ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಡಿಸೆಂಬರ್ 6, 2025

ಜೈಮಿನಿ ಭಾರತ 23 - ದೊಡ್ಡಬೆಲೆ ನಾರಾಯಣಶಾಸ್ತ್ರೀ

 ಜೈಮಿನಿ ಭಾರತ 23 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ಆಹವ ಸಮರ್ಥ ಕರ್ಣಜನಂ ಬಭ್ರು। 

ವಾಹನಂ ಸುರನದಿಯ ಶಾಪದಿಂದರಿಯಲ್ಕೆ। 

ರಾಹು ತುಡುಕಿದಮೃತಕರ ಬಿಂಬದಂತಿರ್ದುದರ್ಜುನನ ತಲೆ ರಣದೊಳು॥ 


ಪ್ರತಿಪದಾರ್ಥ :- ಬಭ್ರುವಾಹನಂ = ಪಾರ್ಥಜನು,ಆಹವ=ಕಾಳಗದಲ್ಲಿ, ಸಮರ್ಥ=ವೀರನಾದ, ಕರ್ಣಜನಂ= ಕರ್ಣಸುತನನ್ನು,ಕೆಡಹಿ= ನೆಲಕ್ಕುರುಳಿಸಿ, ಸುರನದಿಯ = ದೇವಗಂಗೆಯ, ಶಾಪದಿಂದ= ಅನಿಷ್ಟವುಂಟಾಗಲೆಂದು ನುಡಿದಿದ್ದರಿಂದ, ಅರಿಯಲ್ಕೆ= ಪಾರ್ಥನ ಶಿರವನ್ನು ಕಡಿದು ಹಾಕಲು, ರಾಹು= ರಾಹುವೆನ್ನತಕ್ಕ ಗ್ರಹವು,ತುಡುಕಿದ= ಹಿಡಿದ, ಅಮೃತಕರಬಿಂಬದಂತೆ= ಚಂದ್ರಮಂಡಲದ ತೆರನಾಗಿ, ರಣದೊಳು= ಕಾಳಗದ ಭೂಮಿಯಲ್ಲಿ, ಅರ್ಜುನನ= ಫಲ್ಗುಣನ, ತಲೆ=ಶಿರಸ್ಸು, ಇರ್ದುದು= ಪ್ರಕಾಶಿಸುತ್ತಲಿತ್ತು. 


ಅ॥ವಿ॥ ಕರ್ಣ=ರವಿಕುಮಾರನಿಂದ, ಜ= ಹುಟ್ಟಿದವನು (ವೃಷಕೇತು)- (ಕೃ. ವೃ) ಸುರನದಿ (ಷ. ತ. ಸ.) ಅಮೃತಕರ= ಅಮೃತದಂತೆ, ಬಿಂಬದಂತೆ= ರೂಪದ ಹಾಗೆ,ಕರ= ಕಿರಣವುಳ್ಳವನು ಯಾವನೊ ಅವನು( ಬ.ಸ. ) ಅಮೃತಕರನ ಬಿಂಬ= 

ಅಮೃತಕರ ಬಿಂಬ (ಷ.ತ.) 


ತಾತ್ಪರ್ಯ:- ಯುದ್ಧ ನಿಪುಣನಾದ ವೃಷಕೇತುವನ್ನು ಸಂಹರಿಸಿ, ಗಂಗಾದೇವಿಯ ಶೃಪಕ್ಕನುಸಾರವಾಗಿ ಬಭ್ರುವಾಹನನು ಅರ್ಜುನನ ತಲೆಯನ್ನು ಕತ್ತರಿಸಲು, ರಾಹು ಹಿಡಿದ ಚಂದ್ರನಂತೆ ಅದು ಯುದ್ಧಭೂಮಿಯಲ್ಲಿ ಬಿದ್ದಿತು. 


ಜನಪ ಕೇಳರ್ಜುನನ ಸೈನ್ಯದೊಳ್ ಬಭ್ರುವಾ।

ಹನನಖಿಳವೀರರಂ ಕೆಡಹಿ ಹಂಸಧ್ವಜನೊ। 

ಡನೆ ರಣದೊಳೆಚ್ಚಾಡಿ ಸ್ಯಂದನ ಸಹಸ್ರಮಂ ತಡೆಗಡಿದವನ ಪಡೆಯೊಳು॥ 

ತನಿಗಲಿಗಳಾರುಸಾವಿರಮಂ ಪೊರಳ್ಚಿ ವಾ। 

ಹಿನಿಯನೈದಕ್ಷೋಹಿಣಿಯನೊಕ್ಕಲಿಕ್ಕಿ ಮೇ। 

ದಿನಿಗವಂ ಮೈಮರೆದು ಬೀಳ್ವಂತೆ ಸೆಕ್ಕಿದಂ ಕಾಯದೊಳ್ ಸಾಯಕವನು॥೧॥ 


ಪ್ರತಿಪದಾರ್ಥ :- ಜನಪ= ಎಲೈ ಜನಮೇಜಯ ಮಹೀವಲ್ಲಭನೆ, ಕೇಳು=ಲಾಲಿಸು, ಬಭ್ರುವಾಹನನು = ಪಾರ್ಥನಂದನನು, ಅರ್ಜುನನ = ಫಲ್ಗುಣನ, ಸೈನ್ಯದೊಳ್= ದಳದೊಳಗೆ, ಅಖಿಳ=ಸಕಲ, ವೀರರ= ಪರಾಕ್ರಮಿಗಳನ್ನು, ಕೆಡಹಿ= ನೆಲಕ್ಕೆ ಬೀಳಿಸಿ, ರಣದೊಳು= ಯುದ್ಧದಲ್ಲಿ, ಹಂಸಧ್ವಜನೊಡನೆ= ಹಂಸಧ್ವಜನೊಂದಿಗೆ,ಎಚ್ಚಾಡಿ= ಹೋರಾಡಿ, ಸ್ಯಂದನ ಸಹಸ್ರ-

ಮಂ= ಒಂದು ಸಹಸ್ರ ತೇರುಗಳನ್ನು, ತಡೆಗಡಿದು= ಚೂರುಚೂರಾಗಿ ಮಾಡಿ, ಅವನ= ಆ ಹಂಸಧ್ವಜನ, ಪಡೆಯೊಳು= ದಳದಲ್ಲಿ,ತನಿ=ಹೊಸದಾದ, ಕಲಿಗಳು= ವೀರರು, ಆರು ಸಾವಿರಮಂ=ಆರು ಸಾವಿರವನ್ನು, ಪೊರಳ್ಚಿ= ಉರುಳಿಸಿದವನಾಗಿ

ಐದಕ್ಷೋಹಿಣಿಯನು= ಐದು ಅಕ್ಷೋಹಿಣಿ, ವಾಹಿನಿಯನು= ದಳವನ್ನು, ಒಕ್ಕಲಿಕ್ಕಿ= ಕಡಿದುಹಾಕಿ, ಮೈಮರೆದು= ಸ್ಮರಣೆ ತಪ್ಪಿ, ಮೂರ್ಛಿತನಾಗಿ = ಮೂರ್ಛಾಕ್ರಾಂತನಾಗಿ, ಅವಂ= ಆ ಹಂಸಧ್ವಜನು, ಮೇದಿನಿಗೆ= ಭೂಮಿಯಮೇಲೆ, ಬೀಳ್ವಂತೆ= ಬಿದ್ದುಹೋಗುವಂತೆ, ಸಾಯಕವನು= ಬಾಣವನ್ನು,  ಕಾರದೊಳ್= ದೇಹದಲ್ಲಿ, ಸಿಕ್ಕಿದಂ= ನಾಟಿದನು. 


ತಾತ್ಪರ್ಯ:- ಕೇಳೈ ಜನಮೇಜಯ ಮಹೀಪಾಲನೆ! ಬಭ್ರುವಾಹನನು ಪಾರ್ಥನ ಸೇನಾಸಾಗರದಲ್ಲಿ ಅನೇಕರನ್ನು ಯಮಲೋಕಕ್ಕೆ ಕಳುಹಿಸಿ, ತನಗಿದಿರಾದ ಹಂಸಧ್ವಜರಾಯನೊಂದಿಗೆ ಸಾಹಸದಲ್ಲಿಯೂ,ಧೈರ್ಯದಲ್ಲಿಯೂ, ಪೌರುಷ ಮೊದಲಾದವುಗಳಲ್ಲಿಯೂ ಲೇಶವೂ ಕಡಿಮೆಯಿಲ್ಲದೆ ಸರಿಸಮನಾಗಿ ಕಾದಾಡುತ್ತ ಆ ಹಂಸಧ್ವಜನ ಚತುರಂಗಬಲದಲ್ಲಿ ಸಾವಿರ ತೇರುಗಳನ್ನು ನುಚ್ಚುನೂರು ಮಾಡಿ, ವೀರಾಗ್ರಣಿಗಳಾದ ಆರು ಸಾವಿರ ಮಂದಿಯನ್ನೂ, ಐದು ಅಕ್ಷೋಹಿಣಿ ಸೈನ್ಯ-

ವನ್ನೂ ಧ್ವಂಸಮಾಡಿ ಹಂಸಧ್ವಜನ ಮೈಮೇಲೆಲ್ಲಾ ಬಾಣಗಳನ್ನು ಬಿಟ್ಟು ಮೂರ್ಛಾಕ್ರಾಂತನನ್ನಾಗಿ ಮಾಡಿದನು. 


ಅಸದಳದೊಳವನ ಸುತರಿರ್ವರುಂಮಡಿದ ಬಳಿ।

ಕಸುರಾರಿ ತನ್ನೊಳಾಡಿದ ಬಲ್ಮೆಯಂ ನೆನೆದು। 

ದೆಸೆಗೆಟ್ಟು ಬಿದ್ದನಕಟೆಂದು ಹಂಸಧ್ವಜಂಗರ್ಜುನಂ ಮರುಗುತಿರಲು॥ 

ಮುಸುಕಿದಂ ಪಡೆಸಹಿತ ಬಂದು ಪಾರ್ಥಿಯ ರಥವ। 

ನಸಮ ಭುಜಬಲ ಸುವೇಗಂ ಬಳಿಕ ಸಂಗರಂ। 

ಪೊಸತಾದುದಿರ್ವರ್ಗೆ ಕೊಂದನರ್ಜುನಿ ಮತ್ತೆ ವೀರರಿರ್ಛಾಸಿರವನು॥೨॥ 


ಪ್ರತಿಪದಾರ್ಥ :- ಅರ್ಜುನಂ= ಪಾರ್ಥನು, ಅಸುರಾರಿ= ಕೃಷ್ಣನು, ತನ್ನೊಳು= ತನ್ನೊಂದಿಗೆ, ಆಡಿದ= ನುಡಿದ, ಬಲ್ಮೆಯಂ= ಪ್ರದ್ಯುಮ್ನ ಮತ್ತು ಅನಿರುದ್ಧ ಇವರ ಸಾಹಸವನ್ನು, ನೆನೆದು= ಸ್ಮರಣೆಮಾಡಿಕೊಂಡು, ಅಸದಳದೊಳು= ಶಕ್ತಿಶಸಾಲದೆ, ಅವನ= ಆ ಕೃಷ್ಣನ, ಸುತರು= ಕುವರರು, ಈರ್ವರು= ಮನ್ಮಥ ಅನಿರುದ್ಧರು, ಮಡಿದ=ಮರಣಹೊಂದಿದ,ಬಳಿಕ =ತರುವಾಯ, ದೆಸೆಗೆಟ್ಟು = ದಿಕ್ಕಾಪಾಲಾಗಿ,  ಬಿದ್ದರು= ಬಿದ್ದು ಬಿಟ್ಟರು, ಅಕಟ= ಆಹಾ, ಎಂದು= ಎಂಬತೆರನಾಗಿ, ಹಂಸಧ್ವಜಂಗೆ= ಹಂಸಧ್ವಜನಿಗಾಗಿ ಮರುಗುತ= ವ್ಯಸನಪಡುತ್ತ, ಇರಲು= ಇರಲಾಗಿ, ಅಸಮ= ಅಸದೃಶವಾದ, ಭುಜಬಲ= ಸಾಹಸವುಳ್ಳ, ಸುವೇಗಂ= ಸುವೇಗನೆನ್ನತಕ್ಕವನು, ಪಡೆಸಹಿತ= ಸೇನಾಸಮೇತನಾಗಿ, ಬಂದು= ಐತಂದು, ಪಾರ್ಥಿಯ= ಅರ್ಜುನಿಯ, ರಥವನು= ತೇರನ್ನು, ಮುಸುಕಿದಂ = ಕವಿದುಕೊಂಡನು,  ಬಳಿಕ= ತರುವಾಯ, ಈರ್ವರ್ಗೆ= 

ಬಭ್ರುವಾಹನ ಸುವೇಗರಿಗೆ, ಸಂಗರಂ= ಕಾಳಗವು, ಪೊಸತು= ಹೊಸದಾದದ್ದು,ಆದುದು= ಆಗಿಬಿಟ್ಟಿತು,ಮತ್ತೆ= ತಿರುಗಿ, ವೀರರ= ಶೂರಾಗ್ರಣಿಗಳ, ಇರ್ಛಾಸಿರಂ= ಎರಡು ಸಾವಿರ ಸಂಖ್ಯೆಯನ್ನು, ಅರ್ಜುನಿ= ಪಾರ್ಥನಂದನನು,ಕೊಂದನು= ಸಂಹರಿಸಿದನು. 


ಅ॥ವಿ॥ ಅಸುರ+ಅರಿ=ಅಸೈರಾರಿ ( ಸ. ದೀ. ಸಂ.)ಬಲ್ಮೆ= ಬಲ್ಲಿದರ ಭಾವ(ಭಾವನಾಮ) ದೆಸೆ+ಕೆಟ್ಟು = ದೆಸೆಗೆಟ್ಟು (ಕ್ರಿ. ಸ.)

ಹಂಸಧ್ವಜಂ= ಹಂಸಧ್ವಜವು ಯಾರಿಗೊ ಅವನು (ಬ. ಸ) ಅಸಮಭುಜಬಲಸುವೇಗಂ= ಸಮವಲ್ಲದ್ದು ಅಸಮ(ನಙ್. ತ.) ಭುಜದ+ಬಲ= ಭುಜಬಲ (ಷ. ತ. ) ಅಸಮವಾದ ಭುಜಬಲ( ವಿ.ಪೂ. ಕ) ಅಸಮಭುಜಬಲ ಸಹಿತನಾದ ಸುವೇಗಂ

(ವಿ. ಪೂ. ಕ.) ಇರ್ಛಾಸಿರವನು ( ದ್ವಿಗು. ಸ.) 


ತಾತ್ಪರ್ಯ:- ಈ ಯುದ್ಧದಲ್ಲಿ ಹಂಸಧ್ವಜನ ಇಬ್ಬರು ಮಕ್ಕಳು ಸತ್ತು ಹೋಗಲು,ಹಂಸಧ್ವಜನು ಬಭ್ರುವಾಹನನೊಂದಿಗೆ, ಘೋರ ಯುದ್ಧವನ್ನು ಮಾಡುತ್ತಲಿದ್ದನು. ಕೃಷ್ಣನ ಮಾತು ನಿಜವೆಂದು ಅರ್ಜುನನು ಬಾರಿಬಾರಿಗೂ ಚಿಂತಿಸುತ್ತ ಹಂಸಧ್ವ- ಜನೊಂದಿಗೆ ಹೇಳುತ್ತಿರುವ ಕಾಲಕ್ಕೆ ಸರಿಯಾಗಿ ಸುವೇಗನೆಂಬ ಅಸಹಾಯಶೂರನು ಸೇನಾಸಮೇತನಾಗಿ ಬಂದು ಬಭ್ರು-

ವಾಹನನನ್ನು ಮುತ್ತಿಕೊಳ್ಳಲು ಊರ್ಜುನಿಯು ಸುವೇಗನ ಬಲದಲ್ಲಿಎರುಡು ಸಾವಿರ ಶೂರರನ್ನು ಕೊಂದನು. 


ಸಾಹಸದೊಳಿರ್ವರುಂ ಸರಿಯೆನೆ ಸೈವೇಗಂ ಮ। 

ಹಾಹವದೊಳೆಚ್ಚಾಡಿ ವಿರಥನಾಗಿಯೆ ಬಭ್ರು। 

ವಾಹನನ ಬಾಣದಿಂದುರೆ ನೊಂದು ಬಿದ್ದನವನಿಗೆ ಬಳಿಕ ಪಾರ್ಥಿ ನರನ॥ 

ಮೋಹರವನೈದಿದಂ ಪ್ರಳಯಭೈರವನ ಕೋ। 

ಲಾಹಲಮಿದೆಂಬಂತೆ ಕೊಂದನೆಲ್ಲಾ ಬಲವ। 

ದೇಹದೊಳೆಸೆವ ಜೀವ ಪರಮರವೊಲುಳಿದಿರ್ದರಾವೃಷಧ್ವಜ ಪಾರ್ಥರು॥೩॥ 


ಪ್ರತಿಪದಾರ್ಥ :- ಈರ್ವರುಂ= ಬಭ್ರುವಾಹನ ಸುವೇಗರು, ಸಾಹಸದೊಳ್= ಪರಾಕ್ರಮದಲ್ಲಿ, ಸರಿಯೆನೆ= ಒಂದೇ ಎಂಬಂತೆ, ಮಹಾ=ದೊಡ್ಡದಾದ, ಆಹವದೊಳು= ಕಾಳಗದಲ್ಲಿ, ಎಚ್ಚಾಡಿ= ಹೋರಾಡಿ, ವಿರಥನಾಗಿಯೆ = ತೇರಿನಿಂದ ಬಿಡಲ್ಪಟ್ಟವನಾಗಿ,ಬಭ್ರುವಾಹನನ =ಪಾರ್ಥಜನ, ಬಾಣದಿಂದ = ಕಣೆಗಳಿಂದ, ಉರೆ=ಹೆಚ್ಚಾಗಿ, ನೊಂದು= ಸಂಕಟಪಟ್ಟು, ಅವನಿಗೆ= ಭೂಮಿಯಮೇಲೆ, ಬಿದ್ದನು= ಬಿದ್ದುಹೋದನು, ಪಾರ್ಥಿ= ಅರ್ಜುನಿಯು, ಬಳಿಕ =ಆ ಮೇಲೆ, ನರನ=ಫಲ್ಗು-

ಣನ, ಮೋಹರವನು= ದಳವನ್ನು, ಐದಿದಂ=ಹೋಗಿ ಸೇರಿದನು,ಇದು= ಈ ಶಬ್ಧವು, ಪ್ರಳಯಭೈರವನ= ಪ್ರಳಯಕಾಲದ ಶಿವನ, ಕೋಲಾಹಲಂ= ಕೋಲಿಹಲಧ್ವನಿಯು,ಎಂಬಂತೆ= ಎಂಬತೆರನಾಗಿ, ಎಲ್ಲಾ ಬಲವನು= ಸಮಸ್ತ ಪರಿವಾರವನ್ನೂ, ಕೊಂದನು=ಸಂಹಾರಮಾಡಿದನು, ಪಾರ್ಥಕರ್ಣಸುತರು= ಅರ್ಜುನ ಮತ್ತು ವೃಷಧ್ವಜರು, ಏರ್ವರೆ= ಇಬ್ಬರು ಮಾತ್ರವೇ, ಜೀವಪರರೊಲು= ಜೀವಾತ್ಮ ಪರಮಾತ್ಮರೊ ಎಂಬಂತೆ, ಉಳಿದರು. 


ಅ॥ವಿ॥ ಮಹ+ಹವ= ಮಹಾಹವ( ಸ. ದೀ. ಸ.)ಪಾರ್ಥ ಕರ್ಣಸುತರು ( ದ್ವಂದ್ವ. ಸ.) 


ತಾತ್ಪರ್ಯ:- ಅತಿ ರೋಷದಿಂದ ಸುವೇಗನೊಂದಿಗೆ ಘೋರ ಯುದ್ಧವನ್ನು ಮಾಡುತ್ತಿದ್ದನು. ಸುವೇಗನೂ ಕೂಡ ಪರಾಕ್ರಮದಿಂದ ಹೋರಾಡಿ ಕೊನೆಗೆ ಪಾರ್ಥಜನ ಬಾಣದ ಪೆಟ್ಟುಗಳನ್ನು ತಡೆಯಲಾರದೆ ಮೂರ್ಛೆದಳೆದು ಅವನಿತಳ-

ಕ್ಕೊರಗಿದನು. ಬಭ್ರುವಾಹನನು ಸುವೇಗನನ್ನು ನೆಲಕ್ಕೆ ಕೆಡಹಿ ಅರ್ಜುನನ ಸೈನ್ಯದ ಮೇಲೆ ನುಗ್ಗಿ ಕಲ್ಪಾಂತ ಭೈರವನಂತೆ ಕಡುಕೋಪವನ್ನು ತಾಳಿ ಶತ್ರುಗಳ ಪಡೆಯನ್ನೆಲ್ಲಾ ನಿರ್ಮೂಲಮಾಡಿದನು.ಕಡೆಗೆ ಅರ್ಜುನನ ಸೈನ್ಯದಲ್ಲಿ ಪಾರ್ಥ ಕರ್ಣ- 

ತನುಜರೆಂಬೀರ್ವರು ಮಾತ್ರ ಜೀವಾತ್ಮ ಪರಮಾತ್ಮರಂತೆ ಉಳಿದರು. 


ರಣದೊಳಂತವರಿರ್ದರತ್ತ ಮುನ್ನೊಂದು ಕಾ। 

ರಣಕೆ ಗುರು ಶಾಪಮಂ ಕುಡಲದಂ ಬಿಡಿಸಿ ಫಲು। 

ಗುಣನಮಲ ತೀರ್ಥಯಾತ್ರಾಪ್ರಸಂಗದೊಳಂದು ತಾಂ ಪರಿಗ್ರಹಿಸಿ ನೆರೆದ॥ 

ಫಣಿರಾಜನಂದನೆಯುಲೂಪಿ ಪಾತಾಳದಿಂದೆ। 

ಮಣಿಪುರಕೆ ಬಂದು ಮೂರ್ಛಿತರಾಗಿ ಸಮರ ಧಾ। 

ರಿಣಿಯೊಳಿಹ ದೊರೆಗಳಂ ತರಿಸಿ ಮಂತ್ರೌಷಧಿಗಳಿಂದೆ ಪಾಲಿಸುತಿರ್ದಳು॥೪॥


ಪ್ರತಿಪದಾರ್ಥ :- ಇಂತು=ಈ ಪ್ರಕಾರವಾಗಿ, ಇವರು= ಈ ಪಾರ್ಥ ವೃಷಕೇತು, ರಣದೊಳು= ಯುದ್ಧಭೂಮಿಯಲ್ಲಿ , ಇರುತಿರಲು= ಇರಲಾಗಿ, ಅತ್ತ= ಬಭ್ರುವಾಹನನ ಊರು ಮಣಿಪುರದಲ್ಲಿ, ಮುನ್ನ= ಪೂರ್ವಕಾಲದಲ್ಲಿ,ಒಂದುಕಾರಣಕೆ= ಒಂದು ನಿಮಿತ್ತವಾಗಿ, ಗುರು= ಧರ್ಮತನಯನು, ಶಾಪ= ಗಂಡನೊಂದಿಗಿರುವ ಪಾಂಚಾಲಿಯನ್ನು ನೋಡತಕ್ಕವರು 

ತೀರ್ಥಯಾತ್ರೆಯನ್ನು ಮಾಡಿಕೊಂಡು ಭೂಮಂಡಲವನ್ನೆಲ್ಲಾ ಸುತ್ತಬೇಕೆನ್ನುವ ನಿಯಮವನ್ನು,ಮುಂಕೊಂಡು= ಮುಂದೆ ಮಾಡಿ, ಫಲುಗುಣನು= ಪಾರ್ಥನು, ಅದಂ= ಆ ಬಂಧನವನ್ನು,ಬಿಡಿಸಿ= ಹೋಗಲಾಡಿಸಿಕೊಂಡು= ಅಂದು= ಆ ಕಾಲದಲ್ಲಿ, ಅಮಲ=ಪವಿತ್ರವಾದ,ತೀರ್ಥಯಾತ್ರಾಪ್ರಸಂಗದೊಳು= ತೀರ್ಥಯಾತ್ರೆಯನ್ನು ಮಾಡುವುದರಲ್ಲಿ, ತಾಂ= ಅರ್ಜುನನು, ಪರಿಗ್ರಹಿಸಿ= ಸ್ವೀಕರಿಸಿ, ನೆರೆದ=ಸೇರಿದ, ಫಣಿರಾಜ= ನಾಗರಾಜನ, ನಂದನೆ= ಕುವರಿಯಾದ, ಉಲೂಪಿಯಂ= ಉಲೂಪಿ ಎನ್ನುವವಳನ್ನು, ಪಾತಾಳಲೋಕದಿಂದ= ನಾಗಲೋಕದಿಂದ, ಮಣಿಪುರಕೆ= ಬಭ್ರುವಾಹನನ ನಗರಿಗೆ,ಬಂದು=ಐತಂದು, ಸಮರಧಾರುಣಿಯೊಳ್= ರಣರಂಗದಲ್ಲಿ, ಮೂರ್ಛಿತರಾಗಿ= ಸ್ಮೃತಿತಪ್ಪಿದವರಾಗಿ, ಇಹ=ಇರತಕ್ಕ, ದೊರೆಗಳಂ= ಅರಸು-

ಗಳನ್ನು, ತರಿಸಿ= ನಗರಿಗೆ ಬರುವಂತೆ ಮಾಡಿ, ಮಂತ್ರೌಷಧಿಗಳಿದ= ಮಂತ್ರ ಮೂಲಿಕಾದಿಗಳ ಚಿಕಿತ್ಸೆಯನ್ನು ಮಾಡುತ್ತಾ, ಪಾಲಿಸುತಿರ್ದಳು= ಅವರನ್ನು  ಸಲಹುತಿರ್ದಳು.


ಅ॥ವಿ॥ ತೀರ್ಥದ-ಯಾತ್ರೆ=ತೀರ್ಥಾಯಾತ್ರ ಪ್ರಸಂಗ ( ಷ. ತ. ಸ.) ಮಂತ್ರ+ಔಷಧಿ= ಮಂತ್ರೌಷಧಿ(ವೃದ್ಧಿ ಸಂಧಿ) 


ತಾತ್ಪರ್ಯ:- ಪೂರ್ವದಲ್ಲಿ ಧರ್ಮತನಯನು ದ್ರೌಪದಿಯೊಂದಿಗೆ ಕೂಡಿರುವ ವೇಳೆಯೊಳಗೆ ತನ್ನ ಅಣ್ತಮ್ಮಂದಿರು ಯಾರು ನೋಡಿದರೂ ತೀರ್ಥಯಾರ್ಥೆಮಾಡಿ ಭೂಪ್ರದಕ್ಷಿಣೆ ಮಾಡಬೇಕೆಂದು ಮಾಡಿದ್ದ ಶಾಸನದಂತೆ ಅರ್ಜುನನು ಯುಧಿಷ್ಠಿರ ದ್ರೌಪದಿಯರು ಒಂದುಗೂಡಿದ ವೇಳೆಯೊಳಗೆ ನೋಡಿದನಾದ್ದರಿಂದ ಧರ್ಮಪುತ್ರನ ಅಪ್ಪಣೆಯಂತೆ ಭೂಪ್ರದಕ್ಷಿಣೆಯನ್ನು ಮಾಡುತ್ತಲಿರುವಾಗ ತಾನು ವರಿಸಿದ್ದ ಉಲೂಪಿ ಎಂಬ ನಾಗಕನ್ನಿಕೆ ಪಾತಾಳ ಲೋಕದಿಂದ ಮಣಿಪುರಕ್ಕೆ ಬಂದು ಅರ್ಜುನನ ಸೈನ್ಯದಲ್ಲಿ ಸತ್ತುಬಿದ್ದ ವೀರರನ್ನೆಲ್ಲ ಪಟ್ಟಣಕ್ಕೆ ಕರೆಯಿಸಿಕೊಂಡು, ಮಂತ್ರೌಷಧಿಗಳಿಂದ ಅವರ ಪ್ರಾಣಗಳನ್ನು ಕಾಪಾಡುತ್ತಲಿದ್ದಳು. 


ನೃಪ ಕೇಳುಲೂಪಿ ಚಿತ್ರಾಂಗದೆಗೆ ಪೇಳ್ದ ಸುರ। 

ರಿಪುಸುತಂ ತನ್ನತನಯಂಬೆರಸಿಶಪಾರ್ಥಜನ। 

ವಿಪುಲಾಸ್ತ್ರದಿಂದೆ ಮೂರ್ಛಿತನಾಗಿ ರಣದೊಳಿರಲಿರ್ವರಂ ತರಿಸಿಕೊಂಡು॥ 

ಅಪಗತ ಶ್ರಮರಪ್ಪತೆರದಿಂದೆ ಮಂದಿರದೊ। 

ಳುಪಚರಿಸಿ ಮಣಿ ಮಂತ್ರ ಮೂಲಿಕಾತತಿಗಳಂ। 

ತಪಿಸದಂತಾರೈಯುತಿರ್ದಳರ್ಜುನನಿತ್ತ ವೃಷಕೇತುಗಿಂತೆಂದನು॥೫॥ 


ಪ್ರತಿಪದಾರ್ಥ :- ನೃಪ= ಎಲೈ ಜನಮೇಜಯನೆ,  ಕೇಳು=ಲಾಲಿಸು, ಉಲೂಪಿ= ಉಲೂಪಿಯು, ಚಿತ್ರಾಂಗದೆಗೆ= ಪಾರ್ಥನ ಹೆಂಡತಿಗೆ, ಪೇಳ್ದು= ಗಂಗೆಯ ಪಾಠವನ್ನು ಅರುಹಿ,ಅಸುರರಿಪು= ರಾಕ್ಷಸಾಂತಕನ,ಸುತಂ= ಕುಮಾರನಾದ ಮನ್ಮಥನು, ತನಯಂವೆರಸಿ= ತನ್ನ ಕುವರನಾದ ಅನಿರುದ್ಧನಿಂದೊಡಗೂಡಿ, ಬಳಿಕ = ತರುವಾಯ, ಪಾರ್ಥಜನ= ಬಭ್ರುವಾಹನನ, ವಿಪುಲಾಸ್ತ್ರದಿಂದ= ಬಹಳವಾದ ಬಾಣಗಳಿಂದ, ಮೂರ್ಛಿತರಾಗಿ = ಸ್ಮೃತಿತಪ್ಪಿಹೋಗಿ, ರಣದೊಳು=ಸಮರಾಂಗಣದಲ್ಲಿ ,ಇರಲು= ಇರಲಾಗಿ, ಈರ್ವರಂ= ಅವರಿಬ್ಬರನ್ನೂ ತರಿಸಿಕೊಂಡು= ತನ್ನ ಬಳಿಗೆ ಬರಮಾಡಿಕೊಂಡು, ಅಪಗತ= ಕಳೆದು-

ಹೋದ, ಶ್ರಮರು= ಸಂಕಟವುಳ್ಳವರು, ಅಪ್ಪ= ಆಗತಕ್ಕ, ತೆರದಿಂದ = ಬಗೆಯಿಂದ,  ಮಂದಿರದೊಳು= ಮನೆಯೊಳಗೆ, ಉಪಚರಿಸಿ= ಸತ್ಕಾರಮಾಡಿ,ಮಣಿ=ರತ್ನ ಮೊದಲಾದವುಗಳ, ಮಂತ್ರ= ಮಂತ್ರಗಳ,ಮೂಲಿಕಾ= ಮೂಲಿಕೆಗಳ, ತತಿಗಳಿಂ= ಸಮುದಾಯಗಳಿಂದ, ತಪಿಸದಂತೆ= ಸಂಕಟವೊದಗದ ತೆರನಾಗಿ, ಆರೈವುತ= ಉಪಚಾರಮಾಡುತ್ತ, ಇದ್ದಳು= ಇದ್ದವ-,  ಳಾಗಿದ್ದಳು, ಇತ್ತ= ರಣರಂಗದಲ್ಲಾದರೊ,ಅರ್ಜುನನು= ಪಾರ್ಥನು, ವೃಷಕೇತುಗೆ= ಕರ್ಣಸುತನನ್ನು ಕುರಿತು, ಇಂತು= ಮುಂದೆ ಹೇಳುವಂತೆ,ಎಂದನು= ಹೇಳಿದನು. 


ಅ॥ವಿ॥ ಮಣಿಮಂತ್ರಮೂಲಿಕಾತತಿಗಳಿಂ= ಮಣಿಯು,ಮಂತ್ರವು,ಮೂಲಿಕೆಯು,( ದ್ವಂ, ಸ.) ಮಣಿಮಂತ್ರ ಮೂಲಿಕೆಗಳ ತತಿಗಳು (ಷ. ತ. ಸ.)ವೃಷ+ಎತ್ತನುನು, ಕೇತು= ಧ್ವಜದಲ್ಲಿ ಉಳ್ಳವನು(ಬ. ಸ.)


ತಾತ್ಪರ್ಯ:- ಎಲೈ ಜನಮೇಜಯನೆ ಕೇಳು, ಉಲೂಪಿಯು ಚಿತ್ರಾಂಗದೆಯೊಂದಿಗೆ ಗಂಗೆಯಿಂದ ಅರ್ಜುನನಿಗೆ ಶಾಪವು ಬಂದಿರುವುದನ್ನು ತಿಳಿಸಿದವಳಾಗಿ ಯುದ್ಧದಲ್ಲಿ  ಮೂರ್ಛೆಗೊಂಡು ಬಿದ್ದಿದ್ದ ಪ್ರದ್ಯುಮ್ನ ಅನಿರುದ್ಧರನ್ನು ಕರೆಯಿಸಿಕೊಂಡು ದಿವ್ಯೌಷಧಿಗಳಿಂದಲೂ ಅನೇಕ ಮಂತ್ರಾದಿಗಳಿಂದಲೂ ಉಪಚರಿಸುತ್ತಿದ್ದಳು,ಅತ್ತ ರಣರಂಗದಲ್ಲಿ ಅರ್ಜುನನು ವೃಷಕೇ-

ವನ್ನು ಕುರಿತು ಹೀಗೆ ಹೇಳಿದನು. 


ಮಗನೆ ಮಡಿದುದು ಸೈನ್ಯಮನುಸಾಲ್ಮಮುಖರಾದ। 

ವಿಗಡರೇರ್ವಡೆದು ಸೈಗೆಡದರಿಳೆಯೊಳ್ ತಮ್ಮ । 

ನಗರಿಗನಿರುದ್ಧಪ್ರದ್ಯುಮ್ನರಂ ಕೊಂಡೊಯ್ದರಹಿತರಿವನಂ ಜಯಿಸುವ॥ 

ಬಗೆಗಾಣನಾದೊಡಂ ನಿಲ್ವೆನಾನಿಲ್ಲಿ ಕಾ। 

ಳಗಕೆ ನೀನಿರದೆ ಹಸ್ತಿನಪುರಿಗೆ ಪೋಗಿ ಪೇ। 

ಳಗಧರ ಯುಧಿಷ್ಠಿರರ್ಗೀಸ್ಥಿತಿಯನೆಂಬಿನಂ ತೋರ್ದುವುತ್ಪಾತಂಗಳು॥೬॥ 


ಪ್ರತಿಪದಾರ್ಥ :- ಮಗನೆ= ಎಲೈ ಕುಮಾರ ವೃಷಕೇತುವೌ, ಸೈನ್ಯಂ= ದಳವೆಲ್ಲಾ,ಮಡಿದುದು= ಹಾಳಾಯಿತು,ಅನುಸಾಲ್ವ= ಸಾಲ್ವಾನುಜನೆ,ಮುಖರಾದ= ಮೊದಲಾದ, ವಿಗಡರು= ಅಸಹಾಯಶೂರರೆಲ್ಲಾ, ಏರ್ವಡದು= ಬಭ್ರುವಾಹನನೊಂದಿಗೆ ಹೋರಾಡಿ ಗಾಯಪಟ್ಟು,ಇಳೆಯೋಳ್= ಭೂಮಿಯಮೇಲೆ, ಸೈಗೆಡೆದರು= ಬಿದ್ದುಬಿಟ್ಟರು,ಅಹಿತರು=ವೈರಿಗಳು, ಅನಿರುದ್ಧ ಪ್ರದ್ಯುಮ್ನರಂ= ಅನಿರುದ್ಧ ಮನ್ಮಥರನ್ನು, ತಮ್ಮ ನಗರಿಗೆ=ತಮ್ಮ ರಾಜಧಾನಿಗೆ, ಕೊಂಡೊಯ್ದರು= ಸಾಗಿಸಿಕೊಂಡು ಹೋದರು, ಇವನಂ= ಈ ಬಭ್ರುವಾಹನನನ್ನು, ಜಯಿಸುವ= ಗೆಲ್ಲುವ, ಬಗೆ=ತೆರನನ್ನು, ಕಾಣೆನು= ಕಂಡಿಲ್ಲ, ಆದೊಡಂ= ಹೀಗಿದ್ದರೂ, ಆಂ=ನಾನು, ಕಾಳಗಕೆ= ಯುದ್ಧಮಾಡುವುದಕ್ಕೋಸ್ಕರ, ಇಲ್ಲೆ= ಈ ಎಡೆಯಲ್ಲಿಯೆ, ನಿಲ್ವೆನು= ಇರುವೆನು, ನೀನು= ನೀನಾದರೊ, ಇರದೆ= ತಡಮಾಡದೆ, ಹಸ್ತಿನಾಪುರಿಗೆ= ಹಸ್ತಿನಾವತಿ ಪಟ್ಟಣಕ್ಕೆ,  ಪೋಗಿ=ಹೋಗಿ, ಅಗಧರ ಯುಧಿಷ್ಠಿರರ್ಗೆ= ಕೃಷ್ಣನಿಗೂ ಧರ್ಮರಾಯನಿಗೂ ಕೂಡ, ಈ ಸ್ಥಿತಿಯನು= ಇಲ್ಲಿನ ಸಮಾಚಾರವನ್ನು,  ಪೇಳು= ಹೇಳು, ಎಂಬಿನಂ= ಎನ್ನುವುದರೊಳಗೆ, ಉತ್ಪಾತಂಗಳು= ಅಶುಭಗಳು, ತೋರ್ದುವು= ತಲೆದೋರಿದವು. 


ತಾತ್ಪರ್ಯ:-ಎಲೈ ಪುತ್ರನೆ ನಮ್ಮ ಸೈನ್ಯವೆಲ್ಲಾ ಹಾಳಾಯಿತು. ಅನುಸಾಲ್ವಾದಿ ವೀರರೆಲ್ಲಾ ಸೋತು ಮೂರ್ಛೆಗೊಂಡರು. ಪರರಾಜರು ಪ್ರದ್ಯುಮ್ನ ಅನಿರುದ್ಧರನ್ನು ಮಣಿಪುರಕ್ಕೆ ಸೆರೆಹಿಡಿದುಕೊಂಡು ಹೋಗಿಬಿಟ್ಟರು. ಈ ಬಭ್ರುವಾಹನನನ್ನು ಗೆಲ್ಲುವುದು ಅಸಾಧ್ಯವೆಂದು ತೋರುತ್ತಲಿರುವುದು. ಆದರೂ ನಾನಿಲ್ಲೆನಿಂತು ಬಭ್ರುವಾಹನನೊಂದಿಗೆ ಹೋರಾಡುವೆನು. ನೀನು ತಡಮಾಡದೆ ಹಸ್ತಿನಾವತಿಗೆ ಹೋಗಿ ಈ ಸುದ್ದಿಯನ್ನು ಕೃಷ್ಣನಿಗೂ ಧರ್ಮಪುತ್ರನಿಗೂ ತಿಳಿಸೆಂದು ಹೇಳುತ್ತಿರುವಷ್ಟ- 

ರಲ್ಲಿ ಅಶುಭಸೂಚನೆಗಳು ತೋರತೊಡಗಿದವು. 


ಪರ್ದು ಕುಳ್ಳಿರ್ದುದರ್ಜುನನ ಮಕುಟಾಗ್ರದೊಳ। 

ಡರ್ದು ಗೂಡಿಕ್ಕಿದವು ರಥದೊಳ್ ಕಪೋತಂಗ। 

ಳಿರ್ದುದು ತನುಚ್ಛಾಯೆ ತಲೆಯಿಲ್ಲದಿನಿತುಮಂ ಕಂಡು ಬೆರಗಾಗಿ ನರನು॥ 

ಪೊರ್ದದಿರದಪಜಯಂ ತನಗಿನ್ನು ಧರ್ಮಜಂ। 

ನಿರ್ದೈವನಹನಲಾ ಶಿವ ಮಹಾದೇವ ಮುರ। 

ಮರ್ದನ ತುರಗಮೇಧವನೆಂತು ಮಾಡಿದಪನೊ ಕರ್ಣಸುತ ಹೇಳೆಂದನು॥೭॥ 


ಪ್ರತಿಪದಾರ್ಥ :- ಪದ್ದು= ಹದ್ದು, ಅರ್ಜುನನ = ಪಾರ್ಥನ, ಮಕುಟಾಗ್ರದೊಳ್= ಕಿರೀಟದ ತುದಿಯಲ್ಲಿ, ಕುಳ್ಳಿರ್ದುದು= ಕುಳಿತುಕೊಂಡಿತು, ರಥದೊಳು= ತೇರಿನಲ್ಲಿ, ಕಪೋತಂಗಳು= ಪಾರಿವಾಳಗಳು,  ಅಡರ್ದು=ಏರಿ, ಗೂಡಿಕ್ಕಿದವು = ಗೂಡುಮಾಡಿಕೊಂಡವು, ತಲೆಯಿಲ್ಲದೆ= ತಲೆ ಹೊರತಾಗಿ, ತನು=ಶರೀರದ, ಛಾಯೆ= ನೆರಳು, ಇರ್ದುದು= ಇದ್ದಿತು. ಇನಿತು= ಈ ಬಗೆಯಾದ, ಎಲ್ಲಮಂ= ಸಕಲವನ್ನೂ, ನರನು= ಅರ್ಜುನನು, ಕಂಡು=ನೋಡಿ, ಬೆರಗಾಗಿ= ಭ್ರಾಂತಿಗೊಂಡು, ಅಪಜಯಂ= ಪರಾಭವವು, ತನಗೆ= ನನಗೆ, ಪೊದ್ದದೆ= ಪ್ರಾಪ್ತವಾಗದೆ,ಇರದು= ಇರುವುದಿಲ್ಲವು, ಇನ್ನು=ಇನ್ನುಮೇಲೆ, ಧರ್ಮಜಂ= ಧರ್ಮಸುತನು, ನಿರ್ದೈವನು= ದೈವಬಲವಿಲ್ಲದವನು, ಅಹನು= ಆಗುತ್ತಾನೆ, ಅಲಾ= ಅಲ್ಲವೆ, ಶಿವ=ಈಶ್ವರನೆ

ಮುರಮರ್ದನಂ= ಕೃಷ್ಣನು, ಎಂತು= ಹೇಗೆ, ತುರಗಮೇಧವನು= ಹಯಮೇಧವನ್ನು, ಮಾಡಿಸುವ= ನಡೆಯಿಸುವನೊ, ಕರ್ಣಸುತ= ವೃಷಧ್ವಜನೆ, ಹೇಳು= ಹೇಳತಕ್ಕವನಾಗು,ಎಂದನು= ಎಂದು ನುಡಿದನು. 


ಅ॥ವಿ॥ಮಕುಟಾಗ್ರ= ಮಕುಟದ ಅಗ್ರ(ಷ. ತ. ಸ.) ಮಕುಟ+ಅಗ್ರ= ಮಕುಟಾಗ್ರ ( ಸ. ದೀ. ಸಂ.)


ತಾತ್ಪರ್ಯ:- ಅನೇಕ ಅಪಶಕುನಗಳು ತೋರಲಾರಂಭಿಸಿದವು. ಅರ್ಜುನನ ಕಿರೀಟದ ಕೊನೆಯಲ್ಲಿ ಹದ್ದು ಬಂದು ಕುಳಿತು- 

ಕೊಂಡಿತು, ಅವನ ತೇರಿನೊಳಗೆ ಪಾರಿವಾಳಗಳು ಗೂಡನ್ನು ಮಾಡಿದವು, ತನ್ನ ತಲೆಯಿಲ್ಲದ ಉಳಿದ ಭಾಗದ ನೆರಳು ಕಂಡುಬಂತು. ಅರ್ಜುನನು ಇದನ್ನಲ್ಲಾ ನೋಡಿ ಆಹಾ ನನಗೆ ಅಪಜಯವು ನಿಶ್ಚಯವು. ಧರ್ಮರಾಯನು ದೈವಬಲವನ್ನು ಕಳೆದುಕೊಂಡನು. ಇನ್ನು ಯುಧಿಷ್ಠಿರನು ಅಶ್ವಮೇಧ ಯಾಗವನ್ನು ಮಾಡುವ ಬಗೆಯಾವುದು?


ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದೆ। 

ತೇಜದಿಂದೊಪ್ಪುವಗ್ನಿಗಳಿಂದೆ ಭೂಸುರ ಸ। 

ಮಾಜದಿಂದಖಿಳ ಋತ್ವಾಕ್ಕುಗಳ ಬಹುವಿಧದ ಮಂತ್ರಘೋಷಗಳಿಂದೆ॥ 

ರಾಜಿಸುವ ನುತ ಯಜ್ಞಶಾಲೆಯೊಳ್ ಭೂವರಂ।

ಯಾಜಮಾನ್ಯದೊಳೆಸೆವ ಸಿರಿಯಂ ವೃಕೋದರ ಸ। 

ರೋಜಾಂಬಕಾದಿ ಬಾಂಧವರೊಳಾವೃತನಾಗಿರಲ್ ಕಾಣೆನಕಟೆಂದನು॥೮॥ 


ಪ್ರತಿಪದಾರ್ಥ :- ವಾಜಿಸಹಿತ= ಯಜ್ಞಾಶ್ವದೊಂದಿಗೆ,ಆಂ=ನಾನು, ಪೋಗಿ= ಹಿಂದಿರುಗಿ ಹೋಗಿ, ಸಕಲ= ಎಲ್ಲಾ ಬಗೆಯಾದ

ಪರಿಕರದಿಂದ= ವಸ್ತುಗಳಿಂದ,ತೇಜದಿಂ= ಕಾಂತಿಯಿಂದ,ಒಪ್ಪುವ= ಪ್ರಕಾಶಿಸುವ, ಅಗ್ನಿಗಳಿಂದ= ತ್ರೇತಾಗ್ನಿಗಳಿಂದ, ಭೂಸುರ= ವಿಪ್ರರ, ಸಮಾಜದಿಂದ= ಸಮುದಾಯದಿಂದ, ಅಖಿಲ= ಸಮಸ್ತ, ಋತ್ವಾಕ್ಕುಗಳ = ಋತ್ವಾಗ್ಜನರ, ಬಹುವಿಧ= ತಂಡತಂಡವಾದ, ಮಂತ್ರಘೋಷಗಳಿಂದ= ಚತುರ್ವೇದ ಮಂತ್ರ ನಿನದಗಳಿಂದ, ರಾಜಿಸುವ=ಕಾಂತಿಯುಕ್ತವಾಗಿರುವ,

ನುತ= ಸ್ತೋತ್ರಾರ್ಹವಾದ, ಯಜ್ಞಶಾಲೆಯೊಳ್= ಯಾಗಮಂಟಪದಲ್ಲಿ,ಯಾಜಮಾನ್ಯದೊಳ್ = ಯಜಮಾನಿಕೆಯಿಂದ, ಭೂವರಂ= ಭೂಕಾಂತನಾದ ಯೈಧಿಷ್ಠಿರನು, ಎಸೆವ= ಹೊಳೆಯುವ,ಸಿರಿಯಂ= ಭಾಗ್ಯವನ್ನೂ,ವೃಕೋದರ= ವಾಯುಸು-

ತನು, ಸರೋಜಾಂಬಕ= ಕೃಷ್ಣನು,  ಆದಿ=ಮೊದಲಾದ, ಬಾಂಧವರೊಳು= ನೆಂಟರುಗಳ ಸಮೂಹದಿಂದ, ಆವೃತನಾಗಿ= 

ಸುತ್ತುಗಟ್ಟಲ್ಪಟ್ಟವನಾಗಿ,ಇರಲ್= ಇರತಕ್ಕದ್ದು, ಕಾಣೆನು= ನೋಡುವುದಿಲ್ಲವಲ್ಲೃ, ಅಕಟ=ಅಯ್ಯೊ, ಎಂದು=ಎಂಬುದಾಗಿ ಹೇಳಿದನು.  


ಅ॥ವಿ॥ ಭೂ-ಭೂಮಿಯ, ಸುರ-ದೇವತೆ = ಭೂಸುರ(ಷ.ತ. ಸ.) ಮಂತ್ರ-ಮಂತ್ರಗಳ, ಘೋಷ-ಉಚ್ಛರಣೆಛರಣೆ = ಮಂತ್ರಘೋಷ(ಷ. ತ. ಸ.) ಭೂ-ಭೂಮಿಯ,ವರ-ಒಡೆಯ (ಷ. ತ. ಸ.)ಸಿರಿ(ತ್ಸ) ಶ್ರೀ (ತ್ಭ) ವೃಕ-ತೋಳದಂತೆ, ಉದರ-ಹೊಟ್ಟೆಯುಳ್ಳವನು= ವೃಕೋದರ (ಭೀಮಸೇನ) ( ಬ. ಸ.) ಸರ-ರೋವರದಲ್ಲಿ ,ಜ-ಹುಟ್ಟಿದ್ದು,ಕಮಲ,(ಷ. ತ.) 

ಸರೋಜ-ತಾವರೆ ಹೂವಿನಂತೆ, ಅಂಬಕ-ನೇತ್ರವುಳ್ಳವನು ಯಾರೊ ಅವನು= ಸರೋಜಾಂಬಕ( ಕೃಷ್ಣ-ಬ. ಸ.)ಯಜಮಾನ =ಯಜಮಾನನ ಸಂಬಂಧವಾದದ್ದು ಯಾಜಮಾನ್ಯ (ಒಡೆತನ) ಅಕಟ=ದುಃಖ, ಮತ್ತು ಆಶ್ಚರ್ಯಗಳಲ್ಲಿ ಪ್ರಯೋಗಿಸ ಬಹುದಾದ ಅವ್ಯಯ. 


ತಾತ್ಪರ್ಯ:- ಅಯ್ಯೊ ದೇವರೆ ನಾನು ಯಜ್ಞಾಶ್ವದೊಂದಿಗೆ ಹಸ್ತಿನಾವತಿಯನ್ನು ಸೇರಿ ಊನೇಕ ವಿಧವಾದ ವಸ್ತುಗಳಿಂದಲೂ

ತ್ರೇತಾಗ್ನಿಗಳಿಂದಲೂ, ಬ್ರಾಹ್ಮಣ ಸಮುದಾಯದಿಂದಲೂ, ಋತ್ವಿಜರ ವೇದಘೋಷದಿಂದಲೂ, ಅಣ್ಣ ತಮ್ಮಂದಿರಿಂದೊಡ- 

ಗೂಡಿ ಪ್ರಕಾಶಿಸುವ ಯುಧಿಷ್ಠಿರನನ್ನು ನೋಡಿ ಸಂತೋಷಪಡುವ ಮಹಾಪುಣ್ಯವು ನನಗೆಲ್ಲಿಯದು. 


ಪೇಳಲೇನಹುದಿನ್ನು ಬಭ್ರುವಾಹನನೊಡನೆ । 

ಕಾಳೆಗಂಗುಡುವೆನಾಂ ಕುಲಕೆ ನೀಂ ಮಗನೊರ್ವ । 

ಬಾಳುವೆಗೆಡಿಸಬೇಡ ಗಜಪುರಕೆ ಪೋಗಿ ಮುರಹರ ಧರ್ಮನಂದನರ್ಗೆ॥ 

ಕಾಳಾದ ರಾಜಕಾರ್ಯಸ್ಥಿತಿಯನೆಚ್ಚರಿಸು। 

ಕೇಳೆನ್ನ ಮಾರನೆಂದರ್ಜುನಂ ನುಡಿಯಲ್ಕೆ। 

ತಾಳದೆ ವೃಷಧ್ವಜಂ ಕೋಪದಿಂ ಪಾರ್ಥಂಗೆ ಕೈಮುಗಿಯುತಿಂತೆಂದನು॥೯॥ 


ಪ್ರತಿಪದಾರ್ಥ :- ಇನ್ನು=ಇನ್ನುಮೇಲೆ, ಪೇಳಲು= ಹೇಳಬೇಕಾದರೆ, ಏನಹುದು= ಏನುತಾನೆ ಸಾಧ್ಯವು, ನಾಂ=ನಾನು, ಬಭ್ರುವಾಹನನೊಡನೆ= ಬಭ್ರುವಾಹನನೊಂದಿಗೆ, ಕಾಳಗಂಗೊಡುವೆ= ಯುದ್ಧಕ್ಕೆ ನಿಲ್ಲುತ್ತೇನೆ, ನೀನು, ಓರ್ವ=ಒಬ್ಬ, ಕುಲಕೆ= ನಮ್ಮ ವಂಶಕ್ಕೆಲ್ಲಾ,ಮಗ= ಸುಕುಮಾರನಾಗಿರುವೆ,ಬಾಳುವೆಗೆಡಿಸಬೇಡ = ವಂಶಕ್ಕೆ ಹಾನಿಯನ್ನು ತರಬೇಡ, ಗಜಪುರಿಗೆ= ಹಸ್ತಿನಾವತಿಗೆ,ಪೋಗಿ=ಹೋಗಿ, ಕಾಳಾದ= ನಷ್ಟವಾಗಿರುವ, ರಾಜಕಾರ್ಯಸ್ಥಿತಿಯನು= ರಾಜಕಾರ್ಯದ ತೆರನನ್ನು, ಮುರಹರಧರ್ಮನಂದನರ್ಗೆ= ಕೃಷ್ಣನಿಗೂ ಧರ್ಮರಾಯನಿಗೂ, ಎಚ್ಚರಿಸು= ತಿಳಿಸುವನಾಗು, ಎನ್ನ=ನನ್ನ ಮಾತನು= ನುಡಿಗಳನ್ನು, ಕೇಳು=ಲಾಲಿಸು, ಎಂದು=ಎಂಬತೆರನಾಗಿ, ಅರ್ಜುನನು =ಪಾರ್ಥನು,ನುಡಿಯಲ್ಕೆ= ತಿಳಿಸಲಾಗಿ,ತಾಳದ= ಈ ಮಾತುಗಳನ್ನು ಕೇಳಲು ಇಷ್ಟವಿಲ್ಲದ, ವೃಷಧ್ವಜಂ= ವೃಷಕೇತುವು,ಕೋಪದಿಂ=ಕ್ರೋಧದಿಂದ, ಪಾರ್ಥನಿಗೆ= ಫಲ್ಗುಣನಿಗೆ,ಕೈಮುಗಿವುತ= ನಮಸ್ಕಾರ ಮಾಡುತ್ತ,  ಇಂತು=ಮುಂದೆ ಹೇಳುವಂತೆ, ಎಂದನು= ನುಡಿದನು. 


ಅ॥ವಿ॥ ಕಾಳಗ+ಕೊಡು= ಕಾಳಗಂಗೊಡು (ಕ. ವ್ಯಂಜನ ಸಂಧಿ) 


ತಾತ್ಪರ್ಯ:- ಎಲೈ ವೃಷಧ್ವಜನೆ ಇನ್ನು ಹೆಚ್ಚಾಗಿ ವ್ಯಥೆಪಡುವುದರಿಂದೇನು ಸಾರ್ಥಕ, ನಾನು ಬಭ್ರುವಾಹನನೊಡನೆ ಹೋರಾಡುವೆನು, ನಮ್ಮ ವಂಶಕ್ಕೆ ನೀನೊಬ್ಬನೆ ಮಗನು. ವಂಶ ನಷ್ಟವಾಗುವಂತೆ ಮಾಡಬೇಡ. ನೀನು ಸ್ವಲ್ಪವೂ ತಡಮಾಡದೆ ಹಸ್ತಿನಾವತಿಯನ್ನು ಸೇರಿ ಕೃಷ್ಣನಿಗೂ ಧರ್ಮರಾಯನಿಗೂ ರಾಜಕಾರ್ಯವು ಕೆಟ್ಟಿರುವ ಸುದ್ಧಿಯನ್ನು ತಿಳಿಸು

ನನ್ನ ಮಾತಿಗೆ ಪ್ರತಿ ಹೇಳದೆ ಜಾಗ್ರತೆಯಾಗಿ ಹೊರಡೆಂದು ಹೇಳಿದ ಪಾರ್ಥನ ನುಡಿಗಳನ್ನಾಲಿಸಿ ವೃಷಕೇತುವು ಕೈಮುಗಿದು ಹೀಗೆಂದನು. 


ಒಳ್ಳಿತಿದು ತಾತ ನಿನ್ನಂ ಬಿಟ್ಟು ನಾಂಪೋಗ। 

ಲುಳ್ಳವನೆ ಗಜನಗರಿಗಕಟ ರಣದೊಳ್ ಜೀವ। 

ಗಳ್ಳನಾದೊಡೆ ಮತ್ಪಿತಾಮಹಂ ಬೀಳದಿರ್ಪನೆ ಗಗನಮಾರ್ಗದಿಂದೆ॥ 

ಹೊಳ್ಳೆದೆಯ ಹೊರಬಿಗರೊಳೆಂದುದೀ ನುಡಿಗಳಂ। 

ತಳ್ಳಂಕದಿಂದೆ ನೀನಾಹವದೊಳಿಂತೆಣಿಕೆ। 

ಗೊಳ್ಳಲೇಕಿವನ ಬಿಂಕವನೀಗ ಮುರಿವೆನೆನ್ನಂ ಕಳುಹಿ ನೋಡೆಂದನು॥೧೦॥


ಪ್ರತಿಪದಾರ್ಥ :- ತಾತ= ಎಲೈ ತಂದೆಯೆ, ಇದು= ಈ ನಿನ್ನ ಮಾತುಗಳು, ಒಳ್ಳಿತು= ಬಹು ಚೆನ್ನಾಗಿದೆ,ನಾಂ=ನಾನು, ನಿನ್ನ =ನಿನ್ನನ್ನು, ಬಿಟ್ಟು = ರಣರಂಗದಲ್ಲಿ ಬಿಟ್ಟು, ಗಜನಗರಿಗೆ= ಹಸ್ತಿನಾವತಿಗೆ, ಪೋಗಲುಳ್ಳವನೆ= ಹೋದೇನೆ, ಅಕಟ= ಆಹಾ, ರಣದೊಳ್= ಯುದ್ಧರಂಗದಲ್ಲಿ,ಜೀವಗಳ್ಳನು= ಪ್ರಾಣ ಉಳಿದರೆ ಸಾಕೆಂದು ತಪ್ಪಿಸಿಕೊಳ್ಳುವವನು,ಆದೊಡೆ= ಆದಲ್ಲಿ, ಮತ್ಪಿತಾಮಹಂ = ನನ್ನ ತಂದೆಯಾದ ಕರ್ಣನ ಜನಕನಾದ ಸೂರ್ಯನು, ಗಗನಮಾರ್ಗದಿಂದೆ= ಅಂತರಿಕ್ಷದಿಂದ, ಬೀಳದೆ=ಬಿದ್ದುಹೋಗದೆ, ಇರ್ದಪನೆ= ಇರುತ್ತಾನೆಯೆ, ಹೊಳ್ಳೆದೆಯ= ಹೇಡಿಗಳಾದ, ಹೊರಬಿಗರೊಳು= ಇತರ ಜನಗಳಲ್ಲಿ

ಈ ನುಡಿಯನು= ಇಂತಹ ಮಾತುಗಳನ್ನು,  ಎಂಬುದು= ನುಡಿಯಬೇಕು, ನೀನು= ನೀನಾದರೊ,ಇಂತು= ಈ ಬಗೆಯಾಗಿ, ತಳ್ಳಂಕದಿಂದ= ಹೆದರುವಿಕೆಯಿಂದ, ಎಣಿಕೆಗೊಳ್ಳಲು ಏಕೆ= ಏತಕ್ಕೆ ಯೋಚನೆ ಮಾಡಬೇಕಾಗಿದೆ, ಈಗ= ಈಗಲಾದರೊ, ಇವನ= ಈ ಬಭ್ರುವಾಹನನ, ಬಿಂಕವನು= ಗರ್ವವನ್ನು, ಮುರಿವೆನು= ಹೋಗಲಾಡಿಸಿ ಬಿಡುತ್ತೇನೆ, ಎನ್ನಂ=ನನ್ನನ್ನು,  ಕಳುಹಿನೋಡು= ಕಳುಹಿಸಿ ನೋಡು, ಎಂದನು= ಎಂಬುದಾಗಿ ಹೇಳಿದನು. 


ಅ॥ವಿ॥ ಗಗನ+ಆಗ್ರ=ಗಗನಾಗ್ರ (ಸ. ದೀ. ಸಂ.) ಜೀವ+ಕಳ್ಳ= ಜೀವಗಳ್ಳ (ವ್ಯಂಜನ. ಸಂ. )


ತಾತ್ಪರ್ಯ:- ಎಲೈ ತಂದೆಯೇ ಬಹಳ ಚನ್ನಾಯಿತು. ಈ ರಣರಂಗದಲ್ಲಿ ನಿನ್ನನ್ನು ಬಿಟ್ಟು ನಾನು ಹಸ್ತಿನಾವತಿಗೆ ಹೋದೇನೆ? ಯುದ್ಧದಲ್ಲಿ ನಾನು ಹಿಮ್ಮೆಟ್ಟಿದರೆ ನನ್ನ ತಾತನಾದ ಸೂರ್ಯನು ಅಂತರಿಕ್ಷದಿಂದ ಕೆಳಗೆ ಬಿದ್ದು ಹೋಗದಿರುವನೆ? ಈ ನಿನ್ನ ಮಾತುಗಳು ಹೇಡಿಗಳಾದ ಇತರರಿಗೆ ಸಲ್ಲತಕ್ಕದ್ದು. ಬಭ್ರುವಾಹನನೊಡನೆ ಕಾದಲುನೀನು ಇಷ್ಟು ಯೋಚಿಸಬೇಕೆ? ಅವನ ಗರ್ವವನ್ನೆಲ್ಲಾ ಭಂಗಪಡಿಸುವೆನು. ನನಗೆ ಯುದ್ಧ ಮಾಡಲು ಅಪ್ಪಣೆಯನ್ನು  ಕೊಡು.


ತಂದೆಗೋಸುಗ ಮಾಳ್ದನವಸರಕೆ ಗೋನಿಮಿ। 

ತ್ತಂ ದೇವ ವೆಪ್ರಾರ್ಥಕಸುದೊರೆದೊಡಾತಂಗೆ। 

ಸಂದೇಹಮಿಲ್ಲದಾದಪುದುಗಡ ಕೈವಲ್ಯಮೀಗಳಾನೆಂತು ರಣಕೆ॥ 

ಹಿಂದುಗಳೆದಪೆನೇಕಪತ್ನಿಯಾಗಿಹ ಸತಿಯ। 

ಮುಂದಕೈದುವೆನೆಂತು ಭಾನುಸಂಭವನ ಸುತ। 

ನೆಂದೆನಿಸಿಕೊಂಬೆನೆಂತನೃತಮಂ ನುಡಿವನಲ್ಲಾಹವಕೆ ಕಳುಹೆಂದನು॥೧೧॥ 


ಪ್ರತಿಪದಾರ್ಥ :- ತಂದೆಗೋಸುಗ= ಜನಕನ ಸಲುವಾಗಿ, ಮಾಳ್ಪ= ಮಾಡತಕ್ಕ, ಅವಸರಕೆ= ಕಾರ್ಯಕ್ಕೆ, ಗೋನಿಮಿತ್ತಂ= ಹಸುಗಳ ಸಂರಕ್ಷಣೆಯ ಸಲುವಾಗಿ, ದೇವ=ಸುರರ, ವಿಪ್ರ= ಭೂಸುರರ, ಅರ್ಥಕೆ= ಸಲುವಾಗಿ, ಅಸು= ಜೀವವನ್ನು, ತೊರದೊಡೆ= ಬಿಟ್ಹಾಗಾದರೆ,ಆತಂಗೆ= ಅಂಥವನಿಗೆ, ಸಂದೇಹಂ ಇಲ್ಲದೆ= ಯಾವ ಅನುಮಾನವಿಲ್ಲದೆ, ಕೈವಲ್ಯಂ= ಮೋಕ್ಷವು,ಆದಪುದು ಗಡ= ಉಂಟಾಗುವುದಲ್ಲವೆ, ಈಗಳು= ಈಗಲಾದರೂ, ಆಂ=ನಾನು, ಎಂತು= ಯಾವತೆರನಾಗಿ, ರಣಕೆ= ಕಾಳಗಕ್ಕೆ, ಹಿಂದುಗಳೆದಪೆನೇ= ಹಿಂದೆ ಬಿದ್ದುಬಿಡುವೆನೇ, ಏಕಪತ್ನಿಯಾಗಿ=ಪತಿವ್ರತೆಯಾಗಿ, ಇಹ=ಇರತಕ್ಕ, ಸತಿಯಮುಂದಕೆ= ಪತಿಭಕ್ತಿಯುಳ್ಳ ನನ್ನ ಹೆಂಡತಿಯ ಎದುರಿಗೆ, ಎಂತು= ಯಾವ ಬಗೆಯಾಗಿ, ಐದುವೆನು= ಹೋಗಿ ಸೇರಲಿ, ಎಂತು= ಹೇಗೆ, ಭಾನುಸಂಭವನ ಸುತನು= ಕರ್ಣಪುತ್ರನು, ಎಂದು=ಎಂಬುದಾಗಿ, ಎನಿಸಿಕೊಂಬೆನು= ಹೇಳಿ-

ಸಿಕೊಳ್ಳತಕ್ಕವನಾದೇನು, ಅನೃತಂ= ಸುಳ್ಳು ಮಾತುಗಳನ್ನು, ನುಡಿವನು= ಹೇಳತಕ್ಕವನು, ಅಲ್ಲ= ಅಲ್ಲವು, ಆಹವಕೆ= ಕಾಳಗಕ್ಕೆ,  ಕಳುಹು= ಕಳುಹಿಸಿಕೊಡು, ಎಂದನು= ಎಂದು ನುಡಿದನು.  


ತಾತ್ಪರ್ಯ:- ತಂದೆಗೋಸ್ಕರವೂ, ದೇವಬ್ರಾಹ್ಮಣರಿಗೂ,ಗೋವುಗಳಿಗೋಸ್ಕರವೂ ಯೃರು ತಮ್ಮ ಅಸುವನ್ನೀಯುವರೊ ಅಂಥವರಿಗೆ ಶಾಶ್ವತವಾದ ಕೈವಲ್ಯವು ಲಭಿಸುವುದರಲ್ಲಿ ಲೇಶವೂ ಅನುಮಾನವಿಲ್ಲ, ಆದುದರಿಂದ ನಾನು ಈಗ ಯುದ್ಧಕ್ಕೆ ಹಿಂದಾಳಾಗಿ ನನ್ನ ಸತಿಯ ಎದುರಿಗೆ ಹೇಗೆ ನಿಲ್ಲಲಿ? ನನ್ನನ್ನು ಕರ್ಣನ ಮಗನೆಂದುಯಾರು ತಾನೆ ಕರೆದಾರು? ತಾತನಾದ ನಿನ್ನೊಂದಿಗೂ ಸುಳ್ಳನ್ನು ಹೇಳತಕ್ಕವನಲ್ಲ, ಅನುಮಾನಪಡದೆ ನನ್ನನ್ನು ಯುದ್ಧಕ್ಕೆ ಕಳುಹು. 


ಮಂದಿ ಸಹಿತೀ ಬಭ್ರುವಾಹನಂ ಬರಲಿ ನಾ। 

ನಿಂದು ರಣದೊಳ್ ನಿನ್ನ ಕಂಗಳ್ಗೆ ಹಬ್ಬಮಂ। 

ತಂದಲ್ಲದಿರೆನೆಂದು ವೃಷಕೇತು ಬಲ್ಪಿಂ ಧನಂಜಯಂಗೆರಗಿ ಬಳಿಕ ॥ 

ಪೊಂದೇರ್ಗಡರ್ದು ನಿಜ ಚಾಪಮಂ ತುಡುಕಿ ನರ। 

ನಂದನನ ಸಮ್ಮುಖಕೆ ನಡೆತಂದು ನುಡಿದನೆಲೆ। 

ಮಂದಮತಿ ಪಾರ್ಥಸುತನಹಡೆ ನಿಲ್ ಕರ್ಣಜಂ ತಾನೆನುತ ತೆಗೆದೆಚ್ಚನು॥೧೨॥ 


ಪ್ರತಿಪದಾರ್ಥ:- ಈ ಬಭ್ರುವಾಹನಂ= ಈ ಪಾರ್ಥನಂದನನು,ಮಂದಿಸಹಿತ= ಸೇನಾಸಮೇತನಾಗಿ, ಬರಲಿ= ಯುದ್ಧಕ್ಕೆ ಬಂದೊದಗಲಿ,ನಾನು= ನಾನಾದರೊ, ಇಂದು= ಈ ಹೊತ್ತು, ರಣದೊಳ್= ಯುದ್ಧರಂಗದಲ್ಲಿ, ನಿನ್ನ =ನಿನ್ನ ಸಂಬಂಧವಾದ, ಕಂಗಳ್ಗೆ= ಕಣ್ಣುಗಳಿಗೆ, ಹಬ್ಬಮಂ= ಆನಂದವನ್ನು, ತಂದಲ್ಲದೆ= ಉಂಟುಮಾಡದ ಹೊರತು, ಇರೆನು= ಬಿಡುವುದಿಲ್ಲ, ಎಂದು= ಎಂಬತೆರನಾಗಿ, ವೃಷಕೇತು= ವೃಷಧ್ವಜನು, ಬಲ್ಪಿಂ= ಬಲವಂತದಿಂದ, ಧನಂಜಯಂಗೆ= ಫಲ್ಗುಣನಿಗೆ, ಎರಗಿ= ವಂದಿಸಿ, ಬಳಿಕ = ಅನಂತರ, ಪೊಂದೇರ್ಗೆ= ಸುವರ್ಣಮಯವಾದ ತೇರಿಗೆ, ಅಡರ್ದು= ಏರಿ, ನಿಜ=ತನ್ನ, ಚಾಪಮಂ= ಧನುಸ್ಸನ್ನು, ತುಡುಕಿ= ನೇವರಿಸಿಕೊಂಡು, ನರನಂದನನ= ಪಾರ್ಥಜನ, ಸಮ್ಮುಖಕೆ= ಮುಂಭಾಗಕ್ಕೆ,ನಡೆತಂದು= ಬಂದು-

ಸೇರಿ, ನುಡಿದನು= ಹೇಳಿದನು, ಎಲೆ ಮಂದಮತಿ= ಎಲೈ ಮೂಢನೆ,ಪಾರ್ಥಸುತನು=ಪಾರ್ಥನ ಕುವರನು, ಆಹಡೆ= ಆಗಿದ್ದ ಪಕ್ಷದಲ್ಲಿ, ನಿಲ್= ನನ್ನೊಂದಿಗೆ ಹೋರಾಡಲು ನಿಲ್ಲು, ತಾನು=ನಾನು, ಕರ್ಣಜಂ= ಕರ್ಣಸುತನು, ಎನುತೆ= ಎಂದು ನುಡಿಯುತ್ತ, ತೆಗೆದು= ಬಾಣಗಳನ್ನು ಕೈಕೊಂಡು, ಎಚ್ಚನು= ಹೊಡೆದನು. 


ತಾತ್ಪರ್ಯ:- ಈ ಬಭ್ರುವಾಹನನು ತನ್ನ ಸಕಲ ಬಲದಿಂದಲೂ ಬಂದು ನನ್ನಮೇಲೆ ಬೀಳಲಿ ನೀನು ನೋಡುತ್ತಿರುವಾಗಲೇ ಅವನ ಪರಿವಾರವನ್ನೂ ನಿರ್ಮೂಲಮಾಡಿಬಿಡುವೆನೆಂದು ನುಡಿದು, ಬೇಡವೆಂದರೂ ಕೇಳದೆ ಬಲವಂತದಿಂದ ಅರ್ಜುನನ ಪಾದಾರವಿಂದಗಳಿಗೆ ನಮಸ್ಕರಿಸಿ, ಪಾರ್ಥನ ಅಪ್ಪಣೆ ಪಡೆದು ದಿವ್ಯ ರಥಾರೂಢನಾಗಿ ಧನುಷ್ಟಂಕಾರವನ್ನು ಮಾಡುತ್ತಾ ಬಭ್ರುವಾಹನನ ಸಮೀಪವನ್ನೈದಿ ಎಲೈ ಮೂಢಾತ್ಮನಾದ ಪಾರ್ಥಜನೆ, ನೆನಗೆ ಪಾರ್ಥಜನೆಂಬ ಹೆಸರು ಸಾರ್ಥಕವಾಗಬೇ-

ಕೃದರೆ ನನ್ನೆದುರಿಗೆ ನಿಂತು ನನ್ನೊಂದಿಗೆ ಹೋರಾಡು ನಾನು ಕರ್ಣಸುತ ಎಂದು ನುಡಿದು ಬಾಣಗಳನ್ನು ವೃಷಧ್ವಜನ ಮೇಲೆ ಬಿಟ್ಟನು. 


ಲೇಸನಾಡಿದೆ ಕರ್ಣಸುತನಾದೊಡೊಳ್ಳಿತೈ। 

ವಾಸಿಯುಳ್ಳವನಪ್ಪೆ ಫಲುಗುಣಂ ಕೊಂದನ। 

ಲ್ಲಾ ಸಮರದೊಳ್ ನಿನ್ನತಾತನಂ ತನಗೆ ನೀನಿದಿರಪ್ಪುದುಚಿತಮೆನುತೆ॥ 

ಸೂಸಿದಂ ಕಣೆಗಳಂ ಬಭ್ರುವಾಹನನದಂ। 

ನೇಸರಣುಗನ ಸುತಂ ಬರೆಕೆಯ್ದು ಪಾರ್ಥಿಯಂ। 

ಗಾಸಿಮಾಡಿದನಂಬುಗಳ ಮಳೆಯೊಳವನೀತನಂ ಮುಸುಕಿದಂ ಶರದೊಳು॥೧೩॥ 


ಪ್ರತಿಪದಾರ್ಥ:- ಲೇಸನು= ಒಳ್ಳೆಯ ಮಾತುಗಳನ್ನು, ಆಡಿದೆ= ನುಡಿದೆ, ಕರ್ಣಸುತನು= ಕರ್ಣನ ಮಗನು, ಆದೊಡೆ= ಆದಲ್ಲಿ, ಒಳ್ಳಿತೈ= ಬಹು ಒಳ್ಳೆಯದಾಯಿತು, ವಾಸಿಯುಳ್ಳವನು= ಗುಣಶಾಲಿಯಾದವನು, ಅಪ್ಪೆ= ಆಗಿರುವಿ, ನಿನ್ನ ತಾತನಂ= ನಿನ್ನ ತಂದೆಯನ್ನು, ಸಮರದೊಳ್= ಯುದ್ಧದಲ್ಲಿ, ಫಲುಗುಣಂ= ಅರ್ಜುನನು, ಕೊಂದನಲ್ಲಾ= ಕೊಂದುಹಾಕಿದನಲ್ಲವೇ, ನೀನು=ನೀನಾದರೊ,ತನಿಗೆ= ನನಿಗೆ, ಇದಿರಪ್ಪುದು= ಎದುರಾಳಾಗಿ ನಿಲ್ಲತಕ್ಕದ್ದು, ಉಚಿತಂ= ನ್ಯಾಯವೇ ಸರಿ,ಎನುತ= ಎಂದು ನುಡಿಯುತ್ತ, ಬಭ್ರುವಾಹನನು = ಪಾರ್ಥಸುತನು, ಕಣೆಗಳಂ= ಸರಳುಗಳನ್ನು, ಸೂಸಿದಂ= ಬಿಟ್ಟನು, ನೇಸರ್= ಸೂರ್ಯನ, ಅಣುಗನ= ಮಗನಾದ ಕರ್ಣನ, ಸುತಂ= ವೃಷಕೇತುವು, ಅದಂ= ಬಭ್ರುವಾಹನನ ಕಣೆಗಳನ್ನು, ಬರಿಕೈದು= ನಿರ್ನಾಮವಾಗುವಂತೆ ಮಾಡಿ, ಅಂಬುಗಳ= ಬಾಣಗಳ, ಮಳೆಯೊಳ್= ಮಳೆಯಿಂದ, ಪಾರ್ಥಿಯಂ= ಫಲ್ಗುಣ ತನಯನನ್ನು,ಗಾಸಿಮಾಡಿದನು= ಹಿಂಸೆಮಾಡಿದನು, ಅವನು= ಆ ಪಾರ್ಥನಂದನನೂ,ಕೂಡ=ಸಹಿತ, ಈತನಂ= ಈ ವೃಷಕೇತುವನ್ನು, ಶರದೊಳ್= ಬಾಣಗಳಿಂದ, ಮುಸುಕಿದಂ= ಮುಚ್ಚಿಬಿಟ್ಟನು.


ತಾತ್ಪರ್ಯ:-ಎಲೈವೃಷಕೇತೈವೇ ನೀನು ಕರ್ಣಸುತನಾದರೆ ಬಹಳ ಮೇಲಾಯಿತು. ಒಳ್ಳೆ ಸುಗುಣಗಳಿಂದ ಶೋಭಿತನಾಗಿರುವಿ. ಯುದ್ಧದಲ್ಲಿ ಅರ್ಜುನನು ನಿಮ್ಮ ತಂದೆಯಾದ ಕರ್ಣನನ್ನು ಕೊಂದುಹಾಕಿದನಲ್ಲವೆ? ಅರ್ಜುನನ ಮಗನಾದ ನನಗೆ ಕರ್ಣಸುತನಾದ ನೇನು ಎದೈರಾಳಾಗುವುದು ಯೋಗ್ಯವೇ ಸರಿಯೆಂದು ನುಡಿಯುತ್ತ ಅನೇಕ ಬಾಣಗಳನ್ನು ಪ್ರಯೋಗಿಸಿದನು. ವೃಷಧ್ವಜನಾದರೊ ಬಭ್ರುವಾಹನನ ಬಾಣಗಳನ್ನೆಲ್ಲಾ ಕಡಿದುಶಹಾಕಿ ಊನೇಕ ದಿವ್ಯ ಬಾಣಗಳಿಂದ ಕರ್ಣಸುತನನ್ನು ನೋಯಿಸಲು ಅವನು ಶರವರ್ಷದಿಂದ ಅರ್ಜುನನ ಮಗನನ್ನು ನೆನೆಯಿಸಿದನು. 


ಇಸುವರೆಚ್ಚಂಬುಗಳನೆಡೆಯೊಳಿಕ್ಕಡಿಗೈವ। 

ರಿಸುವರೋರೋರ್ವರಂ ಗಾಯಗಾಣಿಸಿ ಕೆರ। 

ಳ್ದಿಸುವರಶ್ವಧ್ವಜ ವರೂಥ ಸಾರಥಿಗಳಂ ತರಿದಿಳೆಗುರುಳ್ಚಿ ಕೂಡೆ॥ 

ಇಸುವರೊಮ್ಮೊಮ್ಮೆ ಮೈಮರೆದು ಚೇತರಿಸಿಕೊಂ। 

ಡಿಸುವರಾಗ್ನೇಯಾದಿ ದಿವ್ಯಾಸ್ತ್ರನಿಕರದಿಂ। 

ದಿಸುವರಿಂತವರವರ ಸರಿಬರಿಗೆ ಬಾಣಂಗಳಂ ಕರ್ಣಪಾರ್ಥಸುತರು॥೧೪॥ 


ಪ್ರತಿಪದಾರ್ಥ :- ಎಸುವರು= ಪರಸ್ಪರ ಬಾಣಗಳನ್ನು ಬಿಡುವರು,ಎಚ್ಚ= ಬಿಟ್ಟ, ಅಂಬುಗಳನು= ಕಣೆಗಳನ್ನು, ಎಡೆಯೊಳ್= ಹತ್ತಿರದಲ್ಲಿಯೆ,ಇಕ್ಕಡಿಗೈವರು= ಎರಡಾಗಿ ಕತ್ತರಿಸುವರು, ಓರ್ವರುಂ= ಒಬ್ಬರು ಇನ್ನೊಬ್ಬರನ್ನು, ಗಾಯಗಾಣಿಸಿ = ಗಾಯವಾಗುವಂತೆ ಮಾಡಿ, ಕೆರಳ್ದು= ಕೋಪಮಾಡಿಕೊಂಡು,ಎಸುವರು= ಬಾಣಗಳನ್ನು ಬಿಡುವರು,

ಅಶ್ವ=ಕುದುರೆಗಳು, ಧ್ವಜ= ಧ್ವಜಪಟಗಳು,ವರೂಥ= ತೇರುಗಳು,ಸಾರಥಿಗಳಂ= ತೇರುಗಳನ್ನು ನಡೆಸುವವರನ್ನು,ತರಿದು= ಛೇದಿಸಿ, ಇಳೆಗೆ= ನೆಲಕ್ಕೆ, ಉರುಳ್ಚಿ= ಕೆಡವಿ, ಕೂಡೆ= ಒಡನೆಯೇ, ಎಸುವರು= ಬಾಣಗಳನ್ನು ಬಿಡುವರು,  ಒಮ್ಮೊಮ್ಮೆ = ಒಂದೊಂದು ಬಾರಿ, ಮೈಮರೆದು= ಮೂರ್ಛೆಬಿದ್ದು, ಚೇತರಿಸಿಕೊಂಡು = ಎಚ್ಚೆತ್ತು, ಆಗ್ನೇಯಾದಿ= ಅಗ್ನಿಯೇ ಮೊದಲಾದ್ದರ, ಅಸ್ತ್ರಗಳ= ಬಾಣಗಳ,ನಿಕರದಿಂದ= ಸಮೂಹದಿಂದ, ಎಸುವರು= ಪ್ರಯೋಗಿಸುವರು, ಕರ್ಣಸುತ ಪಾರ್ಥಸುತರು= ವೃಷಕೇತು ಬಭ್ರುವಾಹನರು ,ಇಂತು=ಈ ತೆರನಾಗಿ, ಅವರವರ= ತಮ್ಮ ತಮ್ಮ, ಸರಿಯ= ಸಮನಾಗಿರತಕ್ಕ, ಬಾಣಗಳನು= ಕಣೆಗಳನ್ನು,  ಎಸುವರು= ಪ್ರಯೋಗಿಸುವರು. 


ತಾತ್ಪರ್ಯ:- ವೃಷಕೇತು ಬಭ್ರುವಾಹನರೀರ್ವರೂ ಪರಸ್ಪರ ಬಾಣಗಳನ್ನು ಬಿಡುತ್ತಲೂ ಒಬ್ಬರು ಬಿಟ್ಟ ಸರಲನ್ನು ಇನ್ನೊಬ್ಬರು ಖಂಡಿಸುತ್ತಲೂ, ಇಬ್ಬರೂ ತಮ್ ತಮ್ಮ ಶರೀರದಲ್ಲಿ ಗಾಯಗಳು ಕಾಣುವಂತೆಮೂಡುತ್ತಲೂ ಒಬ್ಬರು ಮತ್ತೊಬ್ಬರ ಚತುರಂಗ ಬಲವನ್ನು ಖಂಡಿಸಿ, ಸ್ಮೃತಿತಪ್ಪಿ ಕೆಳಗೆ ಬಿದ್ದು ಪುನಃ ಮೇಲಕ್ಕೇಳುತ್ತಲೂ ಆಗ್ನೇಯಾದಿ ದಿವ್ಯಾ-

ಸ್ತ್ರಗಳಿಂದ ಈರ್ವರೂ ಪರಸ್ಪರ ಸಮಸಮವಾಗಿ ಹೋರಾಡುತ್ತಿದ್ದರು.


ಅಂದಾದ ಕರ್ಣಾರ್ಜುನರ ಕಾಳಗವನವರ। 

ನಂದನರ್ ನಿರ್ಣೈಸುತಿರ್ದರೆನೆ ಶಸ್ತ್ರಾಸ್ತ್ರ। 

ದಿಂದೆ ಶರಸಂಧಾನ ಸತ್ಯ ಸಾಹಸ ಲಕ್ಷ್ಯ ಲಳಿ ಲಾಘವಂಗಳಿಂದೆ॥ 

ಮುಂದುವರಿವಗ್ಗಳಿಕೆ ಮುಳಿಸು ಮೂದಲೆ ಮೋಡಿ। 

ಬಂದಿ ಭಾರಣೆ ಬಿಂಕ ಬೆಸೆ ಚಮತ್ಕಾರಂಗ। 

ಳಿಂದ ಸಮಮಾಗೆ ಕೈದೋರಿದಂ ವೃಷಕೇತು ಬಭ್ರುವಾಹನನ ಮೇಲೆ ॥೧೫॥ 


ಪ್ರತಿಪದಾರ್ಥ :- ಅಂದು=ಪೂರ್ವದಲ್ಲಿ, ಆದ=ನಡೆದಂಥ,ಕರ್ಣಾರ್ಜುನರ= ಸೂರ್ಯಸುತ ಪಾಂಡುನಂದನರ, ಕಾಳಗವನು= ಯುದ್ಧವನ್ನು, ಅವರ= ಸೂರ್ಯಪುತ್ತ ಪಾಂಡುಪುತ್ತರ,ನಂದನರೈ= ಮಕ್ಕಳು, ನಿರ್ಣೈಸುತ= ನೆರವೇರಿಸುತ್ತ,

ಇರ್ದರು= ಇದ್ದರು, ಎನೆ= ಎಂಬಂತೆ, ಶಸ್ತ್ರಾಸ್ತ್ರದಿಂದೆ= ಕತ್ತಿಮೊದಲಾದ ಶಸ್ತ್ರಗಳು ಮತ್ತು ಆಗ್ನೇಯಾದಿ ಅಸ್ತ್ರಗಳಿಂದ,

ಶರ= ಸರಲ್ಗಳ, ಸಂಧಾನ= ಪ್ರಯೋಗಿಸುವುದು,ಸತ್ವ= ಶಕ್ತಿಯು, ಸಾಹಸ= ಶೌರ್ಯವು,ಲಕ್ಷ್ಯ= ಗುರಿಯು, ಲಳಿ= ಕೈಚಳಕವು ,ಲಾಘವಂಗಳಿಂ= ಚಾತುರ್ಯದಿದಲೂ, ಮುಂದುವರಿವ= ಎದುರುಬಿದ್ದು ಬರತಕ್ಕ, ಅಗ್ಗಳಿಕೆ= ಬಿರುದಾವ-

ಳಿಯು, ಮುಳಿಸು=ಕೋಪವು,ಮೂದಲೆ =ಜರೆಯುವುದು, ಮೋಡಿ= ಕಣ್ತಪ್ಪಿಸುವುದು,ಹಟ= ಪಟ್ಟು ಹಿಡಿಯುವುದು, ಬಂದಿ= ಸೇನೆಯನ್ನು ಬಿಡುವುದು, ಭಾರಣೆ= ಪರಾಕ್ರಮವು,ಬಲ=ಶಕ್ತಿಯು,ಬಿಂಕ=ಅಹಂಕಾರವು, (ಗರ್ವವು) ಬೆಸೆ= ತಲೆದೋರುವ, ಚಮತ್ಕಾರಗಳಿಂದ= ಚತುರತನದಿಂದ,ಸಮಂ= ಸದೃಶವಾದದ್ದು,ಆಗೆ= ಆಗಲು, ವೃಷಕೇತು = ವೃಷಧ್ವಜನು,ಬಭ್ರುವಾಹನನ ಮೇಲೆ = ಬಭ್ರುವಾಹನನ ಕುರಿತು, ಕೈದೋರಿದಂ= ತನ್ನ ಕೈ ಚಾತುರ್ಯವನ್ನು ತೋರಿಸಲು ಪ್ರಾರಂಭಿಸಿದನು.


ತಾತ್ಪರ್ಯ:- ಪೂರ್ವದಲ್ಲಿ ಕರ್ಣಾರ್ಜುನರಿಗಾದ ಘೋರಯುದ್ಧವನ್ನು ಈಗ ಅವರ ಮಕ್ಕಳಿಬ್ಬರೂ ಜ್ಞಾಪಿಸುತ್ತಲಿರುವ- 

ರೆಂಬಂತೆ ತೋರುತ್ತ ಅಸ್ತ್ರ ಶಸ್ತ್ರಗಳಿಂದಲೂ ಬಾಣಪ್ರಯೋಗದಿಂದಲೂ, ಶಕ್ತಿ, ಸಾಹಸ, ಶೌರ್ಯ, ಕೈ ಚಾತುರ್ಯಗಳಿಂದ

ಲೂ, ಕೋಪ, ಹಠ, ಧೈರ್ಯಾದಿಗಳಲ್ಲೂ, ಒಬ್ಬರು ಮತ್ತೊಬ್ಬರಿಗೆ, ಹಿಮ್ಮೆಟ್ಟದೆ ಕಾಳಗದಲ್ಲಿ, ಮೆರೆಯುತ್ತಿದ್ದರು.


ಬಳಿಕಖಿಳ ದಿವ್ಯಾಸ್ತ್ರದಿಂದೆ ವೃಷಕೇತು ವೆ। 

ಗ್ಗಳಿಸೆ ವಾಡಬ ವೈಷ್ಣವಂಗಳಿಂ ಪರಿಹರಿಸಿ। 

ಕೊಳುತರ್ಜುನಾತ್ಮಜಂ ಕೆರಳ್ದಿವನನೆಚ್ಚೊಡುಚ್ಚಳಿಸಿ ತಚ್ಛೋಣೀತವನು॥

 ತೊಳೆಯಲಿಳಿದುವು ಭೋಗವತಿಯ ಜಲಕಂಬುಳ್। 

ಮುಳಿದು ಕರ್ಣಜನಿಸಲ್ಕಾತನಂ ಸುತ್ತಿಸಿತು। 

ಸುಳಿಗಾಳಿಯಂದದಿಂ ಕಣೆಗಳರಗಳಿಗೆ ಪರ್ಯಂತರಂ ಸಂಗರದೊಳು॥೧೬॥ 


ವೃಷಕೇತು= ವೃಷಧ್ವಜನು, ಬಳಿಕ = ಅನಂತರ, ಅಖಿಳ= ಸಮಸ್ತ, ದಿವ್ಯಾಸ್ತ್ರದಿಂದ= ದೇವತಾಸಂಬಂಧವಾದ ಅಸ್ತ್ರಂಗ-

ಳಿಂದ, ವೆಗ್ಗಳಿಸೆ= ಘೋರ ಯುದ್ಧ ಮಾಡುತ್ತಿರಲು, ಅರ್ಜುನಾತ್ಮಜಂ= ಬಭ್ರುವಾಹನನು, ಕೆರಳ್ದು= ಕೋಪೋದ್ದೀಪಿತನಾಗಿ

ವಾಡಬ= ಆಗ್ನೇಯಾಸ್ತ್ರದಿಂದಲೂ, ವೈಷ್ಣವದೊಳು= ವೈಷ್ಣವಾಸ್ತ್ರದಿಂದಲೂ,ಆದಂ= ಅವನ ದಿವ್ಯ ಬಾಣವನ್ನು, ಪರಿಹರಿ-

ಕೊಳುತ= ಹೋಗಲಾಡಿಸಿಕೊಂಡು,ಅವನನು= ಆ ವೃಷಧ್ವಜನನ್ನು, ಎಚ್ಚಲು= ಬಾಣಪ್ರಯೋಗದಿಂದ ನೋಯಿಸಲು, ಇಚ್ಚಳಿಸಿ= ಸೀಳಿದವನಾಗಿ,ತಚ್ಛೋಣಿತವನು= ಆ ರಕ್ತವನ್ನು, ತೊಳೆಯಲು= ತೊಳೆಯುವುದಕ್ಕೆ, ಅಂಬುಗಳು= ಕಣೆಗಳು, ಭೋಗವತಿಯ= ಪಾತಾಳದ, ಜಲಕೆ= ನೀರಿಗೆ, ಇಳಿದವು= ಪ್ರವೇಶಮಾಡಿದುವು ತರುವಾಯ, ಕರ್ಣಜನು= ವೃಷಧ್ವಜನು, ಮುಳಿದು=ಸಿಟ್ಟುಗೊಂಡು, ಎಸಲ್ಕೆ= ಬಾಣಗಳನ್ನು ಬಿಡಲು, ಕಣೆಗಳು = ಕರ್ಣಸುತನು ಬಿಟ್ಟ ಬಾಣಗಳು, ಸಂಗರದೊಳು= ರಣದಲ್ಲಿ, ಸುಳಿಗಾಳಿಯಂದದಿ= ಸುಂಟರಗಾಳಿಯ ತೆರನಾಗಿ, ಅರಗಳಿಗೆ ಪರ್ಯಂತಂ= ಅರ್ಧಗಳಿಗೆಯವರೆಗೂ, ಆತನಂ= ಆ ಬಭ್ರುವಾಹನನನ್ನು,  ಸುತ್ತಿಸಿತು= ತಿರುಗಿಸಿಬಿಟ್ಟಿತು.


ಅ॥ವಿ॥ ಆತ್ಮ=ತನ್ನಲ್ಲಿ, ಜ=ಹುಟ್ಟಿದವನು(ಅರ್ಜುನಾತ್ಮಜಂ)-(ಷ. ತ. ಸ.) ಅರ್ಜುನ=ಅರ್ಜುನನ, ಆತ್ಮಜಂ= ಕುವರನು- ಬಭ್ರುವಾಹನನು. 


ತಾತ್ಪರ್ಯ:- ಹೀಗಿರುವಲ್ಲಿ ಕರ್ಣಸುತನು ಅನೇಕ ಮಂತ್ರಾಸ್ತ್ರಗಳನ್ನು ಪಾರ್ಥಜನ ಮೇಲೆ ಬಿಡಲು ಬಭ್ರುವಾಹನನು ಅವುಗಳನ್ನೆಲ್ಲಾ ಆಗ್ನೇಯಾಸ್ತ್ರ ವೈಷ್ಣವಾಸ್ತ್ರಗಳಿಂದ ಧ್ವಂಸಮಾಡಿ ಅನೇಕ ಬಾಣಗಳನ್ನು ವೃಷಕೇತುವಿನ ಮೇಲೆ ಬಿಟ್ಟನು, ಪಾರ್ಥಜನು ಬಿಟ್ಟ ಕಣೆಗಳು ಕರ್ಣಸುತನ ಬಳಿಗೆ ಹೋಗುವುದಕ್ಕೆ ಮೊದಲೇ ಅವುಗಳನ್ನು ಮಧ್ಯಮಾರ್ಗದಲ್ಲಿಯೇ ಇಕ್ಕಡಿಯಾಗಿ ಕತ್ತರಿಸಲಾಗಿ ಪಾರ್ಥಜನು ತನ್ನ ಸರಲ್ಗಗಳಿಂದ ವೃಷಕೇತುವಿನ ಮೈಯಿಂದಲೂ ಊವನ ಸೈನ್ಯದ ಜನರ ದೇಹದಿಂದಲೂ ರಕ್ತವನ್ನು ಸುರಿಯುವಂತೆ ಮಾಡಲು ಆ ರಕ್ತವು ಭೂಮಿಯನ್ನು ಭೇದಿಸಿಕೊಂಡು ಪಾತಾಳಲೋಕದಲ್ಲಿ- 

ರುವ, ನೀರಿನ ಜೊತೆಗೆಹೋಗಿ ಸೇರುತ್ತಲಿತ್ತು,ಆಗ ಕರ್ಣಜನು ಉಗ್ರಕೋಪದಿಂದ ಕೂರಂಬುಗಳನ್ನು ಬಭ್ರುವಾಹನನ ಮೇಲೆ ಬಿಡಲು ಆ ಬಾಣಗಳು ಪಾರ್ಥಜನನ್ನು ನಭೋಮಂಡಲದಲ್ಲಿ ಅರ್ಧಗಳಿಗೆಯವರೆಗೂ ಚಕ್ರಾಕಾರವಾಗಿ ತಿರುಗಿಸಿ ನೆಲಕ್ಕೆ ಕೆಡವಿತು. 


ಮತ್ತೆ ಹೊಡಕರಿಸಿ ಪಾರ್ಥನ ಸೂನು ರೋಷಾಗ್ನಿ। 

ಪೊತ್ತಿ ಕಿಡಿಗೆದರಿ ದಿವ್ಯಾಸ್ತ್ರಮಂ ಪೂಡಿ ತೆಗೆ। 

ಯುತ್ತೆಲವೊ ಕರ್ಣಸುತ ನೀನೆ ಬಿಲ್ಲಾಳಪ್ಪೆನಾಂ ಪೊಣರ್ದತಿಬಲರೊಳು॥ 

ಚಿತ್ತಚಂಚಲಮಿಲ್ಲದೀಕ್ಷಿಸೆನುತೆಚ್ಚೊಡೆದೆ। 

ಗೊತ್ತಿ ಶಿರಮಂ ಕೂಡಿ ಪಿಡಿದಾಗಸಕೆ ಬಾಣ। 

ವೆತ್ತಿಕೊಂಡೊಯ್ದು ವೃಷಕೇತೈವಂ ತಿರುಗಿಸಿತು ದೆಸೆದೆಸೆಗಳಂ ನಭದೊಳು॥೧೭॥ 


ಪ್ರತಿಪದಾರ್ಥ :- ಮತ್ತೆ= ಪುನಃ, ಪಾರ್ಥಸೂನು= ಪಾರ್ಥನಂದನನು, ಹೊಡಕರಿಸಿ = ಹೂಂಕರಿಸುತ್ತಾ, ರೋಷಾಗ್ನಿ= ಕ್ರೋಧಾಗ್ನಿಯು,ಪೊತ್ತಿ=ಹೊತ್ತಿಕೊಂಡು, ಕಿಡಿ= ಬೆಂಕಿಯ ಕಿಡಿಗಳನ್ನು,ಕೆದರಿ=ಚದುರಿಸಿ,ದಿವ್ಯಾಸ್ತ್ರಮಂ=ದೇವತಾಯೋಗ್ಯ-

ವಾದ ಬಾಣವನ್ನು, ಪೂಡಿ= ಜೋಡಿಸಿ, ತೆಗೆವುತ್ತ= ಸೆಳೆದುಕೊಳ್ಳುತ್ತ, ಎಲವೋ= ಎಲೈ, ಕರ್ಣಸುತ = ವೃಷಕೇತುವೆ,  ನಾಂ=ನಾನು,ಪೊಣರ್ದ= ಕಾಳಗಮಾಡಿದ, ಅತಿಬಲರೊಳು= ಬಲಾಢ್ಯರಲ್ಲಿ, ಬಿಲ್ಲಾಳು= ಧನುರ್ವಿದ್ಯಾಪ್ರವೀಣನು, ನೀನೆ= ನೀನೊಬ್ಬನು ಮಾತ್ರವೇ, ಅಪ್ಪೆ= ಆಗಿರುತ್ತಿ, ಚಿತ್ತಚಂಚಲಂ= ಮನಸ್ಸಿನ ಚಪಲತೆಯು, ಇಲ್ಲದೆ= ಸ್ಥಿರಚಿತ್ತನಾಗಿ,ಈಕ್ಷಿಸು= ನೋಡು, ಎನುತ= ಎಂದು ನುಡಿಯುತ್ತ, ಎದೆಗೆ=ಎದೆಯ ಭಾಗಕ್ಕೆ, ಎಚ್ಚಡೆ= ಬಾಣಬಿಡಲು, ಶಿರಮಂ= ಶಿರಸ್ಸನ್ನು,  ಎತ್ತಿ= ಮೇಲಕ್ಕೆತ್ತಿ,ಕೂಡಿ=ಕೂಡಿಕೊಂಡು, ಪಿಡಿದು= ಹಿಡಿದವನಾಗಿ, ಆಗಸಕ್ಕೆ= ಅಂತರಿಕ್ಷಕ್ಕೆ, ಚಿಗಿದು= ಹಾರಿ, ಅತ್ತ= ಆ ಪಾರ್ಶ್ವ- 

ದಲ್ಲಿ, ಕೊಂಡೊಯ್ದು=ಸಾಗಿಸಿಕೊಂಡು ಹೋಗಿ, ವೃಷಧ್ವಜನನ್ನು, ನಭದೊಳು= ಆಗಸದಲ್ಲಿ, ದೆಸೆದೆಸೆಗಳಂ= ನಾನಾದಿಕ್ಕು-

ಗಳನ್ನೂ, ತಿರುಗಿಸಿತು= ತಿರುಗುವಂತೆ ಮಾಡಿಬಿಟ್ಟಿತು. 


ಅ॥ವಿ॥ ರೋಷ+ಅಗ್ನಿ=ರೋಷಾಗ್ನಿ ( ಸ. ದೀ. ಸಂ.)


ತಾತ್ಪರ್ಯ:-ಇದರಿಂದ ಬಭ್ರುವಾಹನನಿಗೆ ಕೋಪಾಗ್ನಿ ಹೆಚ್ಚುತ್ತ, ಮುಖದಿಂದ ಕೆಂಡಗಳನ್ನು ಸುರಿಸುತ್ತಲಿರುವಂತೆ ರೋಷ- 

ಭೀಷಣನಾಗಿ, ಹೂಂಕರಿಸುತ್ತಾ ಅನೇಕ ದಿವ್ಯ ಬಾಣಗಳನ್ನು ಬಿಲೂಲಿನೊಳಗೆ ಹೂಡಿ ವೃಷಕೇತುವನ್ನು ಕುರಿತು ಎಲೈ ವೃಷ-

ಕೇತುವೆ ನನ್ನೊಂದಿಗೆ ಹೋರಾಡಿದ ಅನೇಕರಲ್ಲಿ ನಿನ್ನಷ್ಟು ಶೂರರಾರನ್ನೂ ನೋಡಲಿಲ್ಲವು, ಸ್ಥಿರಚಿತ್ತನಾಗಿ ನೋಡೆಂದೈ ನುಡಿದು ಬಾಣಗಳನ್ನು ಬಿಟ್ಟುಬಿಟ್ಟನು, ಆ ಬಾಣಗಳು ವೃಷಕೇತುವನ್ನು ಆಕಾಶಕ್ಕೆ ಎತ್ತಿಕೊಂಡು ಹೋಗಿ ನಾನಾ ದಿಕ್ಕುಗಳಿ-

ಗೂ, ಸುತ್ತಿಸಿತು. 


ಭಾನುಸುತ ಸೂನುವಂ ನಭಕೆತ್ತಿ ಕೊಂಡೊಯ್ದು।

 ನಾನಾದೆಸೆಗೆ ತಿರುಗಿಸಿತು ಮುಹೂರ್ತತ್ರಿತಯ। 

ಮೀನೆಲಕೆ ಕೆಡಹದೆ ಮಹಾಶರಂ ಕೆಳಗೆ ಬಿಲ್ವಿಡಿದು ಸನ್ನದ್ಧರಾಗಿ॥ 

ಈ ನರನುಮಾ ಬಭ್ರುವಾಹನನನುಮೊಡನೈದೆ। 

ಬಾನೆಡೆಯೊಳಾತಂ ಪಿತಾಮಹಂಗಭಿನಮಿಸಿ। 

ಕಾನನ ಸರಿತ್ಸಾಗರಂಗಳೊಳ್ ಬೀಳದಿಳಿದಂ ಮಣಿಪುರದ ಮಹಿಯೊಳು॥೧೮॥ 


ಪ್ರತಿಪದಾರ್ಥ :- ಮಹಾಶರಂ= ದೊಡ್ಡದಾದ ಬಾಣವು, ಮುಹೂರ್ತತ್ರಿತಯಂ= ಒಂಬತ್ತು ಗಳಿಗೆಯ ಪರ್ಯಂತವೂ, ಭಾನುಸುತಸೂನುವಂ= ವೃಷಧ್ವಜನನ್ನು, ನಭಕ್ಕೆ= ಅಂತರಿಕ್ಷಕ್ಕೆ, ಎತ್ತಿಕೊಂಡೊಯ್ದು= ಎತ್ತಿಕೊಂಡು ಹೋಗಿ, ಈ ನೆಲಕೆ= ಈ ಭೂಮಿಯ ಮೇಲೆ, ಕೆಡಹದೆ= ಉರುಳಿಸಿ ಬಿಡದೆ, ತಿರುಗಿಸಿತು= ಸುತ್ತುವಂತೆ ಮಾಡಿತು,ಕೆಳಗೆ= ಕೆಳಭಾಗದಲ್ಲಿ, ಬಿಲ್ವಿಡಿದು= ಧನುರ್ಧಾರಿಯಾಗಿ, ಸನ್ನದ್ಧನಾಗಿ= ಸಿದ್ಧನಾಗಿ,ಈ ನರನುಂ= ಈ ಪಾರ್ಥನೂ,ಆ ಬಭ್ರುವಾಹನಂ= ಆ ಪಾರ್ಥಸುತನೂ, ಒಡನೆ= ಕೂಡಲೌ, ಐದೆ= ಮುಂದರಿದು ಬರಲಾಗಿ, ಬಾನೆಡೆಯೊಳು= ಅಂತರಿಕ್ಷ ಪ್ರದೇಶದಲ್ಲಿ, ಆತನ= ಆ ವೃಷಕೇತುವಿನ,ಪಿತಾಮಹಂಗೆ= ತಾತನಾದ ರವಿಗೆ, ಅಭಿನಮಿಸಿ= ನಮಸ್ಕಾರ ಮಾಡಿ, ಕಾನನಸರಿತ್ಸಾಗರಂಗಳೊಳ್= 

ಅರಣ್ಯ ನದಿಗಳು, ಸಮುದ್ರವೇ ಮೊದಲಾದವುಗಳಲ್ಲಿ, ಬೀಳದೆ= ಬಿದ್ದುಹೋಗದೆ, ಮಣಿಪುರದ= ಮಣಿಪುರವೆನ್ನುವ ಬಭ್ರುವಾಹನನ ರಾಜಧಾನಿಯ, ಮಹಿಯೊಳು= ಭೂಮಿಯಲ್ಲಿ,  ಇಳಿದಂ= ಇಳಿದನು. 


ಅ॥ವಿ॥ ಭಾನುಸುತಸೂನು=ಭಾನುವಿನ ಸುತಸೂನು(ಷ. ತ. ಸ.) ಭಾನುಸುತಸೂನು(ಷ. ತ. ಸ.) ಮಹಾಶರಂ(ವಿ.ಪೂ. ಕ)

ಬಿಲ್ಲಂ+ ಪಿಡಿದು= ಬಿಲ್ವಿಡಿದು ( ಕ್ರಿ, ಸ.)


ತಾತ್ಪರ್ಯ:-ವೃಷಕೇತುವನ್ನು ಆಕಾಶಕ್ಕೊಯ್ದು ಮೂರು ಮುಹೂರ್ತಗಳ ಕಾಲ ಅನೇಕ ದಿಕ್ಕುಗಳಲ್ಲಿ, ನೆಲಕ್ಕೆ ಬೀಳದಂತೆ ತಿರುಗಿಸಿತು. ಭೂಮಿಯ ಮೇಲೆ ಅರ್ಜುನನೂ ಬಭ್ರುವಾಹನನೂ ಊವನನ್ನೇ ನೋಡುತ್ತಿರಲು ವೃಷಕೇತುವು ಆಕಾಶದಲ್ಲಿ ತನ್ನ ಪಿತಾಮಹನಾದ ಸೂರ್ಯನಿಗೆ ವಂದಿಸಿ, ಕಾಡುಮೇಡು ನದಿ ಸಮುದ್ರಗಳಲ್ಲಿ ಬೀಳದೆ ಮಣಿಪುರದ ರಣಭೂಮಿಯಲ್ಲಿ ಇಳಿದನು. 


ಮೊಗಮೆತ್ತಿ ಫಲುಗುಣಂ ನೋಡುತಿರೆ ಕರ್ಣಜಂ।

ಗಗನದಿಂ ಬಿದ್ದಿಳೆಗೆ ಪೊಡೆಚಂಡಿನಂತೆ ಪುಟ। 

ನೆಗೆದೆದ್ದು ರೋಷದಿಂ ಘುಡುಘುಡಿಸಿ ಪಾರ್ಥಸುತನಂ ಪಚಾರಿಸಿ ಕನಲ್ದು॥ 

ತೆಗೆದಿಸಲ್ ಬಾಣಂಗಳಶ್ವ ಸಾರಥಿ ಪತಾ। 

ಕೆಗಳಿಂದಮರ್ದ ರಥಸಹಿತ ಚಿತ್ರಾಂಗದೆಯ । 

ಮಗನಂ ನಭಸ್ಥಳಕೆ ಕೊಂಡಡರ್ದುವು ನಾಕ ಪರಿಯಂತಮಾಕ್ಷಣದೊಳು॥೧೯॥ 


ಪ್ರತಿಪದಾರ್ಥ :- ಫಲುಗುಣಂ= ಪಾರ್ಥನು, ಮೊಗವೆತ್ತಿ= ಮುಖವನ್ನು ಮೇಲುಮಾಡಿಕೊಂಡು, ನೋಡುತಿರೆ= ನೋಡುತ್ತಿ- 

ಲಾಗಿ, ಕರ್ಣಜಂ= ವೃಷಕೇತುವು, ಗಗನದಿಂದ= ಆಗಸದಿಂದ,ಇಳೆಗೆ= ಭೂಮಿಗೆ, ಬಿದ್ದು= ಬಿದ್ದವನಾಗಿ, ಪೊಡೆಚಂಡಿನಂತೆ = ಹೊಡೆಯುತ್ತಿರುವ ಚಂಡಿನ ತೆರನಾಗಿ, ಪುಟನೆಗೆದು= ಮೇಲಕ್ಕೆ ಎಗರಿ, ಎದ್ದು= ಎದ್ದು ನಿಂತು,ರೋಷದಿಂ= ಕ್ರೋಧದಿಂದ

ಘುಡುಘುಡಿಸಿ =ಘುರಕಾಯಿಸುತ್ತಾ, ಪಾರ್ಥಸುತನಂ= ಬಭ್ರುವಾಹನನ ನ್ನು ,ಪಚಾರಿಸಿ= ಹೀಯಾಳಿಸಿ, ಕನಲ್ದು= ಕೋಪಮಾಡಿಕೊಂಡು, ತೆಗೆದು= ಬಾಣಗಳನ್ನು ಕೈಕೊಂಡು, ಎಸಲ್= ಬಿಡಲು, ಬಾಣಂಗಳು=ಕಣೆಗಳು, ಅಶ್ವಸಾರಥಿಪ- 

ತಾಕೆಗಳಿಂದ= ಕುದುರೆ,ತೇರು,ತೇರು ನಡೆಸುವವನು,ಪತಾಕೆಗಳಿಂದ= ಬಾವುಟಗಳಿಂದಲೂ, ಅಮರ್ದ= ಕೂಡಿದ, ರಥಸಹಿತ= ತೇರಿನೊಂದಿಗೆ, ಚಿತ್ರಾಂಗದೆಯಸುತನ= ಚಿತ್ರಾಂಗದೆಯ ಕುವರನನ್ನು, ನಭಸ್ಥಳಕೆ= ಆಗಸಕ್ಕೆ, ನಾಕಪರ್ಯಂ-

ತಂ= ಸ್ವರ್ಗಲೋಕದವರೆಗೂ,ಕೊಂಡು= ತೆಗೆದುಕೊಂಡು,  ಆಕ್ಷಣದೊಳು=ಕೂಡಲೆ, ಅಡರ್ದವು= ಹತ್ತಿದವು. 


ತಾತ್ಪರ್ಯ:- ಅರ್ಜುನನು ಮುಖವೆತ್ತಿನೋಡುತ್ತಿರಲು, ವೃಷಕೇತುವು ನೆಲಕ್ಕೆ ಬಿದ್ದು ಪುಟಚಂಡಿನಂತೆ ಮೇಲೆದ್ದು ರೋಷದಿಂದ ಘುಡುಘುಡಿಸಿ ಬಭ್ರುವಾಹನನನ್ನು ಹೀಯಾಳಿಸಿ, ಬಾಣಗಳಿಂದ ಹೊಡೆಯಲು ಆ ಬಾಣಗಳು ಸಾರಥಿ,ಕುದುರೆಗಳು,ಪತಾಕೆಗಳ ಸಹಿತ ಬಭ್ರುವಾಹನನ ರಥವನ್ನು ಸ್ವರ್ಗದ ವರೆಗೂ ತೆಗೆದುಕೊಂಡು ಹೋದವು. 


ನಭದೊಳತ್ಯುಗ್ರದಿಂ ತಪಿಸುವ ದಿವಾಕರ। 

ಪ್ರಭೆಯಿಂದುರಿಯೆರಥಂ ಬಿದ್ದನುರ್ವಿಗೆ ಪಾರ್ಥಿ। 

ರಭಸದಿಂ ಪೂರ್ವದೊಳಡರ್ದ ಸಂಪಾತಿ ಗರಿ ಸೀದಿಳೆಗೆ ಬೀಳುವಂತೆ॥ 

ತ್ರಿಭುವನಕೆ ಪೊಸತಾಗೆ ಕರ್ಣಜಂ ಮತ್ತೆ ರಿಪು। 

ಸುಭಟನಂ ಮೂರುಬಾಣದೊಳೆಚ್ಚು ದಿವಸ ವ। 

ವಲ್ಲಭನ ಮಂಡಲದಲ್ಲಿಗೈದಿಸಿ ಪಚಾರಿಸಿ ಜರೆದು ಕೂಡೆ ಬೊಬ್ಬಿರಿದನು॥೨೦॥ 

ಪ್ರತಿಪದಾರ್ಥ :- 

ಪೂರ್ವದೊಳು = ಪೂರ್ವಕಾಲದಲ್ಲಿ, ಅಡರ್ದ= ಆಗಸದವರೆಗೂ ಹೋಗಿದ್ದ, ಸಂಪಾತಿ= ಸಂಪಾತಿ ಎನ್ನುವ ಹದ್ದುಗಳ ರಾಜ, ಗರಿ=ರೆಕ್ಕೆಗಳು, ಸೀದು=ಬೆಂದುಹೋಗಿ, ಇಳೆಗೆ= ಭೂಮಿಯಮೇಲೆ, ಬೀಳುವಂತೆ=ಬೀಳುವ ತೆರನಾಗಿ, ಪಾರ್ಥಿ= ಅರ್ಜುನ ಕುವರನು, ರಭಸದಿಂ= ಬಹು ವೇಗವಾಗಿ, ನಭದೊಳು= ಆಗಸದಲ್ಲಿರುವ, ಅತ್ಯುಗ್ರ= ಬಹು ಕಠಿಣವಾದ, ದಿವಾಕರ=ರವಿಯ, ಪ್ರಭೆಯಿಂದ= ಜ್ಯೋತಿಯಿಂದ,ರಥಂ= ತನ್ನ ತೇರು, ಉರಿಯೆ= ಬೆಂದುಹೋಗಲು, ಉರ್ವಿಗೆ= ಭೂಮಿಯಮೇಲೆ ಬಿದ್ದನು= ಬಿದ್ದುಬಿಟ್ಟನು,ಕರ್ಣಜಂ= ಕರ್ಣನಂದನನು, ತ್ರಿಭುವನಕೆ= ಸ್ವರ್ಗ,ಮರ್ತ್ಯ, ಪಾತಾಳಗ- 

ಳಿಗೂ,ಪೊಸತಾಗೆ= ಹೊಸದಾಗಿ ಕಾಣುವಂತೆ, ಮತ್ತೆ=ಪುನಃ, ರಿಪು=ವೈರಿಯಾದ,ಸುಭಟನಂ= ವೀರಾಗ್ರಣಿಯಾದ ಪಾರ್ಥಜನನ್ನು,  ಮೂರು ಬಾಣದೊಳು= ಮೂರು ಬಾಣಗಳಿಂದ, ಎಚ್ಚು= ಹೊಡೆದು, ದಿವಸ= ಹಗಲಿಗೆ, ವಲ್ಲಭನ= ಸೂರ್ಯನ, ಮಂಡಲದಲ್ಲಿಗೆ= ಮಂಡಲದ ಬಳಿಗೆ, ಪಚಾರಿಸಿ = ಸೆಳೆದುಕೊಂಡು ಹೋಗಿ, ಜರೆದು ತಿರಸ್ಕರಿಸಿ, ಕೂಡೆ= ಒಡನೆಯೇ,  ಬೊಬ್ಬಿರಿದನು= ಗರ್ಜಿಸಿದನು. 

ತಾತ್ಪರ್ಯ:- 

ಅ॥ವಿ॥ ಸಂಪಾತಿಯ ಕಥೆ:- ಪೂರ್ವದಲ್ಲಿ ಸಂಪಾತಿ, ಜಟಾಯು ಎಂಬೀರ್ವರು ಗೃಧ್ರರಾಜರಾದ ಅಣ್ಣತಮ್ಮಂದಿರು 

ಸೂರ್ಯಮಂಡಲದವರೆಗೂ ಯಾರು ಹಾರಿಹೋಗುವರೊ ಅವರೇ ಸಮರ್ಥರೆಂದು ಕ್ರೂರಶಪಥವನ್ನು ಮಾಡಿಕೊಂಡು ಅಂತರಿಕ್ಷದಲ್ಲಿ ದೂರದೂರದವರೆಗೂ ಹಾರಿ ಸೂರ್ಯಮಂಡಲದ ಹತ್ತಿರ ಹತ್ತಿರಕ್ಕೆ ಹೋಗುತ್ತಾ ಸೂರ್ಯನ ತಾಪವನ್ನು ತಡೆಯಲಾರದೆ ರೆಕ್ಕೆಯು ಸುಟ್ಟು ಇಬ್ಬರೂ ಕೆಳಗೆ ಬಿದ್ದುಬಿಟ್ಟರು, ಶ್ರಿರಾಮನ ಪತ್ನಿಯೂ ಮಹಾಪತಿವ್ರತೆಯೂ ಆದ ಜಾನಕಿಯನ್ನು ಹುಡುಕುವುದರಲ್ಲಿ ಸಹಾಯಕರಾಗಿ ಇವರೀರ್ವರೂ ರಾಮಚಂದ್ರನ ಅನುಗ್ರಹದಿಂದ ಮುಕ್ತರಾದರು. 


ರಥಸಮೇತ ಬಭ್ರುವಾಹನನ್ನು ನಭಕ್ಕೆ ಹಾರಿಸಿದಾಗ ಕ್ರೂರವಾದ ಸೂರ್ಯರಶ್ಮಿಗಳಿಂದ ಬಭ್ರುವಾಹನನ ರಥವು ಭಸ್ಮವಾಗಿ ನೆಲಕ್ಕೆ ಬಿದ್ದುಹೋಯಿತು. ಕೂಡಲೆ ಪೂರ್ವದಲ್ಲಿ ಗರಿಗಳನ್ನು ಕಳೆದುಕೊಂಡ ಸಂಪಾತಿಯು ಸೂರ್ಯಮಂಡಲದಿಂದ ಭೂಮಂಡಲಕ್ಕೆ ಬಿದ್ದಂತೆ ವಿರಥನಾದ ಬಭ್ರುವಾಹನನು ಮಹಾ ರಭಸದಿಂದ ಕೆಳಕ್ಕೆ ಬಿದ್ದು ಬಿಟ್ಟನು.ಆಗ ವೃಷಕೇತುವು ಬಭ್ರುವಾಹನನ ಮೇಲೆ ಮತ್ತೆ ಮೂರು ದಿವ್ಯ ಬಾಣಗಳನ್ನು ಬಿಡಲು ಅವು ಬಭ್ರುವಾಹನನನ್ನು ಸೂರ್ಯಮಂಡಲದವ-

ರೆಗೂ, ಪುನಃ ಎತ್ತಿಕೊಂಡು ಹೋದುದನ್ನು ವೃಷಧ್ವಜನು ನೋಡಿ, ಬಭ್ರುವಾಹನನನ್ನು ಹೀಯಾಳಿಸುತ್ತಾ ಸಿಂಹನಾದವನ್ನು ಮಾಡಿದನು. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ