಮನೆನ್ನ ಮಲ್ಲ ಚಾಣೂ।
ರಮಲ್ಲನಂ ಮುಱಿದು ಬಂದು ಹಸಿವಂ ಮುಱಿಯಾ॥ ೭೪॥
ಉತ್ತಮಸತ್ವದಿಂ ಪಿಡಿದು ಚಾಣೂರನಂ ನೆಲಕಿಕ್ಕಿ ಕೃಷ್ಣನಾ ।
ಳ್ದೊತ್ತಿದೊಡೊತ್ತಿ ಧಾತ್ರಿ ರಸೆಗರ್ದುದು ರಕ್ಕಸನೊಯ್ದ ಧಾತ್ರಿಯಂ ॥
ಕೆತ್ತಿದನಾತನುಂ ಹರಿಯ ಗೋವನಿಱುಂಕಿ ತದಂಘ್ರಿಘಾತದಿಂ ।
ದತ್ತ ಪತಂಗವೊಂದು ಶಕಟಂ ಮುಱಿದಾಶಕಟಂಬೊಲಿರ್ಪಿನಂ॥ ೯೩॥
ಓರೊರ್ವರನಕ್ಖಡದಿಂ।
ದೂರಂ ಪೊಱಗಿಕ್ಕಿ ಪೋರ್ದು ಪಾದಾಹತಿಯಿಂ ॥
ಭೂರೇಣುವಾಗೆ ಹರಿಚಾ ।
ಣೂರರ್ಮತ್ತೊಂದುಮಲ್ಲಗಳನಂ ಸಮೆದರ್॥೯೪॥
ಬೆದಱಿದ ಬೆಱಗಿಂ ಬೆನ್ನಿ ।
ಕ್ಕಿದ ಕೃಷ್ಣಂ ಮೊಗದೆಗೊಂಡು ಮೊಗದೊಳ್ಮೆಯ್ಸಿ॥
ಕ್ಕಿದ ಚಾಣೂರನನಾರ್ದೆ।
ತ್ತಿದನವನಿಯನೆತ್ತುವಂತಿರಾದಿವರಾಹಂ॥ ೯೫॥
ಕೆಡೆದರ್ಪೋರ್ದರ್ ಪೊರಳ್ದರ್ಮಿಗೆ ಪಿಡಿದರಾರ್ದೊತ್ತಿದರ್ಮತ್ತಮೆರ್ದರ್ ।
ನಿಡುಕೆಯ್ಯಂ ಬೇಡಿದರ್ನೀಡಿದರೆೞೆದು ನೆಲಕಿಕ್ಕಿದರ್ಕೂಂಕಿದರ್ಮೇ ॥
ಗಡೆಯಾದರ್ಪತ್ತಿ ಗಾಯಂಗೊಳಲೆ ಮಿಡುಕದಾರಯ್ದರಾರಯ್ದ ಗಾಯ ।
ಕ್ಕೆಡೆಗೊಟ್ಟುರ್ಕಿಟ್ಟುಕೊಂಡರ್ಪೊಳೆದು ಬಿಡಿಸಿದರ್ ಕೃಷ್ಷಚಾಣೂರಮಲ್ಲರ॥ ೯೬॥
ಪಿಡಿವಡೆ ಕೃಷ್ಣನ ತೋಳುಂ ।
ತೊಡೆಯುಂ ದೊಡ್ಡಿದುವಿದೆನ್ನ ಮುಷ್ಟಿಗೆ ಪವಣಿಂ॥
ದಡಹಡಿಸಿ ನಳಿನನಾಭನ ।
ನಡುವಂ ಮುಱಿಯಲ್ಕೆ ನೋಡಿದಂ ಚಾಣೂರಂ॥ ೯೭॥
ಮರನಂ ಕಿೞ್ತ ಮುರಾರಿಯಾಱನೆ ಕಿೞಲ್ಮುಂಗೆಯ್ಯ ರೋಮಂಗಳಂ।
ಕರಮಂ ಕೊಟ್ಟೊಡಮಾರ್ತನಿಲ್ಲ ಪಿಡಿಯಲ್ತತ್ಞಕಾಳಿಯಗ್ರಾಹಕಂ॥
ಧರೆಯಂ ಬೆಂಬಲದೊತ್ತಿ ಪತ್ತೆಗಿರಿಯಂ ಮುನ್ನೆತ್ತಿ ಪೊತ್ತಾಮಹೀ।
ಧರನಂತಿಂತು ತಳರ್ಚಲಾಱನೆ ಕರಂ ಚಾಣೂರನೇಂ ಶಕ್ತನೋ॥ ೯೮॥
ನೆಲನುಂ ಜಲನಿಧಿಯುಂ ಸಲೆ ।
ತಲೆವತ್ತುವ ತೆಱದಿನಿರ್ದು ಕಡೆಯೊಳ್ ನೆಲನಂ ॥
ಜಲಧಿ ಕಿಡಿಪಂತೆ ಕಿಡಿಸಿದ।
ನಲಸದೆ ಚಾಣೂರಮಲ್ಲನಂ ಮುರಮಥನಂ॥ ೧೧೦॥
ವಚನ॥ ಮತ್ತೆ ಬಿಡದ ಮಲ್ಲರನೃನೆ ಮೆಟ್ಟಿದುದೆ ಸಂಡೆಂಬಂದಾವೆಡೆಯಂ ಪಿಡಿದೊಡಂ ಪಿಡಿದೆಡೆಯೆ ಗಾಯಮಾಗೆ ಬಳೆಯ ಪೇಱನಾನೆ ಮೆಟ್ಟಿದಂತೆಲುವೆಲ್ಲನುರ್ಗುನುರ್ಗಾಗೆ ಮೆಯ್ಯ ತೊವಲಾಗೆ ಸಡಿಯಾಡುಗಳಂತಿವದವಲ ಬೇರಂಗಳನೀಡಾತೀ-
ಡಾಡಿದ ಚಾಣೂರಮಥನನ ಮೇಲೆ ಯಗಸ್ತ್ಯನ ಮೇಲೆ ಕವಿದ ಕಡಲಂತೆ ಕವಿವ ಕಂಸನ ಚಾತುರ್ವಲಮಂ ಬಲದೇವನುಂ ವಸುದೇವನುಂ ಕಂಡು ತಮ್ಮ ಬಲಮಂ ಕೈವೀಸೆ ಪೆಣಮಯಂ ಮಾಡೆ ನೆತ್ತರೈಗಡಲಂ ಪರಿಯಿಸಿ ಕಟ್ಟೇವಮುಂ ಕಡುಮುಳಿಸು ಅಳವಿಗೞಿಯೆ ಸಿಗ್ಗಾಗಿ ಸೈರಿಸಲಾಱದೆ ಅಭಿನವನಾರಸಿಂಹಾಡಂಬರಮಗುರ್ವುಮದ್ಭುತಮುಮಾಗಿ-
ಮಾಡದ ಕಂಭಮಂ ಮಲಗಿನೊಳ್ಪರಿಪಾಯ್ದು ನೆಲಕ್ಕೆ ಬಾಳನ ।
ಲ್ಲಾಡೆ ನೆಗಪ್ಪಿಕೊಂಡು ತೊಡೆಗಾನರಸಿಂಹನವುಂಕಿ ಕಂಭದಿಂ ॥
ಮಾಡಿದ ಕಾಳರಕ್ಕಸನನಿಕ್ಕುವವೋಲ್ ನಖದಿಂ ಕರುಳ್ಗಳಂ ।
ತೋಡಿ ಪಿಸುಳ್ದು ನೀೞ್ದು ಬಿಸುಟಂ ಕಲಿಕಂಸನನಬ್ಜಲೋಚನಂ ॥ ೧೧೭॥
ಕೆಡೆಕೆಡೆಯೆಂದರಮಗನೊದೆ।
ದೆಡಗಾಲೊಳ್ ತೊಡರ್ದು ಕರುಳೋಳೇನಿರ್ದಂ ಕ ॥
ರ್ದಡಿಗಂ ಗೋವಳನಿಕ್ಕಿದ।
ತೊಡರೊಳ್ ಮಿಗೆ ಕೋದೆೞಲ್ವ ಪಾಪೆಯ ತೆಱದಿಂ॥ ೧೧೮॥
ಕ್ಷಿತಿಗೊರ್ವನೆ ದುರ್ಜನನೊಂ ।
ದತಿವೇಗದೆ ಮಾಡುವುಪಕಾರಮನ ॥
ಪ್ರತಿಮರ್ ಸಜ್ಜನರಾಚಂ।
ದ್ರತಾರಕಂ ಬರ್ದು ಮಾಡಲೇನಾರ್ತಪರೇ ॥೧೧೯॥
ಕೃತಜ್ಞತೆಗಳು,
ಸಂಪಾದಕರು,
ರಂ. ಶ್ರೀ. ಮುಗಳಿ.
ಪ್ರಕಾಶಕರು: ಸಾಹಿತ್ಯ ಅಕಾಡಮಿ,
೧೦೯, ಎ ಡಿ ಎ ರಂಗಮಂದಿರ,
ಜೆ. ಸಿ. ರಸ್ತೆ, ಬೆಂಗಳೂರು- ೫೬೦೦೦೨.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ