ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮಾರ್ಚ್ 24, 2019

ತಿಮ್ಮಣ್ಣ ಕೃಷ್ಣರಾಯ ಭಾರತ ಕಥಾಮಂಜರಿ

ತಿಮ್ಮಣ್ಣ ಕವೀಂದ್ರ ವಿರಚಿತ ಕೃಷ್ಣ ರಾಯ ಭಾರತ ಕಥಾಮಂಜರಿ

“ ಕರ್ಣಾಟ ಕೃಷ್ಣರಾಯ ಭಾರತ ಕಥಾಮಂಜರಿ” ಯನ್ನು ಬರೆದವನು ತಿಮ್ಮಣ್ಣ ಕವಿ ಇವನ ತಂದೆ ಪದವಾಕ್ಯಪ್ರಮಾಣಜ್ಞನಾದ ಭಾನುಕವಿ. ಇವರ ಗೋತ್ರ ಭಾರದ್ವಾಜ. ಕವಿ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದನು. ಕವಿಯ ಪ್ರತಿಭೆಯನ್ನು ಅರಿತ ರಾಜ ವಿಶ್ವಾಸಗೌರವಗಳಿಂದ ಸತ್ಕರಿಸಿ, “ ಲೇಸೆನಿಸಿ ಮೊದಲಾ ಕುಮಾರ।ವ್ಯಾಸ ದಶಪರ್ವಗಳ ಹೇಳಿದ। ಭಾಸುರವಿದೆಂದೆನಿಸಿ ಭಾರತದುಳಿದ ಪರ್ವಗಳ। ನೀ ಸಕಲ ಜಗ ಮೆಚ್ಚುವಂತೆ ವಿ। ಲಾಸದಲಿ ಪೇಳು…” ಎಂದು ಉಪದೇಶಿಸಿದನು. ರಾಜ ಹೇಳಿದ ಮಾತನ್ನು ಭಕ್ತಿಯಿಂದ ಸ್ವೀಕರಿಸಿ ಕಡೆಯ ಭಾರತ ಕಥೆಯನ್ನು ವಿದ್ವಜ್ಜನರು ಸಂತೋಷಿಸುವಂತೆ ರಚೀಸಿದನು.

ಸಂಸ್ಕೃತ ಮಹಾಭಾರತ ಹದಿನೆಂಟು ಪರ್ವಗಳಿಂದ ಕೂಡಿದೆ. ಆ ಮಹಾಭಾರತದ ಕಥೆ ಪಾಂಡವರ ಜನನದಿಂದ ಹಿಡಿದು ಮರಣದವರೆಗಿನ ವ್ಯಾಪಾರವನ್ನು ಒಳಗೊಂಡಿದೆ. ಧರ್ಮರಾಯ ಸಶರೀರನಾಗಿ ಸ್ವರ್ಗಕ್ಕೆ ಹೋಗಿ ತನ್ನ ಸೋದರರ ಬಂಧುಗಳ ಗತ್ಯಂತರವನ್ನು ಕಂಡು, ಇದೊಂದು ಪರಮಾತ್ಮ ಆಡಿಸಿದ ನಾಟಕ. ಅದರಲ್ಲಿ ತಾವೆಲ್ಲ ಪಾತ್ರಧಾರಗಳೆಂಬ ಜ್ಞಾನವನ್ನು ಪಡೆದು ತನ್ನ ಮೂಲಾಂಶನಾದ ಧರ್ಮನಲ್ಲಿ ಐಕ್ಯವಾದ ಅಂಶದಿಂದ ಈ ಬೃಹತ್ಕಥೆ ಮುಗಿಯುತ್ತದೆ. ಈ ಕಥೆ ಕಾವ್ಯವಾಗಿ, ಇತಿಹಾಸವಾಗಿ, ಪುರಾಣವಾಗಿ, ಭಾರತೀಯರಲ್ಲಿ ಪ್ರಚಾರದಲ್ಲಿದೆ.
ಕನ್ನಡದಲ್ಲಿ “ ಕಥೆಯಮೆಯ್ಗಡಲೀಯದೆ” ಸಮಗ್ರ ಭಾರತವಾಗಿ ಹೇಳಿ ಆದಿ ಕವಿ ಎನ್ನಿಸಿಕೊಂಡಿದ್ದಾನೆ ಪಂಪ. ಕುಮಾರವ್ಯಾಸ ತನ್ನ ಪ್ರತಿಭಾಮೂಷೆಯಲ್ಲಿ ಅಪ್ಪಟ ಬಂಗಾರವಾಗಿಸಿದ್ದಾನೆ. ಈ ಕಾವ್ಯವನ್ನು ಹೇಡಿ ಓದಿದರೆ ಉತ್ತರನಂತೆ ಶೂರನಾಗುತ್ತಾನೆ ಇಂಥ ಕಾವ್ಯ ಪೂರ್ಣವಾಗಿಲ್ಲ ಎಂಬ ಭಾವನೆ ಬಹುಜನಗಳಲ್ಲಿತ್ತು. ಕುಮಾರವ್ಯಾಸನ ಭಾರತ ಹತ್ತು ಪರ್ವಕ್ಕೆ ಮುಗಿದುಹೋಗುತ್ತದೆ. ಮಹಾಭಾರತದ ಇನ್ನು ಎಂಟು ಪರ್ವಗಳು ಕನ್ನಡಕ್ಕೆ ಬರಲಿಲ್ಲವಲ್ಲ,ಎಂಬ ಕಲ್ಪನೆಯಿಂದ ಈ ಕಾವ್ಯವನ್ನು ಪೂರ್ಣಗೊಳಿಸಬೇಕು ಎಂಬ ಅನಿಸಿಕೆ ಕೃಷ್ಣದೇವರಾಯನ ಮನಸ್ಸಿಗೂ ಬಂದಿತು. ತನ್ನ ಆಸ್ಥಾನದಲ್ಲಿ ಘಟಾನುಘಟಿಕ ಕವಿಗಳಿದ್ದರು. ಕನ್ನಡದ ಕವಿ ತಿಮ್ಮಣ್ಣನನ್ನು ಪ್ರೋತ್ಸಾಹಿಸಿ ಆತನಿಂದ ಉಳಿದ ಪರ್ವಗಳನ್ನು ಬರಸಿದ.

ಶ್ರೀಲಲನೆಯುರುಕುಚ ಯುಗಂಗಳ।
ಮೇಲೆಸೆವ ಕುಂಕುಮವೆ ಪತ್ತಿ
ವಿಶಾಲ ವಕ್ಷದ ಸಂಜೆವೆರಸಿದ ರಜನಿಯಂತೆಸೆಯೆ॥
ಲೀಲೆಯಲಿ ನಿಜಭಕ್ತ ಜನಕನು
ಕೂಲನೆನಿಸುವ ವೆಂಕಟೇಶನು ।
ಪಾಲೆಸಲಿ ನರಸೇಂದ್ರನಾತ್ಮಜ ಕೃಷ್ಣರಾಯನನು॥೧॥

ಶ್ರೀಮಹಿಮೆಯಿಹ ದಕ್ಷಿಣಾಂಗದಿ ।
ವಾಮಭಾಗವನಪ್ಪಿಯಾತ್ಮಾ।
ರಾಮಸುಖಿಯೆಂದೆನಿಪ ಪಂಪಾಪತಿವಿರೂಪಾಕ್ಷ ॥
ಕಾಮಿತಾರ್ಥವ ಕೊಡುತ ಬಹಳ ।
ಪ್ರೇಮದಲಿ ರಕ್ಷಿಸಲಿ ನೃಪಸು।
ತ್ರಾಮನರಸಮಹೀಶನಂದನ ಕೃಷ್ಣರಾಯನನು॥೨॥

ವರ ರಜತ ಹಿಮಗಿರಿಗಳನು ಮೊದಲೆ।
ರಡನಾ ನಿರ್ಮಿಸಿದೆನಿವು ಬೇ।
ರೆರಡು ಜನಿಸಿವೆಯೆಂದು ವಾಣಿಸ್ತನಗಳನು ನೋಡಿ ॥
ಇರದೆ ನಲಿವ ವಿರಿಂಚನೀಯಲಿ ।
ಕರುಣದಲಿ ದೀರ್ಘಾಯುವನು ವರ।
ನರಸ ನರಪಾಲಕ ಕುಮಾರಕ ಕೃಷ್ಣರಾಯಗೆ ॥ ೩॥

ಹರಿಯೆದೆಯದೃವಳಿಗೆ ಹರಿವಿ।
ಷ್ಟರವದೆನಿಸಿತು ಸಕಲ ಲೋಕೋ।
ತ್ಕರಗಳಾವಳಪಾಂಗ ಪಾತದಿ ಜೀವಿಸುತ್ತಿಹುದು॥
ಪರಮಶಕ್ತಿಯೆನುತ್ತ ಸುರಮುನಿ।
ವರರು ನುತಿಸುವರಾವವಳನಾ।
ಸಿರಿ ನೃಸಿಂಹನ ಕೃಷ್ಣರಾಯನ ಮನೆಯೊಳೊಲಿದಿರಲಿ ॥ ೪॥

ಶ್ರೀ ರುಚಿರ ಕಟ ದಾನ ಪಾದೋ ।
ಧಾರೆಗಳ ತನ್ನೀಕ್ಷಣದ ಕರು ।
ಣಾರಸವು ಗೆಲಲೋಲಗಿಪ ಗಂಧರೂವಸಂಚಯದ ॥
ಚಾರು ಗಾನದ ಮದಕೆರಗಿದಳಿ ।
ನಾರಿಯರ ರವ ಗೆಲಲು ರಂಜಿಪ।
ವಾರಣಾನನ ಗಣಪ ನಿರ್ವಿಘ್ನತೆಯನೀಗೆಮಗೆ ॥ ೫॥

ಅರುಣನುದಯದ ಹಿಂದೆ ಸೂರ್ಯನ ।
ಪರಮತೇಜದ ಮಹಿಮೆ ।
ಯಂದದಿನಿರದೆ ವಿದ್ಯುತ್ ಪ್ರಭೆಯ ಹಿಂದುದಯಿಸಿದ ಪವಿಯಂತೆ ॥
ಅರಿಗಳೆದೆ ಜರ್ಝರಿತವಾಗು।
ತ್ತಿರಲು ತಂದೆಯ ಶೌರ್ಯ ಸಮನಂ।
ತರದೊಳೊಪ್ಪುವ ಕೃಷ್ಣರಾಯನ ಮಹಿಮೆ ರಂಜಿಸಿತು ॥೧೮॥

ಪೂತು ಭಾರದ್ವಾಜಕುಲ ವಿ।
ಖ್ಯಾತ ಪದವಾಕ್ಯಪ್ರಮಾಣ ।
ಜ್ಞಾತಿಶಯ ವಿಖ್ಯಾತ ಭಾನುಕವೀಂದ್ರನಾತ್ಮಜನ ॥
ಪ್ರೀತಿಯಲಿ ತಿಮ್ಮಣನ ಕರದು ವಿ।
ನೂತನಾಧಿಕವಸ್ತ್ರಭೂಷಾ।
ವ್ರಾತಗಳ ಕೊಟ್ಟೊಡನೆ ಮನ್ನಿಸಿ ಬಳಿಕಲಿಂತೆಂದ॥೨೫॥

ಲೇಸೆನಿಸಿ ಮೊದಲಾ ಕುಮಾರ।
ವ್ಯಾಸ ದಶಪರ್ವಗಳ ಹೇಳಿದ।
ಭಾಸುರವಿದೆಂದೆನಿಸಿ ಭಾರತದುಳಿದ ಪರ್ವಗಳ ॥
ನೀ ಸಕಲಜಗ ಮೆಚ್ಚುವಂತೆ ವಿ।
ಲೃಸದಲಿ ಪೇಳೆಂದೆನುತಲುಪ ।
ದೇಶಿಸಿದ ನರಸೇಂದ್ರನಾತ್ಮಜ ಕೃಷ್ಣರಾಯನೃಪ॥೨೬॥

ಸುರನದಿಯ ಯಮುನಾತರಂಗಿಣಿ ।
ಬೆರಸಿ ಹರಿವಂದದಲಿ ಕವಿಕುಂ।
ಜರಕುಮಾರವ್ಯಾಸನುರುವಾಗ್ಲಹರುಯೊಡನೀಗ ॥
ಸರಿಯೆನಿಸಿ ನೀ ಕೂಡಿಸೈ ಸುರು।
ಚಿರಭವತ್ಕವಿತಾಪ್ರವಾಹವ।
ಪರಮಪುಣ್ಯನಿಧಾನವಹುದೆನುತಲಿ ನಿರೂಪಿಸಿದ॥೨೮॥

ಸ್ತ್ರೀಪರ್ವ
ಮೊದಲನೆಯ ಸಂಧಿ

ಸೂಚನೆ॥ ಹೃದಯದೊಳು ಕಳವಳಿಸಿ ಸುತಶೋ।
             ಕದಲಿ ಧೃತರಾಷ್ಟ್ರಾವನಿಪನಿರೆ।
             ವಿದುರಪಾರಾಶರರು ತತ್ವವನಂದು ಪೇಳಿದರು॥

ಕದನಮುಖದಲಿ  ಕುರುಕುಳವನುರೆ ।
ಸದೆಬಡಿದು ಪಾಂಡವರು ಕೃಷ್ಣನ ।
ಪದವನೋಲೈಸಿದರುಯೆಂದರುಹಿದರುಲಾಬಳಿಕ॥
ಹೃದಯದೊಳು ಕಡುಮರುಗಿ ಗದಗದ।
ಮೊದಲಿ ಧೃತರಾಷ್ಟ್ರಾವನಿಪನು ।
ಫಪದಪಳಿದು ಸುತರಳಿವನಾಲಿಸಿಯೆಂತು ಸೈರೀಸೀದ॥೧॥

ಆಲಿಸೆಲೆ ಜನಮೇಜಯ ಕ್ಷಿತಿ।
ಪಾಲಕನೆ ದುರ್ಯೋಧನನ ನಿಜ
ಭಾಳ ಲಿಪಿಯನು ವಿಧಿಯು ತೊಡೆದುದನಂಧನೋಪನೊಡನೆ ॥
ಕಾಳಗದ ಸುದ್ಧಿಯನು ಸಂಜಯ।
ಪೇಳೆಯಂಧನೃಪಾಲ ಶೋಕದಿ।
ಬಾಳೆ ಮುರಿದಿಳೆಗುರುಳ್ವ ತೆರದಲಿ ಬಿದ್ದು ಮೈಮರೆದ॥೩॥

ಪತಿಯೆಡೆಗೆ ತಾ ಬಂದು ಸಂತೈ।
ಸುತ ಪ್ರಿಯೋಕ್ತಿಗಳಿಂದ ಚರಣದೊ।
ಳತಿವಿನಯಭಯಭರಿತಭಕ್ತಿಯೊಳಗ ಪೊಡಮಟ್ಟು॥
ಮತಿವಿಕಲವಾಗುವರೆ ನಿಮಗೀ ।
ಕ್ಷಿತಿಯೊಳಾವುದು ಕೊರತೆಯೆಂದೀ ।
ಹಿತವಚನವಾಡುತ್ತಲುಪಚರಿಸಿದಳು ಸುಬಲಸುತೆ॥೬॥

ಮಗನೆ ನಿನ್ನನು ಪಡೆದುದಕೆಯೆನ।
ಗೊಗುಮಿಗೆಯ ಶೋಕವನು ಮಾಡಿದೆ।
ಹಗರಣವು ಭೀಮಾದಿಗಳಿಗೆನ್ನಲ್ಲಿ ಬಲಿದುದಲಾ॥
ವಿಗತನೇತ್ರಗೆ ಪೈತೃಕವನೀ ।
ನೊಗೆದು ಮಾಡುವಿಯೆಂದಿರಲು ಯೀ।
ಬಗೆಗೆ ನಿನಗೆಯೆ ನಾನು ಶ್ರಾದ್ಧವ ಮಾಡುವ ವೊಲಾಯ್ತು॥೮॥

ಆವ ಜನ್ಮದಿ ನಾನು ಪರಸುತ ।
ಜೀವಿತಾಂತವನೆಸಗಿದೆನೊ ನಾ।
ನಾವ ಪಾಪವ ಮಾಡಿದೆನೊ ಆ ಫಲವುಯಿಂದೆನಗೆ ॥
ಓವಿ ಬಂದೊದಗಿತುಶಿವಮಹಾ।
ದೇವ ನಾನಿದನೆಂತು ಸೈರಿಪೆ।
ಕೇವಲಂಧಕನಾದಕಟಕಟೆಂದು ಮರುಗಿದನು॥೧೨॥

ಎಂದು ನಾನಾವಿಧದ ಶೋಕಾ ।
ಕ್ರಂದನಗಳಿಂದೆಯ್ದೆ ಭಾಷಿಪ ।
ಮಂದಿಗಳ ಮಾರ್ಗದೊಳು ನೋಡಿಯು  ನೋಡದಂದದಲೀ॥
ಬಂದು ಕುರುಕುಲಸಾರ್ವಭೌಮನ ।
ಮಂದಿರದ ಬಾಗಿಲಲಿ ರಥವಿಳಿ ।
ದಂದು ವಿದುರನು ರಾಯನಿರುವರ ಮನೆಗೆ ನಡೆತಂದ॥೧೭॥

ಎಲ್ಲಿ ನೋಡಲು ರೋದನ ಪೆ ।
ಚ್ಚೆಲ್ಲಿ ನೋಡಿದರಲ್ಲಿ ಚಿಂತಾ ।
ಭುಲ್ಲವವುಯೆಲ್ಲೆಲ್ಲಿ ನೋಡಿದೊಡೆ ಸಂತಾಪ॥
ಎಲ್ಲಿ ನೋಡಲು ಮಡಿದ ವೀರರ ।
ವಲ್ಲಭೆಯರಾರ್ತಧ್ವನಿಯು ನೆರೆ।
ಚೊಲ್ಲವಾಗಿರೆ ಕಂಡು ಬೆದರುತ ಬಂದನಾ ವಿದುರ॥೧೮॥

ಏನಿದೀಪರಿ ದುಗುಡ ದುಮ್ಮಳ ।
ಮಾನವಾಧೀಶ್ವರನೆ ನಿಮ್ಮೊಳು।
ಜ್ಞಾನವನು ನೆರೆಯರಿತು ನೋಡಲು ಸುತರದಾರೆಂದು ॥
ತಾನದಾರೀ ಭುವನವೇನೆಂ।
ದೀ ನಿದಾನವನರಿತಡಲ್ಲದೆ ।
ತಾನು ನಾನೆಂಬುದು ಬಯಲಭ್ರಾಂತಿಯಾಗಿಹುದು॥೨೦॥

ಕೇಳರಸ ಜೀವಿಗಳು ಸಂಸೃತಿ ।
ಕೋಳದೊಳಗುರೆ ಸಿಲುಕಿ ಮರುಳಿಗೆ ।
ಕೋಳುವೋಗುವರೈಸೆಸುಖವಿನಿತಿಲ್ಲವರಸಿದೊಡೆ ॥
ಭಾಳದಲಿ ವಿಧಿ ಬರೆದ ಬರಹವ।
ದಾಳುವುದು ತನ್ನಿಚ್ಛೆಯಿಂದದ ।
ಮೇಳವಿಸಿ ಜೀವಾತ್ಮ ಪರತಂತ್ರದೊಳು ವರ್ತಿಪನು॥೨೨॥

ಅರಸ ಕೇಳ್ ಪೂರ್ವದಲಿ ದುರುಳನು।
ವರಹಿರಣ್ಯಕನೆಂಬ ದೈತ್ಯನು ।
ಧರಣಿಯನು ಕದ್ದೊಯ್ಯೆ ಮತ್ಸರ ಬಲಿದು ಹರಿಯೊಡನೆ॥
ಧರಣಿವಾರಾಹಾಖ್ಯ ರೂಪವ ।
ಧರಿಸಿ ಹರಿಯಾತನನು ಕಾಲನ ।
ಪುರಿಗೆ ಕಳುಹಲ್ಕವನ ತಾಯ್ಮಮ್ಮಲಿಸಿ ಮರುಗಿದಳು॥೨೪॥

ಆತನನು ಸಂಜಾತನತಿ ವಿ।
ಖ್ಯಾತನಪ್ರತಿಮಲ್ಲನಣ್ಣನ ।
ಘಾತಿಗೋಸುಗವಳಲುತಿಹ ತಾಯಂಘ್ರಿಗಭಿನಮಿಸಿ ॥
ಮಾತೆ ಕೇಳ್ ನೀನೀ ಪರಿಯಲಳ।
ಲೇತಕಾ ಮೃತ ಮನುಜಬಂಧು ।
ವ್ರಾತ ಯಮಸಂವಾದವುಂಟದನೊರೆವೆ ಕೇಳೆಂದ॥೨೫॥

ಸುರನದಿಯ ತೀರದಲಿ ಒಬ್ಬನು।
ಧರಣಿಸುರನಿರುತಿಹನು ನಿಜಸತಿ ।
ವೆರಸಿಯಾತಗೆ ಪಲವುದಿನವಾದರೆಯು ತನುಭವರು॥
ದುರುತವಶದಿಂದುದಿಸದಿರಲಾ।
ಹರಿಯ ಭಜಿಸಿದನಾತನತಿ ನಿ।
ಷ್ಠುರತಪಸ್ಸಂಜಾತ ಕಾಯಕ್ಲೇಶದುಬ್ಬಿನಲಿ॥೨೬॥

ಎಂದು ಕಪಟದಿ ಪೇಳಲಾ ಗೋ।
ವಿಂದನಾಗಲು ವಿಪ್ರನಿವ ಹರಿ।
ಯೆಂದು ದೃಢಮತಿಯಿಂದ ನಿಶ್ಚಯಿಸುತ್ತಲಿದಿರೆದ್ದು ॥
ಇಂದಿರೇಶನೆ ಪುತ್ರಫಲವನು ।
ಯಿಂದೆನಗೆ ಕರುಣಿಸುವುದೆನುತಲಾ ।
ನಂದ ವಿನಯಾವನತನಾಗುತ ನಮಿಸಿದನು ಹರಿಗೆ॥೨೮॥

ದೇವ ನಿಮ್ಮನು ಭಜಿಸಿ ಪುತ್ರನ ।
ನೀವುದೆಂದಾನಿರೆ ತಪವನು ।
ಓವಿ ಮಾಡಿದೆನದಕೆ ಪುತ್ರನ ಕೊಡದೆ ನೀನೀಗ॥
ಜೀವತಾಂತವನೈದಿ ಪರಮಪ।
ದಾವಲಂಬಕನಾಗೆನುತ ಪೇ ।
ಳ್ವೀವಿಚಿತ್ರವಿದೇನು ತನಗುಸುರೆಂದು ಕೇಳಿದನು॥

ಆದಡಾಗಲಿ ದೇವಯೆನ್ನೊಳ।
ಗಾದ ವಾಂಛೆಯ ಸಲಿಸುಯೆಂದ ।
ತ್ಯಾದರದೊಳು ನಮ್ರನಾಗುತ ನುಡಿಯೆ ದೈನ್ಯದಲಿ॥
ವೇದವೇದ್ಯನು ಕೊಟ್ಟೆನೆನ್ನುತ।
ಪೋದನಲ್ಲಿಂ ಕೆಲವು ದಿನಗಳಿ।
ಗಾದುದಾತನ ಸತಿಗೆ ಗರ್ಭವು ಬಂಧು ಜನ ನಲಿಯೆ॥೩೩॥

ತುಂಬೆ ನವಮಾಸಗಳು ಆ ಶಶಿ।
ಬಿಂಬದಾನನೆ ಪುತ್ರನನು ಬಹು।
ಸಂಭ್ರಮದಿ ಜನಿಯಸಿದಳೆಂಬುದ ಕೇಳಿ ಬಂಧು ಜನ॥
ಅಂಬುಜಾಕ್ಷನ ಕರುಣದಿಂದೀ।
ಶಂಬರಾರಿಯ ಚೆಲ್ವ ಕುವರನು।
ಕಂಬುಕಂಠನುಯೆನುತ ನಲಿನಲಿದಾಡಿ ಪರಸಿದರು॥ ೩೪॥

ಬಳಿಕ ದಿನದಿನಗಳಲಿ ಶಿಶುವನು ।
ಬೆಳಸಿ ತಾಯ್ತಂದಗಳು ಮೋಹವ।
ತಳೆದು ಪಾಲ್ಬೆಣ್ಣೆಗಳನುಣಿಸುತ ಮೂರುವತ್ಸರವ॥
ಕಳೆದು ಹುಟ್ಟಿದ ದಿನದ ಸಂಭ್ರಮ ।
ಗಳನು ರಚಿಸುವ ಸಮಯಕಾತನ।
ನಿಳಯದೊಳಗಿದ್ದೊಂದು ಸರ್ಪನು ಕಚ್ಚಿತರ್ಭಕನ॥೩೫॥

ಕಡುಮರುಗಿಯಳಲುತ ಬಾಂಧವ ।
ಗಡಣ ಸಹಿತಲಿ  ಕಾಡುಪುರಕಾ ।
ಮಡಿದವನ ಕೊಂಡೊಯ್ದು ದಹನೋದ್ಯುಕ್ತರಾಗುತಲೆ॥
ತೊಡೆಯ ಮೇಲಾ ಶವವನಿಟ್ಟತಿ ।
ಜಡತನದಿ ಗೋಳಿಡುವ ಸಮಯಕೆ ।
ಮೃಡನನುಜ್ಞೆಯನಾಂತು ಬಂದನು ಕಾಲನಾಯೆಡೆಗೆ॥೩೭॥

ತನ್ನ ಕರ್ಮವಿಪಾಕದಿಂದು ।
ತ್ಪನ್ನವಾದ ಫಲಾನುಭೂತಿಯ ।
ಮುನ್ನವೇ ಪರಮೇಷ್ಠಿ ಪಣೆಯಲಿ ಬರದಿಹನು ನರಗೆ॥
ಇನ್ನದನು ಪರಿಹರಿಸಕೊಂಬುದ।
ಕನ್ಯರಿಂದಳವಲ್ಲ ವಿಧಿಹರ।
ಪನ್ನಗಾರಿಧ್ವಜರಿಗಾದರು ಬಿಡದು ಪೂರ್ವಕೃತ॥೩೯॥

ಎನಿತು ದಿನವಿರ್ದೊಡೆಯು ಮಹಿಯೊಳು ।
ತನಗೆ ಶಾಶ್ವತವಿಲ್ಲ ವಿದನರಿ ।
ದನುನಯದಿ ನೀವೀಗ ಮೃತ ತನುಭವ ಸಂಸ್ಕರಿಸಿ ॥
ಮನೆಗೆ ಪೋಪುದೆನುತ್ತಲಾಶಮ।
ನನು ನುಡಿದುಯಾಕ್ಷಣದೊಳಲ್ಲಿಯೆ।
ಜನಕೆ ಗೋಚರವಾಗದಂತರ್ಧಾನಪರನಾದ ॥೪೨॥

ಬಳಿಕ ತಾಯ್ತಂದೆಗಳು ವಿರತಿಯು।
ಮೊಳೆಯೆ ಮೃತಪುತ್ರಕನ ಪಾವಕ।
ನೊಳಗೆ ಸಂಸ್ಕಾರವನು ಮಾಡಿ ಮಹಾವಿವೇಕದಲಿ॥
ನಿಳಯವನು ಸಾರಿದರುಯೆಂದಾ ।
ಖಳಹಿರಣ್ಯಕಶಿಪುವು ಮಾತೆಯ ।
ಕಳವಳವ ನಿಲಿಸಿದನು ವೈರಾಗ್ಯವನು ಬಳಸಿದನು॥೪೩॥

ಅರಸನನು ಪಿಡಿದೆತ್ತಿ ಕಂಬನಿ।
ಯೊರಸಿ ತನ್ನಯ ಕರಸರೋಜದಿ ।
ಪರಿಜನಗಳೆಲ್ಲರನು ಪಲವಂದದಲಿ ಸಂತಯಿಸಿ ॥
ನೆರೆವ ಬಂಧುಸಮಾಜವನು ಕಂ।
ಡುರುದಯಾಪರನಾದೀಯಂಧಕ।
ಧರಣಿಪತಿಗಾ ಕೃಷ್ಣ ಮುನಿಯಾದರದಿ ಬೋಧಿಸಿದ॥೪೬॥

ರಾಯ ಕೇಳೆನ್ನಾಣೆ ನಿನಗಿಂ ।
ತಾಯಸವು ಬಂದೊದಗಿತೆಂದು ನ।
ವಾಯತದ ಖೇದಕ್ಕೆಯೊಡಲನು ಕೊಡುವದೇಕಿನ್ನು॥
ಮಾಯಕೌರವಾದಿಗಳು ರಣ।
ದಾಯಸದಿ ತಂತಮ್ಮ ಮಾನುಷ ।
ಕಾಯಗಳ ಕಳೆದೈದಿದರೈ ಸುರಲೋಕರಾಜ್ಯಕ್ಕೆ॥೪೭॥

ಪಡೆದೆ ನೀ ನೂರ್ವರನು ನಿನ್ನಯ।
ವೊಡಲೊಳಗೆಯೆಂದದಕೆ ದುಃಖಿಪೆ।
ಕಡೆಗೆ ಬದುಕುವರಾರು ಭುವನದಿ ಬಯಲ ಭ್ರಾಂತಿಯದು॥
ಬಿಡು ವಿವೇಕದಿ ಮನಕೆ ಧೈರ್ಯವ ।
ಕೊಡು ನಿಜಾರ್ಜಿತ ಸುಕೃತದುಷ್ಕೃತ।
ಕೊಡನೆ ಸುಖದುಃಖಗಳ ಪಡಬೇಕಾರಿಗಾದರನು॥೪೮॥

ಜನಿಸುವೆಡೆ ತಾನೊಬ್ಬ ಕಡೆಯಲಿ ।
ಅನುಗತದ ಕರ್ಮದಲಿ ಮಡಿಯುವ।
ದಿನದೊಳಗೆ ತಾನೊಬ್ಬನೀ ಮಧ್ಯದಲಿ ಬಂಧುಜನ॥
ಮನದ ಭ್ರಾಂತಿಯನೈದಿದಾತಂ ।
ಗನುವಹುದು ತಾನೈಸೆ ಲೋಕದ ।
ಜನಕೆಶಜನನವು ಮರಣವೆಂಬುದು ಕರ್ಮಪರಿಪಾಕ॥೪೯॥

ನರನು ನಾನಾರೂಪಗಳ ತಾ।
ಧರಿಸಿ ಬಹುತರ ನಾಮಗಳನನು।
ಕರಿಸಿ ನಾಟ್ಯವನಾಡುವಂದದಿ ದೇಹಿಯಾದವನು॥
ಪರಿಪರಿ ಯಜ್ಞಗಳ ಬಳಸುತ ।
ದುರಿತವೆಚ್ಚರೆ ಜನನಮೃತಿಗಳ।
ಪರಿವಿಡಿಯಲೋಲಾಡುತಿರ್ಪನು ಕಾಲಗತಿಯಿಂದ॥೫೦॥

ಕಾಲನಾಗಲಿ ಕಾಲದಗ್ಗದ ।
ಶೂಲಧರ ತಾನಾದಡಾಗಲಿ ।
ಶ್ರೀಲಲನೆಯಧಿಪತಿಯದಾಗಲಿ ಸಕಲನಿರೂಜರರಾ॥
ಮೂಲಪುರುಷನದಾದಡಾಗಲಿ ।
ಕಾಲವಶವನು ಕಲೆಯಲಮ್ಮದೆ।
ಕೋಳುವೋಗುತಲಿಹರು ಮನುಜರ ಪಾಡದಿನ್ನೇನು॥೫೧॥

ಜಡತನದಿ ದುಷ್ಕೃತಗಳ ತಾ ।
ನಡೆಸಿ ದುರ್ಯೋಧನನು ತಾನೇ।
ಮಡಿದನಲ್ಲದೆ ಮಡಿಸಿದವರುಂಟೆ ಜಗತ್ತಿನಲಿ॥
ಪೊಡವಿಪತಿಗಳು ದುರುಳರಾಯನ ।
ನೆಡೆಬಿಡದೆ ಸೇವಿಸಿ ರಣಾಂಗದಿ ।
ಮಡಿದರೈ ಸಹವಾಸದೋಷವ ಹೊದ್ದದವರಾರು॥೫೨॥

ಜನಪ ಮುಂನಲಿ ಚಕ್ರವ್ಯೂಹದಿ ।
ಘನಪರಾಕ್ರಮಿಯಾದ ವಾಸವ।
ತನುಭವನ ಸುಕುಮಾರನಾದಭಿಮನ್ಯುವನು ರಣದಿ ॥
ತನತನಗೆ ಮುಂಕೊಂಡು ಕಪಟದ ।
ಜಿನುಗಿನಲಿ ಷಡುರಥರು ದುರ್ಯೋ ।
ಧನನ ಮತದೊಳು ನಿರ್ದಯತ್ವದಿ ಕೊಂದರೈ ಮುನ್ನ॥೫೭॥

ಅದನು ಕೇಳುತ ಧರ್ಮಜಾದಿಗ।
ಳೊದವಿದತಿದುಃಖದಿ ವಿವೇಕವ।
ಚದರಬಡಿದಳಲುತ ಸುಭದ್ರಾದ್ರೌಪತಿಯರೊಡನೆ ॥
ಪದಪಳಿದು ಘೋಳಿಡುವ ಸಮಯದಿ।
ಪದುಮನಾಭನು ಸಂತಯೆಸಿ ಪೇ।
ಳಿದ ಪುರಾತನ ಚರಿತೆಯಿಂದೈದಿದರು ಮನದನುವ॥೫೮॥

ಎಲೆ ಯುಧಿಷ್ಠಿರಜನಪ ನಾ ಮು।
ನ್ನಲಿ ಸಕಲವಿದ್ಯವನು ಕಲಿಯ।
ಲ್ಕಿಳೆಯೊಳಾವವನುತ್ತಮನು ಗುರುವಿಹನುಯೆಂದೆನುತ॥
ತೊಳಲಿ ಬಹುದೇಶಗಳ ಕಾಶಿಯ ।
ಪೊಳಲಸಾರ್ಧು ವಿಚಾರಿಸಲು ನಿ।
ರ್ಮಲನದೊಬ್ಬನು ದೊರಕಿದನು ಸಾಂದೀಪ ಭೂಸುರನು॥ ॥೬೩॥

ಆತನೊಳು ನಾನಾಖಿಳವಿದ್ಯಾ ।
ವ್ರಾತನು ಮಿಗೆ ಕಲುತು ಗುರುಗೆ ವಿ।
ನೀತನಾಗಿಯೆ ದಕ್ಷಿಣೆಯನೇನಾದರೆಯು ನಾನು॥
ಪ್ರೀತಿಯಿಂದಲೆ ಕೊಡುವೆನೆನಗದ ।
ನೋತು ಬೆಸವೇಳ್ಕೆಂದು ಪೇಳ ।
ಲ್ಕಾ ತಪೋನಿಧಿ ನಿನ್ನ ಭಕ್ತಿಯೆ ಸಾಕುಯೆನಗೆಂದ॥೬೪॥

ನಾನು ಬಳಿಕಾ ಗುರುವಿನುತ್ತಮ ।
ಮಾನಿನಿಯ ಬಳಿಗೈದಿ ಯಮ್ಮೆಯೆ।
ನೀನೆನಗೆ ಗುರುಪತ್ನಿ ಮಾತೆಯು ಗುರುವಿಗಾನೊಲಿದು ॥
ಏನನೀವೆನು ದಕ್ಷಿಣೆಯನದ ।
ನೀನೆ ಬೆಸಸೆಸಗೆನುತಲನುದಿನ ।
ದೀನಭಾವದಿ ನುಡಿಯುತಿರಲಂತೊಂದು ದಿವಸದಲಿ॥೬೫॥

ಆ ಸತಿಯು ನನ್ನ ಬಲಾತ್ಕೃತಿ।
ಗೋಸುಗವು ಪೇಳಿದಳು ಕೇಳೆಲೆ।
ವಾಸುದೇವನೆ ಎನ್ನ ಗರೂಭದಿ ಮೂವರುದಿಸಿದರು ॥
ಆ ಸುತರು ತಾವಳಿದರವರನು।
ಲೇಸೆನಲು ತಂದೆನಗೆ ನೀ ವಿ।
ಶ್ವಾಸದಿಂದಲಿಯಿತ್ತಡದು ಗುರುದಕ್ಷಿಣೆಯು ತಮಗೆ॥೬೬॥

ಎಂದು ಕಂಬನಿತಂದು ದುಃಖದೊ।
ಳಂದು ಪೇಳಿದೊಡಾನು ತತ್ ಕ್ಷಣ ।
ಸಂದು ಗುರುವಿನನುಜ್ಞೆಯನು ಹದಿನಾಲ್ಕು ಲೋಕವನು॥
ಸಂದುಗೊಂದರಸುತ್ತ ಗುರುಸುತ ।
ರಂದವನು ನಾನರಿಯದಂತಕ।
ಮಂದಿರವ ಪೊಕ್ಕಲ್ಲಿ ಶಮನವ ಕೇಳ್ದೆನರ್ಥಿಯಲಿ ॥೬೭॥

ಅಂತು ಪೋಗಲು ಸಂಭ್ರಮಿಸಿಯಾ ।
ಅಂತಕನುಯಿದಿರೆದ್ದು ಬಂದ।
ತ್ಯಂತ ವಿನಯಾವನತನಾಗುತಲರ್ಘ್ಯಪಾದ್ಯಗಳ॥
ಸಂತಸದಿ ತಾನಿತ್ತು ವಿನಯ ।
ಸ್ವಾಂತನಾಗುತ ತನ್ನ ಗದ್ದುಗೆ ।
ಯಂತರದಿ ಕುಳ್ಳಿರಿಸಿ ತಾ ಕೈ ಮುಗಿವುತಿಂತೆಂದ॥೬೮॥

ಎಲೆ ಜನಾರ್ಧನ ನೀನುಯೆನ್ನಯ ।
ಬಳಿಗೆ ಬಂದಾಕಾರ್ಯವೀಗಳೆ।
ತಿಳುಹದನೀಕ್ಷಣದಿ ಮಾಳ್ಪಡೆ ನಿನ್ನನುಜ್ಞೆಯನು ॥
ತಲೆಯೊಳಾನಾಂತಿಹೆನು ನೀನದ ।
ತಳುವುಮಾಡಲದೇಕೆ ಸರ್ವವ।
ತಿಳಿದ ಪರಮಾತ್ಮಕನು ನೀನಹೆಯೆಂದು ಪೇಳಿದನು॥೬೯॥

ಅದಕೆ ನಾನಿಂತೆಂದೆನೆಲೆ ಕೇಳ್ ।
ಚದುರನಹೆ ನೀನೆನ್ನ ಗುರುವಿನ।
ಸುದತಿಪುತ್ರರು ಮೂವರಳಿದರು ಅವರು ಎಲ್ಲಿಹರು॥
ಮುದದಿಯೆನಗವರುಗಳನಿತ್ತೊಡೆ ।
ಅದುವೆಯೆನಗಿಷ್ಟಾರ್ಥಫಲ ಸಂ
ಪದವೆನುತ ನಾನೊರೆಯಲಂತಹುದೆನುತ ಪಿತೃಪತಿಯು॥೭೦॥

ಮೃತಸುತರ ಕರೆದಾಗಲೆನಗತಿ ।
ಹಿತದಿ ಕೊಡಲಾನವರನೊಡಗೊಂ।
ಡತುಳಹರೈಷದಿ ಬಂದೆನಾ ವಾರಾಣಸೀಪುರಿಗೆ ॥
ಮತಿವಿಕಲತನದಿಂದಲಾ ಗುರೈ।
ಸತಿಯು ತನ್ನಯ ಮಕ್ಕಳೆಂದಾ ।
ಯತಿವಡೆದು ತಕ್ಕೈಸಬರಲನುವಾಗಲವರಾಗ ॥೭೧॥

ದೂರದಲಿ ನಿಂದಿರ್ದು ನಮ್ಮನು ।
ಸೇರದಿರು ನೀನಾರು ನಮ್ಮಯ।
ದಾರಿ ನಮ್ಮದು ಋಣವೆಶೇಷದಿನುದಿಸಿದೆವು ನಿನಗೆ ॥
ತೀರಿತಾ ರೈಣವಂದಿಗಾವು ವಿ।
ಚಾರವಿಲ್ಲದೆ ನೀನು ಪಡೆದ ಶ।
ರೀರವನು ಬಿಟ್ಟೀಗೆ ಅಮರತ್ವವನು ಪಡೆದಿಹೆವು॥೭೨॥

ನಾವು ನಮ್ಮಯ ಕರ್ಮವಶದಿಂ ।
ದೀ ವಸುಂಧರೆಯೊಳಗೆ ನಿಮ್ಮೊಳು।
ಪೋವಿ ಜನ್ಮವನೆತ್ತಿ ನಮ್ಮಯ ಕರೂಮವನು ಕಳೆದು॥
ದೇವತನುವನು ಪಡೆದಿಹೆವು ನೀ।
ವೀ ವಿಶೇಷವನರಿಯದಿರಬಹು।
ದೇ ವಿಚಾರಿಸೆ ಮಕ್ಕಳಾರ್ತಾಯ್ತಂದೆಗಳು ಯಾರು॥೭೩॥

ಎನಲು ಸಾಂದೀಪಕನು ನಿಜನಂ।
ದನರುಯೆಂಬ ಭ್ರಮೆಯ ಶೋಕದಿ ।
ಕೊನರುತಿಹ ನಿಜಸತಿಗೆ ವೈರಾಗ್ಯವನು ತಾನರುಹಿ ॥
ಮನದ ವಿಸ್ಮಯದಿಂದ ದಕ್ಷಿಣೆ।
ಯೆನಗೆ ಸಂದುದೆನುತ್ತಲತಿಸ।
ದ್ವಿನಯ ಭಾವದಿನೆನ್ನ ಕಳುಹಿದನಂದು ಹರುಷದಲಿ॥೭೫॥

ಎಲೆ ನೃಪತಿ ಲೋಕಯಾತ್ರೆಗೆ ।
ತೊಳಲಿ ಸುರಲೋಕಕ್ಕೆ ಪೋದೆನು।
ಬಲಮಥನ ಸಭೆಯೊಳಗೆ ನಡೆದುದು ಒಂದು ಸಂವಾದ॥
ಇಳೆಯ ಭೂಭಾರವನು ಸೈರಿಸ।
ಲಳವುದಪ್ಪಿಯೆ ಸಕಲದೇವ ।
ರ್ಕಳ ಬಳಿಗೆ ತಾ ಬಂದು ಬಿನ್ನೈಸಿದಳು ಈ ಪರಿಯ॥೮೧॥

ಅಮರರಿರಯೆನ್ನೊಳಗೆ ಮಿಗೆಯ ।
ಕ್ರಮವ ದುರುಳರು ಪುಟ್ಟಿ ಪಾಪ।
ಭ್ರಮಣೆಯಿಂದಲೆ ಸಕಲಸತ್ಕಾರ್ಯಗಳನೊಡಗುಟ್ಟಿ ॥
ತಮತಮಗೆ ಮನಬಂದ ರೀತಿಗೆ ।
ರಮಿಸುತಿರುವದರಿಂದಲೀಗೆನ।
ಗಮಿತ ಭಾರವಿದಾಯ್ತು ಎನ್ನಿಂ ತಾಳಲಳವಲ್ಲ॥೮೨॥

ಆ ಕ್ಷಣದಲಿಂದ್ರಾವರಜ ಕಮ।
ಲಾಕ್ಷ ನುಡಿದನು ನಿನ್ನ ಶೋಕದ ।
ವೀಕ್ಷಣಕೆ ಸಂತೋಷವಪ್ಪಂತಹುದು ಕೆಲದಿನಕೆ॥
ರೂಕ್ಷಕೇಶದ ಕಲಿ ಪುರುಷ ಸಾ ।
ಕ್ಷಾತ್ಕರಿಸಿ ದುರ್ಯೋಧನನು ಎಂ ।
ದೀ ಕ್ಷಿತಿಯೊಳುದಿಸುವನು ಧೃತರಾಷ್ಟ್ರಾವನೀಪತಿಗೆ॥೮೪॥

ಅವನನೋಲೈಸುವರು ದುರುಳರು ।
ಭುವನದರಸುಗಳಾಗ ಧರ್ಮೋ ।
ದ್ಭವನು ಸಾಕ್ಸಾದ್ಧರ್ಮದೇವತೆ ಧರ್ಮಪುತ್ರನು ॥
ದಿವಿಜಕಾರ್ಯಕೋಸುಗರವೀ ।
ಭುವಿಯೊಳುದಿಸುವನಾಗ ಲಕ್ಷ್ಮೀ ।
ಧವನು ನಾ ಯದೈವಂಶದೊಳು ಜನ್ಮಿಸುವೆನರ್ಥಿಯಲಿ॥೮೫ ॥

ಆಗ ಕಲಿಧರ್ಮಗಳ ವೈರದ ।
ನಾಗಾವಳಿಯುವ ತೆರದಿ ಕೌರವ ।
ಭೋಗ ಸಂಪದವೆಚ್ಚಿ ಪುನರಪಿಕೊರತೆಯಪ್ಪಂತೆ ॥
ಬೇಗಲವನಿಯೊಳಿರುವ ದುರುಳರ ।
ನಾಗಿಸುವೆ ಮೃತಕರ ಕುರುಕ್ಶೇ ।
ತ್ರಾಗತರ ಮಾಡುತ್ತ ನಿನಗಿದಕೆಣಿಕೆ ಬೇಡೆಂದ॥೮೬॥

ಎನಲು ಕೇಳ್ದಾರಾಯ ತನ್ನಯ ।
ಮನದೊಳಗೆ ಕೌಂತೇಯ ವರಗುಣ।
ಗಣಗಳನು ನೆರೆಕಂಡು ಕಂಡಂದಾಗ ಮೆಚ್ಚುತಲೆ॥
ಎನಗೆ ದುಃಖವದಿಲ್ಲ ವಿಂದಿಗೆ।
ಮನದ ದುಗುಡವ ಬಿಟ್ಟೆನೆಂದತಿ ।
ವಿನಯಪರನಾಗಲ್ಕೆ ವ್ಯಾಸನು ಪೋದ ನಿಜಪದಕೆ॥೮೯॥

ಬಳಿಕಲಂಧನೃಪಾಲ ವಿದುರಗೆ ।
ತಿಳುಹಿದನು ನೀನಿಂದು ನಮ್ಮೀ।
ನಿಳಯದೊಳಗಿಹ ಕುಂತಿಗಾಂಧಾರಿಯರು ಮೊದಲಾದ॥
ಜಲಜಮುಖಿಯರ ಕರೆದು ಬಾ ಕೊಳು।
ಗುಳಕೆ ಪೋದಪೆಯಲ್ಲಿ ಮೃತ ಮ ।
ಕ್ಕಳಿಗೆ ಪಿತೃಕಾರ್ಯಗಳ ಮಾಡುವವೆಂದು ನಿಯಮಿಸಿದ॥೯೦॥

ಮತ್ತೆ ಭೂಪನು ಶೋಕವನು ನು।
ಗ್ಗೊತ್ತಿ ಕೃಷ್ಣಮುನೀಂದ್ರ ಬೋಧೆಯ ।
ವೆತ್ತು ದೃಢತರ ಸದ್ವಿವೇಕವ ಬಲಿದು ಸಂಭ್ರಮದಿ ॥
ಚಿತ್ತದೊಳು ಶ್ರೀಕೃಷ್ಣರಾಯನ ।
ನುತ್ತಮನ ಮಾಡಿರ್ದ ದೇವನ।
ನೊತ್ತಿಡಿದು ವೇಂಕಟಗಿರೀಶನನಾಗ ಜಾನಿಸಿದ॥೯೧॥

ಮೂರನೆಯ ಸಂಧಿ
ಸೂಚನೆ:
ವೀರರಣರಂಗದೊಳಗರಸಿ ಕು।
ಮಾರಕರ ಗಾಂಧಾರಿ ಕಂಡತಿ ।
ದಾರುಣದಿ ಮರುಗುತ್ತಲಿತ್ತಳು ಶಾಪವನು ಹರಿಗೆ॥

ಲೇಸಮಾಡಿದೆ ಕೃಷ್ಣ ನಿನಗಿದು ।
ವಾಸಿದೋರಿತೆ ಮನಕೆ ನೀನಿಂ ।
ತೀಸು ನಿರ್ದಯದಿಂದ ಎನ್ನಯ ಮಕ್ಕಳನು ಕೊಲಿಸಿ॥
ಆಸುರವನೆಸಗಿದೆಯಲಾ ನಿ।
ನ್ನಾಸರವೆ ಭಾವಂದಿರನು ಕೊಲು।
ವೀ ಸಮಂಜಸರಹಿತ ಕೃತ್ಯವನೆಸಗಬಹುದೇನೊ॥೨೦॥

ಮೋಸದಲಿ ಜೀವಕ್ಕೆ ಮುನಿದಿಂ ।
ತೀ ಸುಯೋಧನಮುಖ್ಯಬಾಂಧವ।
ಘಾಸಿಯನು ನೀ ಬಲಿದು ಪಾಂಡವ ಪಕ್ಷಪಾತದಲಿ ॥
ಆಸುರದ ಕೃತ್ಯವನು ಮಾಡಿಸಿ ।
ದೀ ಸಕಲ ಪಾಪಕ್ಕೆ ನೀನೇ।
ವೋಸರಿಸದಂದದಲಿ ಗುರಿಯಹೆಯೆಂದು ಪೇಳಿದಳು॥೨೧॥

ಸಂಗರದ ಮಹಿಯೊಳಗೆ ಬಾಂಧವ ।
ಭಂಗವನು ಮಿಗೆ ಮಾಡಿ ಪಾಂಡವ।
ರಿಂಗೆ ರಾಜ್ಯವನೀವುದಿದು ನಿನಗುಚಿತವಾಗಿಹುದೆ॥
ತುಂಗಬಲ ಭೀಷ್ಮಾದಿಗಳ ಪದ।
ಪಿಂಗೆ ಕೊಲ್ಲಿಸಿಯೆನ್ನ ಸೊಸೆಯರ ।
ಮಂಗಳದ ಸೂತ್ರಗಳ ಪರಿದಿಟ್ಟೇನು ನಿನಗಾಯ್ತು॥೨೨॥

ಇವರಿರವ ನೋಡುತ್ತ ನಾ ಸಹಿ।
ಸುವ ಬಗೆಯ ಪೇಳ್ ನೀನೆಯೆನಗಿಂ ।
ನಿವರ ಪತಿಸುತ ಶೋಕವೆಗ್ಗಳಿಸುವುದು ಇವರಿಂದ ॥
ಭುವನದೊಳು ನೀನಿಂತು ನಿರ್ದಯ।
ದವನು ಎಂಬುದನರಿಯದಾದೆನು ।
ಶಿವಶಿವಾ ನಿನಗಿಂತ ಕ್ರೂರನು ಜಗದೊಳಾರುಂಟು೨೩॥

ಇಂತು ಪಲ್ಮೊರೆದಳಲಿ ದೀನಾ।
ಕ್ರಾಂತಳಾಗುತ ಸುರಿವ ಕಂಬನಿ।
ಯಂತರಿಸಲಳವಲ್ಲದಲ್ಲಲ್ಲರಸಿಹಮ್ಮೆರಸಿ ॥
ಎಂತು ಸೈರಿಸಲೆಂದು ರವಿಸುತ ।
ನಂತಿಕಕೆ ಬಳಿಸಾರ್ದು ಬಿದ್ದಾ ।
ಶಾಂತರಾಳವು ಮಾರ್ದನಿಯ ಕುಡುವಂತೆ ಅಳಲಿದಳು॥೨೪॥

ವೀರರಣರಂಗದಲಿ ನಿನ್ನಯ ।
ಶೌರ್ಯವನು ಮುರುಕಿಡಿದು ನರನಿಂ।
ನೂರುಮಡಿ ನಿಜ ಬಾಹುಬಲದೊಳು ಗಜಪುರದ ಸಿರಿಯ॥
ಸೇರಿ ಕೌರವನಿಂಗೆ ವರಹಿತ।
ಕಾರಿಯಾಗುತಲಿಂತುಟಳಿವರೆ।
ಧೀರರವಿಸುತ ಕರ್ಣಯಂದಳಲಿದಳು ಗಾಂಧಾರಿ॥೨೫॥

ದೀನನದ ಮಕ್ಕಳಿಗಿಂತ ನಾನಿ।
ಮ್ಮಡಿಸಿ ನಿನ್ನನು ಪೊರೆದುದಕೆಯೆ ।
ನ್ನೊಡಲಿಗುರಿಯನು ಚಾಚಿ ಪ್ರಿಯ ದುರ್ಯೋಧನನು ಕೂಡಿ ॥
ಪೊಡವಿ ಭೋಗವನೊಲ್ಲದಲೆ ।
ಮಡಿದು ಸುರರಾಜ್ಯದ ಸುಭೋಗವ ।
ಪಡದೆಯಾ ರವಿತನಯ ಹಾಯೆಂದಳಲಿ ಮರುಗಿದಳು॥ ೨೬॥

ಬಳಿಕಲೀ ಪರಿ ಕರ್ಣನುರುಗುಣ ।
ಗಳನು ಮಿಗೆವಕ್ಕಣಿಸಿ ಮೊರೆಯಿಡು।
ತಳಲಿಯಾ ಗಾಂಧಾರಿ ತನ್ನಯ ತಮ್ಮ ಶಲ್ಯನನು॥
ತಳಪಟದಿ ಬಿದ್ದಸುವ ತೊರೆದಿರ।
ದಿಳೆಗುರುಳಿಮಲಗಿರುವ ಪರಿಯನು।
ಪಳಪಳನೆ ಕಣ್ಣೀರು ತೊಟ್ಟಿಡೆ ನೋಡಿ ಮೂರ್ಚಿಸಿದಳು॥೨೭॥

ಪೊರೆಯೊಳಿಹ ಪರಿಜನರು ಬಂದಾ ।
ತರುಣಿಯನು ಪಿಡಿದೆತ್ತಿ ಎದೆಯೊಳ।
ಗೊರಗಿಸುತ ಸಿಂಪಿಸಿ ಸುಶೀತಲ ವಾರಿಯನು ಬಳಿಕ॥
ವಿರಚಿಸಲು ಶೈತ್ಯೋಪಚಾರವ।
ನಿರದೆ ಚೇತರಿಸುತ್ತ ತಮ್ಮನ।
ಪರಿಯ ನೋಡಳಲುತ್ತಲೆಂದಳು ಸುಬಲನಂದನೆಯು॥ ೨೮॥

ಕರದ ಬಿಲ್ಲಿನ ಬಿಗುಹಿನಬ್ಬರ ।
ವೆರದ ಕೈದು ಕಠಾರಿಗಳ ವರ।
ಪರಶುಮೊದಲಾದಾಯುಧಗಳನುಧರಿಸಿ ಶತ್ರುಗಳ
ಶಿರಗಳನು ಚಂಡಾಡಿರಣದೊಳು ।
ನರನ ಚಾಪಕೆ ಸಿಲುಕಿ ಹರಣವ ।
ತೊರೆವರೆ ಹಾಯೆಂದಅರಹುತ ಬಿದ್ದು ಬಳಿಕಿನಲಿ॥೨೯॥

ಎದ್ದುಸುರಲಮ್ಮದಲೆ ಮಹಿಯೊಳು ।
ಬಿದ್ದು ಪುನರಪಿ ಶೋಕರಾಶಿಯೊ ।
ಳದ್ದು ತನುವನು ಹಂಬಲಿಸಿ ಹಾಯೆಂದು ಪಲಪರಿಯ॥
ಕದ್ದನೇ ನಿನ್ನಸುವ ಜವನವ।
ಗಿದ್ದುದೇ ಪೌರುಷವು ನಿನ್ನಯ ।
ಮುದ್ದುನುಡಿಗಳನುಸುರುಯೆಂದರಚಿದಳು ಕೊರಳೆತ್ತಿ॥೩೦॥

ಬಂದನಿದೆ ದುರ್ಯೋಧನನು ನಿನ ।
ಗಿಂದುಸೇವೆಯನೆಸಗುವನುನೀ ।
ನಂದವಳಿದಿರಬಹುದೆ ತಮ್ಮನೆ ಪರಮ ಸಾಹಸನೆ॥
ಮಂದಿವಾಳನ ತೆರದ ನರನೊಳು ।
ಸಂದುದೇ ಕಾಳಗವು ನಿನ್ನಿಂ ।
ಬೆಂದುದೇಯೆನ್ನೊಡಲು ಎನುತಳಲಿದಳುಮೊರೆಯಿಟ್ಟು॥೩೧॥

ಅಂತಳಲುವಾ ಪೊರೆಯೊಳಗೆ ಚತು।
ರಂತಯಾನವನೇರಿಸುವ ಪರಿ।
ಯಂತರವು ಹಾಯೆಂದು ದುಃಖಿಪ ಗಜಬಜವ ಕೇಳಿ ॥
ತಿಂತಿಣಿಯ ಶೋಕದಲಿ ಉರಿವ।
ಸ್ವಾಂತಳಾಗುತ ಲಂಧಭೂಪತಿ ।
ಕಾಂತೆ ಕಂಡು ಸುಯೋಧನನ ಪೊರಳಿದಳು ಧರಣಿಯಲಿ॥೩೨॥

ಕೂಡೆ ಕಲವರಿಸುತ್ತ ಮಿಗೆ ಮಾ।
ತಾಡಲಮ್ಮದೆ ಕಣ್ಗಳೊಳು ಕಡು ।
ಕೋಡಿವರಿವಶ್ರುವಿನಲೆದ್ದಾ ಪೆಣನ ಬಳಿಗೈದಿ॥
ನೋಡಿ ಕೈಚಾಚುತ್ತ ಮುಗ್ಗುವ ।
ಜೋಡಣೆಯ ತಾ ಬಳೆಸಿ ಸಿಡಿಲಿಗೆ ।
ಕೋಡುಗಲ್ಲವನಿಯಲಿ ಬೀಳ್ವಂತುರುಳಿ ಪೊರಳಿದಳು॥೩೩॥

ಪೇಳಲೇನೆನ್ನಳವ ಕೌರವ।
ರಾಳುಗಳ ಗಜಪುರದ ಸೌಖ್ಯವ ।
ಬಾಳು ಕೆಡಿಸಿದನೀ ಮುಕುಂದನು ಪಾಪಬಂಧುರನು ॥
ಕಾಳುಮಾಡಿದನಕಟಕಟಯಿದ।
ತಾಳಬಹುದೇ ಹರಹರಾ ಕರು।
ಣಾಳು ಧರೂಮವೈ ವಿಧಿಯ ವಶದಲಿ ಘಟೆಸಿತಿಂದಿನಲಿ॥೩೮॥

ಮತ್ತೆ ದುಶ್ಯಾಶನ ಕಳೇವರ ।
ದತ್ತ ಮೆಲ್ಲಗೆ ಸಾರಿ ಆತನ।
ನೆತ್ತಿ ತೊಡೆಯೊಳಗಿಟ್ಟು ಮೈದಡವರಿಸಿ ನಿಟ್ಟಿಸುತ ॥
ಪೆತ್ತೆ ನಿನ್ನನದೇಕೆ ರಣಬಲಿ।
ಗಿತ್ತನೇ ದುರ್ಯೋಧನನು ನೀ।
ನೆತ್ತ ಪೋದೈ ಮಗನೆ ಪೇಳೆಂದಾಗಲಳಲಿದಳು ॥೪೦॥

ಈ ತೆರದಲಾ ಕೌರವಾನ್ವಯ ।
ಮಾತೆ ರಣದವನಿಯಲಿ ಶೋಕೋ।
ಪೇತೆಯಾಗುತ ತೊಳಲಿ ಬಳಲಿಕೆಯಿಡಿದು ಬಸವಳಿದು ॥
ಶಾತಕುಂಭಾಂಗದ ಸುನೂತನ।
ವೀತಿಹೋತ್ರಸಮಾನ ತೇಜ।
ಸ್ಫೀತನಾದಭಿಮನ್ಯುವನು ನೋಡಿದಳು ಗಾಂಧಾರಿ ॥೪೧॥

ಈ ಪಸುಳೆಯನು ಕೊಂದ ಪಾತಕಿ ।
ಗಾವುದೇ ಸದ್ಗತಿಯು ನರಕದ ।
ಕೂಪದೊಳಗಾವಾಸವಾತಂಗಿಹುದುಯೆಂದಿನಲಿ ॥
ಕೋಪಿಸುವರೇ ಮಕ್ಕಳುಳ್ಳವ ।
ವರೀಪರಂತಪನಳಿವ ಕಂಡುರೆ।
ತಾಪಗೊಳ್ಳದರಾರೆನುತ ಮಮ್ಮಲಿಸಿ ಮರುಗಿದಳು॥೪೨॥

ನೀನು ನಿರ್ಘೃಣನಪ್ಪೆ ಬಂಧು ಕು।
ಲೀನನೆಂದಾನಿರ್ದೆನಿನ್ನೆಗೆ।
ತಾನದೀಗಲು ವೈಪರೀತ್ಯವ ಬಳಸಿದುದರಿಂದ ॥
ಆನಲಾರದ ಪುತ್ರ ಶೋಕಾಂ ।
ತವನು ವಹ್ನಿಜ್ವಾಲೆ ಬಳಸಿದೆ।
ದಾನವಾಂತಕ ನಿನ್ನ ಕೃತ್ರಿಮವಿಂದು ಬಯಲಾಯ್ತು॥೪೬॥

ಉರಿಯನಿಕ್ಕಿದೆ ಕೌರವರ ಕುಲ।
ಕರಡ ಬಣಬೆಗೆ ಚೂಣಿಯಲೆ ನೃಪ।
ಪರಿಕರವ ಕೊಲ್ಲಿಸಿದೆ ಕರ್ಣ ದ್ರೋಣ ಸೈಂಧವರ॥
ಕೊರಳನರಸಿದೆಯತ್ತೆ ಮಕ್ಕಳು ।
ವೆರಸಿ ತಂತ್ರೋಪಾಯ ಮಾರ್ಗದಿ।
ಚರಿಸಿದೀ ನಿನ್ನೊಳು ದುರಾಗ್ರಹವೆಸಗುವೆನು ನಾನು॥ ೪೭॥

ನೀನು ಎನ್ನಂದದಲಿ ನಿನ್ನಯ।
ಸೂನುಗಳು ಬಾಂಧವರು ಸಹಿತಲಿ।
ಆನುವದು ಸಂಘಾತಮರಣವನೆಂದು ಕಡು ಮುಳಿದು ॥
ಕಾನನದ ಪಾಲಹುದು ನಿನ್ನಯ ।
ಮಾನಿನಿಗಳಂದಾರ್ತಶೋಕ।
ಧ್ವಾನದಲಿ ಶಪಿಸಿದಳು ಹರಿಯನುಯೇನನೆಂಬುವೆನು॥೪೮॥

ನಾಲ್ಕನೆಯ ಸಂಧಿ:
ವಿಶ್ವಾಮಿತ್ರನ ಮಾಂಸಭಕ್ಷಣದ ಪ್ರಸಂಗ:

ಮಾರ್ದವದಿ ಗೆಲಬಹುದು ಹಗೆಗಳ।
ಮಾರ್ದವದಿ ಕೊಳಬಹುದು ವಿಜಯವ।
ಮಾರ್ದವದಿ ಬಹುಕೀರ್ತಿ ಸುಕೃತವನಾರೂಜಿಸಲು ಬಹುದು॥
ಮಾರ್ದವದಿ ಸಿರಿಯಹುದು ಬಳಿಕಾ।
ಮಾರ್ದವದಿ ಸುಖವಹುದು ತಿಳಿವಡೆ।
ಮಾರ್ದವಕೆ ಸರಿಯಾದ ಗುಣವಿಲ್ಲರಸ ಕೇಳೆಂದ॥೩೦॥

ಎಂದ ಮಾತನು ಕೇಳಿಯಂತಕ।
ನಂದನನು ಮುತ್ತೈಯ್ಯನೊಡನಿಂ।
ತೆಂದ ಬಳಿಕಲವಗ್ರಹಾದಿಗಳಾದ ದುರಿತಗಳು॥
ಬಂದಡವನಿಯೊಳಖಿಳ ಭೂಸುರ।
ವೃಂದ ತಮ್ಮಯ ಜೀವವನು ಹೊರೆ।
ವಂದವೆಂತದನರುಹೆನಲು ಗಾಂಗೇಯನಿಂತೆಂದ॥೩೧॥

ಕೇಳು ಕುರುಪತಿ ಉತ್ತರವನಾ ।
ಹೇಳುವೆನಿದಕ್ಕಾದಿಯಲಿ ಚಂ।
ಡಾಲ ವಿಶ್ವಾಮಿತ್ರ ಮುನಿವಸಂವಾದವೊಂದುಂಟು॥
ಕಾಲವಶದಲಿ ಪೂರ್ವದಲ್ಲಿ ಛ।
ಡಾಳಿಸಿತು ಬಲು ಬರನು ಮನುಜನರ।
ಗೋಳನಿನ್ನೇನೆಂಬೆನುರುಳಿತು ಹೆಣಗಳಿಳೆಯೊಳಗೆ ॥೩೨॥

ಧರಣಿಯಲಿ ಹನ್ನೆರಡು ವತ್ಸರ ।
ಪಿರಿದೆನಿಸಿ ಈ ರೀತಿಯಲಿ ಬರ।
ಬರಲಶನವನು ಕಾಣದುಪವಾಸದಲಿ ನೆರೆನೊಂದು॥
ಅರಸ ವಿಶ್ವಮಿತ್ರಮುನಿ ಶೇ
ಖರನು ತನ್ನಯಜೀವ ದೇಹದೋ ।
ಳಿರದಿದಕ್ಕಿನ್ನೇನ ಮಾಡುವೆನೆನುತ ನಡೆತಂದ॥೩೩॥

ಬಂದು ಬಳಲುತಲಾಗ ಹೊಲೆಯನ ।
ಮಂದಿರದಲಿರೆ ನೋಡಿ ಬಾಗಿಲ ।
ಮುಂದೆ ನಿಂದನು ಹೊರಗೆ ಕುಕ್ಕುರ ಮಾಂಸವಿರಲದನು ॥
ಅಂದು ಕಂಡೀ ವೇಳೆಗಿದನಾ ।
ತಿಂಬು ಜೀವವನುಳುಹಿಕೊಂಬುದೆ ।
ಚಂದವೆನುತಲಿ ಬಗೆದು ಕಳಲುದ್ಯೋಗಮನನಾದ॥೩೪ ॥

ಮುಜಗಾಪತ್ತಿನಲಿ ಉಣಲೋ ।
ದನವು ದೊರಕದೆ ಜೀವಸಂಕಟ।
ವೆನಿಪ ವೇಳೆಯೊಳಧಮನೊಡವೆಯ ಘಾತವಾದದನು॥
ಮನವೊಲಿದು ಚೌರ್ಯದಲಿ ತೆಗೆದಿನಿ।
ತುಣಲು ದೋಷವು ಬರಲರಿಯದೆಂ।
ದೆನುತಲಿರುಳದ ಕಳಲು ಕೈದುಡುಕಿದನು ಕಳವಳಿಸಿ॥೩೫॥

ಬಳಿಕಿರುಳನನಿದ್ರೆ ತಿಳಿದಾ ।
ಹೊಲೆಯನವನಾವನೋಮಾಂಸವ।
ಕಳುವವನು ಹೇಳೆನುತ ಗರ್ಜಿಸಿ ಧಟ್ಟಿಸುತಲಿರಲು॥
ಮುನಿ ನಡುಗಿ ದೈನ್ಯದಲಿ ಹೊಲೆಯಗೆ।
ವಿನಯ ವಚನಗಳಿಂದ ಬಂದೆನು।
ತನುವ ಸಲಹಲು ತಾನು ವಿಶ್ವಾಮಿತ್ರ ಕೇಳೆಂದ॥೩೬॥

ಮುನಿಪ ನೀನು ಪವಿತ್ರನಾಗಿ ।
ದ್ದಿನಿತು ಕಷ್ಟಕ್ಕೇತಕೆರಗಿದೆ।
ಯೆನಲು ಋಷಿ ಬಳಿಕೆಂದನಗ್ನಿಪವಿತ್ರನೆನಿಸಿದ್ದು॥
ಅನವರತ ನೆರೆ ಸರ್ವಭಕ್ಷಕ ।
ನೆನಿಸನೇಯಾರೀತಿಯಲಿ ಇಂ।
ದೆನಗೆ ದೋಷವದಿಲ್ಲ ಬಂದ ವಿಪತ್ತಿನೊಳಗೆಂದ॥೩೭॥

ಎನಲು ಬಳಿಕಾ ನುಡಿಗೆ ಚಂಡಾ।
ಲನು ನುಡಿದ ಮೃಗಜಾಲದಲಿ ಕೇ।
ಳನಘ ಕೌಲೇಯಕನೇ ಕುತ್ಸಿತನದರ ಮಾಂಸವನು॥
ತಿನಲುಚಿತವೇ ನಿನ್ನ ಹೋಲುವ ।
ಮುನಿಗಳಿಗೆ ಬೇರೊಂದುಪಾಯವ।
ನೆನೆಸಿಕೋ ನೀನೆನಲು ಮತ್ತವನೊಡನೆ ಮುನಿ ನುಡಿದ॥೩೮॥

ಪಿರಿದೆನಿಸಿದೀ ಬ್ರಹ್ಮಶಕ್ತಿಯ ।
ದಿರಲೆಮಗೆ ನಾ ಬೆದರುವೆನೆ ಯೀ।
ದುರಿತಕೀ ವೇಳೆಯಲಿ ಜೀವವನುಳುಹಿ ನಾ ಮುಂದೆ ॥
ಪರಮ ತಪದಲಿ ವಿದ್ಯೆಯಲಿ ಪರಿ।
ಹರಿಸಿಕೊಂಬೆನುದೋಷವನು ಕು।
ಕ್ಕುರನ ಮಾಂಸವನಿಂದು ತಿನ್ನದೆ ಬಿಡೆನು ನಾನೆಂದ॥೩೯॥

ಎನಲು ಹೊಲೆಯನು ನಗುತ ನೀವಿ।
ನ್ನೆನಿತನೆಂದಡದೇನು ಕಷ್ಟಗ ।
ಳೆನಿಪ ದುರಿತವ ಮಾಡ ಸಲೈವುದಕಟಕಟಾಯೆನಲು॥
ಮುನಿ ನುಡಿದ ಪೂರ್ವದಲಗಸ್ತ್ಯನು ।
ತಿನನೆ ರಕ್ಷೋಮಾಂಸಂಗಳನಾ।
ತನಿಗೆ ಕೆಟ್ಟುದೆ ಶುಚಿತೆ ಎನಗಾ ರೀತಿಯಹುದೆಂದ॥೪೦॥

ಎಂದಡಾ ಮಾತಂಗ ಬಳಿಕಿಂ ।
ತೆಂದ ಕೌಲೇಯಕನ ಮಾಂಸವ ।
ನಿಂದು ನಾ ಕೊಡಲಾರದಂತಿದೆ ನಿಮ್ಮ ಚಿತ್ತದಲಿ ॥
ಚಂದವಹ ಯಶವುಳ್ಳ ನಿಮಗದು ।
ನಿಂದೆಯಹುದೆಂದೆನ್ನ ಮನದಲಿ।
ನೊಂದೆನೆಲೆ ಮುನಿನಾಥ ಬೇಡಿದ ಬಿಟ್ಟು ಹೋಗೆಂದ॥೪೩॥

ಬಳಿಕ ಗಾಧಿತನೂಜ ನುಡಿದನು।
ಹೊಲೆಯನೊಡನಿಂದೆನ್ನ ಕರುಣದ॥
ಲುಳಹು ದುರ್ಯಶವೆನಗೆ ಬಾರದು ಪಾಪವೆನಗಿಲ್ಲ॥
ಕಳಲು ಪಾತಕವಪ್ಪುದಲ್ಲದೆ ।
ಒಲಿದು ಕೊಟ್ಟುದ ತೆಗೆದುಕೊಂಡರೆ।
ಕಲುಷವಹುದೇಯೆನಲು ಪುಲ್ಕಶ ಬಳಿಕಲಿಂತೆಂದ॥೪೪॥

ಎಲೆ ಮುನೀಶ್ವರನೀ ಪ್ರತಿಗ್ರಹಿ ।
ಸಲು ಸಲುವುದೇ ನೀಚನೆನಿಪೆ।
ನ್ನಲಿಯ ಪೂತವಿದೆನಿಪ ಕುಕ್ಕುರ ಮಾಂಸಖಂಡಗಳ॥
ತಿಳಿಯೆಯಕಟಾ ನೀನು ನಿನ್ನನು।
ತಿಳುಹುವನೆ ನಾನೇಯೆನುತೆ ಮನ।
ವಳುಕಿ ಕೊಟ್ಟನು ಭಷಕಮಾಂಸವ ಶ್ವಪಚನಾ ಮುನಿಗೆ॥೪೫॥

ತೆಗೆದು ಮೃಗದಂಶಕನ ಮಾಂಸವ ।
ನಗಿದು ಮೆದ್ದೀ ದಿವ್ಯ ಮುನಿಯಂ ।
ದಿಗೆ ನಿಜಪ್ರಾಣವನು ರಕ್ಷಿಸಿಕೊಂಡು ತಾ ಹೋಗಿ
ಮಿಗಿಲೆನಿಪ ನಿಜಮಂತ್ರ ಸಾಮ।
ರ್ಥ್ಯಗಳಲಾ ದೋಷವನು ದಬ್ಬಿದ
ವಿಗಡವಾದ ವಿಪತ್ತು ಬಂದರದಾರು ಕೆಡದವರು॥೪೬॥

ಬಳಿಕಲಿಂದ್ರನು ಸಕಲಧಾತ್ರೀ।
ವಳಯದೊಳು ಮಳೆಗರೆದು ಭೂಪ್ರಜೆ।
ಯುಳಿದುದೈ ತದನಂತರದಲೆನೆ ಕೇಳಿ ಧರ್ಮಜನು॥
ಅಳಿಕಿಯೀ ಪರಿ ದುರವಗಾಹಂ ।
ಗಳೆ ವಿಚಾರಿಸೆ ಧರ್ಮಸೃಕ್ಷ್ಮಗ।
ಳೆಲೆ ನದೀಸುತ ಎಂದು ಮರುಗಿದನಾಗ ಮನದೊಳಗೆ॥೪೭॥

ಕಪೋತಿಯ ಆಖ್ಯಾನ:

ಸಾವಧಾನದಲೆಲೆ ಯುಧಿಷ್ಠರ ।
ದೇವ ಕೇಳೈ ವ್ಯಾಧನೊಬ್ಬನಿ।
ಳಾವಳಯದಲಿ ಪಕ್ಷಿನಿಕರವ ಕೊಂದು ತಿನುತಿಹನು ॥
ಆವಗವುಪತಗಗಳ ಮಾರಿಯೆ।
ಜೀವಿಸುತ ಬಲೆ ಸಹಿತಲಖಿಳ ವ ।
ನಾವಳಿಗಳಲಿ ತಿರುಗಿ ಪಿಡಿವನನೇಕ ಪಕ್ಷಿಗಳ॥೫೦॥

ಒಂದು ದಿನ ಬಲುಗಾಳಿ ಮಳೆ ನೆರೆ।
ಬಂದುದೆಲ್ಲಾ ಜಂತುಸಂತತಿ ।
ಹೊಂದಿದುದು ನಾಶವನು ಜಲಮಯವಾಯ್ತು ಧರೆಯನಿತು॥
ಅಂದಿನರ್ಧ ತ್ರಿಯಾಮದಲಿ ಮನ।
ನೊಂದು ಮಳೆಯೊಳು ನನೆದು।
ನಡುಗುತ ಬಂದನುಗ್ರಾಟವಿಯೊಳಗೆ ಹೊದರಿಂದ ಮರಗಳೊಳು॥೫೧॥

ಬಳಿಕಲಿರುಳಾಯ್ತು ನಡುಗುತ ।
ಶಿಲೆಯ ಶೈಯಯ ಮೇಲೆ ಬೇಡನು ।
ಮಲಗಿ ಆ ವಿಟಪಿಯ ನಿರೀಕ್ಷಿಸಿ ಆಗಳಿಂತೆಂದ॥
ಎಲೆ ಮರದ ಮೇಲಿಪ್ಪ ಭೂತಾ ।
ವಳಿಗಳಿರ ಮರೆಹೊಕ್ಕೆ ನಿಮ್ಮನು ।
ಸಲಹಿ ನನ್ನನು ನನೆದು ಚಳಿಯಲಿ ಸಾಯುತಿಹೆನೀಗ॥೫೨॥

ಎಂದಡವ ತದದ್ಭೂಜ ಕೋಟರ ।
ಮಂದಿರದ ಮಧ್ಯದಲಿ ನೆಲಸಿಹು।
ದೊಂದು ಪಾರಾವತ ನಿಜಪ್ರಿಯೆ ಹೋಗಿ ಬಾರದಿರೆ॥
ಇಂದು ಬಾರದೆ ತಡೆದಳೇತ।
ಕ್ಕೆಂದರಿಯೆ ಮಳೆಗಾವ ಕಡೆಯಲಿ ।
ನಿಂದಳೋ ಹಾಯೆನುತ ಹಂಬಲಿಸಿದುದು ಹಿರಿದಾಗಿ॥೫೩॥

ತಡೆದಳೇತಕೆ ಬೇಟೆಕಾರರು।
ಹಿಡಿದು ಕೊಂದರೊಮಳೆಯ ಹೊಯ್ಲಲಿ ।
ಮಡಿದಳೊ ಗರಿ ನನೆದು ಹಾರಲು ಬಾರದಿಂದೀಗ॥
ನಡುಗುತಿಳೆಯಲಿ ಬಿದ್ದಳೋ ಮೇ।
ಣ್ಗಿಡಕ ಹೊಯ್ದುದೊ ಕೆಟ್ಟೆನೆನ್ನಯ।
ಮಡದಿ ಬಾರದೆ ನಿಂದಳೆನುತ ಕಪೋತ ಮರುಗಿದುದು॥೫೪ ॥

ಅರೆಘಳಿಗೆ ನೆರೆ ನನ್ನನವಳಗ।
ಲಿರಲರಿಯಲುಳಿದಿದ್ದಳಾದರೆ।
ತರುಣಿಯಾಗಲೆ ಬಹಳು ಕಾಣೆನು ನನ್ನ ವಲ್ಲಭೆಯ॥
ಹರಣ ನಿಲ್ಲದು ಸತಿಯ ಮರೆದಿಹ ।
ಪರಿಯದೆಂತಾನೀಗಳೀ ಮಂ।
ದಿರವಿನಿತು ಹಾಳೆನಿಸಿದಂತಿದೆಯೆನುತ ಮರುಗಿದುದು॥೫೫॥

ಇಹಪರಕೆ ಸುಖಹೇತುವೆನಿಸಿದ ।
ಮಹಿಳೆಯವಳಾ ಸಾಧ್ವಿಯನು ಬಿಟ್ಟಿ।
ಹುದುಚಿತವೇ ಈ ನಿಶಿಯೊಳಾನಲಿವೆನೆಂದೆನುತ ॥
ಬಹಳ ಚಿಂತಾಭರದಿ ದುಃಖಿಸು।
ತಿಹ ನಿಜೇಶನ ವಚನಗಳ ತ।
ದ್ವಿಹಗ ಸತಿ ಕೇಳಿದುದು ಬಲೆಯೊಳಗಿದ್ದು ಲುಬ್ಧಕನ॥೫೬॥

ಪತಿಯ ಚಿತ್ತಕೆ ಬಂದೆನೀ ಪರಿ ।
ಕೃತಸುಕೃತೆಯಹೆನೀಶವಾಕ್ಯ।
ಪ್ರತತಿಯನು ಕಿವಿಯಾರೆ ಕೇಳಲು ಪಡೆದೆನೆಂದೆನುತ॥
ಅತಿ ಮುದದಲಿದ್ದಾಗ ಮತ್ ಖಗ ।
ಪತಿಯಹುದು ಧವತನವಿದಾತ್ಮ।
ಸ್ಥಿತಿಯ ವಿಧಿಕೃತಕಳಲದಿರು ನೀನೆನುತ ಬೋಧಿಸಿತು॥೫೭॥

ಶರಣು ಹೊಕ್ಕಾತನನು ಕಾವುದು ।
ಪರಮ ಸುಕೃತವಿದೆಲೆ ಮನಃಪ್ರಿಯ ।
ಮಲಡ ಜಂತುಕದಂಬಕಕೆ ಮರೆಹೊಕ್ಕೆನೆಂದೆನಿಪ॥
ಪಿರಿದೆನಿಸಿ ಶೀತದಲಿ ಬೇಡಗೆ ।
ಮರಣವಾಗ ತೆರದಿಶಬಂದದ।
ಪರಿಹರಿಪುದೆನುತಾತ್ಮಪತಿಗೆ ಕಪೋತಿ ಹೇಳಿದುದು॥೫೯॥

ಎನಲು ಪಕ್ಷಿಯ ದಯೆಗೆ ಮೆಚ್ಚುತ ।
ಮನದೊಳಗೆಯಾ ಬೇಡನಿಂತೆಂ।
ದನು ಬಳಿಕ ಶೀತದಲಿ ಸಕಲಾಂಗಗಳು ನರ ತೆಗೆದು ॥
ಎನಗೆ ಸಂಕಟವಾಗುತಿದೆ ಬಾ।
ನಿನಗೆ ಶಕ್ಯವಿದೆನಿಸುವ ಕ್ರಿಯೆ ।
ಯನು ರಚಿಸು ನೀನೆಂದು ನೈಡಿದನು ದೈನ್ಯದಲಿ ಶಬರ॥೬೦॥

ಐಸಲೇ ಮಾಡುವೆನೆನುತ ಬಳಿ ।
ಕಾ ಸಮಯದಲಿಯಾ ಕಪೋತನು।
ಬೇಸಗೆಯೊಳೊಣಗಿರ್ದ ಹಳೆಕಡ್ಡಿಗಳ ತೆಗೆತಂದು ॥
ರಾಶಿಗೈದವ ಬೇಗದಿಂದಲಿ ।
ಯಾ ಸಮೀಪದ ಪಳ್ಳಿಗೈದಿ ವಿ।
ಳಾಸದಲಿ ತಾ ಕಚ್ಚಿ ತಂದಿತ್ತುರಿವ ಕೊಳ್ಳಿಯನು॥೬೧॥

ಬಳಿಕ ರೆಕ್ಕೆಯ ಗಾಳಿಯಲಿ ಉರಿ।
ಗೊಳಿಸಿ ಇನ್ನೇಳಣ್ಣ ದೇಹದ ।
ಛಳಿಯಡಗುವಂದದಲಿ ಕಾಸುವೆಯೆನುತ ಖಗ ಕರೆಯೆ ॥
ಒಲಿದು ವಿಹಗದ ದಯೆಯ ಹೊಗಳುತ ।
ತಲೆಯ ತೂಗುತ ಬಂದು ಕಿಚ್ಚಿನ।
ಬಳಿಗೆ ದೇಹವ ಕಾಸಿಕೊಂಡನು ಹಿಮವ ಜಯಿಸಿದನು॥೬೨॥

ಛಳಿಯಡಗಿ ಮೈ ತೆರೆಯಲೃಕ್ಷಣ ।
ದಳಗೆ ಜಠರದ ವಹ್ನಿಯೆದ್ದುದು।
ಬಳಿಕ ಪಸಿದೆನೆನುತ್ತ ಪಕ್ಷಿಗೆ ಹೇಳಿದನು ಶಬರ ॥
ಕಳಕಳಿಸಿ ನಗುತದಕೆ ಪತನಾ।
ವಳಿಗೆಯೆನ್ನರ ಸಂಗ್ರಹಗಳಿ।
ಲ್ಲೆಲೆ ಕಿರಾತ ಮದೀಯ ದೇಹವ ನಿನಗೆ ನಾ ಕೊಡುವೆ ॥೬೩

ಎನುತ ತಕ್ಷಣವಲ್ಲಿಯಾ ವಿಹ।
ಗನು ಬಳಿಕಲುರಿವುತ್ತಲಿಹ ಕಿ।
ಚ್ಚಿನಲಿ ಬಿದ್ದುದ ಕಂಡು ವಿಸ್ಮಯಬಟ್ಟು ಕಡುಮರುಗಿ ॥
ಇನಿತು ದಯೆಯೀ ಹಕ್ಕಿಗೀ ಪರಿ।
ಜನಿಯಿಸಿತ್ತು ಪರೋಪಕಾರಕೆ ।
ತನುವ ಕೊಟ್ಟುದು ಭಾಪುಭಾಪೆಂದೆನುತ ಹೊಗಳಿದನು॥೬೪॥

ಇಹಪರಂಗಳ ಗತಿಯನರಿಯದ ।
ವಿಹಗ ಮೊದಲಾದಿನಿತು ದಯೆಯನು ।
ವಹಿಸಿ ಜೀವವ ಕೊಟ್ಟುದೆನಿತೋ ಧೈರ್ಯವೆನ್ನೆಂತೊ॥
ಬಹಳವಾದೌದಾರ್ಯವೆಂತುಟೊ।
ಮಹಿಯೊಳಚ್ಚರಿ ಮನುಜನಾಗಿ ।
ದ್ದಿಹ ಕೃಪೆಯನಿಂತಿರದೆ ಕೆಟ್ಟೆನು ಶಿವಶಿವಾ ಎಂದ॥೬೫॥

ಭೂತದಯೆಯಿಲ್ಲದೆ ವಿಹಂಗ।
ವ್ರಾತಂಗಳ ನೆರೆ  ಕೊಂದುತಿಂದೆನು ।
ಪಾತಕವನನವರತ ಮಾಡಿದೆನೆನ್ನ ಸುಡಲೆನುತ॥
ಆತ ಮಮ್ಮಲಮರುಗಿ ಮಡಿದ ಕ।
ಪೋತನೆ ಗುರುವಾದನೆನಗೀ।
ಘಾತಕತ್ವವ ಬಿಟ್ಟೆನೆಂದು ಘನ ವಿರಕ್ತಿಯಲಿ॥೬೬॥

ಎನುತ ಪಕ್ಷಿಯ ಸದ್ಗುಣಂಗಳ।
ನೆನೆನೆನೆದು ಪುಳಕಿಸುತ ತನ್ನಯ ।
ಮನಕೆ ದಯೆ ಮೊದಲಿಲ್ಲದಿದ್ದುದ ನೆನೆದು ಕಂಪಿಸುತ॥
ಘನವೆನಿಪ ವೈರಾಗ್ಯದಲಿ ಹೋ ।
ಹೆನು ಮಹಾಪ್ರಸ್ಥಾನಕೆಂದಾಶ।
ತನು ವಹಿಲದಲಿ ತೆಗೆದು ಬಿಸುಟನು ಬಲೆಯ ಪಕ್ಷಿಗಳ॥೬೭॥

ಬಲೆಯನುರು ಖಗ ನಿವಹ ಸಾಧನ ।
ಗಳನು ಬೇಗದೊಳುರಿವ ಪಾವಕ।
ನೊಳಗೆ ಹಾಯ್ಕಿದನಧಿಕ ಶಾಂತಿಯನೈದಿ ಮನದೊಳಗೆ ॥
ಅಳುಕುತಾಗ ಪುಳಿಂದನಘಸಂ।
ಕುಳವ ಕಳಿವೆನೆನುತ್ತ ಹೋದನು ।
ಬಳಿಕ ಗಂಡನ ಸಾವ ನೋಡಿ ಕಪೋತಿಶಮರುಗಿದುದು॥೬೮॥

ಎನುತ ಮತ್ಪ್ರಾಣೇಶನಳಿದೀ ।
ಯನಲ ಮುಖದಲಿ ಬಿದ್ದು ಬಳಿಕಾ।
ತನ ಬಳಿಗೆ ತಾ ಹೋಗಿ ಇಬ್ಬರು ದಂಪತಿಗಳಾಗಿ॥
ಘನವೆನಿಪ ಸುರಲೋಕಸುಖಗಳ।
ನನುಭವೆಸುವುದೆ ಕಾರ್ಯವೆಂದಾ ।
ಅನಘಚರಿತೆ ಕಪೋತಿ ನಿಶ್ಚಯೀಸಿದುದು ಮನದೊಳಗೆ ॥೭೩॥

ಅತಿ ಮುದದಿ ತಾ ಮಿಂದು ಬಂದಾ।
ಹುತವಹನ ಹೊತ್ತಿಕ್ಕಿ ಪಾರಾ ।
ವತವು ಧಗಧಗಿಸಿ ಬೆಳಗುವ ವಹ್ನಿ ಮಧ್ಯದಲಿ ॥
ಪತಿಯ ನೆನವುತಲೆನಗೆಯೀತನ ।
ಗತಿಯೆ ಸಿದ್ಧೆಸಲೆನುತಲಿದ್ದುದು।
ಪತಗ ಜಾತಿಯೊಳಚ್ಚರಿಯಿದಾಯ್ತರಸ ಕೇಳೆಂದ॥ ೭೪॥

ಹೇಳಲಚ್ಚರಿ ಮಣಿವಿಮಾನದ।
ಮೇಲೆ ದಿವ್ಯಾಭರಣಗಳ ತೊ ।
ಟ್ಟೋಲಗಿಸಿ ಬರಲಖಿಳದಿವಿಜನಿತಂಬಿನೀ ನಿಶಹ॥
ಲೀಲೆವಡೆದಿಹ ಪತಿಯ ಕೂಡುತ ।
ಲಾ ಲಲಿತ ಗೂಣವುಳ್ಳ ಖಗವನು ।
ಕೂಲದಲಿ ಘನದಿವ್ಯ ಪದವನು ಪಡೆದುದೊಲವಿನಲಿ॥೭೫॥

ಕ್ಷಿತಿಜ ಕೇಳಾ ವ್ಯಾಧನಿಗೆಯೀ ।
ಪತಗಯಜ್ಞದ ವರ್ತನವು ತೋ।
ರಿತು ಮನದೊಳಂದವನವರ ವೈರಾಗ್ಯ ಬಲದಿಂದ ॥
ಅತಿಮುದದಲೆನಗವರ ಪರಿಯಲಿ।
ಮೃತಿಯೆ ಸಿದ್ಧಿಸಲೆನುತಲವನಾ ।
ಹುತವಹನ ಹೊಕ್ಕಳಿದನೈದಿದನಮರಲೋಕವನು॥೭೬॥

ಧರೆಯೊಳೀ ಇತಿಹಾಸವನು ಕೇ।
ಳ್ದರಿಗೆ ಗೋದ್ವಿಜಹನನ ಪಾತಕ।
ಪರಿಹರಿಸುವುದು ಪುಣ್ಯವಕ್ಷಯವಪ್ಪುದಿದನರಿತು॥
ಪಿರಿದೆನಿಸಿ ಶರಣಾಗತರನಾ ।
ದರಿಸಿ ರಕ್ಷಿಸುತಿಪ್ಪ ಮನುಜಗೆ ।
ದೊರಕುವುದು ಪರಮೇಷ್ಠಿ ಲೋಕಾವ್ಯಾಪ್ತಿಯಹುದೆಂದ॥೭೭॥

ಶರಣು ಹೊಕ್ಕನು ಸಲಹಿದವನಿಗೆ ।
ವರಸುಕೃತವಹುದೆಂಬುದಕೆ ವಿ ।
ಸ್ತರಿಸಿದನು ಲುಬ್ಧಕ ಕಪೋತಾಖ್ಯಾನವನು ಭೀಷ್ಮ॥
ಪರಮಹರುಷದಿ ಕೇಳಿಯದನ।
ಚ್ಚರಿಬಡುತ ಪಕ್ಷಿಗಳ ಸುಗುಣಕೆ।
ಶಿರವನೊಲೆವುತ ಧರ್ಮನಂದನ ಬಳಿಕಲಿಂತೆಂದ॥೭೮॥

ಆನುಶಾಸನಿಕ ಪರ್ವ.
ದಾನವಿಶೇಷಗಳ ವಿವರಣೆ.
ಸೂಚನೆ:
ಪಲವು ತೆರನಾಗಿಪ್ಪ ದಾನಾ।
ವಳಿಯ ಮಹಿಮೆಯನೊಲಿದು ವಿವರಿಸಿ।
ತಿಳುಹಿದನು ತಟನೀತನೂಜನಜಾತಶತ್ರುವಿಗೆ॥

ಕೇಳು ಜನಮೇಜಯ ಧರಿತ್ರೀ।
ಪಾಲ ಕುಂತೀತನುಜನಧಿಕ ವಿ ।
ಶಾಲಮತಿ ಭೀಷ್ಮನನು ದಾನಾವಳಿಯ ಮಹಿಮೆಗಳ ॥
ಹೇಳು ನೀನಿನ್ನೆನುತ ಕೇಳಲು ।
ಲಾಲಿಸುತಲಾ ನುಡಿಯ ತನ್ನರ ।
ಪಾಲಪತಿ ಮುನಿಮುಖ್ಯರಿದಿರೊಳು ಭೀಷ್ಮನಿಂತೆಂದ॥೧॥

ಧರಣಿಪಾಲಕ ಕೇಳು ಗೋವಿನ ।
ಖುರಗಳಿಗೆ ರಜತದಲಿ ಕಾರ್ತ ।
ಸ್ವರದಿ ಶೃಂಗಗಳಿಗೆ ಸದಲಂಕಾರವನು ಮಾಡಿ॥
ವರವಸನವನುಪ ಪೊದಿಸಿ ದಕ್ಷಿಣೆ।
ವೆರಸಿ ಸದ್ಬ್ರಾಹ್ಮಣಗೆ ಕೊಟ್ಟರೆ ।
ಪಿರಿದೆನಿಪ ಪರಮೇಷ್ಠಿ ಲೋಕಾವಾಪ್ತಿಯಹುದೆಂದ॥೨॥

ಸುರನದೀಸುತ ಮತ್ತೆ ನುಡಿದನು।
ಧರಣಿಪತಿ ಕೇಳ್ ಶತ್ರು ದೈನ್ಯವ ।
ಬೆರಸಿ ಬಂದರೆ ಶರಣು ಹೊಕ್ಕರೆ ಅವರಭೀಷ್ಟವನು॥
ಪರಮ ಹರುಷದಲಿ ಸಲಿಸುವಾತನೆ ।
ಪುರುಷರೊಳಗುತ್ತಮನು ವಿಶ್ವಂ।
ಭರೆಯೊಳಾತನೆ ಪುಣ್ಯವಂತರೊಳಧಿಕನೆನಿಸುವನು॥೭॥

ಎಲೆ ನೃಪತಿ ಭೂಮಿಪ್ರದಾನಂ ।
ಗಳಲಿ ವೆಗ್ಗಳವಹುದು ಧಾನ್ಯಂ ।
ಗಳು ವಸನ ಧನ ಮಣಿಗಳಲ್ಲಿಯೆಹುಟ್ಟುವದರಿಂದ॥
ಒಲಿದು ಭೂಮಿಯ ದಾನವಿತ್ತಡೆ ।
ಲಲಿತ ಮಣಿಕನಕಾದಿದಾನಂ।
ಗಳನನೇಕವ ವಿರಚಿಸಿದ ಫಲವಹುದು ತಥ್ಯವಿದು॥॥೧೦॥

ಎಲೆ ನೃಪತಿ ಕೇಳಿನ್ನು ದಾನದ ।
ಫಲವ ಹೇಳ್ವೆನು ಹವ್ಯಕವ್ಯಂ ।
ಗಳಿಗೆ ಅನ್ನವೆ ಮುಖ್ಯವಾದುದರಿಂದಲನವರತ॥
ಸಲೆ ಹೊಗಳುತಿಹರನ್ನವನು ಮುನಿ।
ಗಳು ಸುರರು ಕೇಳ್ ಸಕಲ ಭೂತಾ ।
ವಳಿಗೆಯನ್ನವೆ ಜೀವವೌನೆಸುವುದದಕೆ ಸರಿಯಿಲ್ಲ॥೧೬॥

ಅನ್ನದೃನವ ಪೋಲೂವ ದಾನಗ।
ಳಿನ್ನು ಜಗದಲಿ ಹಿಂದುಮುಂದಿ।
ಲ್ಲನ್ನವೇ ಪ್ರಾಣಕೆ ಕಾರಣವೆನಿಪುದದರಿಂದ ॥
ತನ್ನನುಳಿದಾದರೆಯು ಭಕ್ಷಿಸು।
ವನ್ನವನು ಬಂದತಿಥಿಚಯಕಾ ।
ವನ್ನ ಜನಕಿಕ್ಕಿದೊಡೆ ಉತ್ಕಟ ಪುಣ್ಯತರವೆಂದ॥೧೭॥

ತರುಣಿಯರಿಗೆ ಶ್ರಾಂತರಿಗೆ ವೃ।
ದ್ಧರಿಗೆ ಗರ್ಭಿಣಿಯರಿಗೆ ವಿಕಲಾಂ।
ಗರಿಗೆ ಬಾಲಕರಿಗೆ ತಪಸ್ವಿಗೆ ಅತಿದರಿದ್ರರಿಗೆ॥
ಕರೆದು ಕರುಣದಲನ್ನದಾನವ ।
ವಿರಚಿಸಿದಡತಿ ಸುಕೃತವಪ್ಪುದು।
ಧರಣಿಪತಿ ಕೇಳನ್ನದಾನಕೆ ಪಾತ್ರವಖಿಳಜನ॥೧೮॥

ಅರಸ ಕೇಳ್ಪಾನೀಯ ದಾನದೊ।
ಳುರುತರದ ಫಲವೆಂದು ಮನುಮುನಿ।
ಪರುಗಳೆಲ್ಲರಿಗರುಹಿದನು ಪೂರ್ವದಲಿಯದರಿಂದ ॥
ವರತಟಾಕವ ವಾಪಿಗಳ ಪು।
ಪುಷ್ಕರಣಿಗಳನರವಟ್ಟಿಗೆಗಳನು।
ಪಿರಿದೆನಿಸಿ ಕಟ್ಟಿದ ಮಹಾತ್ಮನು ಪುಣ್ಯತಮನೆಂದ॥೨೪॥

ಜನಪ ಕೇಳಾಪವನು ಮಾಡಿದ।
ಘನ ಜಲಾಶಯಗಳಲಿ ಗೋವುಗ।
ಳನವರತ ಸಲಿಲಗಳನೀಂಟುವವವನಕುಲದವರು ॥
ವನಜಪೀಠನ ಲೋಕವನು ಪೊ ।
ಕ್ಕನುದಿನದಲಮೃತವನೌ ಸೇವಿಸು।
ತನುಪಮರು ತಾವಹರೈ ಪುಸಿಯಲ್ಲೆಂದನಾ ಭೀಷ್ಮ॥೨೫॥

ಕ್ರೂರನಿಗೆ ನಾಸ್ತಿಕಗೆ ದುಷ್ಟಾ।
ಚಾರಯುಕ್ತಗೆ ಕೊಟ್ಟಡಾಕಳ ।
ಘೋರ ದುಃಖವ ಧರಿಸಿ ಕೊಟ್ಟಾತಂಗೆ ನರಕವನು॥
ಸೇರಿಪುದು ತಿಳಿದಿದನು ಪಾಂಡುಕು ।
ಮಾರನೀ ಸತ್ಪಾತ್ರವರಿದು ವಿ।
ಚಾರಪರನೆಂದೆನಿಸಿ ದಾನವ ಮಾಡು ಧೇನುಗಳ॥೩೪॥

ಶ್ವೇತಕೇತು ಉಪಾಖ್ಯಾನ.

ಖ್ಯಾತವಾದಿತಿಹಾಸವೊಂದನು ।
ಭೂತಳಾಧೀಶ್ವರನೆ ಕೇಳೈ।
ಶ್ವೇತಕೇತುಸಮಾಖ್ಯಮುನೆಪತಿ ತನ್ನ ಪುತ್ರನನು ॥
ಪ್ರೀತಿಯಲಿ ತಾ ಕರೆದು ಪುಷ್ಪ।
ವ್ರಾತಗಳನಿಂಧನಗಳನು ತಟಿ।
ನೀತಟದೊಳಾನಿರಿಸಿ ಬಂದೆನು ಕೊಂಡುಬಾಯೆಂದ॥೬೦॥

ಪ್ರಿಯದೆನಾಗಳೆ ನಾಚಿಕೇತಾ ।
ಹ್ವಯನೆನಿಪ ತತ್ಪುತ್ರನಾ ತಟಿ।
ನಿಯ ತಟಕೆ ಪೋಗಿ ನೋಡಿದನಲ್ಲಿ ನದಿಯುಕ್ಕಿ॥
ರಯದಿ ಪರಿವುತಲಾಗ ಸುಸಮಿ।
ಚ್ಚಯವ ಕುಸುಮವ ಕೊಂಡುಪೋದುದು।
ಭಯಬಡುತಲಿಲ್ಲೆನುತ ಬಂದನು ತಂದೆಯಿದ್ದೆಡೆಗೆ॥೬೧॥

ಶ್ವೇತಕೇತುಮುನೀಂದ್ರನಾ ಕ್ಷಣ ।
ವಾ ತನುಜನನು ನೋಡಿ ಗರ್ಜಿಸಿ।
ಯಾತುರದ ಮರುಷದಲಿ ಹಸಿವಿನಲಾದ ಕಿಸುರಿನಲಿ॥
ನೀ ತಡೆಯದಿಧ್ಮವನು ಪೂಸಂ ।
ಘಾತವೊಂದನು ತಾರದಾದತ।
ಪ್ರೇತಪತಿಯ ನಿರೀಕ್ಷಿಸಲು ಪೋಗೆನುತ ಶಾಪಿಸಿದ॥ ೬೨॥

ಜನಪ ಕೇಳ್ತಕ್ಷಣದೊಳಾ ಮುನಿ ।
ತನುಜನಳಿದನು ಮಗನ ಸಾವಿಗೆ।
ಮನಮರುಗಿಯಾ ಶ್ವೇತಕೇತು ಮುನೀಂದ್ರನೈತಂದು ॥
ಘನವೆನಿಸಿ ಕಣ್ಣೀರು ಸುರಿಯಲು ।
ಮುನಿದು ಕೊಂದೆನಲಾಯೆನುತ ಪು ।
ತ್ರನ ಶವವನೀಕ್ಷಿಸುತ ಪಂಬಲಿಸುತ್ತಲಿರುತಿರಲು॥೬೩ ॥

ಬಳಿಕಲಾ ಸಮಯದಲಿ ಅಸ್ತಾ।
ಚಲದ ಶಿಖರವನೇರಿದನು ರವಿ।
ಬಲಿದ ಶೋಕದ ತಮದೊಡನೆ ತಮವೈದೆ ಪಸರಿಸಿತು॥
ಕಳೆದನಿರುಳನು ದುಃಖದಲಿ ಮುನಿ ।
ಬಲಮಥನದಿಗ್ಭಾಗದಲಿಯಾ।
ಜಲಜಸಖನುದಯಿಸಿದ ಬಂದುದು ಜೀವ ತತ್ಸುತಗೆ॥೬೪॥

ಭೂತಳಾಧಿಪ ಕೇಳು ಬಳಿಕಾ ।
ಶ್ವೇತಕೇತುಮುನೀಶ್ವರನು ತನು।
ಜಾತ ಜೀವಿಸಿದುದಕೆ ವಿಸ್ಮಯ ಹರುಷವನು ಧರೆಸಿ ॥
ಆ ತನುಜನೊಳು ನುಡಿದ ಮತ್ಪು ।
ಣ್ಯಾತಿಶಯದಲಿ ನೀನು ಬದುಕಿದೆ।
ಭೂತಪತಿ ಸಲಹಿದನಲಾಯೆನುತಲಾಗಲಪ್ಪಿದನು॥೬೫॥

ಮುನಿದು ತಾ ಶಪಿಸಿದೆನೆಲೆ ನಂ।
ದನನೆ ನಿನ್ನನು ಬಳಿಕಲೀ ತನು।
ವನು ತೊರೆದು ಪರಲೋಕಕೈದಿದೆ ಈಗ ಜೀವಿಸಿದೆ॥
ಎನಗೆ ಪುಣ್ಯವು ಫಲಿಸಿದುದು ಕೇ।
ಳನಘ ನೀನೇ ಧನ್ಯನಹೆ ಇಂ।
ದಿನಲಿ ನಿನ್ನ ಗತಾಗತಂಗಳನರುಹು ನನಗೆಂದ॥೬೬॥

ಎನೆ ಬಳಿಕಲಾ ನಾಚಿಕೇತಾ ।
ಹ್ವನು ಬಳಿಕ ಪೊಡಮಡುತಲಿಂತೆಂ।
ದನು ಪಿತಗೆ ನಿಮ್ಮಾಜ್ಞೆಯಲಿ ಪರಲೋಕಕ್ಕೈದಿದೆನು॥
ಎನಗಿದಿರುವಂದನು ಕೃತಾಂತನು।
ಕನಕಪೀಠದೊಳೆನ್ನನಿರಿಸಿದ।
ವಿನಯದಿಂದರ್ಘ್ಯಾದಿ ಸತ್ಕಾರಗಳ ವಿರಚಿಸಿದ॥೬೭॥

ಬಳಿಕ ನುಡಿದೆನು ಯಮನೊಡನೆ ನಾ।
ನೆಲೆ ಶಮನ ನಾನಾವ ಲೋಕದೊ ।
ಳೊಲಿದಿರಲಿ ಪೇಳೆನಲು ಮತ್ತೆ ಕೃತಾಂತನಿಂತೆಂದ॥
ಅಳಿವು ನಿನಗಾಯ್ತಿಲ್ಲ ಕೇಳ।
ಗ್ಗಳದ ಕೋಪದಿ ನಿನ್ನ ಪಿತೃವೀ ।
ಗಳೆ ನಿರೀಕ್ಷಿಸು ಯಮನನೆಂದುರೆ ನಿನ್ನ ಶಾಪಿಸಿದ॥೬೮॥

ಮುನಿಯ ವಚನವು ತಪ್ಪದಂದದ।
ಲನಘ ಕೇಳೀಕ್ಷಿಸಿದೆ ನನ್ನನು।
ಮನವೊಲಿದು ನೀನಿನ್ನು ವಸುಧಾಸ್ಥಳಕೆ ಹೋಗೆನಲು॥
ವಿನಯ ಮಿಗಲಾ ಯಮನೊಡನೆ ನುಡಿ।
ದೆನು ಬಳಿಕನಾ ಪುಣ್ಯಲೋಕಗ।
ಳನು ನಿರೀಕ್ಷಿಪ ಬಯಕೆಯಾದುದು ತೋರು ನೀನೆಂದು॥೬೯॥

ಎಲೆ ಜನಕ ಕೇಳ್ ಮಣಿ ವಿಮಾನವ ।
ನೊಲಿದು ತನ್ನೊಡನೇರಿ ಮತ್ಕರ ।
ತಳದೊಡನೆಯಂತಕನು ನಿಜಕರತಳವ ತಳುಕಿಕ್ಕಿ ॥
ಸಲೆ ಮಧುರವಚನದಲಿ ಇದು ವೆ ।
ಗ್ಗಳವೆನಿಸುವುದು ಪುಣ್ಯಲೋಕಂ।
ಗಳೊಳೆನುತ ತನಗೊಂದು ಲೋಕವನಾಗ ತೋರಿದನು॥೭೦॥

ಪ್ರಕಟವಾಯ್ತುದು ಭಕ್ಷ್ಯಭೋಜ್ಯಾ।
ಧಿಕ ಗಿರಿಗಳಲಿ ಹೇಮಮಯ ದೀ।
ರೂಘಿಕೆಗಳಲಿ ಬಹು ಫಲದ ದುಗ್ಧಾನ್ನಪ್ರತಾನದಲಿ॥
ಸಕಲ ಪುಷ್ಪಸುಗಂಧಭೂಷಣ।
ನಿಕರ ಮುಖ್ಯಸುಭೋಗಯೋಗಾ।
ಧಿಕ ಪದಾರ್ಥಂಗಳ ವಿವರ ಘೃತದುಗ್ಧ ನದಿಗಳಲಿ ॥೭೧॥

ಇಂತೆಸೆವ ಲೋಕವನು ನೋಡಿ ಕೃ।
ತಾಂತನೊಳು ನಾ ನುಡಿದೆನಾಗಳ ।
ನಂತ ಮಹಿಮೆಯಲೆಸೆವ ಲೋಕವಿದಾರದರುಹೆನಲು॥
ಅಂತಕನು ತನ್ನೊಡನೆ ಪೇಳ್ದನು ।
ಸಂತಸದಿಭಕ್ತಿಯಲಿ ವರಗೋ ।
ಸಂತತಿಯ ದಾನವನು ವಿರಚಿಸಿದವರ ಲೋಕವಿದು॥೭೨॥

ಅವನಿಯೊಳು ಭಕ್ತಿಯಲಿ ಗೋದಾ॥
ನವನು ಸತ್ಪಾತ್ರಕ್ಕೆಯತ್ಯು ।
ತ್ಸವದಿ ಮಾಡಿದ ಮಾನವರಿಗೀ ಲೋಕ ಸಿದ್ಧೆಪುದು ॥
ಭುವನದೊಳಗೀ ಲೋಕವನು ಪೋ ।
ಲುವ ಮಹೋತ್ತಮ ಲೋಕವಿಲ್ಲದ ।
ನವಧರಿಸು ನೀನೆನುತ ಮತ್ತೆ ಕೃತಾಂತನಿಂತೆಂದ॥೭೩

ಅತುಲಮಹಿಮೆಗಳುಳ್ಳ ಗೋಸಂ।
ತತಿಯೆ ತಿಗ್ಮಾಂಶುವಿನ ಗೋಸಂ ।
ತತಿಯ ಪೋಲ್ವಡೆ ಧೇನುದಾನವೆನುತ್ತ ಭಕ್ತಿಯಲಿ॥
ಸತತ ಮಾಡುವನರರೆ ಸೂರ್ಯ ।
ಪ್ರತಿಮರಹರದರಿಂದೆನುತ ತ।
ತ್ಪಿತೃಪತಿಯು ಬೋಧಿಸಿದನೆಂದಾ ಜನಕಗರುಹಿದನು ॥೭೪॥

ಬಳಿಕ ಕಳುಹಿದನೆನ್ನನಂತಕ ।
ನಿಳೆಗೆ ಬಂದೆನು ನಾನೆನುತ ಮುನಿ।
ತಿಲಕನೆನಿಪಾ ಶ್ವೇತಕೇತುವಿಗಾಗ ವಿನಯದಲಿ॥
ತಿಳುಹಿದನು ಮತ್ಪುತ್ರನೆಂದದ ।
ನೊಲಿದು ಭೀಷ್ಮನು ಧರೂಮಪುತ್ರನು ।
ನಲಿವ ರೀತಿಯಲರುಹಿ ಮತ್ತಾ ನೃಪತಿಗಿಂತೆಂದ॥೭೫॥

ಹನ್ನೊಂದನೆಯ ಸಂಧಿ.

ಭೀಷ್ಮ ದೇಹತ್ಯಾಗ - ಗಂಗೆಗೆ ಶ್ರೀ ಕೃಷ್ಣನಿಂದ ಸಾಂತ್ವನ.
ಸೂಚನೆ: ಸುರನದೀನಂದನನು ಲೋಕಾಂ।
            ತರಕೆ ಪೋಗಲು ಧರ್ಮಪುತ್ರನು ।
             ವಿರಚಿಸಿದ ವಿಧ್ಯುಕ್ತ ಧರ್ಮದಲೂರ್ಧ್ವದೇಹಿಕವ॥

ಕೇಳು ಜನಮೇಜಯ ಧರಿತ್ರೀ।
ಪಾಲ ಗಂಗಾಸೂನು ಕಳುಹಲು ।
ಲೀಲೆಯಲಿ ಧರ್ಮಜನು ಬಂದತಿ ಧರ್ಮಪರನಾಗಿ॥
ಪಾಲಿಸಿದನವನಿಯನು ದಿನಗಳು।
ಮೇಲೆಯೈವತ್ತಾಗಿ ಮಕರದ ।
ಮೇಲೆಯುತ್ತರ ಪಥಕೆ ಸೂರ್ಯನು ರಥವ ತಿಳುಹಿದನು॥೧॥

ಜಲಜಹಬಾಂಧವನುತ್ತರಾಯಣ ।
ದಲಿ ನಡೆಯತೋಡಗಿದನು ಭೀಷ್ಮನ ।
ಬಳಿಗೆ ಹೋಗಲು ಬೇಕು ನಾವಿನ್ನೆನುತ ನಿಶ್ಚೈಸಿ ॥
ಜಲಜನಯನಂಗರುಹಿ ಕರುಣಾ ।
ಜಲಧಿ ಹೋಹೆವೆನುತ್ತ ಕೃಷ್ಣನ ।
ನಿಳಯದೊಳಗಿರೆ ವಿದುರನು ಕಳುಹಿದರು ಸಂತಸದಿ॥೨॥

ವಿನಯದಲಿ ಕರೆಸಿದನು ಧೃತರಾ।
ಷ್ಟ್ರನನು ಗಾಂಧಾರಿಯನು ತನ್ನಯ ।
ಜನನಿಯನು ಸಚಿವರನು ಸಂಜಯನನು ಯುಯುತ್ಸುವನು॥
ಧನವ ಬಹಳವ ಕಲ್ಪಿಸಿದನೂ ।
ತನವಸನ ಮಾಲ್ಯಾನುಲೇಪನ ।
ಮಣಿವಿಭೂಷಣರಾಜಿತಗಳ ತರಿಸಿದನು ಯಮಸೂನು॥೩॥

ಪಿರಿದೆನಿಸುವಂತುಚಿತವಸ್ತೂ।
ತ್ಕರವನೆಲ್ಲವ ತರಿಸಿ ಕಟ್ಟಿಸಿ ।
ಧರಿಸಿ ಧೌಮ್ಯನ ಮಂತ್ರಕೋವಿದರಾದ ಯಾಜಕರ ॥
ವರಮುನೀಶ್ವರರುಗಳ ವಿಪ್ರರ ।
ಕರೆಸಿ ದೇವಸಮೂಹಗಳ ಸುರು ।
ಚಿರ ಬಹಳ ರತ್ನಾಳಿಗಳ ತರಲೆಂದು ನೇಮಿಸಿದ ॥೪॥

ಪಲವ ಚಂದನಕಾಷ್ಟಚಯಗಳ ।
ಪಲವು ಘಟಕುಂಭಗಳಲಗ್ನಿಯು।
ಲಲಿತ ತಿಲದರ್ಭಾಕ್ಷತಾವಳಿಗಳನು ತರಲೆಂದು॥
ಒಲಿದುಚಿತ ಜನರಿಗೆ ನಿಯೋಗಿಸಿ।
ಬಳಿಕ ಪಾಂಡುಕುಮಾರಕಾಗ್ರಜ ।
ಜಲಜಲೋಚನನೊಡನೆ ಹಸ್ತಿನಪುರವ ಹೊರವಂಟ॥೫॥

ಅನಿತು ಪರಿಯ ಸುವಸ್ತುಗಳ ಕೊಂ।
ಡನಿಬರನು ಮುಂದಿಟ್ಟುಕೊಂಡಾ ।
ಮನುಜನಾಯಕನಾ ಕುರುಕ್ಷೇತ್ರಕ್ಕೆ ನಡೆತಂದು ॥
ಮನವೊಲಿದುಭಾಗೀರಥಿನಂ।
ದನನು ಮಲಗಿರೆ ಸರಳಮಂಚದೊ।
ಳನಿತು ದೂರದೊಳಚ್ಯುತನು ಸಹಿತರಸ ರಥವಿಳಿದ॥೬॥

ಅನಿಬರೊಡನಾ ಪಾಂಡುನೃಪನಂ।
ದನನು ಪಾರೃಶರಿಯ ನಾರದ ।
ಮುನಿಪ ಮುಖ್ಯ ಸಮಸ್ತಸಂಯಮಿ ವರರು ಬಳಸಿರಲು॥
ಘನಮಹಿಮನಹ ಸುರನದೀನಂ ।
ದನನ ಹತ್ತಿರ ಸೇರಿ ಸುರಮುನಿ।
ಜನಕ ವಂದಿಸಿ ಬಳಿಕಲಾ ಭೀಷ್ಮರಿಗೆ ನಮಿಸಿದನು॥೭॥

ವನಜನಾಭನ ಧ್ಯಾನತತ್ಪರ।
ನೆನಿಸಿ ಯೋಗದೊಳಿಪ್ಪ ಗಂಗಾ।
ತನುಜನನು ನುಡಿಸಿದನು ನಿಜಭಯಭರಿತ ವಿನಯದಲಿ॥
ಮುನಿಚರಿತ ನಾ ಬಂದೆ ಯಮನಂ।
ದನನು ನಿಮ್ಮಡಿಗಳಿಗೆಯಭಿವಂ।
ದನವ ಮಾಡಿದೆಯವಸರವ ಕೊಡಬೇಕು ನನಗೆಂದ॥೮॥

ಅನಘ ಕೇಳ್ವೈಶ್ವಾನರನು ಮೊದ।
ಲೆನಿಪ ವಿವಿಧ ದ್ರವ್ಯಗಳ ತಂ ।
ದೆನು ಪ್ರಿಯದಲೈತಂದರಿದೆ ಧೌಮ್ಯಾದಿ ಋತ್ವಿಜರು॥
ವನಜನಾಭನು ಕುಂತಿ ಧೃತರಾ।
ಷ್ಟ್ರನು ವಿದುರ ಗಾಂಧಾರಿ ಮೊದಲಾ।
ದನಿಬರಿದೆ ಬಂದರು ಸುಹೃಜ್ಜನವಿವರ ನೋಡೆಂದ॥೯॥

ಪರಿಜನವು ಪುರಜನವು ಧರಣೀ।
ಸುರ ಜನವು ನಡೆತಂದರಿದೆ ನಿ।
ನ್ನುರುತರದ ಮಹಿಮೆಯನು ನೋಡಲು ಭಾವಶುದ್ಧಿಯಲಿ ॥
ಕರೈಣದಿಂದಿವರನು ನಿರೀಕ್ಷಿಸು ।
ಚರಮಯೋಗಿಶ್ರೇಷ್ಠನೆಂದಾ ।
ದರಿಸಿ ನುಡಿಯಲು ಕೃಷ್ಣನನು ನೋಡುತ್ತ ಕಣ್ದೆರೆದ॥೧೦॥

ವನಜನಾಭನ ದಿವ್ಯಮೂರ್ತಿಯ ।
ಮನದಣಿಯೆ ನೋಡಿದನು ಬಳಿಕಂ।
ದನಿಬರನು ಮಾತಾಡಿಸಿದ ಲಾಲಿಸುತ ಮುನಿಗಳನು॥
ಮನವೊಲಿದು ಬಳಿಕಾ ನದೀನಂ।
ದನನು ನಿಜಕರತಳದಿ ಯಮನಂ ।
ದನನ ಕರವನು ಪಿಡಿದು ನುಡಿದನು ಬಹಳ ವಿನಯದಲಿ॥೧೧॥

ಬಂದೆಯಾ ಯಮತನುಜ ಬಾಂಧವ ।
ವೃಂದಸಹಿತುಚಿತವನು ಮಾಡಿದೆ।
ನಂದವೆನಿಸಿದ ಪುಷ್ಯಮಾಸವು ಶುದ್ಧ ದ್ವಾದಶಿಯು॥
ಇಂದು ಕೃಷ್ಣನ ಪರಮ ಕೃಪೆಯಲಿ।
ತಂದು ಸೇರಿಸಿತೆಂದ ಗಂಗಾ।
ನಂದನನು ಧೃತರಾಷೂಟ್ರನೃಪತಿಗೆ ಬಳಿಕಲಿಂತೆಂದ॥೧೨॥

ನೀನು ಪಿರಿದೆನೆ ವೇದಶಾಸ್ತ್ರ।
ಜ್ಞಾನವುಂಟಾದವನು ಮತ್ತ।
ನ್ಯೂನ ಧರ್ಮರಹಸ್ಯಗಳೆಲ್ಲವನು ಬಲ್ಲವನು॥
ಸೂನುವುಗಳಿಸಿದರು ದೈವಾ ।
ಧೀನವಶುಭಶುಭಗಳರಿದಿದ ।
ಮಾನಸದೊಳಿರಿಸದಿರು ಚಿಂತೆಯನೆಂದು ಬೋಧಿಸಿದ॥೧೩॥

ಕೇಳು ಧೃತರಾಷ್ಟ್ರಾವನಿಪ ನೀ।
ನಾಲಿಸೈ ಪಾಂಡುವಿನ ಮಕ್ಕಳ ।
ಲೀಲೆಯಲಿ ನೀ ಪಡೆದ ಸುತರಿವರೆಂದು ನಿಶ್ಚೈಸು॥
ಲೀಲೆವುಳ್ಳವರಿವರು ನೀನಿವ ।
ರೂಳಿಗವ ಕೈಕೊಳ್ಳು ಕೃಪೆಯಲಿ।
ಪಾಲೆಸೆಂದಾ ಭೀಷ್ಮ ಗಲ್ಲವ ಪೆಡಿದು ಬೋಧಿಸಿದ ॥ ೧೪॥

ಧರ್ಮನಂದನನೀತ ಸಾಕ್ಷೃ।
ದ್ಧರ್ಮವೇ ನರರೂಪನಾದನು।
ಧರ್ಮಹೀನರು ಕ್ರೋಧಿಗಳು ಲುಬ್ಧರು ಭವತ್ಸುತರು ॥
ದುರ್ಮತಿಗಳವದಿರನು ನೆನೆಯದೆ ।
ನಿರ್ಮಳಾತ್ಮಕನೆನಿಸಿ ಮುಕ್ತಿಯ ।
ಧರ್ಮಜನ ದೆಸೆಯಿಂದ ಪಡೆ ನೀನೆಂದನಾ ಭೀಷ್ಮ ॥೧೫॥

ಬಳಿಕ ಗಂಗಾಸೂನು ಕೃಷ್ಣಂ।
ಗೊಲಿದು ಕೈಗಳನು ಮುಗಿದು ಪೊಗಳಿದ।
ನೆಲೆ ಜನಾರ್ದನ ಭಕ್ತವತ್ಸಲ ಶಂಖಚಕ್ರಧರ।
ಲಲಿತಶಾರ್ಙಾಯುಧಲಸತ್ಕರ ।
ತಳ ಕೃಪಾನ್ವಿತ ಕೃಷ್ಣ ಕೇಶವ।
ಕಲುಷಹರ ಕರುಣಾಮಯದ ದೃಷ್ಟಿಯಲಿ ನೋಡೆಂದ॥೧೬॥

ನಿನಗೆ ನಾ ನಿಜಭಕ್ತ ನಿನ್ನಡಿ ।
ವನಜಗಳನೇ ನಂಬಿದೆನು ತಾ।
ನೆನಿತು ಧನ್ಯನೊನಿನ್ನ ಮೂರ್ತಿಯ ಕಾದಿ ಫಲವಾಯ್ತು॥
ಘನವೆನಿಪ ಕೃಪೆಯಲಿ ನಿರೀಕ್ಷಿಸು ।
ವನಜಲೋಚನ ಭಕ್ತವತ್ಸಲ।
ಜನನ ಮರಣವಿದೂರಜಯಜಯ ಎಂದನಾ ಭೀಷ್ಮ ॥೧೭॥

ಸರಸಿಜೇಕ್ಷಣ ಭೂಮಿಭಾರವ ।
ಪರಿಹರಿಸಲೋಸುಗ ಜನನವ।
ಧರಿಸಿ ಸುರರನು ಸಲಹಿ ಪಾಂಡುನೃಪರ ದೆಸೆಯಿಂದ॥
ದುರುಳಕೌರವರಾದಿಯಾಗಿ ।
ದ್ದರಸುಗಳ ಕೊಲ್ಲಿಸುತ ಭಕ್ತರ ।
ಕರುಣದಲಿ ಸಲಹಿದೆಯಲಾ ಜಯಜಯ ನಮೋ ಎಂದ॥೧೮॥

ದೇವ ನಿನ್ನವತಾರ ಮಹಿಮೆಯ ।
ದೇವಮುನಿ ನಾರದನು ವ್ಯಾಸನು।
ದೇವಲನು ಮೊದಲಾದ ಋಷಿಗಳು ತನಗೆ ತಿಳುಹಿದರು ॥
ಆವ ವಿಧದಲಿ ನಿನ್ನ ನಂಬಿದೆ।
ದೇವ ಭವಸಿಂಧುವನು ದಾಂಟಿದೆ।
ದೇವ ನಿನ್ನಯ ಪರಮಪದವನು ಪಡೆದೆ ನಾನೆಂದ॥೧೯॥

ಎನಲು ಕೃಪೆಯಲಿ ಕೃಷ್ಣನಾ ಭೀ।
ಷ್ಮನ ಮುಖವನಾದರದಲೀಕ್ಷಿಸಿ।
ಮನವೊಲಿದು ಮೈದಡವಿ ನಿನ್ನವೊಲಾರು ಸುಕೃತಿಗಳು॥
ಜನಕ ಭಕ್ತಿಯ ಬ್ರಹ್ಮಚರ್ಯದ ।
ಘನತಪಃಫಲದಿಂದ ಭಕ್ತರ ।
ನೊನದಂತಿದೆ ತನ್ನ ಭಕ್ತರೊಳಧಿಕ ನೀನೆಂದ॥ ೨೦॥

ನಿನಗನುಜ್ಞೆಯ ಕೊಟ್ಟನಾನಿಂ।
ದಿನಲಿ ವಸುಗಳು ಕೂಡಿ ತನ್ನಯ ।
ಘನತರ ಸಾಲೋಕ್ಯವನು ಪಡೆಯೆಂದು ಹರಿ ನುಡಿಯೆ॥
ಮುನಿಗಳನು ನೋಡಿದನು ಧರ್ಮನ।
ತನಯ ಧೃತರಾಷ್ಟ್ರಾದಿಗಳ ಅಂ।
ದನುಮತಿಯ ಪಡೆವುತ್ತ ಯಮಸುತಾದಿಗಳಿಗಿಂತೆಂದ॥೨೧॥

ಎಲೆ ಯುಧಿಷ್ಠಿರ ಕೇಳು ವಿಪ್ರಾ ।
ವಳಿಯನನುದಿನ ಪೂಜಿಸಿನ್ನವ।
ರೊಳಗೆ ಭೂಸುರಮುಖ್ಯರಾಚಾರ್ಯರಿಗೆ ವೃದ್ಧರಿಗೆ ॥
ಬಲಿದು ಪೂಜೆಯನೊಲಿದು ಧರ್ಮಂ।
ಗಳನು ಕೀರ್ತಿಯ ಗಳಿಸು ಕೋಷ್ಣನೊ।
ಳೊಲವ ಪಡೆದದರಿಂದ ಸುಖಿಯಾಗೆಂದು ಹರಸಿದನು॥೨೨॥

ಎಂದರುಹಿ ಪೂರ್ವದಲಿ ಭೂಸುರ।
ವೃಂದವನು ತಾನೋಡಿ ಕೆಲದ ।
ಲ್ಲಂದು ರತ್ಸನಾದಿಗಳ ವಿಪ್ರಾದಿಗಳಿಗೆ ಕರೆದಿತ್ತು ॥
ಬಂದ ಪುರಜನ ಪರಿಜನಂಗಳ ।
ಲಂದವೆನಲಾದರಿಸಿ ಮತ್ತೆ ಮು।
ಕುಂದನಿಗೆ ಕೈಮುಗಿದು ಕಣ್ಮುಚ್ಚಿದನು ಯೋ ಗದಲಿ॥೨೩॥

ಕಮಲನೇತ್ರನ ಧ್ಯಾನವನು ಹೃ।
ತ್ಕಮಲದೊಳು ನೆಲೆಗೊಳಿಸಿ ಇಂದ್ರಿಯ ।
ಭ್ರಮೆಗಳನು ತೊಲಗಿಸುತ ಮೂರ್ಧಾ ನಿಲನ ನೆರೆ ನಟಿಸಿ ॥
ಕ್ರಮದಿ ವಾಯುಗಳನು ನಿರೋಧಿಸಿ ।
ವಿಮಲಬ್ರಹ್ಮಾನಂದ ವಸ್ತುವ ।
ನಮಿತಯೋಗಾರೂಢನಾದನು ವರಸಮಾಧಿಯಲಿ॥೨೪॥

ಬಳಿಕ ನಡುನೆತ್ತಿಯನು ಭೇದಿಸಿ ।
ಲಲಿತ ತೇಜಃಪುಂಜ ದೆಸೆಗಳು ।
ಬೆಳಗೆ ಹಾಯ್ದುದು ತರಣಿಮಂಡಲ ಮಧ್ಯಮಾರ್ಗದಲಿ॥
ನಳಿನನಾಭನು ಸಕಲ ಮೈನಿಗಳು ।
ಹೊಳೆವ ತೇಜೋಮಯವನೀಕ್ಷಿಸು।
ತಳುಕಿ ಕಣು ಪಾರೈಸೆ ಜಯಜಯಯೆಂದುದಖಿಳಜನ॥೨೫॥

ಸುರರು ಸುರುಚಿರಪುಷ್ಪವೃಷ್ಟಿಯ।
ಸುರಿದರಾ ಸಮಯದಲಿ ಭೋರೆನೆ।
ಮೆರೆಯೆ ಸುರದುಂದುಭಿಗಳಿಂದ್ರಾದ್ಯಖಿಳ ಜಗಧಿಪರು॥
ಪರಮ ಹರುಷದಿ ಕೀರ್ತಿಸಿದರಾ ।
ಹರಿಯ ಕೃಪೆಯನು ಧುನಿಕುಮಾರಕನ।
ಪರಮ ಭಕ್ತಿಯ ನೋಡಿ ಪೊಗಳಿದುದಖಿಳ ಭುವನಜನ॥೨೫॥

ಬಳಿಕ ಪುರಜನವಗರು ಕಾಷ್ಟಂ।
ಗಳಲಿ ಚಂದ ದಾರು ಸಂಚಯ ।
ಗಳಲಿ ಸಮಪಂಥಸ್ಥಳದೊಳೊಟ್ಟಿದರು ಘನಚಿತೆಯ॥
ಜ್ವಲನ ಮಿಗೆ ಹೊತ್ತಿಕ್ಕಿ ಮಿಗೆಯು ।
ಜ್ವಲೆಸುತಿರೆ ಮಿಗೆ ಸಾಮಮಂತ್ರಂ ।
ಗಳಲಿ ಹೋಮವ ಮಾಡಿದರು ಧೌಮ್ಯಾದಿ ಯಾಜಕರು॥೨೭॥

ಯಮಸುತನು ಧೃತರಾಷ್ಟ್ರಭೂಪನು ।
ಕಮಲನಾಭನ ನೇಮದಲಿ ತಂ।
ದಮರನದಿಯಾತ್ಮಜನ ಪುಣ್ಯಕಳೇಬರವನಾಗ॥
ವಿಮಲವಾರಿಸ್ಥಾನದಿಂದು।
ತ್ತಮವೆಸೆವಮಾಲ್ಯಾನುಲೇಪನ ।
ಸಮಿತಿಯಿಂದಾ ಭರಣದಿಂದರ್ಚಿಸಿದರೊಲವಿನಲಿ॥೨೮॥

ಧನಗಳನು ಮಣಿಗಳನು ನಾನಾ।
ಕನಕವಸನವ ಧರ್ಮಪುತ್ರನು ।
ವಿನಯದಲಿ ಭೂಸುರರಿಗಿತ್ತನು ಭಕ್ತಿಯುತನಾಗಿ॥
ಮುನಿವರರ ಮತದಿಂದ ಬಾಂಧವ ।
ರನಿಬರೈದೆತ್ತಿದರು ಗಾಂಗೇ।
ಯನ ಶರೀರವ ಮಣಿವಿಮಾನದೊಳಾಗಳಿರಿಸಿದರು॥೨೯॥

ಧರಣಿಪತಿ ಧೃತರಾಷ್ಟ್ರರಿಬ್ಬರು ।
ಧರಿಸಿದರು ಪಾದಗಳ ದೆಸೆಯನು ।
ಶಿರದ ದೆಸೆಯನುನಕುಲಸಹದೇವರುಗಳೆತ್ತಿದರು ॥
ನರಸಮೀರಜರಿಕ್ಕೆಲಕೆ ಚಾ।
ಮರಗಳನು ಬೀಸಿದರು ಬಹಳಾ ।
ದರದಿ ಬಂದು ಯುಯುತ್ಸುಪಿಡಿದನು ಧವಳ ಸತ್ತಿಗೆಯ॥೩೦॥

ಮನವೊಲಿದು ಕುರುಕುಲವ ವೃದ್ಧಾಂ।
ಗನೆಯರಿಕ್ಕಿದರಾಲವಟ್ಟಿಗ।
ಳನು ಬಳಿಕ ನಡೆಸಿದನು ಧೌಮ್ಯನು ಕ್ರಿಯೆಗಳೆಲ್ಲವನು॥
ಘನವೆನಿಸಿ ಬಹುವಾದ್ಯ ನಿಕರದ ।
ನಿನದ ದೆಸೆಗಳ ಮುಸುಕೆ ಸುರಮುನಿ।
ಜನಗಳೊಡನೈತರಲು ಪೊಯ್ದರು ಸಕಲ ವಿಭವದಲಿ॥೩೧॥

ವಿವಿಧ ವಿಭವಗಳೆಸೆವುತಿರೆ ಅಂ।
ದವರು ಚಿತೆಯಗ್ರದಲಿ ಶವರ।
ತ್ನವನು ಮಿಗೆ ತೆಗೆದಿರಿಸಿದರು ವಿಧ್ಯುಕ್ತವೆಂದೆನಿಸಿ॥
ದಿವಿಜ ನದಿಯ ಕುಮಾರನಗಾ।
ತ್ರವನು ಮಂತ್ರಾಗ್ನಿಯನು ಭೂಸುರ ।
ನಿವಹ ಮಂತ್ರಧ್ವನಿಯೆನಿಸಲಾಹುತಿಯ ಮಾಡಿದರು॥೩೨॥

ಬಳಿಕ ಘನಘನಸಾರ ಪಂಜರ ।
ಗಳನು ತಂದೊಂದೊಟ್ಟಿದರು ಕರ್ಪುರಾ ।
ವಳಿಯ ಘೃತಗಳ ಸುರಿವರು ಭಕ್ತಿಯಲಿ ತಮತಮಗೆ॥
ಪಲವು ಪಟ್ಟೆಯ ದಿಂಡುಗಳ ಕೈ।
ಗೊಳಿಸಿದರು ಸಂಪ್ರೀತಿಯಿಂದ ।
ಜ್ವಲವನು ಪ್ರಜ್ವಲಿಸುವಂದವನಾಗ ಮಾಡಿದರು॥೩೩॥

ವಿವಿಧಭಕ್ತಿಯಲಿಂತು ಪಿತೃಮೇ।
ಧವನು ವಿಹಿತವಿದೆನಲನುಷ್ಠಿಸಿ ।
ಯವರು ಬಳಿಕಾ ಕವ್ಯಸವ್ಯಾ ಪಾರ್ಶ್ವದಲಿತಿರುಗಿ ॥
ವಿವಿಧ ಮುನಿಗಳು ಕೂಡಿಬರೆ ಬಾಂ ।
ಧವರು ಸರೂವರೈ ಭರತ ಭಾರ್ಯಾ ।
ನಿವಹ ಸಹಿತಮರನದೀ ತಟಾಕಗಳಿಗೈದಿದರು॥೩೪॥

ಅವಧಿಯೊಳವರಾಗರುಚಿತ ।
ಸ್ನಾನರಾದರು ಮಿಗೆ ತಿಲೋದಕ ।
ದಾನವನು ಮಾಡಿದರು ಗಾಂಗೇಯನಿಗೆ ಭಕ್ತಿಯಲಿ॥
ಏನನೆಂಬೆನು ವಿಸ್ಮಯವ ಗಂ।
ಗಾ ನಿತಂಬಿನಿ ತತ್ಸಮಯದಲಿ ।
ತಾನೆ ಜಲದಿಂದೆದ್ದು ಬಂದಳು ಪುತ್ರಶೋಕದಲಿ॥೩೫॥

ನಿಡಿಲೆನಿಪ ನೆಡುಸುಯ್ಲುಗಳು ಪೊರ।
ಮಡುತಿರಲು ಮೂಗಿನಲಿ ಮಿಗೆ ತೊ।
ಟ್ಟಿಡಲು ಕುಚಗಳ ಮೇಲೆ ನಯನಾಂಬುಗಳ ಪೂರದಲಿ॥
ಎಡೆಬಿಡದೆ ಗದ್ಗದನಿನಾದಗ।
ಳಡಸಿರಲು ಕಂಠದಲಿ ಜಾಹ್ನವಿ ।
ನುಡಿದಳು ಸಮಯದಲಿ ಕೌರವ ಸಮಿತಿಯಿದಿರಿನಲಿ ॥೩೬॥

ಮಡಿದನೇ ಮಗನೀಗ ಸುರತರು ।
ಕುಡಿವಡೆದುದೇ ದೇವಮಣಿಯಿಂ।
ದಡಗಿದನೆ ಸುಕುಮಾರ ಭೀಷ್ಮನ ತೋರಿ ತನಗೆನುತ॥
ಮಿಡೈಕಿದಳು ಹಳವಳಿಸಿದಳು ಬಾ।
ಯ್ಬಿಡುತ ಹಲುಬುತ ನಿಜವಿವೇಕವ ।
ಕಡೆಗೆ ನೂಕಿದಳಾಗ ಜಾಹ್ನವಿ ಪುತ್ರಶೋಕದಲಿ॥೩೭॥

ಘನಪರಾಕ್ರಮಯುಕ್ತನಾ ಭೀ।
ಷ್ಮನು ಜಿತೇಂದ್ರಿಯನಧಿಕಗುಣವಂ।
ತನು ಗಭೀರನು ಪುತ್ರಮೋಹದಲೆಂಬ ನುಡಿಯಲ್ಲ॥
ಇನಬರರಿದಿರಿ ತನ್ನ ಹಸ್ತಗ।
ಳನು ಬಳಿಕ ನಿಮ್ಮೊಡನೆ ಹೇಳುವೆ।
ನೆನುತ ತಾ ನೆನೆದಳುತ ನೈಡಿದಳು ಗಂಗೆಯವರೊಡನೆ ॥೩೮॥

ಘನವಿವೇಕಿ ದೃಢಾತ್ಮ ಸದಯನು ।
ವನಜನಾಭನಿಗಿಷ್ಟಭಕ್ತನು ।
ವಿನಯಪರನಭಿಮಾನಿ ಕಾರ್ಯಾಕಾರ್ಯ ಸಂವೇದಿ॥
ವಿನುತದೇವಜ್ಞನು ಸದಾಶಾಂ।
ತನಾಚರಿತನಿಸ್ಪೃಹನು ಶೂರನು।
ನೆನೆದಡಾತನ ಗುಣವಗಣ್ಯಗಳೆನ್ನನಂದನನ॥೩೯॥

ಮನುಜಪತಿಗಳು ಕಾಶಿರಾಜನ ।
ತನುಜರಾದಿಯಲವರ ಗೆಲಿದವ ।
ರನುಜೆಯರ ತನುಜಂಗೆ ಮದುವೆಯನಂದು ಮಾಡಿದನು॥
ಘನಪರಶುಧರನಂಬೆಯನು ವರಿ।
ಸೆನುತ ಕಾದಿ ರಣೋರೂವಿಯಲಿ ಭೀ।
ಷ್ಮನಿಗೆ ಸೋತನು ರಾಜಕುಲವನನೇಕವನು ಗೆಲಿದ ॥೪೦॥

ಘನ ಬಲಾನ್ವಿತನೆನಿಸಿದಾ ಭೀ।
ಷ್ಮನು ಶಿಖಂಡಿಯ ಕೈಯಲಿಂತಹು।
ದನು ನೀರೀಕ್ಷಿಸಿಯಳಿದೆಯಲ್ಲಾ ಭೂತಧಾತ್ರಿಯಲಿ ॥
ತನುಜ ದೇವವ್ರತನೆ ಹಾಹಾ ।
ಘನಬಲಾನ್ವಿತ ಭೀಷ್ಮ ಹಾಹಾ।
ವನಜನಾಭನ ಭೃತ್ಯ ಹಾಹಾಯೆನುತ ಮರುಗಿದಳು॥೪೧॥

ಇನಿತು ಬಗೆಯಲಿ ಸುತನ ಗುಣಗಳ ।
ನೆನೆದು ಹಲುಬುತಲಿಪ್ಪ ನಿರ್ಜರ ।
ಧುನಿಯ ಶೋಕವ ಕಂಡು ಧರ್ಮಜ ಭೀಮ ಫಲುಗುಣರು ॥
ತನತನಗೆ ನಡುಗಿದರು ಪುರಪರಿ।
ಜನಗಳೆಲ್ಲರು ವಿಸ್ಮಯಾನ್ವಿತ ।
ರೆನಿಸಿತಾ ವೇಳೆಯಲಿ ಗಂಗೆಗೆ ಕೃಷ್ಣನಿಂತೆಂದ॥೪೨

ನಿನಗೆ ಶೋಕವಿದೇಕೆ ನಿನ್ನಯ ।
ತನುಜನೆನ್ನಯ ಪರಮಭಕ್ತನು ।
ತನುವ ಬಿಸುಟೈದಿದನು ತನ್ನಯ ಪರಮ ಸದ್ಗತಿಯ॥
ಮನುಜರೂಪದಿ ಭರತಕುಲದಲಿ ।
ಜನೆಸಿದನು ವಸುಶಾಪದಲಿ ಭೀ।
ಷ್ಮನು ಮಹಾವೈಷ್ಣವನು ಮೋಕ್ಷವನಿತ್ತೆ ನಾನೆಂದ॥೪೩॥

ಆತನಾಹವದಲಿ ಶಿಖಂಡಿಗೆ ।
ಸೋತವನು ತಾನಲ್ಲ ತೆಗೆಯಾ।
ಮಾತು ಹುಸಿ ಮಿಗೆ ಜಯಿಸಲರಿಯರು ವಾಸವಾದಿಗಳು॥
ಶ್ವೇತತುರಗನ ದಿವ್ಯ ಬಾಣ ।
ವ್ರಾತಗಳೆ ಮೃದುಶಯನಮದಾಗೆ ಸು।
ಖಾತಿಶಯ ಮಿಗಲೊರಗಿದನು ರಣಧೀರನವನೆಂದ॥೪೪॥

ಭುವನಜನವರಿವಂದದಲಿ ಮೃ।
ತ್ಯುವನು ಗೆಲಿದಾಕೆಯ ನಿಜಾಧೀ ।
ನವನು ಮಾಡಿಯು ಸಿರಿಯ ಬಿಟ್ಟು ವಿರಕ್ತಿ ಜನಿಯಿಸಲು॥
ದಿವಿಜರುಗಳು ಕೊಂಡಾಡೆ ತಾನಿಂ ।
ದವಿರಳದ ಮುಕ್ತಿಯನು ಪಡೆದನು।
ಹವಣಿಸುವಡಳವಲ್ಲವಾತನ ಸಚ್ಚರಿತ್ರಗಳು ॥೪೫॥

ಎಂದು ಗಂಗಾದೇವಿಗಾ ಗೋ ।
ವಿಂದನೀರೀತಿಯಲಿ ದೊಡ್ಡಿಸಿ।
ಯೆಂದು ತನ್ಮಾನಸದ ಬಹುದುಃಖವನು ಬಿಡಿಸಿದನು॥
ಅಂದವಾಗಿರಲಾ ಪರಾಶರ।
ನಂದನನು ವರತತ್ವಬೋಧೆಗ॥
ಳಿಂದ ಭಾಗೀರಥಿಗೆಯಾನಂದವನು ವಿರಚಿಸಿದ॥೪೬॥

ಬಳಿಕಲೊಲಿದಾತ್ಮೀಯಪಾವನ ।
ಸಲಿಲಮಧ್ಯವ ಹೊಗುತ ಕೃಷ್ಣಂ।
ಗೊಲಿದೆರಗಿ ಯಮಜಾದಿಗಳಿಗಾಶಿಷಗಳನು ಮಾಡಿ॥
ಕಳುಹಿದನು ಪ್ರಿಯದಿಂದ ಮುನಿಸಂ।
ಕುಲಗಳನು ಹರಿಯೊಡನೆ ಧರ್ಮಜ ।
ನುಳಿದು ಗಂಗೆಯ ಬರುತಲಿರ್ದನು ಹಸ್ತಿನಾವತಿಗೆ॥೪೭॥

ಎನುತ ವೈಶಂಪಾಯನನು ಶಂ।
ತನುಸುತನ ವೃತ್ತಾಂತವೆಲ್ಲವ।
ಮನವೊಲಿದು ಜನಮೇಜಯಕ್ಷಿತಿಪಾಲಕಗೆ ತಿಳುಹಿ॥
ಘನಮಹಿಮನಹ ವೆಂಕಟಾಚಲ ।
ವನಜಮಿತ್ರನೆನಿಪ್ಪ ಕೃಷ್ಣನ ।
ವಿನುತಭಕ್ತರೊಳಧಿಕ ಭೀಷ್ಮನೆನುತ್ತ ಹೊಗಳಿದನು॥೪೮॥

ಆನುಶಾಸನಿಕ ಪರ್ವವು ಸಮಾಪ್ತವಾದುದು

ಕೃತಜ್ಞತೆಗಳು:
ಪ್ರಧೃನ ಸಂಪಾದಕರು:
ವಿ. ಕೃ. ಗೋಕಾಕ
ಪ್ರಕಟಣೆ: ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ, ಬೆಂಗಳೂರು.






















































































ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ